ದಿಗಂತ್ ಕಥೆ ಕೇಳಿ ಸಿಸಿಬಿ ಅಧಿಕಾರಿಗಳೇ ಭಾವುಕರಾಗಿದ್ದು ಏಕೆ? ಏನಿದು ಕಣ್ಣೀರ ಕಥೆ?

Sep 18, 2020, 7:09 PM IST

ಬೆಂಗಳೂರು (ಸೆ. 18): ಡ್ರಗ್ ಜಾಲದಲ್ಲಿ ಸಿಲುಕಿರುವ ಆರೋಪಿಗಳಿಗೆ ಸಖತ್ ಡ್ರಿಲ್ ಮಾಡುತ್ತಿರುವ ಸಿಸಿಬಿ ಅಧಿಕಾರಿಗಳಿಗೆ ಇವರ ಕಥೆ ಕೇಳಿ ಕಣ್ಣಲ್ಲಿ ನೀರು ಬಂದಿದೆ. ಇವರು ನೋಡೋಕೆ ಸೋ ಹ್ಯಾಂಡ್ಸಮ್. ಸ್ಯಾಂಡಲ್‌ವುಡ್ ಪ್ರೀತಿಯಿಂದ ದೂದ್‌ಪೇಡ ಎಂದು ಕರೆಯುತ್ತದೆ. ಸಿನಿಮಾಗಳು ಕೂಡಾ ಚೆನ್ನಾಗಿರುತ್ತದೆ. ಆದರೆ ಇವರ ರಿಯಲ್ ಲೈಫ್ ಕಹಾನಿ ಕೇಳಿದರೆ ಕಣ್ಣೀರು ಬರುವಂತಿದೆ. 

ನಟ ದಿಗಂತ್ ದಂಪತಿಯನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದಾಗ 'ನಾನು ಡ್ರಗ್ ತೆಗೆದುಕೊಳ್ಳುತ್ತಿದ್ದುದು ಹೌದು. ಆದರೆ ನಾನು ಮಾದಕ ವ್ಯಸನಿಯಲ್ಲ. ನನ್ನ ನೋವನ್ನು ಮರೆಯಲು ನಾನು ಡ್ರಗ್ ತೆಗೆದುಕೊಳ್ಳುತ್ತಿದ್ದೆ' ಎಂದು ದಿಗಂತ್ ಹೇಳಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ಅವರೇ ಹೇಳಿಕೊಂಡಿದ್ಧಾರೆ. ಏನದು ಕೇಳೋಣ ಬನ್ನಿ..!