ದೀದಿ ನಾಡಲ್ಲಿ ಸುವರ್ಣನ್ಯೂಸ್: ಅ‘ಜೀತ್’ ಹಮಾರಾ ಎಂದ ಬಂಗಾಳಿಗಳು!

May 12, 2019, 3:06 PM IST

ಕೋಲ್ಕತ್ತಾ(ಮೇ.12): ಲೋಕಸಭೆ ಚುನಾವಣೆಯ ಬೇಗುದಿಯಲ್ಲಿ ಬೇಯುತ್ತಿರುವ ಪ.ಬಂಗಾಳದ ನೆಲಕ್ಕೆ ನಿಮ್ಮ ಸುರ್ವಣನ್ಯೂಸ್ ಕಾಲಿಟ್ಟಿದೆ. ಸುವರ್ಣನ್ಯೂಸ್ ನ ಸುದ್ದಿ ಸಂಪಾದಕ ಅಜಿತ್ ಹನಮಕ್ಕನವರ್ ಪ.ಬಂಗಾಳದಿಂದ ನೇರ ವರದಿ ಮಾಡುತ್ತಿದ್ದು, ಮತದಾನ ಪ್ರಕ್ರಿಯೆ ಕ್ಷಣ ಕ್ಷಣದ ಮಾಹಿತಿ ನೀಡುತ್ತಿದ್ದಾರೆ. ಖರಿಯಾ ಎಂಬ ಹಳ್ಳಿಯ ಪಕ್ಕದ ರಾಂಪುರ್ ಬಳಿ ಟಿಎಂಸಿ ಕಾರ್ಯಕರ್ತರು ಬೂತ್ ಕ್ಯಾಪ್ಚರಿಂಗ್ ಮಾಡಿದ ಪ್ರಕರಣದ ಕುರಿತು ಸುವರ್ಣನ್ಯೂಸ್ ನೇರ ಪ್ರಸಾರ ಮಾಡಿದೆ. ಅಲ್ಲದೇ ಗಲಾಟೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆಯ ಕುರಿತು ವರದಿ ಇಲ್ಲಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ..