Jul 24, 2018, 1:00 PM IST
ವಿಚಾರವಾದಿ ಪ್ರೊ ಕೆ ಎಸ್ ಭಗವಾನ್ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಾರಪೇಟೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು ಹಲವಾರು ಸ್ಫೋಟಕ ವಿಚಾರಗಳನ್ನು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 750 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದು ವಿಚಾರವಾದಿ ಭಗವಾನ್ಗೆ ಗುಂಡು ಹಾರಿಸಲು ಮುಂದಾಗಿದ್ದು ಯಾರು.?ಗುಂಡು ಎಲ್ಲಿಂದ ತರಲಾಗಿತ್ತು? ಕೆ ಟಿ ನವೀನ್ ಕುಮಾರ್ ಹಿನ್ನೆಲೆ ಏನು? ಯಾವ ಪ್ರಮುಖ ಕಾರಣಕ್ಕೆ ಭಗವಾನ್ ಹತ್ಯೆಗೆ ಪ್ಲಾನ್ ರೂಪಿಸಲಾಗಿತ್ತು? ಎಂಬ ಹಲವಾರು ಅಂಶಗಳನ್ನು ತಿಳಿಸಲಾಗಿದೆ.