ಅಕ್ರಮ ಕಟ್ಟಡಗಳಿಗೆ ಕಾದಿದೆ ಗಂಡಾಂತರ! ಸಾಮೂಹಿಕ ಧ್ವಂಸಕ್ಕೆ ಮೇಯರ್ ನಿರ್ಧಾರ

Nov 11, 2019, 7:58 PM IST

ಬೆಂಗಳೂರು (ನ.11): ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳದ್ದೇ ತಲೆನೋವು. ನಿರ್ಮಾಣಕ್ಕೆ ಮುನ್ನ ತೊರಿಸುವ ಪ್ಲಾನ್ ಒಂದು, ನಿರ್ಮಾಣವಾಗುವ ಕಟ್ಟಡ ಇನ್ನೊಂದು. ರೆಸಿಡೆನ್ಶಿಯಲ್ ಏರಿಯಾಗಳಲ್ಲಿ ಕಮರ್ಶಿಯಲ್ ಕಟ್ಟಡಗಳು ಸುಲಭವಾಗಿ ತಲೆಎತ್ತುತ್ತಿವೆ.

ಒಂದು ಕಟ್ಟಡದಿಂದ ಸೃಷ್ಟಿಯಾಗುವ ಸಮಸ್ಯೆಗಳು ಹತ್ತಾರು!.. ಇಂತಹ ಕೆಟ್ಟ ಸಂಪ್ರದಾಯಗಳಿಗೆ ಕಡಿವಾಣ ಹಾಕಲು ಸಂಸದ ರಾಜೀವ್ ಚಂದ್ರಶೇಖರ್ ಹೋರಾಟ ನಡೆಸುತ್ತಿದ್ದಾರೆ. ಈಗ ಇಂದಿರಾನಗರದಲ್ಲಿ ಅಕ್ರಮ ಕಟ್ಟಡದ ವಿರುದ್ಧ  ಸ್ಥಳೀಯರು ಬೀದಿಗಿಳಿದಿದ್ದು ತೀವ್ರ ಸ್ವರೂಪ ಪಡೆದುಕೊಂಡಿದೆ.  

ಈ ಬಗ್ಗೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಸುವರ್ಣನ್ಯೂಸ್ ಜೊತೆ ಮಾತನಾಡಿದರು. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ...