Jul 28, 2018, 5:27 PM IST
ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಆರಂಭವಾಗಿದೆ. ರಾಜ್ಯರಾಜಕಾರಣಕ್ಕೆ ಮರಳಲು ಸಿದ್ಧವಾಗಿರುವ ಶೋಭಾ ಕರಾಂದ್ಲಾಜೆ ತಮ್ಮ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಆಪ್ತ ಜೀವರಾಜ್ರನ್ನು ಕಣಕ್ಕಿಳಿಸಲು ಲೆಕ್ಕಾಚಾರ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದಲ್ಲಿ ಉಡುಪಿಯಿಂದ ಸ್ಪರ್ಧಿಸಲು ಬಯಸುತ್ತಿರುವ ಪಕ್ಷದ ಪ್ರಮುಖ ನಾಯಕ ಡಿ.ವಿ. ಸದಾನಂದ ಗೌಡರಿಗೆ ಇದು ಹಿನ್ನಡೆಯನ್ನುಂಟುಮಾಡಲಿದೆ.