Oct 9, 2020, 2:39 PM IST
ಬೆಂಗಳೂರು (ಅ. 09): ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ಶಾಲೆ ಆರಂಭ ಬೇಡ ಎಂದು ರಾಜಕೀಯ ನಾಯಕರಾದಿಯಾಗಿ ಸಾರ್ವಜನಿಕ ವಲಯದಲ್ಲಿಯೂ ವಿರೋಧ ವ್ಯಕ್ತವಾಗುತ್ತಿದೆ.
ವಠಾರ ಶಾಲೆಯ 4 ಮಕ್ಕಳಿಗ ಸೋಂಕು; ಶಾಲೆ ಪ್ರಾರಂಭಿಸುವ ಮುನ್ನ ಈ ವರದಿ ನೋಡಲೇಬೇಕು
ಮಾಜಿ ಸಿಎಂ ಸಿದ್ದರಾಮಯ್ಯ, ಕೂಡಾ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪೋಷಕರು ಒಪ್ಪಿದರೂ ಶಾಲೆಗಳನ್ನು ತೆರೆಯಬಾರದು. ಶಾಲೆ ತೆರೆದರೆ ನಾನು ವಿರೋಧಿಸುತ್ತೇನೆ. ಮಾಧ್ಯಮಗಳ ಹೋರಾಟಕ್ಕೆ ನನ್ನ ಬೆಂಬಲ ಇದೆ. ಅಗತ್ಯ ಎನಿಸಿದರೆ ಮಕ್ಕಳನ್ನು ಒಂದು ವರ್ಷ ಪಾಸ್ ಮಾಡಿ, ಮುಂದಿನ ತರಗತಿಗೆ ಭಡ್ತಿ ಕೊಡಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.