Published : Mar 12, 2026, 06:40 AM ISTUpdated : Mar 12, 2026, 09:37 PM IST

Karnataka News Live: ಅರಣ್ಯ ಇಲಾಖೆ ಅನುಮತಿ ದೊರೆಯದ ಕಾರಣ ವಿದ್ಯುತ್ ಘಟಕ ಲೋಕಾರ್ಪಣೆ ವಿಳಂಬ - ಕೆ.ಜೆ.ಜಾರ್ಜ್

ಸಾರಾಂಶ

ಬೆಳಗಾವಿ: ಮದುವೆಗೆ ವಧು ಸಿಗದಕ್ಕೆ ನೊಂದು ಇಲ್ಲಿನ ಹಿಂಡಲಗಾ ಜೈಲಿನ ವಾರ್ಡರ್‌ ವಿನೋದ್‌ ತಿಗಡಿ (31) ನದಿಗೆ ಹಾಕಿ ಆತ್ಮ*ಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ನಡೆದಿದೆ. ವಿನೋದ್‌ ಇತ್ತೀಚೆಗೆ ಹೊಸ ಮನೆ ಕಟ್ಟಿಸಿದ್ದರು. ಮದುವೆ ಆಗಲು ವಧು ಕೂಡ ಹುಡುಕುತ್ತಿದ್ದರು ಎಂದು ಹೇಳಲಾಗಿದೆ. ಆದರೆ, ವಧು ಸಿಗದಿದ್ದರಿಂದ ಜಿಗುಪ್ಸೆಗೊಂಡು ನದಿಗೆ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ಚನ್ನಮ್ಮ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

09:37 PM (IST) Mar 12

ಅರಣ್ಯ ಇಲಾಖೆ ಅನುಮತಿ ದೊರೆಯದ ಕಾರಣ ವಿದ್ಯುತ್ ಘಟಕ ಲೋಕಾರ್ಪಣೆ ವಿಳಂಬ - ಕೆ.ಜೆ.ಜಾರ್ಜ್

2026 ಮಾ.16 ರೊಳಗೆ 2025 ಮಾ. 17 ರ ಕಾರ್ಯಾದೇಶದಂತೆ ಲೋಕಾರ್ಪಣೆ ಮಾಡಬೇಕಾಗಿದ್ದು ಅರಣ್ಯ ಇಲಾಖೆಯ ಅನುಮತಿ ದೊರೆಯದ ಕಾರಣ ವಿಳಂಬವಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

Read Full Story

09:23 PM (IST) Mar 12

ತಂತ್ರಜ್ಞಾನದ ಬದಲಾವಣೆಗೆ ತಕ್ಕಂತೆ ‘ಸುಸ್ಥಿರ ಡೇಟಾ ಸೆಂಟರ್‌’ - ಸಚಿವ ಪ್ರಿಯಾಂಕ್‌ ಖರ್ಗೆ

ತಂತ್ರಜ್ಞಾನ ಕ್ಷೇತ್ರದಲ್ಲಿನ ಬದಲಾವಣೆಗಳಿಗೆ ತಕ್ಕಂತೆ ರಾಜ್ಯದಲ್ಲಿ ‘ಸುಸ್ಥಿರ ಡೇಟಾ ಸೆಂಟರ್‌ ಪಾಲಿಸಿ’ ರೂಪಿಸುವುದಾಗಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

Read Full Story

08:13 PM (IST) Mar 12

ರಸ್ತೆಯಲ್ಲಿ ಹಾಕಿದ ರಾಗಿಗೆ ಬಲಿಯಾದ್ರು ಅಜ್ಜ ಮೊಮ್ಮಗಳು - ಬೈಕ್‌ನಿಂದ ಬಿದ್ದವರ ಮೇಲೆ ಹರಿದ ಲಾರಿ

ಕೂಡ್ಲಿಗಿ ತಾಲ್ಲೂಕಿನ ಕ್ಯಾಸನಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಲಾರಿ ಹರಿದು ಅಜ್ಜ ಮೊಮ್ಮಗಳು ಮೃತಪಟ್ಟಿದ್ದಾರೆ. ಪರೀಕ್ಷೆ ಮುಗಿಸಿ ಮೊಮ್ಮಗಳನ್ನು ಬೈಕಿನಲ್ಲಿ ಕರೆದೊಯ್ಯುತ್ತಿದ್ದಾಗ, ರಸ್ತೆಯಲ್ಲಿದ್ದ ರಾಗಿಯ ಮೇಲೆ ಬೈಕ್ ಜಾರಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

Read Full Story

07:53 PM (IST) Mar 12

ಗುತ್ತಿಗೆ ಮೇಲೆ 400 ಪಶು ವೈದ್ಯರ ನೇಮಕಕ್ಕೆ ಪ್ರಸ್ತಾವ, ಅಂಗನವಾಡಿಗಳ ಹುದ್ದೆ ಖಾಲಿಯಾದ 90 ದಿನದೊಳಗೆ ಭರ್ತಿಗೆ ಸೂಚನೆ

ಕರ್ನಾಟಕದಲ್ಲಿ 400 ಪಶುವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ, ರಾಜ್ಯದ ಅಂಗನವಾಡಿಗಳಲ್ಲಿ ಖಾಲಿಯಾದ ಹುದ್ದೆಗಳನ್ನು 90 ದಿನಗಳೊಳಗೆ ಭರ್ತಿ ಮಾಡಲು ಸೂಚನೆ ನೀಡಲಾಗಿದ್ದು, ಉಡುಪಿ ಜಿಲ್ಲೆಯಲ್ಲಿ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
Read Full Story

07:52 PM (IST) Mar 12

ಚಡ್ಡಿ ಹಾಕ್ಕೊಂಡ್​ ಹೋಗೋಳು ಬೇಡ ಅಂದಿದ್ದ Amrthadhaare ಜೈ - ಡ್ರೀಮ್​ ಗರ್ಲ್​ ಜೊತೆ ಎಂಜಾಯ್​

'ಅಮೃತಧಾರೆ' ಧಾರಾವಾಹಿಯ ಖಳನಾಯಕ ಜೆಡಿ ಅಲಿಯಾಸ್ ರಾಣವ್ ಗೌಡ,  ಹಿಂದೆ ಮಲ್ಲಿ ಪಾತ್ರ ನಿರ್ವಹಿಸಿದ್ದ ರಾಧಾ ಭಗವತಿ ಜೊತೆ ನಿಜ ಜೀವನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ, ತಮಗೆ ತನ್ನ ಅಮ್ಮನಂತೆ ಸಂಪ್ರದಾಯಸ್ಥ ಹುಡುಗಿ ಬೇಕು ಎಂದು ರಾಣವ್ ಹೇಳಿಕೊಂಡಿದ್ದರು.

Read Full Story

07:33 PM (IST) Mar 12

ಉಣಕಲ್‌ ದೇಗುಲ ಅಭಿವೃದ್ಧಿಗೆ ₹ 25 ಕೋಟಿ ಯೋಜನೆ ಸಿದ್ಧ - ಸಚಿವ ರಾಮಲಿಂಗಾರೆಡ್ಡಿ

ಹುಬ್ಬಳ್ಳಿಯ ಉಣಕಲ್‌ನಲ್ಲಿರುವ ಐತಿಹಾಸಿಕ ಶ್ರೀಚಂದ್ರಮೌಳೇಶ್ವರ ದೇವಸ್ಥಾನದ ಅಭಿವೃದ್ಧಿಗೆ ನಗರ ಪಾಲಿಕೆಯಿಂದ ₹ 25 ಕೋಟಿ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

Read Full Story

07:29 PM (IST) Mar 12

ಬೆಂಗಳೂರು ಡಿವಿಜನ್ ರೈಲು ಮಾರ್ಗದಲ್ಲಿ ಅನಿರೀಕ್ಷಿತ ಬದಲಾವಣೆ, ಕಾಮಗಾರಿಯ ಹಿನ್ನೆಲೆ ರಾಜ್ಯದಲ್ಲಿ ಹಲವು ರೈಲು ರದ್ದು!

ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದಲ್ಲಿ ಮಲ್ಲಸಂದ್ರ ಮತ್ತು ಗುಬ್ಬಿ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಕಾಮಗಾರಿಯಿಂದಾಗಿ, ಹಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗಳಲ್ಲಿ ಕೆಲವು ರೈಲುಗಳ ಸಂಪೂರ್ಣ ರದ್ದು, ಭಾಗಶಃ ರದ್ದು, ಮಾರ್ಗ ಬದಲಾವಣೆ, ಮತ್ತು ಮರು-ವೇಳಾಪಟ್ಟಿ ಸೇರಿವೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸುವ ಮೊದಲು ಈ ವಿವರಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ.
Read Full Story

07:11 PM (IST) Mar 12

ಪ್ರಯತ್ನ ಮಾಡಿದರೆ 3 ವರ್ಷದಲ್ಲಿ ರಾಜ್ಯ ಜಿಡಿಪಿಯಲ್ಲಿ ದ.ಕ. ಪಾಲು ಶೇ.2 ಹೆಚ್ಚಳ - ಸಚಿವ ಪ್ರಿಯಾಂಕ್‌ ಖರ್ಗೆ

ಬಂಡವಾಳ ಹೂಡಿಕೆಗೆ ನಾವೆಲ್ಲರೂ ಸೇರಿ ಉತ್ತಮ ವಾತಾವರಣ ಕೊಟ್ಟಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಇನ್ನೂ ಶೇ.2ರಷ್ಟು ಜಿಡಿಪಿ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

Read Full Story

07:03 PM (IST) Mar 12

ಬ್ರಹ್ಮಾವರದಲ್ಲಿ ಕೃಷಿ ವಿಜ್ಞಾನ ಕಾಲೇಜು ಸ್ಥಾಪನೆ ಬಗ್ಗೆ ತಜ್ಞರ ವರದಿ ಪಡೆದು ಕ್ರಮ - ಸಚಿವ ಎನ್‌.ಚಲುವರಾಯಸ್ವಾಮಿ

ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ವಿಜ್ಞಾನ ಕಾಲೇಜು ಸ್ಥಾಪನೆ ಸಂಬಂಧ ತಜ್ಞರ ಸಮಿತಿ ವರದಿ ಪಡೆದು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದ್ದಾರೆ.

Read Full Story

06:25 PM (IST) Mar 12

ಒಣ ಮೇವು ತುಂಬಿಕೊಂಡು ಹೋಗುತ್ತಿದ್ದ ಟ್ರಾಕ್ಟರ್‌ಗೆ ವಿದ್ಯುತ್ ತಂತಿ ಸ್ಪರ್ಶಿಸಿ ಬೆಂಕಿ

Tractor catches fire after touching electric wire: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಒಣಮೇವು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

Read Full Story

06:15 PM (IST) Mar 12

ಕಡಿಮೆ ಬೆಲೆಗೆ ಸಿಗ್ತಿದೆ ಕಲ್ಲಂಗಡಿ, ಕರಬೂಜ - ಬೆಂಗಳೂರಿನಲ್ಲಿ ಸೀಸನಲ್‌ ಹಣ್ಣುಗಳ ಬೆಲೆಯಲ್ಲಿ ಭಾರೀ ಕುಸಿತ!

ಬೆಂಗಳೂರಿನಲ್ಲಿ ಹಣ್ಣುಗಳ ಪೂರೈಕೆ ಹೆಚ್ಚಳ ಮತ್ತು ರಫ್ತು ಸ್ಥಗಿತದಿಂದಾಗಿ ಕಲ್ಲಂಗಡಿ, ಕರ್ಬೂಜದಂತಹ ಬೇಸಿಗೆ ಹಣ್ಣುಗಳ ಬೆಲೆಗಳು ತೀವ್ರವಾಗಿ ಕುಸಿದಿವೆ. ಇದರಿಂದ ರೈತರು ಭಾರಿ ನಷ್ಟ ಅನುಭವಿಸುತ್ತಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
Read Full Story

05:49 PM (IST) Mar 12

ನಮ್ಮ ದೇಹ ಕತ್ತರಿಸಿ ವಿದ್ಯಾರ್ಥಿಗಳ ಮುಂದಿಡು - ಅಪ್ಪ-ಅಮ್ಮನ ಆಸೆ ಈಡೇರಿಸಿದ ಬೆಳಗಾವಿಯ ವೈದ್ಯ

ಬೆಳಗಾವಿಯ ಬೈಲಹೊಂಗಲದ ವೈದ್ಯರೊಬ್ಬರು ತಮ್ಮ ಪೋಷಕರ ಕೊನೆಯಾಸೆಯಂತೆ ಅವರ ದೇಹಗಳನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ದಾನ ಮಾಡಿದ್ದಾರೆ. ತಂದೆಯ ಬಳಿಕ ಇತ್ತೀಚೆಗೆ ನಿಧನರಾದ   ತಾಯಿಯ ದೇಹವನ್ನೂ ಮಗ ಡಾ.ಮಹಾಂತೇಶ ರಾಮಣ್ಣನವರ್ ಅವರು ವಿದ್ಯಾರ್ಥಿಗಳ ಪಾಠಕ್ಕಾಗಿ ಬಳಸಿಕೊಂಡಿದ್ದಾರೆ.

Read Full Story

05:44 PM (IST) Mar 12

ರಾಕಿ ಗಡ್ಡಕ್ಕಾಗಿ ತಲೆ ಕೆಡಿಸಿಕೊಂಡ ಪ್ರೊಡ್ಯೂಸರ್​! ಯಶ್‌​​ಗಿಲ್ಲ ಗಡ್ಡ, ನಿಂತೋಯ್ತು ರಾಮಾಯಣ..!

ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಸಿನಿಮಾಗಾಗಿ ಕ್ಲೀನ್ ಶೇವ್ ಮಾಡಿರುವುದರಿಂದ, ರಾವಣನ ಪಾತ್ರಕ್ಕಾಗಿ ಗಡ್ಡದ ಅಗತ್ಯವಿರುವ 'ರಾಮಾಯಣ ಪಾರ್ಟ್-2' ಚಿತ್ರದ ಶೂಟಿಂಗ್ ನಿಂತುಹೋಗಿದೆ. ಯಶ್ ಮತ್ತೆ ತಮ್ಮ ಹಳೆಯ ಗಡ್ಡದ ಲುಕ್‌ಗೆ ಮರಳಲು ಸುಮಾರು ನಾಲ್ಕು ತಿಂಗಳು ಬೇಕಾಗುವುದರಿಂದ, ಅಲ್ಲಿಯವರೆಗೆ ಚಿತ್ರೀಕರಣವನ್ನು ಮುಂದೂಡಲಾಗಿದೆ.
Read Full Story

05:33 PM (IST) Mar 12

ಕರಾವಳಿಯ ಆರ್ಥಿಕ ಶಕ್ತಿ - 3 ವರ್ಷದಲ್ಲಿ ರಾಜ್ಯ ಜಿಡಿಪಿಯಲ್ಲಿ ದಕ್ಷಿಣ ಕನ್ನಡದ ಪಾಲು ಶೇ.2 ಹೆಚ್ಚಳ

ರಾಜ್ಯದ ಒಟ್ಟು  ಜಿಡಿಪಿ  ದಕ್ಷಿಣ ಕನ್ನಡ ಜಿಲ್ಲೆಯು ಶೇ.5.4ರಷ್ಟು ಪಾಲು ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದೆ. ಉತ್ತಮ ಹೂಡಿಕೆ ವಾತಾವರಣ ಕಲ್ಪಿಸಿದರೆ ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆಯ ಜಿಡಿಪಿಯನ್ನು ಇನ್ನೂ ಶೇ.2ರಷ್ಟು ಹೆಚ್ಚಿಸಬಹುದು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

Read Full Story

05:21 PM (IST) Mar 12

ಬೆಂಗಳೂರಿನಿಂದ ದುಬೈಗೆ ಬಸ್ ಸಂಚಾರ! ಹೋಗುವುದು ಹೇಗೆ? ಡ್ರೈವರ್​ ಕೊಟ್ಟ ಮಾಹಿತಿ ಸರಿಯಾಗಿ ಕೇಳಿ

ಬೆಂಗಳೂರಿನಿಂದ ದುಬೈಗೆ ಬಸ್ ಇದೆಯೇ ಎಂದು ಯುವಕ-ಯುವತಿಯರಿಬ್ಬರು ಬಿಎಂಟಿಸಿ ಚಾಲಕನಿಗೆ ಕೇಳುವ ವಿಡಿಯೋವೊಂದು ವೈರಲ್ ಆಗಿದೆ. ಚಾಲಕನು ಗಂಭೀರವಾಗಿಯೇ ಮೆಜೆಸ್ಟಿಕ್‌ನಿಂದ ದುಬೈಗೆ ಬಸ್ ಸಿಗುತ್ತದೆ ಎಂದು ಮಾರ್ಗದರ್ಶನ ನೀಡಿರುವುದು ನೆಟ್ಟಿಗರಲ್ಲಿ ನಗು ಉಕ್ಕಿಸಿದೆ.
Read Full Story

05:18 PM (IST) Mar 12

ಕೊಪ್ಪಳ - ಕೌಟುಂಬಿಕ ಕಲಹ, ಇಬ್ಬರು ಮಕ್ಕಳ ಸಮೇತ ಕೆರೆಗೆ ಹಾರವಾದ ತಾಯಿ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಕೌಟುಂಬಿಕ ಕಲಹದಿಂದ ಮನನೊಂದ ತಾಯಿಯೊಬ್ಬರು, ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಕಿರುಕುಳವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

Read Full Story

05:14 PM (IST) Mar 12

ಮತ್ತೊಂದು ಮೆಗಾ ಫೈಟ್‌​​​ಗೆ ರೆಡಿಯಾದ್ರಾ ಫ್ಯಾನ್ಸ್! ಅಪ್ಪು ಬರ್ತ್​ಡೇ ಟಾರ್ಗೆಟ್​ ಮಾಡುತ್ತಾರಾ ದರ್ಶನ್ ಅಭಿಮಾನಿಗಳು?

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದು ಅವರ 'ಆಕಾಶ್' ಸಿನಿಮಾ ಮರು-ಬಿಡುಗಡೆಯಾಗುತ್ತಿದೆ. ಅದೇ ದಿನ, ನಟ ದರ್ಶನ್ ಅವರ 'ಡೆವಿಲ್' ಚಿತ್ರವೂ ಸಹ ರೀ-ರಿಲೀಸ್ ಆಗುತ್ತಿದ್ದು, ಇದು ಇಬ್ಬರು ನಟರ ಅಭಿಮಾನಿಗಳ ನಡುವಿನ ಬಾಕ್ಸಾಫೀಸ್ ಸಮರಕ್ಕೆ ಮತ್ತೊಮ್ಮೆ ಕಾರಣವಾಗಿದೆ.  

Read Full Story

05:02 PM (IST) Mar 12

ಬೆಂಗಳೂರು - ವೃದ್ಧ ದಂಪತಿಗೆ ನಂಬಿಕಸ್ಥ ಮನೆಕೆಲಸದಾಕೆ ಮಹಾಮೋಸ, ಮನೆಕೆಲಸದವರನ್ನು ಮಿತಿಯಲ್ಲಿರಿಸಿ!

ಬೆಂಗಳೂರಿನಲ್ಲಿ ವೃದ್ಧ ದಂಪತಿಯೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದ ಧನಲಕ್ಷ್ಮಿ ಎಂಬ ಮಹಿಳೆ, ಅವರ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು ಒಂದು ವರ್ಷದ ಅವಧಿಯಲ್ಲಿ 8 ಲಕ್ಷ ರೂಪಾಯಿ ನಗದು ಮತ್ತು 54 ಗ್ರಾಂ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾಳೆ. ದಂಪತಿಯ ಅಳಿಯನ ದೂರಿನ ಮೇರೆಗೆ ತನಿಖೆ ನಡೆಸಿದ ಪುಲಕೇಶಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿ, ಕಳುವಾಗಿದ್ದ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
Read Full Story

04:45 PM (IST) Mar 12

ಬ್ರೇಕಪ್‌ ಬಗ್ಗೆ ತಾಯಿ ಆಡಿಯೋ ವೈರಲ್;‌ ಕನ್ನಡದಲ್ಲೇ ಪ್ರತಿಕ್ರಿಯೆ ಕೊಟ್ಟ ನಟಿ ರಶ್ಮಿಕಾ ಮಂದಣ್ಣ

Actress Rashmika Mandanna: ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆ ಆಗಿದೆ. ಈಗ ರಶ್ಮಿಕಾ ಮಂದಣ್ಣ ತಾಯಿಯದ್ದು ಎನ್ನಲಾದ ಆಡಿಯೋವೊಂದು ವೈರಲ್‌ ಆಗಿತ್ತು. ಈಗ ಅದನೆಲ್ಲ ಡಿಲಿಟ್‌ ಮಾಡಿ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

 

Read Full Story

04:25 PM (IST) Mar 12

ಸುಧಾರಾಣಿ ಬಂದ ಬಳಿಕ 60 ಕೋಟಿ ಲಾಭ ಮಾಡಿದ ಬೆಂಗಳೂರು ಸಹಕಾರಿ ಹಾಲು ಒಕ್ಕೂಟ - ರೈತರಿಗೆ ಭರ್ಜರಿ ಯುಗಾದಿ ಬೋನಸ್‌!

ಬೆಂಗಳೂರು ಸಹಕಾರಿ ಹಾಲು ಒಕ್ಕೂಟ ನಿಯಮಿತ (BAMUL) ಕಳೆದ ವರ್ಷದ 14.5 ಕೋಟಿ ರೂ. ನಷ್ಟದಿಂದ ಈ ವರ್ಷ 60 ಕೋಟಿ ರೂ.ಗಳ ಅಂದಾಜು ಲಾಭ ಗಳಿಸಿದೆ. ಆಡಳಿತಾತ್ಮಕ ಸುಧಾರಣೆಗಳು ಮತ್ತು ಹೆಚ್ಚಿದ ಹಾಲು ಸಂಗ್ರಹಣೆಯೇ ಈ ಯಶಸ್ಸಿಗೆ ಕಾರಣವಾಗಿದೆ.

Read Full Story

04:19 PM (IST) Mar 12

ಬಹುತೇಕ ಕನ್ನಡ ಧಾರಾವಾಹಿಗಳಲ್ಲಿ ಪದೇ ಪದೇ ಕಾಣುತ್ತಿರುವ ಅದೇ ದೃಶ್ಯ; ಬೇಸತ್ತ ವೀಕ್ಷಕರು!

Kannada Tv Serial: ಕನ್ನಡ ಕಿರುತೆರೆಯಲ್ಲಿ ಒಂದಾದ ಮೇಲೆ ಒಂದರಂತೆ ಸೀರಿಯಲ್‌ಗಳು ಪ್ರಸಾರ ಆಗುತ್ತಿವೆ. ಆದರೆ ಆ ಧಾರಾವಾಹಿಗಳಲ್ಲಿ ಮಾತ್ರ ಒಂದು ವಿಷಯ ಕಾಮನ್‌ ಆಗಿದೆ. ಇದನ್ನು ನೋಡಿ ವೀಕ್ಷಕರು ಕೂಡ ಬೇಸರ ಮಾಡಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. ಸಂಪೂರ್ಣ ಲೇಖನ ಓದಿ. 

Read Full Story

04:15 PM (IST) Mar 12

ಬೆಂಗಳೂರು - ಮಧ್ಯರಾತ್ರಿ ಆರ್ಡರ್ ಮಾಡಿದ ಗ್ರಾಹಕನೊಂದಿಗೆ ಕಿರಿಕ್, ಮೂಗು ಗುದ್ದಿ ಪುಡಿ ಮಾಡಿದ ಡೆಲಿವರಿ ಬಾಯ್‌!

ಬೆಂಗಳೂರಿನ ಕೋರಮಂಗಲದಲ್ಲಿ ಬ್ಲಿಂಕಿಟ್ ಡೆಲಿವರಿ ಬಾಯ್, ಆರ್ಡರ್ ವಿತರಣೆ ವೇಳೆ ಗ್ರಾಹಕರೊಂದಿಗೆ ವಾಗ್ವಾದ ನಡೆಸಿ ಹಲ್ಲೆ ಮಾಡಿದ್ದಾನೆ. ಈ ಘಟನೆಯಲ್ಲಿ ಗ್ರಾಹಕನ ಮೂಗಿನ ಮೂಳೆ ಮುರಿದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Read Full Story

04:14 PM (IST) Mar 12

Dhurandhar 2 ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯವಿಲ್ಲ - ಯಶ್ ಮಾತಿನ ಮರ್ಮವೇನು?

ಯಶ್‌ ಯಾವತ್ತೂ ಧುರಂಧರ್‌ 2 ಸಿನಿಮಾ ಟೀಮ್‌ ಅನ್ನು ವೈರಿಯಂತೆ ಕಂಡಿಲ್ಲ. ಬದಲಿಗೆ ಅವರು ಸಿನಿಮಾ ನೋಡಲು ಕುತೂಹಲದಿಂದಿದ್ದರು. ಆ ಸಿನಿಮಾದ ತೀವ್ರ ಸ್ಪರ್ಧೆಗೆ ಹೆದರಿ ಟಾಕ್ಸಿಕ್‌ ಸಿನಿಮಾ ಮುಂದಕ್ಕೆ ಹೋಗಿದೆ ಅನ್ನುವುದು ಸತ್ಯಕ್ಕೆ ದೂರದ ಮಾತು.

Read Full Story

03:44 PM (IST) Mar 12

ಇಷ್ಟುದಿನ ಯಾಮಾರಿಸಿದ್ದಾಯ್ತು; ಈಗ ಗುಡ್‌ನ್ಯೂಸ್‌ ಕೊಟ್ಟಿತಾ Ninna Jothe Nanna Kathe Serial?

Ninna Jothe Nanna Kathe Serial: ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ಭೂಮಿ, ಅಜಿತ್‌ ರಾಮ್‌ನಾರಾಯಣ್‌ ಯಾವಾಗ ಒಂದಾಗ್ತಾರೆ ಎನ್ನೋದೇ ದೊಡ್ಡ ಚಿಂತೆಯಾಗಿದೆ. ಇವರಿಬ್ಬರು ಪರಸ್ಪರ ಲವ್‌ ಹೇಳಿಕೊಂಡರೂ ಕೂಡ, ಪರಸ್ಪರ ನಂಬುತ್ತಿಲ್ಲ. ಈಗ ಅಜಿತ್‌ ಅಂತೂ ಭೂಮಿಯಿಂದ ದೂರ ಆಗುವ ಯೋಚನೆಯಲ್ಲಿದ್ದಾನೆ.

 

Read Full Story

03:40 PM (IST) Mar 12

ಬಾಗಲಕೋಟೆ - ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ - ಧಗಧಗನೇ ಹೊತ್ತಿ ಉರಿದ ಪೀಠೋಪಕರಣ ಮಳಿಗೆ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಪೀಠೋಪಕರಣಗಳ ಅಂಗಡಿಯೊಂದಕ್ಕೆ ಬೆಂಕಿ ತಗುಲಿದೆ. ಈ ದುರ್ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ.

Read Full Story

03:25 PM (IST) Mar 12

ಬಸ್ ನಿಲ್ಲಿಸಿದ್ದೇ ತಡ, ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ 90 ಲಕ್ಷ ಮೌಲ್ಯದ ಒಡವೆ ಬ್ಯಾಗ್ ರಾಬರಿ!

ಕೊಪ್ಪಳ ಹೊರವಲಯದಲ್ಲಿ, ಮಂತ್ರಾಲಯದಿಂದ ಮಂಗಳೂರಿಗೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್‌ನಿಂದ 90 ಲಕ್ಷ ಮೌಲ್ಯದ ಬಂಗಾರದ ಚೀಲವನ್ನು ನಾಲ್ವರು ಖದೀಮರು ದರೋಡೆ ಮಾಡಿದ್ದಾರೆ. ಊಟಕ್ಕೆ ನಿಲ್ಲಿಸಿದ್ದ ಬಸ್‌ನಲ್ಲಿ ಮಲಗಿದ್ದ ಪ್ರಯಾಣಿಕರಿಂದ ಈ ಕಳ್ಳತನ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Read Full Story

02:57 PM (IST) Mar 12

'ಡಿವೈನ್ ಸ್ಟಾರ್' ಲೈಫಲ್ಲಿ ಏನನ್ನ ಫಾಲೋ ಮಾಡ್ತಿದಾರೆ? ಕಾಂತಾರ ನಟ ರಿಷಬ್ ಶೆಟ್ಟಿ ಸಕ್ಸಸ್ ಸೀಕ್ರೆಟ್ ಇದೇನಾ?

ರಿಷಬ್ ಶೆಟ್ಟಿಯವರು ಕೇವಲ ನಟ-ನಿರ್ದೇಶಕರಲ್ಲ. ಅವರಿಗೊಂದು ಘನವಾದ ತೂಕವಿದೆ, ಅವರ ವ್ಯಕ್ತಿತ್ವದಲ್ಲಿ ಅಗಾಧವಾದ, ಅಪರಿಮಿತವಾದ ಜ್ಞಾನವಿದೆ. ಮಾತುಕತೆಯಲ್ಲಿ ಸಾಮಾನ್ಯ ಜ್ಞಾನವನ್ನೂ ಮೀರಿದ ಪ್ರೌಢತ್ವ ಹಾಗೂ ಆಧ್ಯಾತ್ಮಿಕತೆ ಇದೆ. ಅವರ ಸುತ್ತ ಒಂದು ಅದ್ಭುತ ಪ್ರಭಾವಳಿ ಇದೆ. ಇದೆಲ್ಲಾ ಹೇಗೆ? ಈ ಸ್ಟೋರಿ ನೋಡಿ..

Read Full Story

02:53 PM (IST) Mar 12

ಸುಬ್ರಹ್ಮಣ್ಯ-ಕುಮಾರ ಪರ್ವತ ಚಾರಣ ಬೆಳಗ್ಗೆ 5 ಗಂಟೆಗೆ ಆರಂಭಿಸಲು ಶಾಸಕಿ ಭಾಗೀರಥಿ ಮುರುಳ್ಯ ಒತ್ತಾಯ, ಸಚಿವರ ಭರವಸೆ

ವಿಧಾನಸಭೆಯಲ್ಲಿ ಕುಮಾರ ಪರ್ವತ ಚಾರಣದ ಸಮಯ ಬದಲಾವಣೆ ಕುರಿತು ಚರ್ಚೆ ನಡೆದಿದೆ. ಚಾರಣವನ್ನು ಬೆಳಗ್ಗೆ 5 ಗಂಟೆಗೆ ಆರಂಭಿಸಲು ಶಾಸಕರು ಮನವಿ ಮಾಡಿದರೆ, ಸುರಕ್ಷತೆ ದೃಷ್ಟಿಯಿಂದ ಸಮಯ ಬದಲಿಸಲಾಗಿದೆ ಎಂದು ಅರಣ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಸ್ಥಗಿತಗೊಂಡಿದ್ದ ಸಫಾರಿ ಸೇವೆ ಹಾಗೂ ಅದರ ಸಮಯದ ಬಗ್ಗೆಯೂ ಚರ್ಚೆ ನಡೆಯಿತು.
Read Full Story

02:16 PM (IST) Mar 12

ಲಕ್ಕುಂಡಿ ಚಿನ್ನದ ನಿಧಿ ಪ್ರಕರಣಕ್ಕೆ ಭಾರಿ ಟ್ವಿಸ್ಟ್​ - ಇದು ಎಂಟು ಕೋಟಿಯ ರಹಸ್ಯ! 2 ತಿಂಗಳ ಬಳಿಕ ನಡೆದದ್ದೇನು?

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕಿದ್ದ ಚಿನ್ನದ ನಿಧಿಯ ಮೌಲ್ಯ 8 ಕೋಟಿ ಎಂದು ತಜ್ಞರು ಅಂದಾಜಿಸಿದ್ದಾರೆ. ಪ್ರಾಮಾಣಿಕವಾಗಿ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದ ರಿತ್ತಿ ಕುಟುಂಬ, ಇದೀಗ ಕಾನೂನಿನ ಪ್ರಕಾರ ಹೊಸ ಬೇಡಿಕೆ ಇಟ್ಟಿದ್ದಾರೆ. ಏನದು?

Read Full Story

02:05 PM (IST) Mar 12

ಯಾದಗಿರಿ - ಸುರಪುರ ಬಳಿ ಬೈಕ್‌ಗೆ ಕ್ರೂಸರ್ ಡಿಕ್ಕಿ - ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

Surapur bike cruiser collision:  ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಆಲ್ದಾಳ ಮುಖ್ಯ ರಸ್ತೆಯಲ್ಲಿ ಕ್ರೂಸರ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಕ್ರೂಸರ್ ವಾಹನ ಪಲ್ಟಿಯಾಗಿ ಹಲವರು ಗಾಯಗೊಂಡಿದ್ದಾರೆ. 

Read Full Story

01:56 PM (IST) Mar 12

ಶ್ರೀಶೈಲ ಭಕ್ತರಿಗಾಗಿ ನಿದ್ದೆಯೂ ಮಾಡ್ತಿಲ್ಲ ಕೊಪ್ಪಳದ ವೆಂಕೊಬಾ ಕಾಕಾ; ಇವರೇ ಮಲ್ಲಯ್ಯ ಎಂದ ಜನ್ರು

ಕೊಪ್ಪಳದ ವೆಂಕೊಬಾ ಕಾಕಾ, ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಳ್ಳುವ ಭಕ್ತರಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಆರು ವರ್ಷಗಳಿಂದ ಆಂಧ್ರಪ್ರದೇಶದ ನಂದವಾರಂನಲ್ಲಿ, ನೂರಾರು ಕಿ.ಮೀ. ನಡೆದು ದಣಿದು ಬರುವ ಭಕ್ತರ ಕಾಲುಗಳಿಗೆ ತೈಲ ಮಸಾಜ್ ಮಾಡುವ ಮೂಲಕ ಅವರು ಗಮನ ಸೆಳೆದಿದ್ದಾರೆ. 

Read Full Story

01:36 PM (IST) Mar 12

Bengaluru PG - ಗ್ಯಾಸ್ ಸಿಲಿಂಡರ್ ಇಲ್ಲ, ಇನ್ಮುಂದೆ ರೊಟ್ಟಿ ಸಿಗಲ್ಲ! ವೈರಲ್ ಆಯ್ತು ನೋಟಿಸ್

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಉಂಟಾಗಿದೆ. ಇದರ ಬಿಸಿ ಬೆಂಗಳೂರಿನ ಐಟಿ ಕಾರಿಡಾರ್‌ನಲ್ಲಿರುವ ಪಿಜಿಗಳಿಗೆ ತಟ್ಟಿದೆ. ಹಲವು ಪಿಜಿ ನಿವಾಸಿಗಳಿಗೆ ಸರಿಯಾಗಿ ಊಟ ಕೊಡಲು ಆಗ್ತಿಲ್ಲ. 'ಇನ್ಮುಂದೆ ರೊಟ್ಟಿ ಇಲ್ಲ' ಅಂತ ಪಿಜಿಯೊಂದು ಬೋರ್ಡ್ ಹಾಕಿರೋದು ವೈರಲ್.

Read Full Story

01:28 PM (IST) Mar 12

ಬೆಂಗಳೂರು - ಗ್ಯಾಸ್ ಸಿಲಿಂಡರ್ ಇಲ್ಲದೆ ಹೋಟೆಲ್‌ಗಳು ಸೌದೆ ಒಲೆ ಮೊರೆ, ಮರ ನಾಶವಾಗುವ ಬಗ್ಗೆ ಪರಿಸರವಾದಿಗಳ ಆತಂಕ

ಮಧ್ಯಪ್ರಾಚ್ಯದಲ್ಲಿನ ಇರಾನ್-ಇಸ್ರೇಲ್ ಸಂಘರ್ಷದ ಪರಿಣಾಮವಾಗಿ ಬೆಂಗಳೂರಿನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರಗೊಂಡಿದೆ. ಈ ಬಿಕ್ಕಟ್ಟಿನಿಂದಾಗಿ ಹೋಟೆಲ್ ಮಾಲೀಕರು ಅಡುಗೆ ಮಾಡಲು ಸೌದೆ ಒಲೆಗಳಂತಹ ಪರ್ಯಾಯ ವ್ಯವಸ್ಥೆಗಳಿಗೆ ಮೊರೆ ಹೋಗಿದ್ದು, ಇದು ಪರಿಸರದ ಮೇಲೂ ದುಷ್ಪರಿಣಾಮ ಬೀರುವ ಆತಂಕ ಸೃಷ್ಟಿಸಿದೆ.
Read Full Story

01:13 PM (IST) Mar 12

ಆ ರೀತಿ ಮಾತಾಡೋದು ತಪ್ಪು; ಇದರ ಪರಿಣಾಮ ಕರ್ಣ ಸೀರಿಯಲ್‌ ಮೇಲೂ ಆಗುತ್ತೆ - Kiran Raj Interview

ಧಾರಾವಾಹಿಗಳನ್ನು ವೀಕ್ಷಕರು ವೈಯಕ್ತಿಕವಾಗಿ ತಗೊಳ್ಳುವುದು ಈಗಲೂ ಇದೆ. ಸೀರಿಯಲ್‌ನಲ್ಲಿ ನಡೆಯುವುದೆಲ್ಲ ಸತ್ಯ ಎಂದು ನಂಬಿ, ಹಿಡಿಶಾಪ ಹಾಕುವವರೂ ಇದ್ದಾರೆ. ಈಗ ಕರ್ಣ ಧಾರಾವಾಹಿಯ ಪಾತ್ರಧಾರಿಗಳ ಬಗ್ಗೆ ನೆಗೆಟಿವ್‌ ಕಾಮೆಂಟ್‌ ಮಾಡಲಾಗ್ತಿದೆಯಂತೆ. ನಟ ಕಿರಣ್‌ ರಾಜ್‌ ಈ ಬಗ್ಗೆ ದನಿ ಎತ್ತಿದ್ದಾರೆ.

 

Read Full Story

12:59 PM (IST) Mar 12

ಗ್ಯಾಸ್ ಇಲ್ಲಣ್ಣ ಅಂದ್ರೆ ಅಶೋಕ್, ಸುನಿಲಣ್ಣ ಕೇರಳ ಸ್ಟೋರಿ ಸಿನಿಮಾ ನೋಡ್ತಾರೆ - ಪ್ರದೀಪ್ ಈಶ್ವರ್

ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಉಂಟಾಗಿದೆ. ಈ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದ್ದು, ಇದರಿಂದಾಗಿ ಹೋಟೆಲ್ ಉದ್ಯಮವು ಸೌದೆ ಒಲೆಗಳತ್ತ ಮುಖ ಮಾಡುವಂತಾಗಿದೆ.
Read Full Story

12:37 PM (IST) Mar 12

Karnataka Udyogini scheme failure - ಉದ್ಯೋಗಿನಿ ಯೋಜನೆಗೆ 42,041 ಅರ್ಜಿ ಬಂದರೂ ಯಾರಿಗೂ ಸಿಕ್ಕಿಲ್ಲ ಸಹಾಯಧನ!

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಉದ್ಯೋಗಿನಿ' ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 42,041 ಅರ್ಜಿಗಳು ಬಂದರೂ ಓರ್ವ ಮಹಿಳೆಗೂ ಸಹಾಯಧನ ಬಿಡುಗಡೆಯಾಗಿಲ್ಲ. ಬ್ಯಾಂಕ್‌ಗಳ ಅಸಹಕಾರ ಮತ್ತು ಫಲಾನುಭವಿಗಳ ಆಯ್ಕೆಯಲ್ಲಿನ ವಿಳಂಬವೇ ಇದಕ್ಕೆ ಕಾರಣವೆಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದ್ದು, ನಿಯಮ ಸರಳೀಕರಣಕ್ಕೆ ಚಿಂತನೆ ನಡೆಸಲಾಗಿದೆ.

Read Full Story

12:24 PM (IST) Mar 12

ChatGPT ಹೇಳಿದ ಅಸ್ಸಾಂ ಗೆಲುವಿನ ರಹಸ್ಯವನ್ನು ಹಂಚಿಕೊಂಡ್ರು DCM ಡಿಕೆ ಶಿವಕುಮಾರ್‌

ವಿಧಾನ ಪರಿಷತ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ತಾವು ಚಾಟ್ ಜಿಪಿಟಿ ಬಳಸುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಅಸ್ಸಾಂ ಚುನಾವಣೆ ಗೆಲ್ಲುವುದು ಹೇಗೆ ಎಂದು ಕೇಳಿದಾಗ, ಚಾಟ್ ಜಿಪಿಟಿ 'ಕರ್ನಾಟಕ ಮಾಡೆಲ್' ಅನುಸರಿಸಲು ಸಲಹೆ ನೀಡಿತು ಎಂದು ತಿಳಿಸಿದರು. 

Read Full Story

12:20 PM (IST) Mar 12

Khushbu Sundar Weight Loss - 98kg ಇದ್ದ ಖುಷ್ಬು 55ನೇ ವಯಸ್ಸಿನಲ್ಲಿ ಇಷ್ಟು ಸಣ್ಣಗಾಗಿದ್ದು ಹೇಗೆ? ನಟಿ ಸೀಕ್ರೆಟ್

Khushbu Sundar Weight Loss: ನಟಿ ಖುಷ್ಬು ಸುಂದರ್ ಅವರು‌ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ಮೆರೆದಿದ್ದಾರೆ. ಮದುವೆಯಾಗಿ ಮಗು ಆದಬಳಿಕ ಅವರು ದಪ್ಪಗಾಗಿದ್ದರು, ಸಾಕಷ್ಟು ವರ್ಷ ಅವರು ಇದೇ ತೂಕ ಹೊಂದಿದ್ದರು. ಕೊರೊನಾ ಟೈಮ್‌ನಲ್ಲಿ ಅವರು ಸಣ್ಣಗಾದರು. ಹೇಗೆ ಸಣ್ಣಗಾದೆ ಎಂದು ಅವರು ಹೇಳಿಕೊಂಡಿದ್ದಾರೆ.

 

Read Full Story

12:17 PM (IST) Mar 12

ರಾಮನಗರ - ಅತ್ತೆ ಸೊಸೆ ಜಗಳ - 19 ವರ್ಷದ ಗರ್ಭಿಣಿ ಸೊಸೆ ನಯನಾ ಸಾವಿಗೆ ಶರಣು

ರಾಮನಗರ ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಕೌಟುಂಬಿಕ ಕಲಹದಿಂದ ಮನನೊಂದು 19 ವರ್ಷದ ಗರ್ಭಿಣಿ ನಯನಾ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾರೆ.

Read Full Story

12:15 PM (IST) Mar 12

ರಾಜ್ಯದ 230 ಆರೋಗ್ಯ ಸಮುದಾಯ ಕೇಂದ್ರಗಳಿಗೆ ಕುತ್ತು? ಯಾವ ಜಿಲ್ಲೆಗಳಿಗೆ ಎಷ್ಟು?

ಕರ್ನಾಟಕ ಸರ್ಕಾರ 230 ಸಮುದಾಯ ಆರೋಗ್ಯ ಕೇಂದ್ರಗಳನ್ನು ಕೆಳದರ್ಜೆಗಿಳಿಸಲು ಮುಂದಾಗಿದೆ. ಹೆರಿಗೆ ಸಂಖ್ಯೆ ಆಧರಿಸಿ ತಜ್ಞ ವೈದ್ಯರನ್ನು ವರ್ಗಾಯಿಸುವ ಈ ನಿರ್ಧಾರದಿಂದ ಗ್ರಾಮೀಣ ಆರೋಗ್ಯ ಸೇವೆಗೆ ಕುತ್ತು ಬಂದಿದೆಯೇ? 

Read Full Story

More Trending News