LIVE NOW
Published : May 14, 2026, 06:45 AM ISTUpdated : May 14, 2026, 08:03 AM IST

Karnataka News Live: 'ಮನೆ ಮನೆಗೂ ಯೋಗ' ಅಭಿಯಾನಕ್ಕೆ ರಾಜ್ಯ ಸರ್ಕಾರ; ಯೋಗ ದಿನಕ್ಕೆ ವಿಶೇಷ ಪ್ಲ್ಯಾನ್, ಸಚಿವರು ಹೇಳಿಕೆ ಕುತೂಹಲ!

ಸಾರಾಂಶ

ಬಂಗಾರಪೇಟೆ (ಕೋಲಾರ): ಮಷಿನ್‌ ಗನ್‌ಗೆ ಬಳಸುವ7.6 ಎಂಎಂನ 135 ಜೀವಂತ ಬುಲೆಟ್‌ಗಳು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ದಾಸರಮಲ್ಲ ಗ್ರಾಮದ ಸೇತುವೆಯೊಂದರ ಕೆಳಗೆ ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ 1969ರಲ್ಲಿ ತಯಾರಿಸಲಾಗಿರುವ ಬುಲೆಟ್‌ಗಳು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಗ್ರಾಮಸ್ಥರು ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬುಲೆಟ್‌ಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ತಮಿಳುನಾಡಿನ ಗಡಿಯಲ್ಲಿರುವ ದಾಸರಮಲ್ಲ ಗ್ರಾಮದ ಬಳಿಯ ಸೇತುವೆ ಕೆಳಗೆ ಬಳಸಿರುವ ಬುಲೆಟ್‌ (ಡಮ್ಮಿ) ಹಾಗೂ ಬಸಳದೆ ಇರುವ ಬುಲೆಟ್‌ಗಳನ್ನು ಅನಾಮಿಕರು ಬಿಸಾಡಿ ಹೋಗಿದ್ದಾರೆ ಎನ್ನಲಾಗಿದೆ. ಇದನ್ನು ಗಮನಿಸಿದಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾಮಸಮುದ್ರ ಪೊಲೀಸರು ಬುಲೆಟ್‌ಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

08:03 AM (IST) May 14

'ಮನೆ ಮನೆಗೂ ಯೋಗ' ಅಭಿಯಾನಕ್ಕೆ ರಾಜ್ಯ ಸರ್ಕಾರ; ಯೋಗ ದಿನಕ್ಕೆ ವಿಶೇಷ ಪ್ಲ್ಯಾನ್, ಸಚಿವರು ಹೇಳಿಕೆ ಕುತೂಹಲ!

12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು 'ಮನೆ ಮನೆಗೂ ಯೋಗ, ಎಲ್ಲರಿಗೂ ಯೋಗ' ಪರಿಕಲ್ಪನೆಯಡಿ ರಾಜ್ಯಾದ್ಯಂತ ಆಚರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಇದರ ಮುಖ್ಯ ಕಾರ್ಯಕ್ರಮ ಜೂ.21 ರಂದು ವಿಧಾನಸೌಧದ ಆವರಣದಲ್ಲಿ ನಡೆಯಲಿದ್ದು, ಸುಮಾರು 5000 ಯೋಗಪಟುಗಳು ಭಾಗವಹಿಸಲಿದ್ದಾರೆ.

Read Full Story

07:46 AM (IST) May 14

ಮೂಲ್ಕಿ ವಿದ್ಯಾರ್ಥಿನಿ ಬ್ಯಾಗ್‌ನಲ್ಲಿತ್ತು 35 ಲಕ್ಷ ಮೌಲ್ಯದ 1 ಕೆಜಿ 42 ಗ್ರಾಂ ಹೈಡ್ರೊವಿಡ ಗಾಂಜಾ!

ಮೂಲ್ಕಿಯಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ, 35 ಲಕ್ಷ ರೂಪಾಯಿ ಮೌಲ್ಯದ ಹೈಡ್ರೊವಿಡ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿನಿ ಸುಹಾನಾ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಯು ಈ ಮಾದಕ ವಸ್ತುವನ್ನು ಚೆನ್ನೈನಿಂದ ತರಿಸಿರುವುದಾಗಿ ತಿಳಿದುಬಂದಿದೆ.
Read Full Story

07:44 AM (IST) May 14

ಸ್ಪೀಕರ್ ಖಾದರ್‌ಗೆ ಘೇರಾವ್ ಕೇಸ್ - 11 ಮಂದಿ ವಿರುದ್ಧ ಎಫ್‌ಐಆರ್, ಏನಿದು ಪ್ರಕರಣ?

ಮಂಗಳೂರಿನ ಕುತ್ತಾರು ಜಂಕ್ಷನ್‌ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಘೇರಾವ್ ಹಾಕಿದ ಆರೋಪದ ಮೇಲೆ 11 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಖಾದರ್ ಅವರ ಅಂಗರಕ್ಷಕರು ನೀಡಿದ ದೂರಿನ ಅನ್ವಯ ಕ್ರಮ.

Read Full Story

07:32 AM (IST) May 14

ಅನೈತಿಕ ಸಂಬಂಧ ಮುಚ್ಚಿಕೊಳ್ಳಲು ಸುಳ್ಳು ವಂಚನೆಯ ಕಥೆ ಕಟ್ಟಿದ ಪತಿಯ ಅಸಲಿ ಮುಖ ಬಯಲು

ಉದ್ಯಮಿಯೊಬ್ಬರು ರೀಲ್ಸ್ ಸ್ಟಾರ್ ತನ್ನಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಿದ್ದಾಳೆಂದು ದೂರು ನೀಡಿದ್ದರು. ಆದರೆ, ಇದೀಗ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ತನ್ನ ಅನೈತಿಕ ಸಂಬಂಧ ಮುಚ್ಚಿಕೊಳ್ಳಲು ಪತಿಯೇ ಈ ಸುಳ್ಳು ಕಥೆ ಕಟ್ಟಿದ್ದಾನೆ ಎಂದು ಉದ್ಯಮಿಯ ಪತ್ನಿಯೇ ಪೊಲೀಸರಿಗೆ ಪತ್ರ ಬರೆದು ಗಂಭೀರ ಆರೋಪ ಮಾಡಿದ್ದಾರೆ.

Read Full Story

07:20 AM (IST) May 14

ಸಿದ್ದಾಪುರ To ಶಿರಸಿ - ಸಾರಿಗೆ ಬಸ್ ವೇಳಾಪಟ್ಟಿ ಬದಲಾವಣೆ, ವಿದ್ಯಾರ್ಥಿಗಳ ಹೋರಾಟದ ಫಲ

ಸಿದ್ದಾಪುರದಿಂದ ವಾಜಗದ್ದೆ, ನಾಣಿಕಟ್ಟಾ ಮಾರ್ಗವಾಗಿ ಶಿರಸಿಗೆ ಸಂಚರಿಸುವ ಸಾರಿಗೆ ಬಸ್‌ನ ಸಮಯವನ್ನು  ಬದಲಾಯಿಸಲಾಗಿದೆ. ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ನಿರಂತರ ಹೋರಾಟದ ಫಲವಾಗಿ ಈ ಬದಲಾವಣೆ ಮಾಡಲಾಗಿದ್ದು, ಇದು ಪ್ರಯಾಣಿಕರ ಬಹುಕಾಲದ ಸಮಸ್ಯೆಗೆ ಪರಿಹಾರ ನೀಡಿದೆ.

Read Full Story

07:18 AM (IST) May 14

ರೇಣುಕಾಸ್ವಾಮಿ ಕೊಲೆ ಪ್ರಕರಣ - ನಾಳೆ ಸುಪ್ರೀಂ ನಲ್ಲಿ ದರ್ಶನ್ ವಿಚಾರಣೆ, ನಾಳೆಯೇ ಜಾಮೀನು ಸಿಗುತ್ತಾ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ವಿಚಾರಣೆ ವಿಳಂಬವನ್ನು ಕಾರಣವಾಗಿಟ್ಟುಕೊಂಡು ಸುಪ್ರೀಂಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬೆಂಗಳೂರು ಪೊಲೀಸರು ಅಫಿಡವಿಟ್ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ಶುಕ್ರವಾರ ನಡೆಯಲಿದೆ.
Read Full Story

More Trending News