ಸಿಎಂ ಹೊಸ ರೂಲ್ಸಿಗೆ ಸಾರ್ವಜನಿಕರ ಪರದಾಟ!

Oct 3, 2018, 4:45 PM IST

ಅಧಿಕಾರಿಗಳ ಕೆಲಸಕ್ಕೆ ಅಡ್ಡಿಯಾಗ್ತಿದ್ದಾರಾ ಸಿಎಂ ಕುಮಾರಸ್ವಾಮಿ? ಇಂತಹ ಪ್ರಶ್ನೆಯೊಂದು ಇದೀಗ ಉದ್ಭವವಾಗಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಲಾದ ಅರ್ಜಿಗಳಿಗೆ ಸಮರ್ಪಕವಾದ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಿಎಂ ಪ್ರಮಾಣವಚನದ ಖರ್ಚಿಗೆ ಸಂಬಂಧಿಸಿದಂತೆ ಮಾಹಿತಿ ಬಹಿರಂಗವಾಗಿ ಮಾಧ್ಯಮಗಳಲ್ಲಿ ಚರ್ಚೆ ನಡೆದ ಬೆನ್ನಲೇ ಸಿಎಂ ಇಂತಹದ್ದೊಂದು ಸೂಚನೆ ನೀಡಿದ್ದಾರೆನ್ನಲಾಗಿದೆ. ಪರಿಣಾಮವಾಗಿ, ಸಾರ್ವಜನಿಕರು ಮಾಹಿತಿಗಾಗಿ ಪರದಾಡುವಂತಾಗಿದೆ.