ರಾಮನಗರ: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿರುವುದನ್ನು ನೋಡಿದರೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಹೊಟ್ಟೆಯೊಳಗೆ ಬೆಂಕಿ ಇಟ್ಟಂತೆ ಆಗಿದೆ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದರು. ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಹೆಲ್ತ್ ಸಿಟಿ ವಸತಿ ಬಡಾವಣೆಯ ಮರು ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಿಎಂ ಡಿ.ಕೆ.ಶಿವಕುಮಾರ್ ಅವರು ನಿಂತರು ತಪ್ಪು, ಕುಂತರು ತಪ್ಪು ಎನ್ನುವಂತಾಗಿದೆ.
ನಮ್ಮ ನಡವಳಿಕೆಗಳು ಹೇಗಿರಬೇಕೆಂದು ಕೇಂದ್ರ ಸಚಿವರು ಲಿಸ್ಟ್ ಕೊಟ್ಟರೆ ಅದನ್ನು ಪಾಲಿಸುತ್ತೇವೆ ಎಂದು ಟೀಕಿಸಿದರು. ನಾವು ಈ ಜಿಲ್ಲೆಯ ಮಕ್ಕಳು. ಇಲ್ಲಿ ಹುಟ್ಟಿ, ಇಲ್ಲಿ ಬೆಳೆದಿರುವ ನಾವು ಇಲ್ಲೇ ಸಾಯುವವರು. ನಮ್ಮ ಬದುಕನ್ನು ಇಲ್ಲಿಯೇ ಕಟ್ಟಿಕೊಂಡಿದ್ದೇವೆ. ನಮ್ಮ ಮೇಲೆ ವಿಶ್ವಾಸವಿಡಿ. ಬೇರೆ ಕಡೆ ಹುಟ್ಟಿ ಬಂದವರು ಇಲ್ಲಿ ಸಾಯಬಹುದು. ಬೆಳಗ್ಗೆ ಎದ್ದು ಬಯ್ಯುವವರ ಢೋಂಗಿ ಮಾತುಗಳನ್ನು ನಂಬಬೇಡಿ ಎಂದು ಹೇಳಿದರು.
08:43 AM (IST) Aug 23
ಮಂಡ್ಯದಲ್ಲಿ ಬೆಲ್ಲದ ಬೆಲೆ ಕ್ವಿಂಟಾಲ್ಗೆ ₹6740 ತಲುಪಿ ಐತಿಹಾಸಿಕ ದಾಖಲೆ ಬರೆದಿದೆ. ಕಬ್ಬಿನ ಪೂರೈಕೆ ಕೊರತೆ, ಕೂಲಿಯಾಳುಗಳ ಅಭಾವ, ಮತ್ತು ಸಕ್ಕರೆ ಬೆಲೆ ಏರಿಕೆಯಂತಹ ಕಾರಣಗಳಿಂದ ಉತ್ಪಾದನೆ ಕುಸಿದಿದ್ದು, ಇದು ಬೆಲ್ಲದ ದರದಲ್ಲಿ ಏರಿಕೆಗೆ ಕಾರಣವಾಗಿದೆ.
08:29 AM (IST) Aug 23
ರಾಜ್ಯದ ಸಾರ್ವಜನಿಕ ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಇತರೆ ಉದ್ದೇಶಗಳಿಗೆ ಬಳಸುವ ಸರ್ಕಾರದ ತೀರ್ಮಾನವನ್ನು ಸಂಸದ ತೇಜಸ್ವಿ ಸೂರ್ಯ ವಿರೋಧಿಸಿದ್ದಾರೆ. ಈ ಕಳವಳಕಾರಿ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
08:05 AM (IST) Aug 23
07:48 AM (IST) Aug 23
ಬುಕ್ ಬ್ರಹ್ಮ ಲಿಟರೇಚರ್ ಫೆಸ್ಟಿವಲ್ನಲ್ಲಿ ಮಾತನಾಡಿದ ನಿರ್ದೇಶಕ ಟಿ.ಎನ್.ಸೀತಾರಾಮ, ಕಲಾವಿದರು ಕೇವಲ ಚಪ್ಪಾಳೆ, ಖ್ಯಾತಿ ಮತ್ತು ಹಣಕ್ಕಾಗಿ ಕಲೆಯನ್ನು ಸೃಷ್ಟಿಸಬಾರದು ಎಂದು ಅಭಿಪ್ರಾಯಪಟ್ಟರು. ಕಲಾವಿದನ ಆಂತರಿಕ ಸಂಘರ್ಷ ಮತ್ತು ಕಲೆಯೊಂದಿಗಿನ ಪ್ರಾಮಾಣಿಕತೆಯೇ ಮುಖ್ಯವೇ ಹೊರತು, ಕ್ಷಣಿಕ ಮೆಚ್ಚುಗೆಯಲ್ಲ.
07:30 AM (IST) Aug 23
07:13 AM (IST) Aug 23
ಆನೇಕಲ್ ತಾಲೂಕಿನ ಮರಸೂರು ಪಂಚಾಯ್ತಿಗೆ ಸೇರಿದ ಎಂಟು ಗ್ರಾಮಗಳ ಕಂದಾಯ ದಾಖಲೆಗಳು 1956ರಿಂದ ತಮಿಳುನಾಡಿನ ಹೊಸೂರು ಕಡತಗಳಲ್ಲಿದ್ದವು. ಒಂದು ವರ್ಷದ ಸತತ ಪ್ರಯತ್ನದ ನಂತರ, ಈ ದಾಖಲೆಗಳನ್ನು ಅಧಿಕೃತವಾಗಿ ಕರ್ನಾಟಕದ ದಾಖಲೆಗಳಿಗೆ ಸೇರ್ಪಡೆ ಮಾಡಲಾಗಿದ್ದು, ಇದರಿಂದ ಸುಮಾರು 3000 ರೈತರಿಗೆ ಅನುಕೂಲವಾಗಿದೆ.