Suvarna FIR: ಚಿನ್ನದ ವ್ಯಾಪಾರಿಯ ಕೊಂದು ಬೈಕ್ ಸಮೇತ ಕೆರೆಗೆ ಎಸೆದರೂ ಸಿಕ್ಕಿ ಬಿದ್ದ ಕಿರಾತಕರು

Jan 28, 2022, 6:02 PM IST

ಬೆಂಗಳೂರು (ಜ. 28): ಚಿನ್ನ ಮಾರುವ ನೆಪದಲ್ಲಿ ತಮ್ಮ ಮನೆಗೆ ಚಿನ್ನದ ವ್ಯಾಪಾರಿಯನ್ನು ಕರೆಸಿಕೊಂಡು ಬಳಿಕ ಆತನನ್ನು ಕೊಂದು .5 ಲಕ್ಷ ನಗದು ದೋಚಿದ್ದ ಎಳನೀರು ವ್ಯಾಪಾರಿ ಹಾಗೂ ಆತನ ಸ್ನೇಹಿತನನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

Dr Soundarya Suicide: ಕುಟುಂಬದಲ್ಲಿ ಕಲಹ ಇರಲಿಲ್ಲ, ಮಗುವಿಗೆ ನಾಮಕರಣ ಮಾಡಿದ್ರು

ಕುಣಿಗಲ್‌ ತಾಲೂಕಿನ ಮಂಜುನಾಥ್‌, ಹಲವು ವರ್ಷಗಳಿಂದ ಮಾಗಡಿ ರಸ್ತೆಯ ಸುಂಕದಕಟ್ಟೆಸಮೀಪ ಎಳನೀರು ವ್ಯಾಪಾರ ಮಾಡುತ್ತಿದ್ದ. ಅಲ್ಲೇ ಸಮೀಪದ ದ್ವಾರಕ ನಗರದಲ್ಲಿ ತನ್ನ ಪತ್ನಿ ಜತೆ ಆತ ನೆಲೆಸಿದ್ದ. ಮತ್ತೊಬ್ಬ ಆರೋಪಿ ಮುನಿರಾಜು ಬಾರ್‌ನಲ್ಲಿ ಸಪ್ಲೈಯರ್‌ ಆಗಿದ್ದ. ಇತ್ತೀಚೆಗೆ ವ್ಯಾಪಾರದಲ್ಲಿ ನಷ್ಟವಾಗಿ ಮಂಜುನಾಥ್‌ಗೆ ಆರ್ಥಿಕ ಸಂಕಷ್ಟಎದುರಾಗಿತ್ತು. ಅಲ್ಲದೆ ಆತನ ಬಳಿಯಿದ್ದ ಸರಕು ಸಾಗಣೆ ಆಟೋವನ್ನು ಬ್ಯಾಂಕ್‌ನವರು ಜಪ್ತಿ ಮಾಡಿದ್ದರು. ಈ ಸಾಲದ ಹಿನ್ನೆಲೆಯಲ್ಲಿ ಮಂಜುನಾಥ್‌, ಏಳು ತಿಂಗಳ ಹಿಂದೆ ತಮ್ಮ ಬಳಿ ಇದ್ದ 22 ಗ್ರಾಂ ಚಿನ್ನವನ್ನು ಮಾರಲು ಮುಂದಾದ. ಆಗ ಆನ್‌ಲೈನ್‌ನಲ್ಲಿ ಚಿನ್ನ ಖರೀದಿದಾರರನ್ನು ಹುಡುಕಿದಾಗ ದಿವಾಕರ್‌ ಅವರ ಎಸ್‌ಎಸ್‌ಆರ್‌ ಗೋಲ್ಡ್‌ ಕಂಪನಿಯ ನಂಬರ್‌ ಸಿಕ್ಕಿದೆ. ಆ ನಂತರ ನಡೆದಿದ್ದು ರೋಚಕ ಕಹಾನಿ.