Published : Jul 31, 2025, 07:09 AM ISTUpdated : Jul 31, 2025, 10:49 PM IST

Karnatata Latest News Live: ನಾಳೆ ಅರ್ಧ ಬೆಂಗಳೂರಿಗೆ ಕಾವೇರಿ ಕುಡಿಯುವ ನೀರು ಪೂರೈಕೆ ಸ್ಥಗಿತ

ಸಾರಾಂಶ

ಬೆಂಗಳೂರು: ಇಂಧನ ಸಚಿವ ಕೆ.ಜೆ.ಜಾರ್ಜ್ ಆಪ್ತರು ಎನ್ನಲಾದ ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಎಲೆಕ್ಟಿಕ್ ಗುತ್ತಿಗೆದಾರರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಂಬಸ್ಸಿ ಗ್ರೂಪ್‌ನ ಮುಖ್ಯಸ್ಥರು, ನಿರ್ದೇಶಕರು ಹಾಗೂ ಎಲೆಕ್ಟ್ರಿಕ್ ಗುತ್ತಿಗೆದಾರರ ಮನೆ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮಹತ್ವದ ದಾಖಲೆಗಳು ಪತ್ತೆಯಾಗಿದ್ದು, ಶೋಧ ಮುಂದುವರೆಸಿದ್ದಾರೆ. ಕೆಲವು ವ್ಯವಹಾರಗಳ ಹಿನ್ನೆಲೆಯಲ್ಲಿ ಐಟಿ ಸರ್ವೇ ನಡೆಸಲಾಗಿದೆ ಎನ್ನಲಾಗಿದೆ. ಜು.28ರಂದು ಸಹ ಇಬ್ಬರು ಎಲೆಕ್ಟಿಕ್ ಗುತ್ತಿಗೆದಾರರ ಮನೆ, ಕಚೇರಿಗಳು ಸೇರಿ 12 ಕಡೆ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಇದರ ಮುಂದುವರೆದ ಭಾಗವಾಗಿ ಬುಧವಾರವೂ ನಗರದ ಕೆಲ ಎಲೆಕ್ಟಿಕ್ ಗುತ್ತಿಗೆದಾರರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

BWSSB Water

10:49 PM (IST) Jul 31

ನಾಳೆ ಅರ್ಧ ಬೆಂಗಳೂರಿಗೆ ಕಾವೇರಿ ಕುಡಿಯುವ ನೀರು ಪೂರೈಕೆ ಸ್ಥಗಿತ

ಬೆಂಗಳೂರು ಪಶ್ಚಿಮ ಪ್ರದೇಶದಲ್ಲಿ ದೊಡ್ಡಗಾತ್ರದ ವಾಲ್ ಕೆಟ್ಟು ಹೋಗಿರುವುದರಿಂದ ಆಗಸ್ಟ್ 1 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ದುರಸ್ತಿ ಕಾರ್ಯ ಆರಂಭವಾಗಲಿದ್ದು, ಜಲಮಂಡಳಿ ವಿಷಾದ ವ್ಯಕ್ತಪಡಿಸಿದೆ.
Read Full Story

10:45 PM (IST) Jul 31

ಬಾಲಕನ ಕಿಡ್ನಾಪ್ ಮಾಡಿ ₹5 ಲಕ್ಷಕ್ಕೆ ಡಿಮ್ಯಾಂಡ್; ಪೊಲೀಸರಿಗೆ ಹೇಳಿದ್ದಕ್ಕೆ ಮಗನ ಕೊಂದು ಎಸೆದು ಹೋದರು!

ಬೆಂಗಳೂರಿನಲ್ಲಿ ಟ್ಯೂಷನ್‌ಗೆ ತೆರಳಿದ್ದ 12 ವರ್ಷದ ಬಾಲಕನನ್ನು 5 ಲಕ್ಷ ರೂಪಾಯಿ ಹಣಕ್ಕಾಗಿ ಅಪಹರಿಸಿ ಕೊಲೆ ಮಾಡಲಾಗಿದೆ. ಪೊಲೀಸರಿಗೆ ದೂರು ನೀಡಿದ ವಿಚಾರ ತಿಳಿದ ಕಿಡ್ನಾಪರ್‌ಗಳು ಬಾಲಕನನ್ನು ಕೊಂದು ಪೆಟ್ರೋಲ್ ಸುರಿದು ಸುಟ್ಟು ಹಾಕಿ, ಅತ್ಯಂತ ಅಮಾನುಷ ಘಟನೆಗೆ ಸಾಕ್ಷಿ ಆಗಿದ್ದಾರೆ.

Read Full Story

09:57 PM (IST) Jul 31

ನಟ ಪ್ರಥಮ್ ಮುಖಕ್ಕೆ ಮಸಿ ಬಳಿದ ಹೋರಾಟಗಾರರು; ಪೊಲೀಸರ ಮುಂದೆ ನಡೆದೇ ಹೋಯ್ತು ಹೈಡ್ರಾಮಾ!

ನಟ ಪ್ರಥಮ್ ಅವರ ವಿವಾದಾತ್ಮಕ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನಾಕಾರರು ನಟನ ಮುಖಕ್ಕೆ ಮಸಿ ಬಳಿದಿದ್ದಾರೆ. ಈ ಘಟನೆಯು ಪೊಲೀಸ್ ಠಾಣೆಯ ಮುಂದೆಯೇ ನಡೆದಿದ್ದು, ವೈರಲ್ ಆಗಿದೆ. ಪ್ರತಿಭಟನಾಕಾರರು ಪ್ರಥಮ್ ಬಂಧನಕ್ಕೆ ಆಗ್ರಹಿಸಿದ್ದಾರೆ.

Read Full Story

08:29 PM (IST) Jul 31

ಅನಾಮಿಕ ವ್ಯಕ್ತಿ ಹೆಣದ ಮೇಲಿನ ಹಣ, ಚಿನ್ನ ಕದಿಯುತ್ತಿದ್ದ - ಧರ್ಮಸ್ಥಳ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೇಶವ್‌ ಗೌಡ!

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವ ಆರೋಪ ಮಾಡಿರುವ ಅನಾಮಿಕ ದೂರುದಾರನ ಬಗ್ಗೆ ಮಾಜಿ ಗ್ರಾ.ಪಂ. ಅಧ್ಯಕ್ಷ ಕೇಶವ ಗೌಡ ಮಾಹಿತಿ ನೀಡಿದ್ದಾರೆ. ದೂರುದಾರನ ನಟೋರಿಯಸ್‌ ಕೃತ್ಯಗಳಿಂದಾಗಿ ಧರ್ಮಸ್ಥಳದಿಂದ ಹೊರಹಾಕಲಾಗಿತ್ತು ಎಂದು ಅವರು ತಿಳಿಸಿದ್ದಾರೆ. 

Read Full Story

07:51 PM (IST) Jul 31

ಶೋಧ ಕಾರ್ಯ ವೇಳೆ ಸಿಕ್ಕ ಕಾರ್ಡ್‌ಗಳ ರಹಸ್ಯ ಬಯಲು, ಡೆಬಿಟ್ ಕಾರ್ಡ್ ಯಾರದ್ದೆಂದು ಪತ್ತೆ ಹಚ್ಚಿಸ ಎಸ್‌ಐಟಿ

ಧರ್ಮಸ್ಥಳದ ನೇತ್ರಾವದಿ ನದಿ ತೀರದಲ್ಲಿ ಪತ್ತೆಯಾದ ಡೆಬಿಟ್ ಮತ್ತು ಪಾನ್ ಕಾರ್ಡ್‌ಗಳು ಮೃತ ವ್ಯಕ್ತಿಯ ತಾಯಿಗೆ ಸೇರಿದ್ದೆಂದು ಎಸ್‌ಐಟಿ ತನಿಖೆಯಿಂದ ತಿಳಿದುಬಂದಿದೆ. ಕಾರ್ಡ್‌ಗಳ ಮಾಲೀಕರು ಜೀವಂತವಾಗಿದ್ದು, ಊಹಾಪೋಹಗಳಿಗೆ ತೆರೆ ಎಳೆಯಲಾಗಿದೆ.
Read Full Story

07:10 PM (IST) Jul 31

ಧರ್ಮಸ್ಥಳ ಸಮಾಧಿ ರಹಸ್ಯ - 12 ಮೂಳೆ ಸಿಕ್ಕ ಜಾಗದಲ್ಲಿ ಶೀಟ್‌ ಹಾಕಿ ಭದ್ರತೆ, ಆ.1ರ ಬೆಳಗ್ಗೆಯಿಂದಲೇ ಶೋಧ

ಧರ್ಮಸ್ಥಳದ ನೇತ್ರಾವತಿ ನದಿ ತಟದಲ್ಲಿ ನಡೆಯುತ್ತಿರುವ ಸಮಾಧಿ ಅಗೆಯುವ ಕಾರ್ಯಾಚರಣೆಯಲ್ಲಿ ಮಹತ್ವದ ಬೆಳವಣಿಗೆಗಳು. ೧೨ ಮೂಳೆಗಳು ಮತ್ತು ತಲೆಬುರುಡೆಯ ಭಾಗಗಳು ಪತ್ತೆಯಾಗಿದ್ದು, ಎಸ್ಐಟಿ ತಂಡ ಮುಂದಿನ ತನಿಖೆಗಾಗಿ ಸಂಗ್ರಹಿಸಿದೆ. ಸಾಕ್ಷ್ಯ ನಾಶವಾಗದಂತೆ ಕಟ್ಟೆಚ್ಚರ ಭದ್ರತೆ ಕೈಗೊಳ್ಳಲಾಗಿದೆ.
Read Full Story

04:30 PM (IST) Jul 31

ಧರ್ಮಸ್ಥಳ ಸಮಾಧಿ ಪ್ರಕರಣ, ಸತ್ತ ವ್ಯಕ್ತಿಯ ತಂದೆಯನ್ನು ಸಂಪರ್ಕಿಸಿದ ಎಸ್ ಐ ಟಿ

ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ನಡೆದ ಶೋಧ ಕಾರ್ಯದಲ್ಲಿ ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್ ಪತ್ತೆಯಾಗಿದೆ. ಪತ್ತೆಯಾದ ಕಾರ್ಡ್ ಮಾಲೀಕರು ಜಾಂಡೀಸ್ ನಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಆರನೇ ಗುಂಡಿಯಲ್ಲಿ ಪುರುಷನ ತಲೆಬುರುಡೆ ಮತ್ತು ಮೂಳೆಗಳು ಪತ್ತೆಯಾಗಿದೆ.
Read Full Story

02:57 PM (IST) Jul 31

ಚಿಕ್ಕಮಗಳೂರು - ಕುಡಿದ ಮತ್ತಿನಲ್ಲಿ ತಾಯಿ ಕೊಂದು ಬೆಂಕಿ ಇಟ್ಟ ಪಾಪಿ ಪುತ್ರ, ಅಪ್ಪನಿಗೂ ಹಿಂಸೆ ಕೊಟ್ಟ!

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕುಡಿತದ ದಾಸನಾದ ಮಗನೊಬ್ಬ ತನ್ನ ತಾಯಿಯನ್ನು ಕೊಂದು ಶವಕ್ಕೆ ಬೆಂಕಿ ಹಚ್ಚಿ ಪಕ್ಕದಲ್ಲೇ ಮಲಗಿದ್ದಾನೆ. ಈ ಹಿಂದೆಯೂ ತಂದೆಯ ಮೇಲೆ ಹಲ್ಲೆ ನಡೆಸಿದ್ದ ಈತನ ಕೃತ್ಯ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
Read Full Story

02:50 PM (IST) Jul 31

ಪತ್ನಿಯನ್ನ ಕೊಂದು ಆತ್ಮ*ತ್ಯೆ ಕತೆ ಕಟ್ಟಿದನಾ ಗಂಡ? ಮಗಳ ಸಾವಿನ ಬಗ್ಗೆ ಅನುಮಾನಗೊಂಡು ತಂದೆ ಎಫ್‌ಐಆರ್ ದಾಖಲಿಸುತ್ತಿದ್ದಂತೆ ಪತಿ ಪರಾರಿ!

ಬೆಂಗಳೂರಿನಲ್ಲಿ ಯುವತಿ ಸ್ವಾತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಗಂಡ ಮತ್ತು ಆತನ ಕುಟುಂಬಸ್ಥರು ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

01:09 PM (IST) Jul 31

ಧರ್ಮಸ್ಥಳ ಸಮಾಧಿ ಪ್ರಕರಣ - 6 ನೇ ಪಾಯಿಂಟ್‌ನಲ್ಲಿ ಅಸ್ಥಿಪಂಜರದ ಅವಶೇಷ ಪತ್ತೆ

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದಲ್ಲಿ ಮೂರನೇ ದಿನದ ಉತ್ಖನನದ ವೇಳೆ 6 ನೇ ಪಾಯಿಂಟ್‌ನಲ್ಲಿ ಮೂಳೆಗಳು ಪತ್ತೆಯಾಗಿವೆ. ಎಸ್‌ಐಟಿ ತಂಡವು ಪತ್ತೆಯಾದ ಮೂಳೆಗಳನ್ನು ಸಂಗ್ರಹಿಸಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.
Read Full Story

11:55 AM (IST) Jul 31

'ಖರ್ಗೆ ಮುಖ್ಯಮಂತ್ರಿ ಆಗಬಾರದು ಅಂತ ಏನೂ ಇಲ್ಲವಲ್ಲ?' - ಸತೀಶ್‌ ಜಾರಕಿಹೊಳಿ ಕುತೂಹಲಕಾರಿ ಹೇಳಿಕೆ

ಮಾಜಿ ಮುಖ್ಯಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಅವರು ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಖರ್ಗೆ ಅವರು ಮತ್ತೆ ಮುಖ್ಯಮಂತ್ರಿ ಆಗಬಹುದೇ ಎಂಬ ಪ್ರಶ್ನೆಗೆ ಕುತೂಹಲಕಾರಿ ಉತ್ತರ ನೀಡಿದ್ದಾರೆ.
Read Full Story

11:55 AM (IST) Jul 31

ಧರ್ಮಸ್ಥಳ ಸಮಾಧಿ ಪ್ರಕರಣ - 9ನೇ ಪಾಯಿಂಟ್ ನಿಂದ ಶವ ಸಿಗೋದು ಖಚಿತ ಅನಾಮಿಕನ ಭಾರೀ ವಿಶ್ವಾಸ!

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವ ಪ್ರಕರಣದಲ್ಲಿ ಅನಾಮಿಕ ದೂರುದಾರನು ನೀಡಿರುವ ಸುಳಿವುಗಳು ಚರ್ಚೆಗೆ ಗ್ರಾಸವಾಗಿವೆ. 9ನೇ ಪಾಯಿಂಟ್‌ನಿಂದ ಮುಂದಿನ ಸ್ಥಳಗಳಲ್ಲಿ ಶವ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾನೆ. ತನಿಖಾ ತಂಡವು ಶೋಧ ಕಾರ್ಯವನ್ನು ತೀವ್ರಗೊಳಿಸಿದೆ.
Read Full Story

11:12 AM (IST) Jul 31

ಪಿಯುಸಿ ಮೌಲ್ಯಮಾಪಕರಿಗೆ ಇನ್ನೂ ಸಿಗದ ಸಂಭಾವನೆ! ಗ್ಯಾರೆಂಟಿ ಖ್ಯಾತಿಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ

ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ನಿಯೋಜಿಸಲಾಗಿದ್ದ ಸುಮಾರು 65 ಸಾವಿರ ಶಿಕ್ಷಕರಿಗೆ ನಾಲ್ಕು ತಿಂಗಳಾದರೂ ಸಂಭಾವನೆ ಸಿಕ್ಕಿಲ್ಲ. ಒಟ್ಟು ₹75 ಕೋಟಿ ಬಾಕಿ ಉಳಿದಿದ್ದು, ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Read Full Story

10:52 AM (IST) Jul 31

ಬೆಂಗಳೂರು ಜನರಿಗೆ ಮತ್ತೊಂದು ದರ ಏರಿಕೆ! ಆಗಸ್ಟ್ 1 ರಿಂದ ದುಬಾರಿಯಾಗಲಿದೆ ಆಟೋ ಪ್ರಯಾಣ!

ಆಗಸ್ಟ್ 1, 2025 ರಿಂದ ಬೆಂಗಳೂರಿನಲ್ಲಿ ಆಟೋ ದರಗಳು ಏರಿಕೆಯಾಗಲಿವೆ. ಮೊದಲ 2 ಕಿ.ಮೀ.ಗೆ ₹36 ಮತ್ತು ನಂತರ ಪ್ರತಿ ಕಿ.ಮೀ.ಗೆ ₹18 ದರ ನಿಗದಿಯಾಗಿದೆ. ರಾತ್ರಿ ವೇಳೆ ಪ್ರಯಾಣಕ್ಕೆ ಅರ್ಧದಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುವುದು.
Read Full Story

10:25 AM (IST) Jul 31

ಕೃಷಿಯಲ್ಲಿ ಅತಿಯಾದ ಯೂರಿಯಾ ಬಳಕೆ, ತುಂಗಭದ್ರಾ ಅಚ್ಚುಕಟ್ಟು ಕ್ಯಾನ್ಸರ್‌ ಹಬ್‌!?

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಅತಿಯಾದ ಯೂರಿಯಾ ಬಳಕೆಯಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕೃಷಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕ್ಯಾನ್ಸರ್ ಹಬ್ ಆಗುವ ಭೀತಿ ಎದುರಾಗಿದೆ. 

Read Full Story

09:29 AM (IST) Jul 31

ಗಾಯತ್ರಿ ಕಾಫಿ ಎಂಬ ಹಳೇ ಬೇರಿನಲ್ಲಿ ಚಿಗುರೊಡೆದ ಗೆಟ್ ಕಾಫಿ!

ಮಧುಗಿರಿಯ ಗಾಯತ್ರಿ ಕಾಫಿಯಿಂದ ಬೆಂಗಳೂರಿನ ಗೆಟ್ ಕಾಫಿಯಾಗಿ ಬೆಳೆದ ಕಥೆ. ಅಕ್ಷಯ್ ಮೇದಾ ಅವರ ಉದ್ಯಮಶೀಲತೆ ಮತ್ತು ಕಪೆಕ್ ಸಹಾಯಧನದಿಂದ ಯಶಸ್ಸಿನತ್ತ ಸಾಗಿದ ಪಯಣ.
Read Full Story

08:59 AM (IST) Jul 31

CRIB discovered - ಕೋಲಾರ ಮಹಿಳೆಯಲ್ಲಿ ವಿಶ್ವದಲ್ಲೇ ಎಲ್ಲೂ ಇಲ್ಲದ ರಕ್ತದ ಗುಂಪು ಪತ್ತೆ!

ಕೋಲಾರ ಮೂಲದ ಮಹಿಳೆಯೊಬ್ಬರಲ್ಲಿ ಜಾಗತಿಕವಾಗಿ ಹೊಸ ರಕ್ತದ ಗುಂಪು ಪತ್ತೆಯಾಗಿದೆ. ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರ ಹಾಗೂ ಅಂತಾರಾಷ್ಟ್ರೀಯ ರಕ್ತ ಗುಂಪು ಉಲ್ಲೇಖಿತ ಪ್ರಯೋಗಾಲಯದ ಸಂಶೋಧನೆಯಿಂದ ಈ ಅಪರೂಪದ 'ಸಿಆರ್‌ಐಬಿ' ಗುಂಪು ಬೆಳಕಿಗೆ ಬಂದಿದೆ. 

Read Full Story

08:32 AM (IST) Jul 31

ಕೃಷಿ ಮೇಳದಲ್ಲಿ ‘ನೀಲಿ’ ಅರಿಶಿಣ ಸೇರಿ 5 ಹೊಸ ತಳಿ ಲೋಕಾರ್ಪಣೆ

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಹೆಬ್ಬಾಳದ ಜಿಕೆವಿಕೆಯಲ್ಲಿ ನ.13 ರಿಂದ 16 ರವರೆಗೂ ಆಯೋಜಿಸಲಿರುವ ಬಹುನಿರೀಕ್ಷಿತ ‘ಕೃಷಿ ಮೇಳ’ದಲ್ಲಿ ಉತ್ಕೃಷ್ಟ ‘ನೀಲಿ ತಿರುಳ’ನ್ನು ಹೊಂದಿರುವ ಅರಿಶಿಣ ಸೇರಿದಂತೆ ಐದು ನೂತನ ತಳಿಗಳು ಲೋಕಾರ್ಪಣೆಯಾಗಲಿವೆ.

Read Full Story

08:14 AM (IST) Jul 31

ಧರ್ಮಸ್ಥಳ ಪ್ರಕರಣ - ಇಂದು ಪಾಯಿಂಟ್ ನಂಬರ್ 6 ರಿಂದ ಮುಂದುವರಿಯಲಿದೆ SIT ಕಾರ್ಯಾಚರಣೆ,

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಶಂಕೆಯ ತನಿಖೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಐದು ಪಾಯಿಂಟ್‌ಗಳಲ್ಲಿ ಉತ್ಖನನ ಮುಕ್ತಾಯಗೊಂಡಿದ್ದು, ಇನ್ನೂ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ. ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಸ್ಥಳದಲ್ಲೇ ಮುಕ್ಕಾಂ ಹೂಡಿದ್ದಾರೆ.
Read Full Story

07:51 AM (IST) Jul 31

Internal reservation - ಆ.2ಕ್ಕೆ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ದಲಿತ ಶಾಸಕರ ಮೀಟಿಂಗ್‌

ಗೃಹ ಸಚಿವ ಡಾ.ಜಿ. ಪರಮೇಶ್ವರ್ ನೇತೃತ್ವದಲ್ಲಿ ಆಗಸ್ಟ್ 2 ರಂದು ದಲಿತ ಸಚಿವರು ಮತ್ತು ಶಾಸಕರ ಸಭೆ. ಒಳಮೀಸಲಾತಿ ಜಾರಿ ಕುರಿತು ಚರ್ಚಿಸಲು ಭೋಜನಕೂಟದ ಹೆಸರಿನಲ್ಲಿ ಸಭೆ ಆಯೋಜನೆ. ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಸಲ್ಲಿಕೆಗೂ ಮುನ್ನವೇ ಸಭೆ.
Read Full Story

07:36 AM (IST) Jul 31

Smart Meter Scam - ಸಚಿವ ಜಾರ್ಜ್‌ ಆಪ್ತ ಉದ್ಯಮಿಗಳ ಮೇಲೆ ತೆರಿಗೆ ಇಲಾಖೆ ದಾಳಿ, ಎಂಬಸ್ಸಿ ಗ್ರೂಪ್‌ಗೂ ರೇಡ್‌ । ದಾಖಲೆಗಳ ವಶ

ಇಂಧನ ಸಚಿವರ ಆಪ್ತ ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಎಲೆಕ್ಟ್ರಿಕ್ ಗುತ್ತಿಗೆದಾರರ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಸ್ಮಾರ್ಟ್ ಮೀಟರ್ ಟೆಂಡರ್ ಅವ್ಯವಹಾರದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದ್ದು, ಮಹತ್ವದ ದಾಖಲೆಗಳು ಪತ್ತೆಯಾಗಿವೆ.
Read Full Story

07:20 AM (IST) Jul 31

Mysuru MDMA racket - ಮೈಸೂರು ಪೊಲೀಸರ ನಿದ್ದೆಗೆಡಿಸಿದ ಮಹಾರಾಷ್ಟ್ರ ಪೊಲೀಸರ ದಾಳಿ, ಮನೆ ಮನೆಗೆ ಹೊಕ್ಕು ತಪಾಸಣೆ!

ಮಹಾರಾಷ್ಟ್ರ ಪೊಲೀಸರು ಮೈಸೂರಿನಲ್ಲಿ ನಡೆಸಿದ ಬೃಹತ್ ಡ್ರಗ್ಸ್ ದಾಳಿಯ ಬಳಿಕ ಮೈಸೂರು ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ನಿರಂತರ ದಾಳಿ ನಡೆಸಿ ಹಲವು ಪ್ರಕರಣ ದಾಖಲಿಸಿದ್ದಾರೆ. ಈ ದಾಳಿಯಿಂದ ಮೈಸೂರಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ದಂಧೆಯ ಬಗ್ಗೆ ಬೆಳಕು ಚೆಲ್ಲಿದೆ.
Read Full Story

More Trending News