Published : Apr 25, 2026, 06:41 AM ISTUpdated : Apr 25, 2026, 09:27 PM IST

Karnataka News Live: Sirsi Haveri Road - ತೆರಿಗೆ ನಮ್ಮದು, ಗುಂಡಿ ನಿಮ್ಮದು; ಕೆಸರಲ್ಲಿ ಹೂತುಹೋದ ಆಳುವವರ ಮಾನ-ಮರ್ಯಾದೆ!

ಸಾರಾಂಶ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿನ ಸಂಪುಟ ಪುನಾರಚನೆ, ಸಿಎಂ ಬದಲಾವಣೆ ಚರ್ಚೆ ನಡುವೆಯೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ದೆಹಲಿಯಲ್ಲಿ ಶುಕ್ರವಾರ ಎಐಸಿಸಿ ಅಧ್ಯಕ್ಷ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ, ಮಹತ್ವದ ಮಾತುಕತೆ ನಡೆಸಿದರು. ಸಹೋದರ ಡಿ.ಕೆ.ಸುರೇಶ್‌ ಜೊತೆ ಶುಕ್ರವಾರ ಸಂಜೆ ದೆಹಲಿಯ ರಾಜಾಜಿಮಾರ್ಗದಲ್ಲಿರುವ ಖರ್ಗೆಯವರ ನಿವಾಸಕ್ಕೆ ತೆರಳಿದ ಡಿಕೆಶಿ, ಸುಮಾರು ಒಂದೂವರೆ ಗಂಟೆಗಳ ಕಾಲ ಅವರ ನಿವಾಸದಲ್ಲಿ ಕಳೆದರು. ಭೇಟಿ ವೇಳೆ, ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಲಾಯಿತು ಎನ್ನಲಾಗಿದೆ. ಆದರೆ, ಮಾತುಕತೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಡಿಕೆಶಿ ನಿರಾಕರಿಸಿದರು.

Sirsi Haveri Road

09:27 PM (IST) Apr 25

Sirsi Haveri Road - ತೆರಿಗೆ ನಮ್ಮದು, ಗುಂಡಿ ನಿಮ್ಮದು; ಕೆಸರಲ್ಲಿ ಹೂತುಹೋದ ಆಳುವವರ ಮಾನ-ಮರ್ಯಾದೆ!

Sirsi Haveri Road: ಶಿರಸಿ-ಹಾವೇರಿ ರಸ್ತೆಯನ್ನು ಮೇ 30 ರೊಳಗಡೆ ಮುಗಿಸಿಕೊಡೋದಾಗಿ ಹೇಳಿದ್ದಾರೆ, ಆದರೆ ಈಗ ಒಂದು ಮಳೆಗೆ ರಸ್ತೆ ಮಾತ್ರ ಕೆಸರುಗದ್ದೆಯಾಗಿದೆ. ಈ ಬಾರಿ ರಸ್ತೆ ಕಂಪ್ಲೀಟ್‌ ಆಗಿಲ್ಲ ಅಂದ್ರೆ ಮಾತ್ರ ಜನರು ಸುಮ್ಮನೆ ಇರೋದಿಲ್ಲ. ಆದರೆ ಈಗ ಬಂದ ಒಂದು ಮಳೆಗೆ ರಸ್ತೆ ಮಾತ್ರ ಗದ್ದೆಯಾಗಿದೆ.

 

Read Full Story

09:17 PM (IST) Apr 25

ಒಳಮೀಸಲಾತಿ ಘೋಷಣೆ ಐತಿಹಾಸಿಕ ನಿರ್ಧಾರ - ಸಚಿವ ಸತೀಶ್ ಜಾರಕಿಹೊಳಿ

ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ದಶಕಗಳ ಬೇಡಿಕೆ ಒಳಮೀಸಲಾತಿ ಘೋಷಿಸಿರುವುದು ಐತಿಹಾಸಿಕ ನಿರ್ಧಾರ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಹೈಕಮಾಂಡ್ ಶೀಘ್ರದಲ್ಲೇ..

Read Full Story

09:11 PM (IST) Apr 25

ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ಗುಡ್ ನ್ಯೂಸ್, ಶಾಸಕ ರಂಗನಾಥ್ ಸ್ಫೋಟಕ ಹೇಳಿಕೆ

ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ಗುಡ್ ನ್ಯೂಸ್, ಶಾಸಕ ರಂಗನಾಥ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಿಎಂ ಒಡಂಬಡಿಕೆ ಕುರಿತು ಮಾತನಾಡಿದ ರಂಗನಾಥ್ ಇದೀಗ ಡಿಕೆಶಿ ಅಭಿಮಾನಿಗಳಲ್ಲಿ ಮತ್ತೆ ಹೊಸ ಕನಸು ಚಿಗುರಿಸಿದ್ದಾರೆ.

Read Full Story

07:52 PM (IST) Apr 25

Summer Drinks - ಬೇಸಿಗೆ ಬಿಸಿಲಿಗೆ ಬ್ರೇಕ್ - ಇಲ್ಲಿದೆ 5 ನಿಮಿಷದಲ್ಲಿ ರೆಡಿಯಾಗೋ 5 ದೇಸಿ ಲಸ್ಸಿ ರೆಸಿಪಿ

ಬೇಸಿಗೆಯಲ್ಲಿ ದೇಹವನ್ನು ತಂಪಾಗಿ ಮತ್ತು ಹೈಡ್ರೇಟ್ ಆಗಿಡಲು ದೇಸಿ ಲಸ್ಸಿ ಒಂದು ಅತ್ಯುತ್ತಮ ಆಯ್ಕೆ. ಸಿಹಿ, ಉಪ್ಪು, ಮಾವಿನಹಣ್ಣು, ಪುದೀನಾ ಮತ್ತು ಗುಲಾಬಿ ಲಸ್ಸಿಯಂತಹ ಪಾನೀಯಗಳು ಕೇವಲ 5 ನಿಮಿಷಗಳಲ್ಲಿ ಸಿದ್ಧವಾಗಿ, ತಕ್ಷಣವೇ ದೇಹಕ್ಕೆ ತಂಪು ಮತ್ತು ಶಕ್ತಿ ನೀಡುತ್ತವೆ.

Read Full Story

07:30 PM (IST) Apr 25

ಡಾ.ರಾಜ್ ಸಮಾಧಿ ಕುರಿತು ನಾಲಗೆ ಹರಿಬಿಟ್ಟ ಚೇತನ್ ಮನೆಗೆ ಮುತ್ತಿಗೆ, ಸಾರ್ವಜನಿಕವಾಗಿ ಕ್ಷಮೆ ಕೇಳಿದ ನಟ

ಡಾ.ರಾಜ್ ಕುಮಾರ್ ಸಮಾಧಿಗೆ 2.5 ಏಕರೆ ಜಾಗ ಯಾಕೆ ಎಂದು ಪ್ರಶ್ನಿಸಿ ಭಾರಿ ವಿರೋಧ ಎದುರಿಸುತ್ತಿರುವ ನಟ ಚೇತನ್ ಸಂಕಷ್ಟ ಹೆಚ್ಚಾಗಿದೆ. ಡಾ.ರಾಜ್ ಸಮಾಧಿ ಕುರಿತು ನಾಲಗೆ ಹರಿಬಿಟ್ಟ ಚೇತನ್ ಮನೆಗೆ ಮುತ್ತಿಗೆ, ಸಾರ್ವಜನಿಕವಾಗಿ ಕ್ಷಮೆ ಕೇಳಿದ ನಟ

Read Full Story

07:00 PM (IST) Apr 25

ಯುವಕರೇ ಬದಲಾವಣೆ ತರುವ ಶಕ್ತಿ, ಸಂಘರ್ಷಕ್ಕಿಂತ ಸಹಕಾರ ಆಯ್ಕೆಮಾಡಿ - ರವಿಶಂಕರ್ ಗುರೂಜಿ

ಯುವಕರು ಬದಲಾವಣೆಯನ್ನು ತರಬಹುದು. ನೀವು ಜನರ ಹೃದಯ ಮತ್ತು ಮನಸ್ಸುಗಳನ್ನು ಒಂದುಗೂಡಿಸಬಹುದು. ನಮ್ಮಲ್ಲಿ ಪ್ರತಿಯೊಬ್ಬರಿಗೂ ನಮ್ಮದೇ ಆದ ವಿಶಿಷ್ಟ ಶಕ್ತಿ ಇದೆ ಎಂದರು ರವಿಶಂಕರ್ ಗುರೂಜಿ.

Read Full Story

06:11 PM (IST) Apr 25

ಟೀಚರ್ಸ್​ ವಾಷ್​ರೂಮ್​ನಲ್ಲಿದ್ದಾಗ ಬಾಗಿಲು ಹಾಕೋದೆಂದ್ರೆ ಸಕತ್​ ಇಷ್ಟ - ತರ್ಲೆ ದಿನಗಳ ನೆನೆದ ನಟ ಚಂದನ್

'ಮಾಂಗಲ್ಯಂ ತಂತುನಾನೇನ' ಖ್ಯಾತಿಯ ನಟ ಆರ್.ಕೆ.ಚಂದನ್, 'ಶ್ರೀ ಗೌರಿ' ಧಾರಾವಾಹಿ ಮತ್ತು ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ಕಾಲೇಜು ದಿನಗಳ ತರ್ಲೆಗಳನ್ನು ಹಂಚಿಕೊಂಡಿದ್ದು, ಶಿಕ್ಷಕರಿಗೆ ತೊಂದರೆ ಕೊಡುತ್ತಿದ್ದ ಬಗ್ಗೆ ಮಾತನಾಡಿದ್ದಾರೆ.

Read Full Story

06:08 PM (IST) Apr 25

ನಾನೇ ಸಿಎಂ ಎಂದುಕೊಂಡೇ 3 ವರ್ಷ ಕಾಲಹರಣ ಮಾಡಿದರು - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಈಗಿನ ರಾಜ್ಯ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸದೇ, ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡದೇ ನಾನೇ ಸಿಎಂ ಎಂದುಕೊಂಡೇ ಮೂರು ವರ್ಷಗಳು ಕಾಲಹರಣ ಮಾಡಿದರು ಎಂದು ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Read Full Story

05:59 PM (IST) Apr 25

ಬೆಂಗಳೂರಿನ ರಸ್ತೆಯಲ್ಲಿ ಯುವತಿಯ ಕನಸು ನುಚ್ಚುನೂರು, ಕಿಲ್ಲರ್ ಬಿಎಂಟಿಸಿಗೆ ಮತ್ತೊಬ್ಬ ವಿದ್ಯಾರ್ಥಿನಿ ಬಲಿ!

ಬೆಂಗಳೂರಿನ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ, ಬಿಎಂಟಿಸಿ ಬಸ್ ಚಕ್ರದಡಿ ಸಿಲುಕಿ ಸಿರಿಶಾ ಎಂಬ 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ನಿಂದ ಬಿದ್ದ ಅವರ ಮೇಲೆ ಬಸ್ ಹರಿದಿದ್ದು, ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Read Full Story

05:48 PM (IST) Apr 25

ರೈತರ ಜೀವಕ್ಕೆ ಗ್ಯಾರಂಟಿ ಕೊಡಿ - ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

ಸರ್ಕಾರ ಗ್ಯಾರಂಟಿ ಕೊಡುತ್ತದೆ ಆದರೆ, ರೈತರಿಗೆ ಬೆಳೆ ಗ್ಯಾರಂಟಿ ಇಲ್ಲವಾಗಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Read Full Story

05:35 PM (IST) Apr 25

ಶಿರಸಿ - ಮಂಟಪದಿಂದ ವಧು ನಾಪತ್ತೆ, MBBS ವಿದ್ಯಾರ್ಥಿ ಜತೆ ಪರಾರಿ ಶಂಕೆ, ಕ್ವಿಂಟಾಲ್‌ಗಟ್ಟಲೆ ನಾನ್‌ವೆಜ್ ಊಟ ವೇಸ್ಟ್

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ನಿಶ್ಚಯವಾಗಿದ್ದ ಮದುವೆಗೂ ಮುನ್ನ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಪಾಲಕರು ಪ್ರೀತಿಗೆ ಒಪ್ಪದ ಕಾರಣ ಬೇರೊಬ್ಬನೊಂದಿಗೆ ಮದುವೆ ನಿಶ್ಚಯಿಸಿದ್ದರು. ಈ ಘಟನೆಯಿಂದ ಮದುವೆ ರದ್ದಾಗಿದ್ದು, ಯುವತಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Read Full Story

05:21 PM (IST) Apr 25

ನೋಡಲು ಹೋಗಿದ್ದು ದರ್ಶನ್​ರನ್ನು, ಸಿಕ್ಕಿದ್ದು ಧರ್ಮ! ರೋಚಕ ಘಟನೆ ತೆರೆದಿಟ್ಟ Bigg Boss ಅನುಷಾ ರೈ

ಬಿಗ್‌ಬಾಸ್ ಖ್ಯಾತಿಯ ನಟಿ ಅನುಷಾ ರೈ, ಹೈಸ್ಕೂಲ್‌ನಲ್ಲಿದ್ದಾಗ 'ಸಾರಥಿ' ಪ್ರಚಾರಕ್ಕಾಗಿ ಬಂದಿದ್ದ ದರ್ಶನ್‌ರನ್ನು ನೋಡಲು ಸ್ಕೂಲ್ ಬಂಕ್ ಮಾಡಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಂದು ದರ್ಶನ್‌ ಬದಲು ಧರ್ಮ ಕೀರ್ತಿರಾಜ್‌ರನ್ನು ಭೇಟಿಯಾಗಿದ್ದು,  ಅವರೊಂದಿಗೇ ನಾಯಕಿಯಾಗಿದ್ದು ಕಾಕತಾಳೀಯ ಎಂದಿದ್ದಾರೆ. 

Read Full Story

05:19 PM (IST) Apr 25

Cucumber Tips - ಸೌತೆಕಾಯಿ ಕಹಿ ಅಂತ ಎಸೆಯಬೇಡಿ, ಹೀಗೆ ಮಾಡಿದ್ರೆ ಸ್ವಲ್ಪವೂ ಕಹಿ ಇರಲ್ಲ!

Cucumber Tips: ಸೌತೆಕಾಯಿ ಕಹಿಯಾಗಿದೆ ಅಂತ ಬೇಸರ ಮಾಡ್ಕೋಬೇಡಿ. ಅದನ್ನು ಎಸೆಯುವ ಬದಲು, ಕೆಲವು ಸುಲಭ ಉಪಾಯಗಳನ್ನು ಬಳಸಿ ಅದರ ಕಹಿಯನ್ನು ತೆಗೆದುಹಾಕಿ ಮತ್ತೆ ಸಿಹಿಯಾಗಿಸಬಹುದು. ಆ ಟ್ರಿಕ್ಸ್ ಇಲ್ಲಿವೆ.

Read Full Story

05:07 PM (IST) Apr 25

ಹೀರೋಯಿನ್‌ಗಳಿಗೆ ಪ್ರತಿ ತಿಂಗಳು ಎಷ್ಟು ಖರ್ಚು ಆಗುತ್ತೆ? ಅಸಲಿ ಸತ್ಯ ಹೇಳಿದ‌ Actress Nidhi Agarwal

Actress Nidhi Agarwal: ಸೌಂದರ್ಯ, ನಟನೆ ಎಲ್ಲವೂ ಇದ್ದರೂ ಅದೃಷ್ಟ ಕೈ ಹಿಡಿಯದ ನಟಿ ನಿಧಿ ಅಗರ್ವಾಲ್. ಸ್ಟಾರ್ ನಟರ ಜೊತೆ ನಟಿಸಿದರೂ ಅವರಿಗೆ ಸರಿಯಾದ ಯಶಸ್ಸು ಸಿಕ್ಕಿಲ್ಲ. ಇತ್ತೀಚೆಗೆ ತಮ್ಮ ತಿಂಗಳ ಖರ್ಚಿನ ವಿವರಗಳನ್ನು ನಿಧಿ ಬಹಿರಂಗಪಡಿಸಿದ್ದಾರೆ.

Read Full Story

04:57 PM (IST) Apr 25

ಯುವಕರ ಹೊಸ ಭವಿಷ್ಯ ಬರೆಯಲಿದೆ ಪ್ರಾಕ್ಸಿನ್ ಟೆಕ್ ಕಂಪನಿ ಮತ್ತು ದಾಂಡೇಲಿ ಜಿಟಿಟಿಸಿ ಒಪ್ಪಂದ!

ಪ್ರಾಕ್ಸಿನ್ ಟೆಕ್ ಕಂಪನಿ ಮತ್ತು ದಾಂಡೇಲಿಯ ಸರ್ಕಾರಿ ಟೂಲ್ ಮತ್ತು ತರಬೇತಿ ಸಂಸ್ಥೆ (ಜಿ.ಟಿ.ಟಿ.ಸಿ.) ನಡುವೆ ಶೈಕ್ಷಣಿಕ-ಉದ್ಯೋಗ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದದ ಮೂಲಕ, ವಿದ್ಯಾರ್ಥಿಗಳಿಗೆ ಕೈಗಾರಿಕಾ ಅಗತ್ಯಗಳಿಗೆ ತಕ್ಕಂತೆ ತರಬೇತಿ, ಇಂಟರ್ನ್‌ಶಿಪ್‌ ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸಿ, ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಗುರಿ ಹೊಂದಲಾಗಿದೆ.
Read Full Story

04:46 PM (IST) Apr 25

ಲಕ್ಷ, ಲಕ್ಷ ಹಣ ಬೇಕಿಲ್ಲ; ವೀಸಾ ಬೇಡ, 20-60 ಸಾವಿರದಲ್ಲಿ ಮುಗಿಯುವ ಇಂಟರ್‌ನ್ಯಾಶನಲ್‌ ಟ್ರಿಪ್‌ ಸ್ಥಳಗಳಿವು!

International trips: ಬೇಸಿಗೆಯಲ್ಲಿ ವಿದೇಶ ಪ್ರವಾಸಕ್ಕೆ ಬಜೆಟ್ ಚಿಂತೆಯೇ? ಚಿಂತೆ ಬಿಡಿ. ಭಾರತದಿಂದ ಕೇವಲ ₹60,000 ಒಳಗಿನ ಖರ್ಚಿನಲ್ಲಿ ನೀವು ಸುತ್ತಾಡಬಹುದಾದ 10 ಅದ್ಭುತ ದೇಶಗಳ ಮಾಹಿತಿ ಇಲ್ಲಿದೆ. ನೇಪಾಳ, ಶ್ರೀಲಂಕಾದಿಂದ ಹಿಡಿದು ಥೈಲ್ಯಾಂಡ್, ವಿಯೆಟ್ನಾಂವರೆಗೆ ಈ ದೇಶಗಳು ಕಡಿಮೆ ಖರ್ಚು ಸಾಕು. 

Read Full Story

04:37 PM (IST) Apr 25

ಎಲ್ರ ಕಾಲೆಳೆಯತ್ತೆ ಕಾಲ ವಿಮರ್ಶೆ - ಗಡಿಯಾರ ಚಲಿಸದ ಊರಲ್ಲಿ ಮೂರು ಹಗಲು ಮೂರು ರಾತ್ರಿ

ಕಂಡಕ್ಟರ್‌ ಬೇಡ ಅಂದರೂ ಕೇಳದೇ ಬಸ್‌ ಇಳಿದು ಟೀ ಅಂಗಡಿಗೆ ಹೋಗುವ ಪ್ರಯಾಣಿಕನೊಬ್ಬನಿಂದ ಆ ಊರಿನ ಕಥೆ ಶುರು. ಆ ವಿಲಕ್ಷಣ ಗ್ರಾಮದ ಹೆಸರು ‘ಇದ್ನೋಡ್‌’. ಅಲ್ಲಿ ಗಡಿಯಾರವೇ ಚಲಿಸೋದಿಲ್ಲ.

Read Full Story

04:35 PM (IST) Apr 25

Yash - ಗೀತೂ ಮೋಹನ್‌ದಾಸ್ ಬಗ್ಗೆ ಯಶ್ ಹೇಳಿದ್ದೇನು? ಹೊಸ ಸಿನಿಮಾ ಬಗ್ಗೆ ಮನಬಿಚ್ಚಿ ಮಾತಾಡಿದ ಯಶ್!

ನಟಿ ಗೀತೂ ಮೋಹ ನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಬಗ್ಗೆ ನಟ ಯಶ್ ಮಾತನಾಡಿದ್ದಾರೆ. ಇದೊಂದು ಮಹಿಳಾ ದೃಷ್ಟಿಕೋನದ ಗ್ಯಾಂಗ್‌ಸ್ಟರ್ ಸಿನಿಮಾ ಎಂದಿರುವ ಅವರು, ಗೀತು ಒಬ್ಬ ಅದ್ಭುತ ಬರಹಗಾರ್ತಿ ಎಂದು ಹೊಗಳಿದ್ದಾರೆ. ಪೋಸ್ಟ್-ಕೊಲೋನಿಯಲ್ ಗೋವಾದ ಡ್ರಗ್ ಮಾಫಿಯಾ ಕಥೆಯುಳ್ಳ ಈ ಚಿತ್ರದಲ್ಲಿ ನಯನತಾರಾ ಮತ್ತು ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಯಶ್ ದ್ವಿಪಾತ್ರದಲ್ಲಿದ್ದಾರೆ.

Read Full Story

04:21 PM (IST) Apr 25

ಪುನೀತ್ ನಿವಾಸ ಸಿನಿಮಾ ವಿಮರ್ಶೆ - ಮನೆ ಕಟ್ಟುವ ಕನಸು, ಸಿನಿಮಾ ಮಾಡುವ ಹೋರಾಟ

ತೀರಾ ಚಿಕ್ಕ ವಯಸ್ಸಿಗೇ ಮಲ್ಲು ರಿಯಲ್‌ ಎಸ್ಟೇಟ್‌ ಮಾಡುವುದು, ಕಮಿಷನ್‌ ರೂಪದಲ್ಲಿ ಸಿಗುವ 5 ಲಕ್ಷ ಹಣದಲ್ಲಿ ಮುಂದೆ ಏನು ಮಾಡುತ್ತಾನೆ ಎಂಬುದು ಚಿತ್ರದ ಕುತೂಹಲಕಾರಿ ಅಂಶ. ಮಲ್ಲು ಪಾತ್ರದಲ್ಲಿ ನಿರ್ದೇಶಕರು ಹೇಳಿದಂತೆ ನಟಿಸಿದ್ದಾರೆ!

Read Full Story

04:11 PM (IST) Apr 25

ಭಾರತದಲ್ಲಿ ಸರ್ಕಾರಿ ಅಧಿಕಾರಿಗಳ ಕುರ್ಚಿ ಮೇಲೆ ಬಿಳಿ ಟವೆಲ್ ಯಾಕಿರುತ್ತೆ? ಬ್ರಿಟಿಷರ ಪದ್ಧತಿ ಹಿಂದಿದೆ ಬಲವಾದ ಕಾರಣ

Government Officials White Towel In Chair: ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಕುರ್ಚಿಗಳ ಮೇಲೆ ಬಿಳಿ ಟವೆಲ್ ಯಾಕಿರುತ್ತದೆ ಗೊತ್ತಾ? ಬ್ರಿಟಿಷರ ಕಾಲದ ಈ ಸಂಪ್ರದಾಯದ ಹಿಂದಿರುವ ಸ್ವಾರಸ್ಯಕರ ಇತಿಹಾಸ ಮತ್ತು ನಿಜವಾದ ಕಾರಣಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.

Read Full Story

04:11 PM (IST) Apr 25

Pulsar vs Apache - ಬೈಕ್ ರೇಸ್‌ನಲ್ಲಿ ಪಲ್ಸರ್ ಪರಾಕ್ರಮ! ಭಾರತದ ಬೈಕ್ ಸೇಲ್ಸ್‌ ಮಾರುಕಟ್ಟೆಯಲ್ಲಿ ಯಾರಿಗೆ ಅಗ್ರಸ್ಥಾನ?

2026ರ ಮಾರ್ಚ್ ತಿಂಗಳ ಬೈಕ್ ಮಾರಾಟದಲ್ಲಿ, ಬಜಾಜ್ ಪಲ್ಸರ್ ಸರಣಿಯು ಟಿವಿಎಸ್ ಅಪಾಚೆಯನ್ನು ಹಿಂದಿಕ್ಕಿ ಮೊದಲ ಸ್ಥಾನ ಗಳಿಸಿದೆ. ಪಲ್ಸರ್ ಮಾರಾಟದಲ್ಲಿ 59% ರಷ್ಟು ಭಾರಿ ಏರಿಕೆ ಕಂಡರೆ, ಹೋಂಡಾ ಯುನಿಕಾರ್ನ್, ಯಮಹಾ FZ, ಮತ್ತು ಹೀರೋ ಎಕ್ಸ್‌ಪಲ್ಸ್ ಸಹ ಉತ್ತಮ ಪ್ರದರ್ಶನ ನೀಡಿವೆ.
Read Full Story

04:10 PM (IST) Apr 25

ಡಾ. ರಾಜ್‌ಕುಮಾರ್ 2.5 ಎಕ್ರೆ ಭೂಮಿ ವಿವಾದ, ಕುಪ್ಪಳ್ಳಿ ತರಹ ಗಾಜನೂರನ್ನು ಅಭಿವೃದ್ಧಿಪಡಿಸಿ - ಚೇತನ್ ಅಹಿಂಸಾ

ನಟ ಚೇತನ್ ಅಹಿಂಸಾ, ಡಾ. ರಾಜ್‌ಕುಮಾರ್ ಅವರಿಗೆ ನಗರದಲ್ಲಿ ಭೂಮಿ ಹಂಚಿಕೆ ಮಾಡುವುದನ್ನು ಪ್ರಶ್ನಿಸಿದ್ದಾರೆ. ಇದು ವೋಟ್ ಬ್ಯಾಂಕ್ ರಾಜಕೀಯವಾಗಿದ್ದು, ಭವಿಷ್ಯದ ವಿವಾದಗಳಿಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಬದಲಾಗಿ, ರಾಜ್‌ಕುಮಾರ್ ಅವರ ಹುಟ್ಟೂರಾದ ಗಾಜನೂರನ್ನು ಕುವೆಂಪು ಅವರ ಕುಪ್ಪಳ್ಳಿಯ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
Read Full Story

03:58 PM (IST) Apr 25

ತೆಲುಗು ಸ್ಟಾರ್ ಆಂಕರ್ ಉದಯಭಾನು ಇದ್ದಕ್ಕಿದ್ದಂತೆ ತೆರೆಮರೆಗೆ ಸರಿಯಲು ಕಾರಣವೇನು? ಕೊನೆಗೂ ಸತ್ಯ ಹೊರಬಿತ್ತು!

ಸ್ಟಾರ್ ಆಂಕರ್ ಉದಯಭಾನು ಇದ್ದಕ್ಕಿದ್ದಂತೆ ತೆರೆಮರೆಗೆ ಸರಿಯಲು ಕಾರಣವೇನು? ಅವರ ಕರಿಯರ್‌ಗೆ ಬ್ರೇಕ್ ಹಾಕಿದವರು ಯಾರು? ಈ ಬಗ್ಗೆ ಉದಯಭಾನು ಅವರೇ ಬಹಿರಂಗಪಡಿಸಿದ ಆ ಸ್ಫೋಟಕ ಸತ್ಯಗಳೇನು?

Read Full Story

03:27 PM (IST) Apr 25

ಕೊಪ್ಪಳ ರೈತನ ಹೊಲದಲ್ಲಿ ಬೆಳೆದ ಜಪಾನಿನ ಪ್ರಸಿದ್ಧ ಮಿಯಾ ಜಾಕಿ ಮಾವು, ದುಬಾರಿ ಹಣ್ಣಿಗೆ ಮಾರುಕಟ್ಟೆಯದ್ದೇ ಚಿಂತೆ!

ಕೊಪ್ಪಳ ತಾಲೂಕಿನ ರೈತ ನಾಗಪ್ಪ ಬಗನಾಳ ಅವರು, ಜಪಾನ್ ಮೂಲದ ಮತ್ತು ವಿಶ್ವದ ಅತ್ಯಂತ ದುಬಾರಿ ಎನಿಸಿದ ಮಿಯಾ ಜಾಕಿ ಮಾವನ್ನು ತಮ್ಮ ಹೊಲದಲ್ಲಿ ಯಶಸ್ವಿಯಾಗಿ ಬೆಳೆದಿದ್ದಾರೆ. ತೋಟಗಾರಿಕಾ ಇಲಾಖೆಯ ಪ್ರೇರಣೆಯಿಂದ ಸಸಿಗಳನ್ನು ತರಿಸಿ ಬೆಳೆಸಿದ ಅವರು, ಈಗ ಉತ್ತಮ ಫಸಲು ಪಡೆದಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯ ಹುಡುಕಾಟದಲ್ಲಿದ್ದಾರೆ.
Read Full Story

03:05 PM (IST) Apr 25

ಸಚಿವ ಡಿ ಸುಧಾಕರ್ ಆರೋಗ್ಯ ಗಂಭೀರ, ಕಿಮ್ಸ್ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ

ಸಚಿವ ಡಿ ಸುಧಾಕರ್ ಆರೋಗ್ಯ ಗಂಭೀರ, ಕಿಮ್ಸ್ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಸಚಿವ ಜಮೀರ್ ಅಹಮ್ಮದ್ ಸೇರಿ ಪ್ರಮುಖರು ಆಸ್ಪತ್ರೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಡಿ ಸುಧಾಕರ್ ಆರೋಗ್ಯ ಹೇಗಿದೆ.

Read Full Story

02:51 PM (IST) Apr 25

ಮೂರು ನಗರ, ಮೂರು ದುರಂತ - ಪೋಕ್ಸೋ ಕೇಸ್ ಖೈದಿ ಜೈಲಿನಲ್ಲಿ ಆತ್ಮ*ಹತ್ಯೆ, ಪ್ರಿಯತಮೆ ಹಲ್ಲೆ ಮಾಡಿದ್ದಕ್ಕೆ ಪ್ರೇಮಿ ಸಾವು!

ಧಾರವಾಡ ಕಾರಾಗೃಹದಲ್ಲಿ ಪೋಕ್ಸೋ ಆರೋಪಿ, ಪ್ರೀತಿ ನಿರಾಕರಣೆಯಿಂದ ಶಿವಮೊಗ್ಗದಲ್ಲಿ ಯುವಕ, ಮತ್ತು ಆನ್‌ಲೈನ್ ಗೇಮ್ ವಿಚಾರಕ್ಕೆ ಹುಬ್ಬಳ್ಳಿಯಲ್ಲಿ ಬಾಲಕ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಈ ಮೂರು ಪ್ರತ್ಯೇಕ ಘಟನೆಗಳು ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story

02:46 PM (IST) Apr 25

Bhagyalakshmi Serial - ತನ್ವಿಗೆ ತಲೆ ಸರಿ ಇಲ್ಲ ಅಂತ ಬೈಬೇಡಿ; ಯಾರನ್ನೋ ಅಪ್ಪ ಅಂತ ಕರೆಯೋ ಕಷ್ಟ ಯಾರಿಗೂ ಬೇಡ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಬದುಕಿಗೆ ಹೊಸ ವ್ಯಕ್ತಿ ಆಗಮನವಾಗಿದೆ. ಭಾಗ್ಯ ಈಗ ಆದೀಶ್ವರ್‌ ಕಾಮತ್‌ರನ್ನು ಮದುವೆಯಾಗಿದ್ದಾಳೆ. ಇದನ್ನು ತನ್ವಿಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ. ತನ್ವಿಗೆ ಬುದ್ಧಿ ಇಲ್ಲ ಎಂದು ಅನೇಕರು ಕಾಮೆಂಟ್‌ ಮಾಡ್ತಿದ್ದಾರೆ. 

 

Read Full Story

02:08 PM (IST) Apr 25

Akshay Kumar Daughter - ಅಕ್ಷಯ್‌ ಕುಮಾರ್‌ ಮಗಳ ಅಶ್ಲೀಲ ಫೋಟೋಗೆ ಬೇಡಿಕೆ ಇಟ್ಟವನಿಗೆ ಗಾಳ ಹಾಕಿದ ಪೊಲೀಸರು!

Akshay Kumar Daughter: 2025 ಅಕ್ಟೋಬರ್‌ ತಿಂಗಳಿನಲ್ಲಿ Cyber Awareness Month 2025 ಎನ್ನುವ ಪೊಲೀಸ್‌ ಹೆಡ್‌ಕ್ವಾಟ್ರಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಗಳ ಅಶ್ಲೀಲ ಫೋಟೋಗೆ ಬೇಡಿಕೆ ಇಟ್ಟ ವಿಷಯವನ್ನು ಪ್ರಸ್ತಾಪ ಮಾಡಿದ್ದರು. ಈಗ ಆ ವ್ಯಕ್ತಿಯ ಬಂಧನವಾಗಿದೆ.

 

Read Full Story

01:42 PM (IST) Apr 25

ಇಷ್ಟವಿಲ್ಲದ ಮದುವೆ - ನಟನೆಗೆ ಗುಡ್​ಬೈ ಹೇಳಿದ್ರಾ Bigg Boss ಲವರ್​ ಬಾಯ್​ ಸೂರಜ್​ ಸಿಂಗ್​? ಯಾಕಿದು ಗುಸುಗುಸು

ಬಿಗ್​ಬಾಸ್​ ಖ್ಯಾತಿಯ ಸೂರಜ್​ ಸಿಂಗ್, 'ಪವಿತ್ರ ಬಂಧನ' ಧಾರಾವಾಹಿಯ ನಾಯಕರಾಗಿದ್ದಾರೆ. ಇತ್ತೀಚೆಗೆ ಅವರು ಬಾಣಸಿಗನ ಫೋಟೋ ಹಂಚಿಕೊಂಡಿದ್ದು, ನಟನೆ ಬಿಟ್ಟರಾ ಎಂಬ ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ತಮ್ಮ ಸೀರಿಯಲ್ ಪ್ರಚಾರಕ್ಕಾಗಿ ಬಿಗ್‌ಬಾಸ್‌ಗೆ ಮರು-ಪ್ರವೇಶಿಸಿ ದಾಖಲೆ ಬರೆದ ಬಗ್ಗೆಯೂ ವಿವರಿಸಲಾಗಿದೆ.

Read Full Story

01:28 PM (IST) Apr 25

ನಟ ರಣವೀರ್ ದೈವಕ್ಕೆ ಅವಮಾನ ಪ್ರಕರಣ, ಕರ್ನಾಟಕ ಪೊಲೀಸರ ಬಗ್ಗೆ ಹೈ ಕೋರ್ಟ್ ಅಸಮಾಧಾನ

'ಕಾಂತಾರ ಚಾಪ್ಟರ್–1' ಸಿನಿಮಾದಲ್ಲಿ ಚಾಮುಂಡಿ ದೈವಕ್ಕೆ ಅವಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಟ ರಣವೀರ್ ಸಿಂಗ್ ಹೈಕೋರ್ಟ್‌ನಲ್ಲಿ ಬೇಷರತ್ ಕ್ಷಮೆ ಕೋರಿದ್ದಾರೆ. ನ್ಯಾಯಾಲಯವು ಅವರ ಕ್ಷಮಾಪಣೆಯನ್ನು ಸ್ವೀಕರಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದ್ದು, ಶೀಘ್ರದಲ್ಲೇ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಕ್ಷಮೆಯಾಚಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
Read Full Story

12:54 PM (IST) Apr 25

ಒಟಿಟಿಗೆ ಲಗ್ಗೆ ಇಟ್ಟ ಹೃದಯದ ಬಡಿತ ಹೆಚ್ಚಿಸೋ Romantic Movies - ಮಕ್ಕಳಿಗೆ ಮಾತ್ರ ತೋರಿಸ್ಬೇಡಿ!

Romantic crime thrillers on ott india: OTTಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಏಕಾಂತದಲ್ಲಿ ನೋಡಬಹುದಾದ ಅತ್ಯುತ್ತಮ ರೊಮ್ಯಾಂಟಿಕ್ ಸಿನಿಮಾಗಳ ಪಟ್ಟಿ ಇಲ್ಲಿದೆ. ಈ ಲಿಸ್ಟ್‌ನಲ್ಲಿ ಕೆಲವು ರೊಮ್ಯಾಂಟಿಕ್ ಕ್ರೈಮ್ ಥ್ರಿಲ್ಲರ್‌ಗಳೂ ಇವೆ.

Read Full Story

12:36 PM (IST) Apr 25

Jeans Pant ಟೈಟ್‌ ಆಯ್ತಾ? ಕಲರ್‌ ಹೋಯ್ತಾ?‌ ವೇಸ್ಟ್‌ ಆಗತ್ತೆ ಅನ್ಕೋಬೇಡಿ! ಹೀಗೂ ಬಳಸೋಕೆ ಬರತ್ತೆ!

Jeans Pant Reuse: ಹಳೆಯ ಜೀನ್ಸ್‌ ವೇಸ್ಟ್‌ ಆಯ್ತು ಎಂದುಕೊಳ್ಳಬೇಡಿ. ಇದನ್ನು ಸದ್ಬಳಕೆ ಮಾಡಿಕೊಳ್ಳಲೂಬಹುದು. ಯಾವುದೂ ಕಸ ಅಲ್ಲ, ಕಸದಿಂದಲೂ ರಸ ತೆಗೆಯಲೂಬಹುದು. ಹಾಗಾದರೆ ಜೀನ್ಸ್‌ನ್ನು ಹೇಗೆ ಮರು ಬಳಕೆ ಮಾಡಿಕೊಳ್ಳಬಹುದು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story

12:31 PM (IST) Apr 25

ಒಂದು ವೇಳೆ ಹಾರ್ದಿಕ್ ಪಾಂಡ್ಯ ತಲೆದಂಡವಾದ್ರೆ ಮುಂಬೈ ಇಂಡಿಯನ್ಸ್ ಮುಂದಿನ ಕ್ಯಾಪ್ಟನ್ ಯಾರು?

ಬೆಂಗಳೂರು: ಐಪಿಎಲ್ 2026ರಲ್ಲಿ ಮುಂಬೈ ಇಂಡಿಯನ್ಸ್ ಸತತ ಸೋಲು ಕಾಣುತ್ತಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ಟೀಕೆಗಳು ಹೆಚ್ಚಾಗಿವೆ. ಪಾಂಡ್ಯರನ್ನು ನಾಯಕತ್ವದಿಂದ ತೆಗೆದುಹಾಕುವ ಚರ್ಚೆ ನಡೆಯುತ್ತಿದೆ. ಹಾಗಾದ್ರೆ, ಮುಂಬೈ ತಂಡದ ಹೊಸ ನಾಯಕನ ರೇಸ್‌ನಲ್ಲಿರುವ ಆ 4 ಆಟಗಾರರು ಯಾರು ಗೊತ್ತಾ?

 

Read Full Story

12:08 PM (IST) Apr 25

Netflix Release - ಒಟಿಟಿಯಲ್ಲಿ ಅತಿ ಹೆಚ್ಚು ಜನರು ಪದೇ ಪದೇ ನೋಡ್ತಿರೋ ಸಿನಿಮಾಗಳಿವು!

Netflix Release: ನೆಟ್‌ಫ್ಲಿಕ್ಸ್‌ನ ಟಾಪ್ 10 ಟ್ರೆಂಡಿಂಗ್ ಸಿನಿಮಾಗಳ ಪಟ್ಟಿಯಲ್ಲಿ ಈ ಬಾರಿ ಯಾವ ಸಿನಿಮಾ ಮೊದಲ ಸ್ಥಾನದಲ್ಲಿದೆ ಎಂದು ತಿಳಿದರೆ ಯಾರಿಗಾದರೂ ಅಚ್ಚರಿಯಾಗಬಹುದು. ಅಷ್ಟೇ ಅಲ್ಲ, ಹಲವು ದೊಡ್ಡ ಸಿನಿಮಾಗಳು ಟಾಪ್ 5 ಪಟ್ಟಿಯಿಂದಲೂ ಹೊರಗುಳಿದಿವೆ.

 

Read Full Story

11:46 AM (IST) Apr 25

ಬೆಂಗಳೂರು ಮನಿ ಡಬಲಿಂಗ್ ವಂಚನೆ - ಎಐ ರೋಬೋಟ್ ಟ್ರೇಡಿಂಗ್, ಮೋಸ ಹೋಗಿ ಹಣ ಕಳೆದುಕೊಂಡವರು ದಕ್ಷಿಣ ಕನ್ನಡದವರೇ ಹೆಚ್ಚು!

ಬೆಂಗಳೂರಿನಲ್ಲಿ 'ಎಐ ರೋಬೋಟ್ ಟ್ರೇಡಿಂಗ್' ಹೆಸರಿನಲ್ಲಿ ಹಣ ಡಬಲ್ ಮಾಡುವ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ವಂಚನೆ ಮಾಡಲಾಗಿದೆ. ರಾಜೇಶ್ ಕಾಮತ್, ಮಧು ಮತ್ತು ನಾಗೇಶಪ್ಪ ನೇತೃತ್ವದ ಈ ಜಾಲವು, ಕರಾವಳಿ ಭಾಗದವರನ್ನೇ ಗುರಿಯಾಗಿಸಿ ಮೋಸ ಮಾಡಿದ್ದು, ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

11:17 AM (IST) Apr 25

HSR ಲೇಔಟ್ - ಹೊಸ ಗೆಳೆಯ ಹಳೆ ಗೆಳೆಯನ ಮಧ್ಯೆ ಯುವತಿ ಲಾಕ್! ಬೀದಿಯಲ್ಲೇ ವಿದ್ಯಾರ್ಥಿಗಳ ರಂಪಾಟ

ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಯುವತಿಯೊಬ್ಬಳು ತನ್ನ ಹಳೆ ಮತ್ತು ಹೊಸ ಗೆಳೆಯರ ನಡುವೆ ಸಿಲುಕಿಕೊಂಡ ಘಟನೆ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಯುವಕರ ನಡುವೆ ವಾಗ್ವಾದ ನಡೆದು, ಸ್ಥಳೀಯರು ಇದನ್ನು ಚಿತ್ರೀಕರಿಸಿದ್ದಾರೆ. ಸ್ನೇಹಿತರು ಮಧ್ಯಪ್ರವೇಶಿಸಿ ಯುವತಿಯನ್ನು ಕರೆದೊಯ್ದಿದ್ದರಿಂದ ಪರಿಸ್ಥಿತಿ ತಿಳಿಯಾಯಿತು.
Read Full Story

11:03 AM (IST) Apr 25

ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಪ್ರಕರಣ - ಸಚಿವ ದಿನೇಶ್ ಗುಂಡೂರಾವ್ ಗರಂ

ಕೆಸಿಇಟಿ ಪರೀಕ್ಷೆಯ ವೇಳೆ ವಿದ್ಯಾರ್ಥಿಯ ಜನಿವಾರ ತೆಗೆಸಿದ ಘಟನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಅಮಾನವೀಯ ಕೃತ್ಯವೆಂದು ಖಂಡಿಸಿರುವ ಅವರು, ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.

Read Full Story

10:59 AM (IST) Apr 25

OTT Release - ಅಬ್ಬಬ್ಬಾ...‌ ಒಟಿಟಿಗೆ ಬಂದ ಒಂದಕ್ಕಿಂತ ಒಂದು ರೋಚಕ‌ ಥ್ರಿಲ್ಲರ್ ಸಿನಿಮಾಗಳು!

OTT Release: ಇತ್ತೀಚೆಗೆ ಓಟಿಟಿಯಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರನ್ನು ಸೆಳೆಯುತ್ತಿರುವ ಕೆಲವು ಸಿನೆಮಾ ಮತ್ತು ವೆಬ್ ಸಿರೀಸ್‌ಗಳ ಪಟ್ಟಿ ಇಲ್ಲಿದೆ. ಗುಣಶೇಖರ್ ನಿರ್ದೇಶನದ 'ಯುಫೋರಿಯಾ'ದಿಂದ ಹಿಡಿದು ಮಲಯಾಳಂ ಥ್ರಿಲ್ಲರ್ 'ಸಂಭವಂ ಅಧ್ಯಾಯಂ ಒನ್ನು' ವರೆಗೆ 7 ಸಿನೆಮಾ-ಸಿರೀಸ್‌ಗಳು ಇಲ್ಲಿವೆ.

 

Read Full Story

10:46 AM (IST) Apr 25

ಉತ್ತರ ಕನ್ನಡ - ಈ ಹಿಂದೆ ಕಿಡ್ನಾಪ್ ಆಗಿ ಬಚಾವ್ ಆಗಿದ್ದ ಪೈನಾನ್ಶಿಯರ್ ಹೊಟೇಲ್ ಅಡುಗೆ ಕೋಣೆಯಲ್ಲಿ ಭೀಕರ ಹತ್ಯೆ!

ಉತ್ತರ ಕನ್ನಡದ ಮುಂಡಗೋಡ ಪಟ್ಟಣದಲ್ಲಿ, ಪೈನಾನ್ಸ್ ವ್ಯವಹಾರಸ್ಥ ಜಮೀರ್ ಅಹ್ಮದ್ ದರ್ಗಾವಾಲೆಯನ್ನು ಹೋಟೆಲ್‌ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಏಪ್ರಿಲ್ 24ರ ರಾತ್ರಿ ನಡೆದ ಈ ಘಟನೆಯಲ್ಲಿ, ದುಷ್ಕರ್ಮಿಗಳು ಖಾರದ ಪುಡಿ ಎರಚಿ, ಮಚ್ಚಿನಿಂದ ಇರಿದು ಕೊಲೆಗೈದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

10:42 AM (IST) Apr 25

ಆಟೋದಲ್ಲಿ ಗಲೀಜು ಮಾಡಿದ್ದನ್ನು ಗ್ರಾಹಕರಿಂದಲೇ ಕ್ಲೀನ್ ಮಾಡಿಸಿದ ಚಾಲಕ; ವಿಡಿಯೋ ವೈರಲ್

ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣಿಕರೊಬ್ಬರು ಗಲೀಜು ಮಾಡಿದ್ದಕ್ಕೆ ಚಾಲಕ ಗರಂ ಆಗಿದ್ದಾರೆ. ಪ್ರಯಾಣಿಕನನ್ನು ವಾಪಸ್ ಕರೆದು, ಅವರಿಂದಲೇ ಆಟೋವನ್ನು ಕ್ಲೀನ್ ಮಾಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.

Read Full Story

More Trending News