Published : Mar 14, 2026, 06:40 AM ISTUpdated : Mar 14, 2026, 11:13 PM IST

Karnataka News Live: ಅನುದಾನ ಕೊರತೆ ಸ್ಥಗಿತವಾದ ₹21 ಸಾವಿರ ಕೋಟಿ ಭದ್ರಾ ಮೇಲ್ದಂಡೆ ಯೋಜನೆ - ಕೆಲಸವೇ ಇಲ್ಲದೆ ಕಚೇರಿ ಕಾಯೋಕೆ ನೂರೆಂಟು ಮಂದಿ!

ಸಾರಾಂಶ

ಮಂಗಳೂರು: ಅಪ್ರಾಪ್ತ ಕಾರು ಚಲಾಯಿಸಿ ಒಂದು ಕಾರು ಹಾಗೂ ನಿಲ್ಲಿಸಿದ್ದ 6 ಬೈಕ್‌ಗೆ ಡಿಕ್ಕಿ ಹೊಡೆದ ಘಟನೆ ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಅಪಘಾತಕ್ಕೆ ಕಾರಣವಾದ ಕಾರಿನ ಮಾಲೀಕರಾದ ಬಾಲಕನ ತಾಯಿ ವಿರುದ್ಧ ಪ್ರಕರಣ ದಾಖಲಾಗಿದೆ. ಮೊದಲು ಕಾರೊಂದಕ್ಕೆ ಡಿಕ್ಕಿ ಹೊಡೆದ ಅಪ್ರಾಪ್ತನ ಕಾರು ಬಳಿಕ ರಸ್ತೆ ಬದಿ ನಿಲ್ಲಿಸಲಾಗಿದ್ದ 6 ಬೈಕ್‌ಗೆ ಡಿಕ್ಕಿ ಹೊಡೆದು ನೆಲಕ್ಕುರುಳಿಸಿತ್ತು. ಅಪ್ರಾಪ್ತ ಕಾರು ನಿಲ್ಲಿಸದೆ ಅಲ್ಲಿಂದ ಪರಾರಿಯಾಗಿದ್ದ. ನಂತರ ಪೆರಿಗೇರಿ ಎಂಬಲ್ಲಿ ಸ್ಥಳೀಯರು ಕಾರನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದರು. ತನಿಖೆ ನಡೆಸಿದ ಪೊಲೀಸರು ವಾಹನ ಮಾಲೀಕಿ ಆದ ಆತನ ತಾಯಿ ಕೆ.ಎ.ಮಮ್ತಾಜ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Bhadra Upper Canal Project

11:13 PM (IST) Mar 14

ಅನುದಾನ ಕೊರತೆ ಸ್ಥಗಿತವಾದ ₹21 ಸಾವಿರ ಕೋಟಿ ಭದ್ರಾ ಮೇಲ್ದಂಡೆ ಯೋಜನೆ - ಕೆಲಸವೇ ಇಲ್ಲದೆ ಕಚೇರಿ ಕಾಯೋಕೆ ನೂರೆಂಟು ಮಂದಿ!

₹21 ಸಾವಿರ ಕೋಟಿ ವೆಚ್ಚದ ಮಹತ್ವಾಕಾಂಕ್ಷಿ ಭದ್ರಾ ಮೇಲ್ದಂಡೆ ಯೋಜನೆ ಅನುದಾನದ ಕೊರತೆಯಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕಚೇರಿ ಸಿಬ್ಬಂದಿ ಕೆಲಸವಿಲ್ಲದೆ ಕಾಲ ಕಳೆಯುತ್ತಿದ್ದು, ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದ್ದಾರೆ. ಕೇಂದ್ರ ,ರಾಜ್ಯ ಸರ್ಕಾರಗಳ ನಡುವಿನ ಜಟಾಪಟಿಯಿಂದಾಗಿ ಭವಿಷ್ಯ ಅತಂತ್ರವಾಗಿದೆ.

Read Full Story

10:48 PM (IST) Mar 14

ಟ್ರೆಂಡ್ ಆದ ಕೆಡಿ ಸಿನಿಮಾದ ಸೆರಗು ಹಾಡು, ಬಾಲಿವುಡ್‌ನ ನೋರಾ ಹಾಗೂ ಸಂಜಯ್ ದತ್ ಮೋಡಿ

ಟ್ರೆಂಡ್ ಆದ ಕೆಡಿ ಸಿನಿಮಾದ ಸೆರಗು ಹಾಡು, ಬಾಲಿವುಡ್‌ನ ನೋರಾ ಹಾಗೂ ಸಂಜಯ್ ದತ್ ಮೋಡಿ, ಧ್ರುವ ಸರ್ಜ ಬಹುನಿರೀಕ್ಷಿತ ಸಿನಿಮಮಾದಲ್ಲಿ ಬಾಲಿವುಡ್ ರಂಗು ಕಳೆಗಟ್ಟಿದೆ. ಸೆರಗಿನ ಹಾಡು ಇದೀಗ ಭಾರಿ ಸದ್ದು ಮಾಡುತ್ತಿದೆ.

 

Read Full Story

10:32 PM (IST) Mar 14

ಬೆಂಗಳೂರಿನ ರಸ್ತೆಬದಿ ಕೇಳಿದ ಆ ಕಂದನ ಕೂಗು! ಆಗಷ್ಟೇ ಹುಟ್ಟಿದ ಹೆಣ್ಣುಮಗುವನ್ನು ರೋಡಲ್ಲಿ ಬಿಟ್ಟು ಹೋದ ಪೋಷಕರು!

ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ, ಹೆಣ್ಣು ಮಗು ಜನಿಸಿದ್ದ ಕಾರಣಕ್ಕೆ ಪೋಷಕರು ನವಜಾತ ಶಿಶುವನ್ನು ರಸ್ತೆಬದಿಯಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ನಡೆದಿದೆ. ಸ್ಥಳೀಯರ ಮಾಹಿತಿಯ ಮೇರೆಗೆ ಪೊಲೀಸರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಮಗು ಆರೋಗ್ಯವಾಗಿದೆ. ಸದ್ಯ ಪೋಷಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Read Full Story

10:00 PM (IST) Mar 14

ಬೆಂಗಳೂರಲ್ಲಿ ಫೋಟೋಗ್ರಫಿ ದುರಂತ - ಪಾಳು ಬಿದ್ದ ರೆಸಾರ್ಟ್‌ಗೆ ಶೂಟಿಂಗ್‌ಗೆ ಹೋದ ಬಾಲಕ ಆಯತಪ್ಪಿ ಬಿದ್ದು ಸಾವು!

ಬೆಂಗಳೂರಿನ ಅನ್ನಪೂರ್ಣೇಶ್ವರಿನಗರದಲ್ಲಿ, ಫೋಟೋಶೂಟ್ ಮಾಡಲು ಸ್ನೇಹಿತರೊಂದಿಗೆ ಪಾಳುಬಿದ್ದ ರೆಸಾರ್ಟ್‌ಗೆ ತೆರಳಿದ್ದ 15 ವರ್ಷದ ಬಾಲಕ ನಿಶಾಂತ್, ಹಳೆಯ ಕಟ್ಟಡದ ಮೇಲಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ. ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಆತ, ಗಂಭೀರ ಗಾಯಗಳಿಂದಾಗಿ ಮೃತಪಟ್ಟಿದ್ದಾನೆ.
Read Full Story

09:47 PM (IST) Mar 14

ಯುದ್ಧದಿಂದ ರಾಜ್ಯದಲ್ಲಿ ಸಿಲುಕಿರುವ ಪ್ರವಾಸಿಗರ ಆತಿಥ್ಯಕ್ಕೆ ಕ್ರಮ - ಸಚಿವ ಎಚ್‌.ಕೆ.ಪಾಟೀಲ್‌

ಅಂತಾರಾಷ್ಟ್ರೀಯ ಪ್ರವಾಸಿಗರ ಆತಿಥ್ಯ ವಹಿಸಿಕೊಳ್ಳಲು ರಾಜ್ಯ ಸರ್ಕಾರ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪರಿಸ್ಥಿತಿ ತಿಳಿಯಾಗುವವರೆಗೂ ಅವರು ರಾಜ್ಯದಲ್ಲಿ ಸುರಕ್ಷಿತವಾಗಿ ಉಳಿಯಬಹುದಾಗಿದೆ ಎಂದು ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು.

Read Full Story

09:32 PM (IST) Mar 14

ಅನುದಾನದ ಲೆಕ್ಕವನ್ನು ಜಿಲ್ಲೆಯ ಜನರು ಕೇಳಬೇಕೆ ಹೊರತು ಸಂಸದರಲ್ಲ - ಸಚಿವ ಚಲುವರಾಯಸ್ವಾಮಿ

ರಾಜ್ಯ ಸರ್ಕಾರ ಜಿಲ್ಲೆಗೆ ಬಿಡುಗಡೆ ಮಾಡಿರುವ ಅನುದಾನದ ಲೆಕ್ಕವನ್ನು ಜಿಲ್ಲೆಯ ಜನರು ಕೇಳಬೇಕೆ ಹೊರತು ಸಂಸದರಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು.

Read Full Story

09:22 PM (IST) Mar 14

ಆನ್‌ಲೈನ್‌ನಲ್ಲಿ ಆಂಧ್ರದಿಂದ ಅಕ್ಕಿ ಖರೀದಿಸಲು ಬಿಎಂಟಿಸಿ ಚಾಲಕನ ಹುಡುಕಾಟ, 1 ಲಿಂಕ್, 10 ನಿಮಿಷ ಖಾತೆ ಸಂಪೂರ್ಣ ಖಾಲಿ!

ಬೆಂಗಳೂರಿನ ಬಿಎಂಟಿಸಿ ಚಾಲಕರೊಬ್ಬರು ಆಂಧ್ರದಿಂದ ಅಕ್ಕಿ ಸಾಗಿಸಲು ಆನ್‌ಲೈನ್‌ನಲ್ಲಿ ಸಾರಿಗೆ ಸೇವೆ ಹುಡುಕುವಾಗ ವಂಚಕರ ಬಲೆಗೆ ಬಿದ್ದಿದ್ದಾರೆ. ಅಪರಿಚಿತರು ಕಳುಹಿಸಿದ ಅನುಮಾನಾಸ್ಪದ ಲಿಂಕ್ ಕ್ಲಿಕ್ ಮಾಡಿದ ಕೇವಲ 10 ನಿಮಿಷಗಳಲ್ಲಿ ಅವರು ತಮ್ಮ ಬ್ಯಾಂಕ್ ಖಾತೆಯಿಂದ ಸುಮಾರು 2.3 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
Read Full Story

08:57 PM (IST) Mar 14

ಒಡಿಶಾ ಕಾಂಗ್ರೆಸ್ ಶಾಸಕರಿಗೆ ಆಪರೇಷನ್ ಕಮಲದ ಭೀತಿ ಇಲ್ಲ - ಶಾಸಕ ಎಚ್.ಸಿ. ಬಾಲಕೃಷ್ಣ

ಒಡಿಶಾ ಶಾಸಕರು ಬಂದಿದ್ದಾರೆ. ಇದರಲ್ಲಿ ಆಪರೇಷನ್ ಕಮಲದ ಭೀತಿ ಏನೂ ಇಲ್ಲ. ಪಕ್ಷ ಅಂದ ಮೇಲೆ ಸಣ್ಣಪುಟ್ಟ ಗೊಂದಲ ಇರುವುದು ಸಹಜ. ಅದನ್ನು ಸರಿ ಮಾಡುತ್ತೇವೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು.

Read Full Story

08:36 PM (IST) Mar 14

ಯುಕೆಪಿ ಸಂತ್ರಸ್ತರಿಗೆ ಪರಿಹಾರ ಸಮಸ್ಯೆ ಇಲ್ಲ - ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದಿಷ್ಟು..

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ತಕ್ಷಣಕ್ಕೆ 8 ಸಾವಿರ ಎಕರೆ ಭೂಸ್ವಾಧೀನ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕೆ ಈಗ ₹3450 ಕೋಟಿ ಪರಿಹಾರ ನೀಡಲಾಗುವುದು ಎಂದು ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು.

Read Full Story

08:24 PM (IST) Mar 14

ಬಳ್ಳಾರಿಯಲ್ಲಿ ₹55 ಕೋಟಿ ವೆಚ್ಚದಲ್ಲಿ ಇನ್‌ಕ್ಯುಬೇಷನ್‌ ಕೇಂದ್ರ - ಸಚಿವ ಪ್ರಿಯಾಂಕ್‌ ಖರ್ಗೆ

ಬಳ್ಳಾರಿ ಜಿಲ್ಲೆಯಲ್ಲಿ ₹55 ಕೋಟಿ ಇನ್‌ಕ್ಯುಬೇಷನ್‌ ಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಲಾಗಿದ್ದು, ಅದಕ್ಕಾಗಿ ಬಳ್ಳಾರಿಯಲ್ಲಿ 4.74 ಎಕರೆ ಭೂಮಿ ಕಾಯ್ದಿರಿಸಲಾಗಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

Read Full Story

08:06 PM (IST) Mar 14

ಮಹಿಳಾ ಸಬಲೀಕರಣ ಸಮಾಜದ ಅಭಿವೃದ್ಧಿಗೆ ಮುಖ್ಯ - ಸಚಿವ ರಾಮಲಿಂಗಾರೆಡ್ಡಿ

ಮಹಿಳೆಯರ ಸಬಲೀಕರಣ ಸಮಾಜದ ಅಭಿವೃದ್ಧಿಗೆ ಅತ್ಯಂತ ಮುಖ್ಯವಾಗಿದ್ದು, ಅವರಿಗೆ ಸಮಾನ ಅವಕಾಶ ಮತ್ತು ಸುರಕ್ಷಿತ ವಾತಾವರಣ ಒದಗಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

Read Full Story

07:26 PM (IST) Mar 14

ಸುಮಲತಾ ಕೌಂಟರ್ ಕೊಟ್ಟಿದ್ದಕ್ಕೆ ಅಂಬರೀಶ್‌ಗೆ ವಾರ್ನಿಂಗ್ ಕೊಟ್ಟ ಮೋಹನ್ ಬಾಬು... ಆಮೇಲೆನಾಯ್ತು?

ಟಾಲಿವುಡ್‌ನ ಡೈಲಾಗ್ ಕಿಂಗ್, ಕಲೆಕ್ಷನ್ ಕಿಂಗ್ ಮೋಹನ್ ಬಾಬು ಅಂದ್ರೆ ಅವರಿಗೊಂದು ಬೇರೆಯೇ ಇಮೇಜ್ ಇದೆ. ಅವರ ಜೊತೆ ಮಾತಾಡೋಕೆ ಹಲವರು ಹೆದರುತ್ತಾರೆ. ಆದರೆ ಮೋಹನ್ ಬಾಬು ಕಾಮೆಂಟ್‌ಗೆ ಶಾಕ್ ಆಗುವಂತಹ ಕೌಂಟರ್ ಕೊಟ್ಟ ಆ ನಟಿ ಯಾರು ಗೊತ್ತಾ?

Read Full Story

06:38 PM (IST) Mar 14

'ನಾಳೆ 10 ಗಂಟೆಗೆ ಒಂದು ಪೋಸ್ಟ್‌ ಮಾಡ್ತೀನಿ, ಮರು ಕ್ಷಣವೇ ಡಿಲೀಟ್‌ ಮಾಡ್ತೀನಿ..' ಜನರ ತಲೆಗೆ ಹುಳಬಿಟ್ಟ ಬುದ್ಧಿವಂತ ಉಪೇಂದ್ರ!

ನಟ ಉಪೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ನಿಗೂಢ ವಾರ್ನಿಂಗ್ ಪೋಸ್ಟ್ ಹಂಚಿಕೊಂಡಿದ್ದಾರೆ. ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಪೋಸ್ಟ್ ಮಾಡಿ, ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡುವುದಾಗಿ ತಿಳಿಸಿದ್ದು, ಇದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಸೂಚಿಸಿದ್ದಾರೆ.

Read Full Story

06:08 PM (IST) Mar 14

ತೆರೆಗೆ ಬರಲು ರೆಡಿಯಾದ ರೇಣುಕಾಸ್ವಾಮಿ ಕೊಲೆ ಕೇಸ್‌ ಆಧಾರಿತ ಸಿನಿಮಾ, 'ಬಾಸ್‌' ಸಿನಿಮಾದ ಅಸಲಿ ಬಾಸ್‌ ದರ್ಶನ್ ಅವರಾ?

'ಬಾಸ್' ಎಂಬ ಹೊಸ ಸಿನಿಮಾದ ಟೀಸರ್, ನಟ ದರ್ಶನ್ ಭಾಗಿಯಾಗಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ಹೋಲುತ್ತಿದೆ ಎಂಬ ಚರ್ಚೆಗೆ ಕಾರಣವಾಗಿದೆ. ನಿರ್ದೇಶಕ ಲವ ಅವರು ಈ ಆರೋಪವನ್ನು ನಿರಾಕರಿಸಿದ್ದು, ಇದು ಸಮಾಜದಲ್ಲಿ ನಡೆದ ಹಲವು ನೈಜ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಕಥೆ ಎಂದು ಸ್ಪಷ್ಟಪಡಿಸಿದ್ದಾರೆ.

Read Full Story

06:04 PM (IST) Mar 14

!ಸೊರಬದಲ್ಲಿ ಅಪರೂಪದ ವೀರಗಲ್ಲು ಪತ್ತೆ! ಚಾಲುಕ್ಯ-ಕದಂಬರ ಕಾಲದ ಶಾಸನದಲ್ಲಿ ವೀರ ಕನ್ನಯ್ಯನ ಕಥೆ!

ಸೊರಬ ತಾಲೂಕಿನ ಕಾನಹಳ್ಳಿ ಗ್ರಾಮದಲ್ಲಿ ಕ್ರಿ.ಶ. ೧೨೦೭ರ ಅವಧಿಗೆ ಸೇರಿದ ಅಪರೂಪದ ವೀರಗಲ್ಲು ಪತ್ತೆಯಾಗಿದ್ದು, ಇದು ಚಾಲುಕ್ಯ ಅರಸ ಜಗದೇಕಮಲ್ಲ ಮತ್ತು ಕದಂಬ ದೊರೆ ಹೆಮ್ಮಾಡಿದೇವನ ಆಳ್ವಿಕೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಶಾಸನವು ಹಡವಳ ಕನ್ನಯ್ಯ ಎಂಬ ವೀರನ ಶೌರ್ಯಗಾಥೆಯನ್ನು ವಿವರಿಸುವುದಲ್ಲದೆ, ಸೊರಬದ ಇತಿಹಾಸಕ್ಕೆ ಹೊಸ ಮಾಹಿತಿಯನ್ನು ಸೇರಿಸಿದೆ.
Read Full Story

04:27 PM (IST) Mar 14

ರಕ್ತದಾನ ಮಹಾದಾನ - ಯಾರು ಮಾಡಬಹುದು? ಏನು ಲಾಭ? ಇಲ್ಲಿದೆ ಸಂಪೂರ್ಣ ಮಾಹಿತಿ

ಹಿಮೋಗ್ಲೋಬಿನ್ ಅಧಿಕವಾದರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವರಲ್ಲಿ ಅದು 18ರಿಂದ 23ರ ತನಕವೂ ಹೋಗಿ, ರಕ್ತ ದಪ್ಪವಾಗುತ್ತದೆ. ಇದರಿಂದ, ನರಗಳಲ್ಲಿ ನೀರಂತೆ ಹರಿಯುವ ನೆತ್ತರು ಗಟ್ಟಿಯಾಗಿ, ಗಂಟಾಗಿ ತೊಂದರೆಯಾಗುತ್ತದೆ.

Read Full Story

04:13 PM (IST) Mar 14

ಗಮನಿಸಿ, ಇಂಟರ್ ಲಾಕಿಂಗ್ ಕಾಮಗಾರಿ ಹಿನ್ನೆಲೆ ಹಲವು ರೈಲು ಸಂಚಾರ ರದ್ದು, ಯಾವೆಲ್ಲ ಮಾರ್ಗದಲ್ಲಿ ಸಂಚಾರ ರದ್ದು?

ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗದ ನಾನ್‌ ಇಂಟರ್‌ಲಾಕಿಂಗ್ ಕಾಮಗಾರಿಯ ಕಾರಣ, ಮಾರ್ಚ್ 15, 16 ಮತ್ತು 17 ರಂದು ತುಮಕೂರು ಮಾರ್ಗದ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳನ್ನು ಸಂಪೂರ್ಣವಾಗಿ ಮತ್ತು ಭಾಗಶಃ ರದ್ದುಗೊಳಿಸಲಾಗಿದ್ದು, ಇನ್ನು ಕೆಲವು ರೈಲುಗಳ ಸಮಯವನ್ನು ಬದಲಾಯಿಸಲಾಗಿದೆ. ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನಿಸಿ ಪ್ರಯಾಣಿಸುವಂತೆ ರೈಲ್ವೆ ಇಲಾಖೆ ಸೂಚಿಸಿದೆ.
Read Full Story

03:58 PM (IST) Mar 14

Bigg Boss ಇತಿಹಾಸದಲ್ಲೇ ದಾಖಲೆ ಬರೆದ ಲವರ್​ ಬಾಯ್​ ಸೂರಜ್​ ಸಿಂಗ್! ಇದೀಗ ಬಯಲು

ಬಿಗ್​ಬಾಸ್​ 12ರಲ್ಲಿ ಸ್ಪರ್ಧಿಸಿದ್ದ ಸಾಫ್ಟ್​ವೇರ್​ ಎಂಜಿನಿಯರ್​ ಸೂರಜ್​ ಸಿಂಗ್​, ಮನೆಯಿಂದ ಹೊರಬಂದ ನಂತರ 'ಪವಿತ್ರ ಬಂಧನ' ಧಾರಾವಾಹಿಯ ನಾಯಕರಾದರು.  ಸೀರಿಯಲ್ ಪ್ರಮೋಷನ್‌ಗೆ ಬಿಗ್‌ಬಾಸ್ ಮನೆಗೆ ಹೋದರು.  ಬಿಗ್‌ಬಾಸ್ ಇತಿಹಾಸದಲ್ಲಿಯೇ ದಾಖಲೆಯೊಂದನ್ನು ಸೃಷ್ಟಿಸಿದ್ದು ಅದರ ಬಗ್ಗೆ ನಟ ಹೇಳಿದ್ದೇನು? 

Read Full Story

02:39 PM (IST) Mar 14

ಕುಂದಾಪುರದಲ್ಲಿ ರಿಷಬ್ ಶೆಟ್ಟಿ ಅವರ ₹12 ಕೋಟಿಯ ಅರಮನೆ - ಮನೆಯೊಳಗಿದೆ 300 ಕೆಜಿಯ ತುಳಸಿ ಕಟ್ಟೆ!

'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿ ತಮ್ಮ ಹುಟ್ಟೂರಾದ ಕುಂದಾಪುರದಲ್ಲಿ ಸುಮಾರು ₹12 ಕೋಟಿ ಮೌಲ್ಯದ ಭವ್ಯ ಬಂಗಲೆಯನ್ನು ನಿರ್ಮಿಸಿದ್ದಾರೆ. ಪರಂಪರೆ ಮತ್ತು ಆಧುನಿಕತೆಯ ಸಮ್ಮಿಶ್ರಣವಾಗಿರುವ ಈ ಮನೆಯು ಅರೇಬಿಯನ್ ಸಮುದ್ರದ ಸುಂದರ ನೋಟವನ್ನು ಹೊಂದಿದೆ.

Read Full Story

02:28 PM (IST) Mar 14

ಎಲ್ಲರ ಜೊತೆ ಎಲ್ಲರೂ ಮಲಗ್ತಾರೆ; ಬಾಲಿವುಡ್‌ನ ಕರಾಳ ರಿಲೇಶನ್‌ಶಿಪ್‌ ಬಯಲು ಮಾಡಿದ ಖ್ಯಾತ ಪತ್ರಕರ್ತೆ

ತೆರೆ ಮೇಲೆ ಕಾಣಿಸೋದು ಬೇರೆ, ರಿಯಲ್‌ ಆಗಿ ಕಾಣುವುದೇ ಬೇರೆ. ತೆರೆ ಮೇಲೆ ಕಾಣಿಸದಂತೆ ಸೆಲೆಬ್ರಿಟಿಗಳ ಲೈಫ್‌ ಕೂಡ ಇರೋದಿಲ್ಲ. ಖ್ಯಾತ ಪತ್ರಕರ್ತೆ Simi Chandoke ಅವರು ಬಾಲಿವುಡ್‌ನ ರಿಲೇಶನ್‌ಶಿಪ್‌ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ, ಲೇಖನ ಓದಿ. 

 

Read Full Story

02:02 PM (IST) Mar 14

ಪ್ರಸಾದ ಅಂತ ತೆಂಗಿನಕಾಯಿ ಬ್ಯಾಗಿಗೆ ತುಂಬ್ಬೇಡಿ, ಫ್ಲೈಟ್ ನಿಂದ ಕೆಳಗಿಳಿಸ್ತಾರೆ ಹುಷಾರ್

ವಿಮಾನದಲ್ಲಿ ಪ್ರಯಾಣಿಸುವ ಮೊದಲು ಕೆಲವೊಂದು ವಿಷ್ಯಗಳನ್ನು ನಾವು ತಿಳಿದಿರಬೇಕು. ವಿಮಾನದಲ್ಲಿ ಎಲ್ಲ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅನುಮತಿ ಇಲ್ಲ. ಒಬ್ಬ ವ್ಯಕ್ತಿಗೆ ಲಗೇಜ್ ಲಿಮಿಟ್ ಇದೆ. ಅಲ್ದೆ ದ್ರವ ಪದಾರ್ಥ, ಚೂಪಾದ ವಸ್ತು ಸೇರಿದಂತೆ ಕೆಲ ವಸ್ತುಗಳ ಮೇಲೆ ಕಟ್ಟುನಿಟ್ಟಾದ ನಿಯಮ ಜಾರಿಯಲ್ಲಿದೆ.

 

Read Full Story

01:30 PM (IST) Mar 14

Summer Recipe - ನೈಸರ್ಗಿಕ ವಯಾಗ್ರಾ ಕಲ್ಲಂಗಡಿ ಸಿಪ್ಪೆಯ ರುಚಿಯಾದ ತಂಬುಳಿ ರೆಸಿಪಿ

ಸಾಮಾನ್ಯವಾಗಿ ಬಿಸಾಡುವ ಕಲ್ಲಂಗಡಿ ಸಿಪ್ಪೆಯು 'ನೈಸರ್ಗಿಕ ವಯಾಗ್ರಾ' ಎಂದೇ ಖ್ಯಾತವಾಗಿದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಿ, ಕಿಡ್ನಿ ಕಲ್ಲುಗಳನ್ನು ತಡೆಯುವುದಲ್ಲದೆ, ಹಲವಾರು ಪೋಷಕಾಂಶಗಳನ್ನು ಹೊಂದಿದೆ. ಈ ಸಿಪ್ಪೆಯನ್ನು ಬಳಸಿ ರುಚಿಕರವಾದ ತಂಬುಳಿಯನ್ನು ಹೇಗೆ ತಯಾರಿಸಬಹುದು?

Read Full Story

01:20 PM (IST) Mar 14

ಐಎಎಸ್‌, ಐಪಿಎಸ್‌ಗಿಂತ ಹೆಚ್ಚು ಸಂಬಳ! ಕುಲ್ದೀಪ್ ಯಾದವ್ ಪತ್ನಿ ವಂಶಿಕಾ ಯಾರು, ಏನ್ಮಾಡ್ತಾರೆ?

ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ತಮ್ಮ ಬಾಲ್ಯದ ಗೆಳತಿ ವಂಶಿಕಾ ಚಡ್ಡಾ ಅವರನ್ನು ಮಾರ್ಚ್ 14 ರಂದು ವರಿಸಲಿದ್ದಾರೆ. ಉತ್ತರಾಖಂಡದ ಮುಸ್ಸೂರಿಯಲ್ಲಿ ಈ ವಿವಾಹ ಸಮಾರಂಭ ನಡೆಯುತ್ತಿದ್ದು, ಕ್ರಿಕೆಟ್ ಹಾಗೂ ಇತರೆ ಗಣ್ಯರು ಭಾಗಿಯಾಗಲಿದ್ದಾರೆ.
Read Full Story

12:56 PM (IST) Mar 14

ಲಿಂಗ ಸಮಾನತೆಗೆ ಸಾಕ್ಷಿಯಾದ ಬೀರೂರು - ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ಅಕ್ಕ-ತಂಗಿ!

ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ, ಸಮಾಜದ ಸಂಪ್ರದಾಯವನ್ನು ಮುರಿದು ಹೆಣ್ಣುಮಕ್ಕಳಿಬ್ಬರು ತಮ್ಮ ತಂದೆಯ ಅಂತ್ಯಕ್ರಿಯೆಯನ್ನು ತಾವೇ ನೆರವೇರಿಸಿದ್ದಾರೆ. ಗಂಡು ಮಕ್ಕಳಿಲ್ಲದ ಕಾರಣ, ಪುತ್ರಿ ಐಶ್ವರ್ಯಾ ಅವರು ಕುಟುಂಬದವರ ಒಪ್ಪಿಗೆಯೊಂದಿಗೆ ಈ ಕಾರ್ಯವನ್ನು ಮಾಡಿ, ಲಿಂಗ ಸಮಾನತೆಯ ಸಂದೇಶ ಸಾರಿದ್ದಾರೆ.
Read Full Story

12:48 PM (IST) Mar 14

ಚಿಕ್ಕಮಗಳೂರು - ಮುತ್ತೋಡಿ ಅರಣ್ಯದಲ್ಲಿ ಭಾರಿ ಕಾಡ್ಗಿಚ್ಚು; ಭದ್ರಾ ಅಭಯಾರಣ್ಯದ ಅಪಾರ ಸಸ್ಯ ಸಂಪತ್ತು ನಾಶ!

ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಭಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಭದ್ರಾ ಅಭಯಾರಣ್ಯದ ವ್ಯಾಪ್ತಿಯಲ್ಲಿ ಅಪಾರ ಅರಣ್ಯ ಸಂಪತ್ತು ನಾಶವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದು, ಸಿಬ್ಬಂದಿ ಕೊರತೆಯಿಂದ ಇನ್ನಷ್ಟು ವ್ಯಾಪಿಸಿದೆ ಎಂಬ ಆರೋಪ.

Read Full Story

12:36 PM (IST) Mar 14

4 ಎಂಎಲ್‌ಸಿ , 2 ಅಸೆಂಬ್ಲಿ ಎಲೆಕ್ಷನ್‌ ಗೆಲ್ಲಲು ತಂಡ ಕಟ್ಟಿದ ಬಿಜೆಪಿ; ಯಾರಿಗೆ ಯಾವ ಕ್ಷೇತ್ರ?

ಬಿಜೆಪಿ ಕ್ಷೇತ್ರವಾರು ಪ್ರಮುಖ ನಾಯಕರ ತಂಡಗಳನ್ನು ರಚಿಸಿದೆ. ಈಶಾನ್ಯ ಶಿಕ್ಷಕರು, ಬೆಂಗಳೂರು ಶಿಕ್ಷಕರು, ಪಶ್ಚಿಮ ಪದವೀಧರರು, ಆಗ್ನೇಯ ಪದವೀಧರರ ಕ್ಷೇತ್ರಗಳು ಹಾಗೂ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ.

Read Full Story

12:13 PM (IST) Mar 14

Muddu Sose Serial - ಸುಳ್ಳು ಹೇಳಿದ ವಿನಂತಿ; ತಕ್ಕ ಪಾಠ ಕಲಿಸಿದ ದೇವರು; ರಣರೋಚಕ ಎಪಿಸೋಡ್‌ ಇದು!

Muddu Sose Kannada Serial Episode Update: ಮುದ್ದುಸೊಸೆ ಧಾರಾವಾಹಿಯಲ್ಲಿ ಶಿವರಾಮೇಗೌಡ ಜೈಲಿಗೆ ಹೋಗಿದ್ದ ವಿಷಯದಲ್ಲಿ ವಿದ್ಯಾ ಪಾಲು ಇಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಭದ್ರೇಗೌಡ, ವಿನಂತಿಯನ್ನು ಬಳಸಿಕೊಂಡಿಲ್ಲ ಎಂದು ಸಾಬೀತಾಗಬೇಕಿದೆ. ಈಗ ದೈವ ಲೀಲೆಯ ಪರಾಕಾಷ್ಠೆ ಆಗಬೇಕಿದೆ.

 

Read Full Story

12:03 PM (IST) Mar 14

ನಾನು ಸೀರಿಯಲ್​​ ಬಿಡ್ತಾ ಇರೋದಕ್ಕೆ ಇದೇ ಕಾರಣ - ಕೊನೆಗೂ ಲೈವ್​ಗೆ ಬಂದು ಕಾರಣ ಕೊಟ್ಟ Sanjana Burli

'ಪುಟ್ಟಕ್ಕನ ಮಕ್ಕಳು' ಖ್ಯಾತಿಯ ನಟಿ ಸಂಜನಾ ಬುರ್ಲಿ ಇದೀಗ 'ಗಂಧದ ಗುಡಿ' ಸೀರಿಯಲ್​ನಿಂದಲೂ ಹೊರಬಂದಿದ್ದಾರೆ. ಶಿಕ್ಷಣದ ಕಾರಣಕ್ಕೆ ಮೊದಲ ಸೀರಿಯಲ್ ಬಿಟ್ಟಿದ್ದ ಅವರು, ಇದೀಗ ತಮ್ಮ ವೈವಾಹಿಕ ಜೀವನದ ಸಲುವಾಗಿ ಗಂಧದ ಗುಡಿ ಧಾರಾವಾಹಿಯನ್ನು ತೊರೆಯುತ್ತಿರುವುದಾಗಿ ಖುದ್ದು ಸ್ಪಷ್ಟಪಡಿಸಿದ್ದಾರೆ.
Read Full Story

11:45 AM (IST) Mar 14

ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಗೃಹ ಸಚಿವ ಜಿ. ಪರಮೇಶ್ವರ್! ಒಳಮೀಸಲಾತಿ ಬಗ್ಗೆ ಮಹತ್ವದ ಘೋಷಣೆ!

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ, 50 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿ, ಎತ್ತಿನಹೊಳೆ ಯೋಜನೆ, ಮತ್ತು ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
Read Full Story

11:06 AM (IST) Mar 14

ನಟ ಯಶ್‌ ಡಿಪ್ರೆಶನ್‌ನಲ್ಲಿದ್ದಾರೆ; ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಮಾತಿಗೆ ರಾಕಿಂಗ್‌ ಸ್ಟಾರ್‌ ಫ್ಯಾನ್ಸ್‌ ಗರಂ!

ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಅವರು ತೆಲುಗು ನಟ-ನಟಿಯರ ವೈಯಕ್ತಿಕ ಜೀವನ, ಕರಿಯರ್‌ ಬಗ್ಗೆ ಮಾತನಾಡಿದ್ದುಂಟು, ಅವರ ಭವಿಷ್ಯಗಳಲ್ಲಿ ಬಹುತೇಕ ಸತ್ಯವಾದರೆ, ಇನ್ನೂ ಕೆಲವು ಆಗಿಲ್ಲ. ಈಗ ರಾಕಿಂಗ್‌ ಸ್ಟಾರ್‌ ಯಶ್‌ ಬಗ್ಗೆ ಕೂಡ ಮಾತನಾಡಿದ್ದು, ವೀಕ್ಷಕರು ಸಿಟ್ಟಾಗಿದ್ದಾರೆ.

 

Read Full Story

11:01 AM (IST) Mar 14

ಒಳ ಮೀಸಲಾತಿ ಜಾರಿಗೆ ಬಿಜೆಪಿ ಹಮ್ಮಿಕೊಂಡಿದ್ದ ಪಾದಯಾತ್ರೆ ಮುಂದೂಡಿದ್ದು ಏಕೆ? ಸರ್ಕಾರದ ನಿಲುವೇನು?

ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಬಿಜೆಪಿ ಹಮ್ಮಿಕೊಂಡಿದ್ದ ಚಿತ್ರದುರ್ಗ-ಬೆಂಗಳೂರು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಮಾ. 27ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆಯ ನಿರ್ಣಯವನ್ನು ಕಾದುನೋಡಿ, ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲು ಪಕ್ಷ ತೀರ್ಮಾನಿಸಿದೆ.
Read Full Story

10:40 AM (IST) Mar 14

ಗ್ಯಾಸ್ ಸಿಲಿಂಡರ್-ಇಂಡಕ್ಷನ್ ಸ್ಟೌ - ಎರಡರಲ್ಲಿ ಯಾವುದು ಅಡುಗೆ ಮಾಡಲು ಕಡಿಮೆ ಖರ್ಚು? ಆಗುತ್ತೆ? ತಿಳಿದ್ರೆ ಅಚ್ಚರಿ!

ಜಾಗತಿಕ ಬಿಕ್ಕಟ್ಟಿನಿಂದಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಮತ್ತು ಬೆಲೆ ಏರಿಕೆ ಉಂಟಾಗಿದ್ದು, ಜನರು ಇಂಡಕ್ಷನ್ ಸ್ಟವ್‌ಗಳತ್ತ ಮುಖಮಾಡಿದ್ದಾರೆ. ಇಂಡಕ್ಷನ್ ಬಳಕೆಯಿಂದ ಮಾಸಿಕ ಖರ್ಚು ಕಡಿಮೆಯಾಗಬಹುದಾದರೂ, 

Read Full Story

10:28 AM (IST) Mar 14

Brahmagantu Serial - ಸೌಂದರ್ಯ ದ್ವೇಷಕ್ಕೆ ಕೊನೆಗೂ ದೀಪಾ ಸತ್ತೇ ಹೋದಳು; ಧಾರಾವಾಹಿಯೇ ಮುಗಿತಿದ್ಯಾ?

Brahmagantu Serial Kannada: ಬ್ರಹ್ಮಗಂಟು ಧಾರಾವಾಹಿಯಲ್ಲಿ ಸೌಂದರ್ಯ ದ್ವೇಷ ಮಿತಿ ಮೀರಿದೆ. ಈಗಾಗಲೇ ಚಿರು ತಂದೆಯನ್ನು ವೀಲ್‌ಚೇರ್‌ ಮೇಲೆ ಕೂರೋ ಹಾಗೆ ಮಾಡಿರೋ ಸೌಂದರ್ಯ ಈಗ ದೀಪಾಳನ್ನು ಅವಳ ಪತಿಯಿಂದ ದೂರ ಮಾಡುವ ಆಲೋಚನೆ ಮಾಡಿದ್ದಾಳೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

09:58 AM (IST) Mar 14

Bengaluru - ಮದ್ವೆಯಾಗಿರೋ ವಿಷ್ಯ ಗೊತ್ತಿದ್ರೂ ಮನೆ ಬಿಟ್ಟು ಬಂದಿದ್ದ ಪ್ರೇಯಸಿ ಉಸಿರು ನಿಲ್ಲಿಸಿದ ಅಯ್ಯಪ್ಪ

ಮದುವೆ ವಿಚಾರವಾಗಿ ನಡೆದ ಜಗಳದಲ್ಲಿ ಅಯ್ಯಪ್ಪ ಎಂಬಾತ ತನ್ನ ಪ್ರೇಯಸಿ ರಂಜಿತಾಳನ್ನು ವೈಯರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಈಗಾಗಲೇ ಮದುವೆಯಾಗಿದ್ದ ಅಯ್ಯಪ್ಪ, ಪತ್ನಿಗೆ ವಿಚ್ಛೇದನ ನೀಡದೆ ರಂಜಿತಾ ಜೊತೆ ವಾಸಿಸುತ್ತಿದ್ದ. ವರ್ತೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Read Full Story

09:22 AM (IST) Mar 14

ಯುಜಿಸಿ ಹೊಸ ನಿಯಮ - ದಶಕಗಳ ಕಾಲ ದುಡಿದ ಕರ್ನಾಟಕದ 6,000+ ಅತಿಥಿ ಉಪನ್ಯಾಸಕರು ಈಗ ನಿರುದ್ಯೋಗಿಗಳು!

ಯುಜಿಸಿ ನಿಗದಿಪಡಿಸಿದ ಹೊಸ ಅರ್ಹತಾ ಮಾನದಂಡಗಳಿಂದಾಗಿ, ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದ ಸಾವಿರಾರು ಅತಿಥಿ ಉಪನ್ಯಾಸಕರು ಉದ್ಯೋಗ ಕಳೆದುಕೊಂಡಿದ್ದಾರೆ. ಸೇವಾ ಭದ್ರತೆಗಾಗಿ ಹೋರಾಡುತ್ತಿದ್ದ ಇವರಿಗೆ, ಹೈಕೋರ್ಟ್ ಆದೇಶದ ನಂತರ ಹೊಸ ನಿಯಮ ಪಾಲಿಸದ ಕಾರಣ ನಿರುದ್ಯೋಗದ ಸಂಕಷ್ಟ

Read Full Story

08:41 AM (IST) Mar 14

ಮಾಜಿ ಸಚಿವ ನಾರಾಯಣಗೌಡರ ಕಾರಿಗೆ ಗುದ್ದಿದ ಮತ್ತೊಂದು ಕಾರು!

ಬೆಂಗಳೂರಿನ ರಾಜಭವನ ರಸ್ತೆಯಲ್ಲಿ, ಮೊಬೈಲ್‌ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸುತ್ತಿದ್ದ ಚಾಲಕನೊಬ್ಬ ಮಾಜಿ ಸಚಿವ ನಾರಾಯಣಗೌಡ ಅವರ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ, ನಿರ್ಲಕ್ಷ್ಯದ ಚಾಲನೆಯ ಬಗ್ಗೆ ನಾರಾಯಣಗೌಡ ಅವರು ಚಾಲಕನನ್ನು ತರಾಟೆಗೆ ತೆಗೆದುಕೊಂಡರು.

Read Full Story

08:35 AM (IST) Mar 14

ಯಲ್ಲಮ್ಮ ದೇವಸ್ಥಾನದಲ್ಲಿ ದಾಖಲೆ ಕಾಣಿಕೆ - 9.92 ಕೋಟಿ ಹಣ, ಚಿನ್ನ, ಬೆಳ್ಳಿ ಸಂಗ್ರಹ

ಪ್ರಸಿದ್ಧ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ ದಾಖಲೆಯ ₹3.07 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಈ ಎಣಿಕೆಯಲ್ಲಿ ₹2.78 ಕೋಟಿ ನಗದು, 100 ಗ್ರಾಂ ಚಿನ್ನ ಹಾಗೂ ಸುಮಾರು 4.5 ಕೆಜಿ ಬೆಳ್ಳಿ ಸೇರಿದೆ. 

Read Full Story

08:27 AM (IST) Mar 14

ಬೆಂಗಳೂರಿನ ಕಾಳಸಂತೆಯಲ್ಲಿ ವಾಣಿಜ್ಯ ಸಿಲಿಂಡರ್ ₹4,000ಕ್ಕೆ ಸೇಲ್‌!

ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವದಿಂದ ಹೋಟೆಲ್ ಉದ್ಯಮವು ಸಂಕಷ್ಟಕ್ಕೆ ಸಿಲುಕಿದೆ. ಕಾಳಸಂತೆಯಲ್ಲಿ ಸಿಲಿಂಡರ್‌ ಬೆಲೆ ₹4000 ದಾಟಿದ್ದು, ಅನಿವಾರ್ಯವಾಗಿ ಹಲವು ಹೋಟೆಲ್‌ಗಳು ಸೌದೆ ಒಲೆಗಳ ಮೊರೆ ಹೋಗಿವೆ. ಇದರಿಂದ ಅಡುಗೆ ಸಿಬ್ಬಂದಿ ಹೊಗೆ ಹಾಗೂ ಅನುಭವದ ಕೊರತೆಯಿಂದ ಪರದಾಟ.

Read Full Story

08:22 AM (IST) Mar 14

ಬೈಎಲೆಕ್ಷನ್‌ - ಬಿಜೆಪಿಯಿಂದ ಬಾಗಲಕೋಟೆಗೆ ಚರಂತಿಮಠ? ದಾವಣಗೆರೆಯಿಂದ ಅಚ್ಚರಿ ಅಭ್ಯರ್ಥಿ ಘೋಷಣೆ ಸಾಧ್ಯತೆ

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಬಾಗಲಕೋಟೆಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಹೆಸರು ಬಹುತೇಕ ಅಂತಿಮವಾಗಿದ್ದು, ದಾವಣಗೆರೆಯಲ್ಲಿನ ಭಿನ್ನಾಭಿಪ್ರಾಯಗಳ ನಡುವೆ ಅಚ್ಚರಿಯ ಅಭ್ಯರ್ಥಿ ಆಯ್ಕೆಯ ಸಾಧ್ಯತೆಗಳಿವೆ. 

Read Full Story

07:48 AM (IST) Mar 14

ಚಿನ್ನದ ಸಾಲ ಪಡೆದಿದ್ದೀರಾ? ನಿಮಗಾಗಿ ವಿಧಾನಪರಿಷತ್ತಿನಲ್ಲಿ ಹೊಸ ವಿಧೇಯಕ ಮಂಡನೆ!

ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್‌ನ ರಮೇಶ್‌ ಬಾಬು ಅವರು 'ಕರ್ನಾಟಕ ಚಿನ್ನ ಅಡಮಾನವಿಟ್ಟ ಸಾಲಗಾರರ ರಕ್ಷಣಾ ವಿಧೇಯಕ 2025' ಎಂಬ ಖಾಸಗಿ ವಿಧೇಯಕವನ್ನು ಮಂಡಿಸಿದ್ದಾರೆ. ಈ ವಿಧೇಯಕವು ಚಿನ್ನದ ಸಾಲಗಾರರ ಹಿತರಕ್ಷಣೆಗಾಗಿ, ಅಡವಿಟ್ಟ ಚಿನ್ನದ ಹರಾಜು ಪ್ರಕ್ರಿಯೆಯನ್ನು ನಿಯಂತ್ರಣ ಉದ್ದೇಶಿಸಿದೆ.

Read Full Story

More Trending News