Coronavirus Karnataka

ಎಚ್ಚರ...! ದೀಪ ಹಚ್ಚಲು ಬೀದಿಗಿಳಿದ್ರೆ ಬೀಳುತ್ತೆ ಕೇಸ್!

Apr 5, 2020, 2:21 PM IST

ಬೆಂಗಳೂರು(ಏ.04): ಬೆಂಗಳೂರಿಗರೇ ಎಚ್ಚರ, ಇವತ್ತು ದೀಪ ಹಚ್ಚಲು ಬೀದಿಗಿಳಿದ್ರೆ ಕೇಸ್ ಬೀಳೋದು ಗ್ಯಾರಂಟಿ. ಖಾಕಿ ಕಟ್ಟುನಿಟ್ಟಿನ ಕ್ರಮಕ್ಕೆ ಚಿಂತನೆ ನಡೆಸಿದ್ದು, ಮನೆಯಲ್ಲೇ ದೀಪ ಬೆಳಗಿಸುವಂತೆ ಪೊಲೀಸ್ ಆಯುಕ್ತರು ಖಡಕ್ ಸೂಚನೆ ನೀಡಿದ್ದಾರೆ.

ನಿಮ್ಮ ಮನೆ ಬಾಗಿಲು ಅಥವಾ ಬಾಲ್ಕನಿಯಲ್ಲಿ ನಿಂತು ದೀಪ ಹಚ್ಚುವಂತೆ ಕರೆ ನೀಡಿದ್ದು, ಹೀಗಿರುವಾಗ ಯಾರಾದರೂ ಗುಂಪು ಕಟ್ಟಿ ರಸ್ತೆಗಿಳಿದು ದೀಪ ಹಚ್ಚಿದರೆ ಅಥವಾ ಸಂಭ್ರಮಾಚರಣೆ ನಡೆಸಿದರೆ ಕೇಸ್ ಹಾಕುವುದಾಗಿ ಗುಡುಗಿದ್ದಾರೆ