ಕೊರೋನಾ ತಾಂಡವ ಮಧ್ಯೆ ಎಕ್ಸಾಂ: ಬಹುಮಾನದ ಆಸೆಗೆ ಮುಗಿಬಿದ್ದ ವಿದ್ಯಾರ್ಥಿಗಳು..!

Apr 18, 2021, 3:36 PM IST

ಧಾರವಾಡ(ಏ.18): ಎಲ್ಲೆಡೆ ಕೊರೋನಾ ತಾಂಡವವಾಡುತ್ತಿದೆ. ಆದ್ರೆ, ಇಲ್ಲಿನ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಚಿಂತೆ. ಹೌದು,ಖಾಸಗಿ ಶಿಕ್ಷಣ ಸಂಸ್ಥೆಯೊಂದು ಪರೀಕ್ಷೆಯನ್ನ ಆಯೋಜನೆ ಮಾಡಿದೆ. ರ‍್ಯಾಂಕ್‌ ಬಂದವರಿಗೆ ಬಹುಮಾನ ನೀಡುವುದಾಗಿ ಪ್ರಚಾರ ಕೂಡ ಮಾಡಲಾಗಿದೆ. ಹೀಗಾಗಿ ಬಹುಮಾನದ ಆಸೆಗಾಗಿ ಮಹಾಮಾರಿ ಕೊರೋನಾ ಬಗ್ಗೆ ತಲೆಕೆಡಿಸಿಕೊಳ್ಳದೇ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮುಂದಾಗಿದ್ದರು. ಈ ವೇಳೆ ಉಪನಗರ ಪೊಲೀಸರು ದಾಳಿ ಮಾಡಿ ಪರೀಕ್ಷೆಯನ್ನ ನಿಲ್ಲಿಸಿದ್ದಾರೆ. ಸ್ಥಳದಿಂದ ಸಂಸ್ಥೆಯ ಮಾಲೀಕ ಪರಾರಿಯಾಗಿದ್ದಾನೆ.

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್..? : ಕಾಂಗ್ರೆಸ್ ವಿರೋಧ