ಮಗಳನ್ನೇ ಕೊಲೆ ಮಾಡಲು ಅಪ್ಪ ನಿರ್ಧರಿಸಿದ್ದೇಕೆ..? ಮರ್ಯಾದಾ ಹತ್ಯೆಯಿಂದಿತ್ತು ಕರುಣಾಜನಕ ಕಥೆ..!

ಮಗಳನ್ನೇ ಕೊಲೆ ಮಾಡಲು ಅಪ್ಪ ನಿರ್ಧರಿಸಿದ್ದೇಕೆ..? ಮರ್ಯಾದಾ ಹತ್ಯೆಯಿಂದಿತ್ತು ಕರುಣಾಜನಕ ಕಥೆ..!

Published : Oct 15, 2023, 01:59 PM IST

ಮಗಳ ಹೆಣ ಹಾಕಿ ಪೊಲೀಸ್ ಠಾಣೆಗೆ ಹೋದ..!
ಅಪ್ಪನ ವಿರುದ್ಧವೇ ನಿಂತುಬಿಟ್ಟರು ಮಕ್ಕಳು..!
ಹೆತ್ತವರ ವಿರುದ್ಧ ಕೇಸ್ ದಾಖಲಿಸಿದ್ದಳು ಮಗಳು..!

ಅದು ಸುಂದರ ಕುಟುಂಬ. ಅಪ್ಪ, ಅಮ್ಮ ಮತ್ತು ಮೂವರು ಹೆಣ್ಣು ಮಕ್ಕಳು. ಮೊದಲ ಮಗಳು ಮದುವೆಯಾಗಿ ಗಂಡನ ಮನೆ ಸೇರಿದರೆ ಇನ್ನಿಬ್ಬರು ಮನೆಯಲ್ಲಿ ಅಪ್ಪ ಅಮ್ಮನಿಗೆ ನೆರವಾಗಿದ್ರು. ಎಲ್ಲರೂ ಸಂತೋಷವಾಗೇ ಇದ್ರು. ಆದ್ರೆ ಅವತ್ತೊಂದು ದಿನ ಎರಡನೇ ಮಗಳು ಮಲಗಿದಲ್ಲೇ ಹೆಣವಾಗಿದ್ಲು. ನಿದ್ರೆಯಲ್ಲಿದ್ದ ಮಗಳನ್ನ ಅಪ್ಪನೇ ಕೊಂದು ಮುಗಿಸಿದ್ದಾನೆ. ಅಷ್ಟೇ ಅಲ್ಲ ಮಗಳ ಹೆಣ ಹಾಕಿ ಸೀದಾ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಸ್ವಂತ ಮಗಳ ಕಥೆಯನ್ನೇ ಮುಗಿಸಿದ್ದ ಅಪ್(Father)ಪ ಯಾವುದೇ ಪಶ್ಚಾಪವಿಲ್ಲದೇ ಪೊಲೀಸರ ಮುಂದೆ ಬಂದು ನಿಂತಿದ್ದ. ಇನ್ನೂ ಆತನ ಸಂಬಂಧಿಕರನ್ನ ಕೇಳಿದ್ರೆ ಅವರೂ ಕೂಡ ಮಂಜುನಾಥನನ್ನೇ ವಹಿಸಿಕೊಂಡು ಮಾತಾಡ್ತಾರೆ. ಅವನು ಮಾಡಿದ್ದು ಸರಿ ಅನ್ನೋ ಲೆಕ್ಕದಲ್ಲಿ ಮಾತನ್ನಾಡ್ತಾರೆ. ಈಕೆಯ ಪರಿಸ್ಥಿತಿ ಯಾವ ಶತೃಗೂ ಬೇಡ. ಅತ್ತ ಗಂಡ ಜೈಲಲ್ಲಿ..ಒಬ್ಬ ಮಗಳು ಹೆಣವಾಗಿದ್ದರೆ ಮತ್ತೊಬ್ಬಳು ಎಲ್ಲಿದ್ದಾಳೆ ಅನ್ನೋದೇ ಗೊತ್ತಿಲ್ಲ. ಆದ್ರೆ ಮಂಜುನಾಥ ಮಗಳನ್ನೇ ಕೊಲ್ಲೋ(Murder) ಮಟ್ಟಕ್ಕೆ ಹೋಗಿದ್ದಾದ್ರೆ ಅಂತ ವಿಚಾರಿಸಿದಾಗ ಗೊತ್ತಾಗಿದ್ದು ಆ ಇಬ್ಬರು ಹೆಣ್ಣು ಮಕ್ಕಳು ಆ ತಂದೆಗೆ ಎಷ್ಟು ಹಿಂಸೆ ನೀಡಿದ್ರು ಅಂತ. ತಮ್ಮ ಪ್ರೀತಿಗಾಗಿ ಆ ಹೆಣ್ಣುಮಕ್ಕಳು ಹೆತ್ತವರನ್ನೇ ಪೊಲೀಸ್ ಠಾಣೆಯಲ್ಲಿ ಕೂರಿಸಿಬಿಟ್ಟಿದ್ರು.. ಅಕ್ಕ ತಾನು ಕೆಡೋದಲ್ಲದೇ ತನ್ನ ತಂಗಿಯ ಬ್ರೇನ್ ವಾಷ್ ಕೂಡ ಮಾಡಿಬಿಟ್ಟಿದ್ಲು.

ಅಷ್ಟಕ್ಕೂ ಆ ಇಬ್ಬರು ಹೆಣ್ಣುಮಕ್ಕಳು ತಂದೆ ತಾಯಿಗೆ ಯಾವ ರೀತಿ ಮಾನಸಿಕಾಗಿ ಹಿಂಸಿಸಿದ್ರು. ಮಂಜುನಾಥ ಮೊದಲ ಮಗಳ ಮದುವೆ(Marriage) ಮಾಡಿ ಮುಗಿಸಿದ ಮೇಲೆ ಎರಡನೇ ಮಗಳು ಅಂದ್ರೆ ಕವನಾಗೆ(Kavana) ಮದುವೆ ಮಾಡಲು ಮುಂದಾದ ಒಂದು ಒಳ್ಳೆಯ ಹುಡುಗನನ್ನ ಹುಡುಕಿ ಎಂಗೆಜ್ಮೆಂಟ್ ಕೂಡ ಮಾಡಿದ್ದ. ಆದ್ರೆ ಕವನ ಎಂಗೇಜ್ಮೆಂಟ್ ಆದ ಮೇಲೆ ಬೇರೆಯೊಬ್ಬ ಹುಡುಗನ ಜೊತೆ ಲವ್(love) ಮಾಡಿ ಅವನ ಜೊತೆ ಊರೂರು ಸುತ್ತುತ್ತಾಳೆ. ಈಕೆಯನ್ನ ನೋಡಿದ ಆಕೆಯ ತಂಗಿ ಕೂಡ ಅದೇ ದಾರಿಯನ್ನ ಹಿಡಿದುಬಿಟ್ಟಳು. ಅಷ್ಟೇ ಅಲ್ಲ ಮಕ್ಕಳ ಲವ್‌ನಿಂದ ಹೆತ್ತವರು ಪೊಲೀಸ್ ಠಾಣೆ ಮೆಟ್ಟಿಲು ಕೂಡ ಹತ್ತುವ ಹಾಗೆ ಆಗಿಬಿಡ್ತು. ಯಾವಾಗ ಮಂಜುನಾಥ ಮಕ್ಕಳಿಂದ ಗ್ರಾಮದಲ್ಲಿ ಮರ್ಯಾದೆ ಹೊಯ್ತು ಅಂತ ಅಂದುಕೊಂಡನೋ ಇದಕ್ಕೆಲ್ಲಾ ಕಾರಣವಾದ ಕವನಳನ್ನ ಮುಗಿಸಲು ನಿರ್ಧರಿಸಿಬಿಟ್ಟ. ಮಂಜುನಾಥ ಸ್ವಲ್ಪ ಯೋಚನೆ ಮಾಡಿ ತನ್ನ ವಿರುದ್ಧವೇ ನಿಂತಿದ್ದ ಹೆಣ್ಣುಮಕ್ಕಳನ್ನ ತನ್ನಿಷ್ಟದವರೊಂದಿಗೆ ಮದುವೆ ಮಾಡಿ ಕಳುಹಿಸಿಬಿಟ್ಟಿದ್ದಿದ್ರೆ. ಇವತ್ತು ಆತ ತನ್ನ ಪಾಡಿಗೆ ನೆಮ್ಮದಿಯಾಗಿ ಇರಬಹುದಿತ್ತು. ಆದ್ರೆ ಊರಲ್ಲಿ ಮರ್ಯಾದೆ ಹೊಯ್ತು ಅಂತ ಮಗಳ ಕಥೆಯನ್ನೇ ಮುಗಿಸಿ ಜೈಲು ಸೇರಿದ್ದಾನೆ. 

ಇದನ್ನೂ ವೀಕ್ಷಿಸಿ:  ಕೋಟಿ ಬೇಟೆಯಲ್ಲಿ ಡಿಕೆ ಟಾರ್ಗೆಟ್ ಆಗಿದ್ದೇಕೆ..? ಕಾಂಟ್ಯಾಕ್ಟರ್ ಮನೆಯಲ್ಲಿ ಸಿಕ್ಕ ಹಣ ಯಾರದ್ದು..?

24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
20:21ಎಪ್‌ಸ್ಟೀನ್ ಫೈಲ್ಸ್‌: ಟ್ರಂಪ್, ಬಿಲ್ ಗೇಟ್ಸ್ ರಾಸ*ಲೀಲೆ ರಹಸ್ಯ! 2000 ವಿಡಿಯೋ, ರಷ್ಯಾ ಚೆಲುವೆಯರ ವಿಡಿಯೋ ಬಟಾಬಯಲು!
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
21:04ಪಿಜಿಯಲ್ಲಿ ಪ್ರೇಯಸಿ ಜೊತೆ ಕುಚ್​-ಕುಚ್​​! ರೆಡ್ ​​ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ ಕೊಟ್ಟ ಕಾರಣವೇ ಬೇರೆ!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
Read more