ರಸ್ತೆ ಕಾಮಗಾರಿ ಗಲಾಟೆಯಲ್ಲಿ ಕೊಲೆಗೆ ಸ್ಕೆಚ್: ತಾ.ಪಂ. ಮಾಜಿ ಸದಸ್ಯನ ಹತ್ಯೆಗೆ 2 ಲಕ್ಷ ಸುಪಾರಿ !

ರಸ್ತೆ ಕಾಮಗಾರಿ ಗಲಾಟೆಯಲ್ಲಿ ಕೊಲೆಗೆ ಸ್ಕೆಚ್: ತಾ.ಪಂ. ಮಾಜಿ ಸದಸ್ಯನ ಹತ್ಯೆಗೆ 2 ಲಕ್ಷ ಸುಪಾರಿ !

Published : Aug 29, 2023, 11:42 AM IST

ರಾಜಕೀಯದಲ್ಲಿ ಧ್ವೇಷ, ಅಸೂಹೆ ಕಾಮನ್.. ಆದರೆ ಕೊಲೆ ಮಾಡುವ ಹಂತಕ್ಕೆ ದ್ವೇಷ ಬೆಳೆಯುತ್ತೆ ಅಂದರೆ ನೀವೆ ಊಹಿಸಿಕೊಳ್ಳಿ. ಇಲ್ಲೊಂದು ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯ ಹಾದಿ ಹಿಡಿದಿದೆ.

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಕೇಸ್ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. 2016ರಲ್ಲಿ ನಡೆದ ಮರ್ಡರ್ (Murder)ಕೇಸ್‌ನಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಈಗಲೂ ಬೇಲ್ ಮೇಲೆ ಇದ್ದಾರೆ. ಇದರ ನಡುವೆ ಈಗ ಕೊಪ್ಪಳದಲ್ಲಿ(Koppal) ತಾಲೂಕು ಪಂಚಾಯತ್ ಮಾಜಿ ಸದಸ್ಯನೊಬ್ಬನ ಹತ್ಯೆಗೆ ಸಂಚು ರೂಪಿಸಿದ್ದರು. ಆದ್ರೆ, ಸುಫಾರಿ ಹಂತಕರ ಪ್ಲಾನ್ ಅದೊಂದು ಆಡಿಯೋ ಸಂಭಾಷಣೆಯಿಂದ ಉಲ್ಟಾ ಹೊಡೆದಿದೆ. ಇದು ಗಂಗಾವತಿಯ ಡಣಾಪುರ ಗ್ರಾಮದ ತಾಲೂಕು ಪಂಚಾಯತ್ ಮಾಜಿ ಸದಸ್ಯ ಫಕೀರಪ್ಪನ ಹತ್ಯೆಗೆ ನಡೆದ ಸಂಚಿನ ರಹಸ್ಯ. ಫಕರೀಪ್ಪನನ್ನು ಮುಗಿಸಲು ಅದೇ ಊರಿನ ಶಶಿಧರ್ ಮಾಲಿ ಪಾಟೀಲ್ ಅಂಡ್ ಗ್ಯಾಂಗ್ ಸ್ಕೆಚ್ ಹಾಕಿತ್ತು. ಅಷ್ಟಕ್ಕೂ ಇದೆಲ್ಲ ನಡೆದಿದ್ದು ಊರಿನ ರಸ್ತೆ ಕಾಮಾರಿ ವಿಚಾರದಲ್ಲಿ. ಊರಿನಲ್ಲಿ ನಿರ್ಮಾಣವಾಗಿದ್ದ ರಸ್ತೆಯನ್ನು ಶಶಿಧರ್ ಪಾಟೀಲ್ ಕಿತ್ತುಹಾಕಿದ್ರು. ಇದನ್ನು ವಿರೋಧಿಸಿ ಫಕೀರಪ್ಪ ಗ್ರಾಮ ಪಂಚಾಯತ್ಗೆ ದೂರು ನೀಡಿದ್ರು.. ಇಷ್ಟೇ.. ಇದಕ್ಕೇ ದ್ವೇಷ ಸಾಧಿಸಿದ ಪಾಟೀಲ್, ಫಕೀರಪ್ಪನ ಕೊಲೆ ಮಾಡಲು ಫಕೀರಪ್ಪನ ಟ್ರ್ಯಾಕ್ಟರ್ ಚಾಲಕ ಮಲ್ಲೇಶ್ ಎಂಬಾತನಿಗೆ ಸುಫಾರಿ ಕೊಟ್ಟಿದ್ದಾನೆ. ವಿಷ ಹಾಕಿದ ಮದ್ಯ ಬಾಟಲನ್ನು ಫಕೀರಪಪಗೆ ನೀಡಲು ಹೇಳಿದ್ದಾನೆ. ಇದಕ್ಕೆ ಮಹೇಶ್ ನಿರಾಕರಿಸಿದಾಗ ಲೈನ್ ಮನ್ (Line man)ಹೆಲ್ಪರ್ ಮಹೇಶ್ ಎಂಬಾತನಿಗೆ ಟಾಸ್ಕ್ ಕೊಟ್ಟಿದ್ದಾನೆ. ಆದ್ರೆ  ಮಹೇಶ್ ಕೂಡ ಧೈರ್ಯ ಸಾಲದೆ ಹಿಂಜರಿದಿದ್ದಾನೆ. ಅಷ್ಟೊತ್ತಿಗಾಗಲೇ ಕೊಲೆಗೆ ಸ್ಕೆಚ್ಹಾಕಿದ್ದ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ. 

ಇದನ್ನೂ ವೀಕ್ಷಿಸಿ: ಜೋಗಿ ಮಠದಲ್ಲಿ ಜೋರಾಯ್ತು ‘ವಿಗ್ರಹ’ ವಿವಾದ: ಪೀಠಾಧಿಪತಿ ವಿರುದ್ಧವೇ ತಿರುಗಿಬಿದ್ದ ಸಮುದಾಯ !

24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more