ತುಮಕೂರು ಗ್ರಾಮಾಂತರ ಎಎಸ್ ಐ ಉಮೇಶ್, ಮಾನಸಿಕ ಅಸ್ವಸ್ಥೆ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಖಾಸಗಿ ಬಲೆರೋ ವಾಹನದಲ್ಲಿ ಕರೆದುಕೊಂಡು ಹೋಗಿ ನೀಚಕೃತ್ಯವಸೆಗಿದ್ದಾನೆ. ಮಾನಸಿಕ ಅಸ್ವಸ್ಥೆಯಾಗಿರುವ ಯುವತಿ ನಿನ್ನೆ ಮನೆಬಿಟ್ಟು ಅಂತರಸನಹಳ್ಳಿ ಕಡೆ ಹೋಗುತ್ತಿದ್ದಳು. ರಾತ್ರಿ ಪಾಳಯದಲ್ಲಿದ್ದ ಎಎಸ್ ಐ ಉಮೇಶ್ ತಡರಾತ್ರಿ ಸುಮಾರು 2 ಗಂಟೆಗೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಯುವತಿಯಿಂದ ಅಣ್ಣನ ಪೋನ್ ನಂಬರ್ ತೆಗೆದುಕೊಂಡು ಪೋನ್ ಮಾಡಿ ೪ ಗಂಟೆ ಸುಮಾರಿಗೆ ಯುವತಿ ಮನೆಗೆ ಬಿಟ್ಟು ಬಂದಿದ್ದಾನೆ. ಮನೆಗೆ ತಲುಪಿದ ಮೇಲೆ ಸಂತ್ರಸ್ತೆ, ಕುಟುಂಬಸ್ಥರಿಗೆ ಪೊಲೀಸಪ್ಪನ ನೀಚ ಕೃತ್ಯದ ಬಗ್ಗೆ ವಿವರಿಸಿದ್ದಾಳೆ.
ತುಮಕೂರು(ಜ.15): ಗೃಹ ಸಚಿವ ಪರಮೇಶ್ವರ ತವರು ಜಿಲ್ಲೆಯಲ್ಲಿ ಪೊಲೀಸರಿಂದ ಮಾನಗೇಡಿ ಕೆಲಸ ನಡೆದಿದೆ. ಆರಕ್ಷಕರೇ ಭಕ್ಷಕರಾಗಿದ್ದಾರೆ. ತುಮಕೂರು ಗ್ರಾಮಾಂತರ ಎಎಸ್ ಐ ಉಮೇಶ್, ಮಾನಸಿಕ ಅಸ್ವಸ್ಥೆ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಖಾಸಗಿ ಬಲೆರೋ ವಾಹನದಲ್ಲಿ ಕರೆದುಕೊಂಡು ಹೋಗಿ ನೀಚಕೃತ್ಯವಸೆಗಿದ್ದಾನೆ. ಮಾನಸಿಕ ಅಸ್ವಸ್ಥೆಯಾಗಿರುವ ಯುವತಿ ನಿನ್ನೆ ಮನೆಬಿಟ್ಟು ಅಂತರಸನಹಳ್ಳಿ ಕಡೆ ಹೋಗುತ್ತಿದ್ದಳು. ರಾತ್ರಿ ಪಾಳಯದಲ್ಲಿದ್ದ ಎಎಸ್ ಐ ಉಮೇಶ್ ತಡರಾತ್ರಿ ಸುಮಾರು 2 ಗಂಟೆಗೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಯುವತಿಯಿಂದ ಅಣ್ಣನ ಪೋನ್ ನಂಬರ್ ತೆಗೆದುಕೊಂಡು ಪೋನ್ ಮಾಡಿ ೪ ಗಂಟೆ ಸುಮಾರಿಗೆ ಯುವತಿ ಮನೆಗೆ ಬಿಟ್ಟು ಬಂದಿದ್ದಾನೆ. ಮನೆಗೆ ತಲುಪಿದ ಮೇಲೆ ಸಂತ್ರಸ್ತೆ, ಕುಟುಂಬಸ್ಥರಿಗೆ ಪೊಲೀಸಪ್ಪನ ನೀಚ ಕೃತ್ಯದ ಬಗ್ಗೆ ವಿವರಿಸಿದ್ದಾಳೆ.
ಇಂದು ಮಧ್ಯಾಹ್ನ ಪೋಷಕರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಎಸ್ಪಿ ಇಶಾ ಪಂತ್ ಮಹಿಳಾ ಠಾಣೆಗೆ ಆಗಮಿಸಿ ಇಬ್ಬರನ್ನೂ ವಿಚಾರಣೆ ನಡೆಸಿದ್ದಾರೆ. ಆರೋಪಿ ಉಮೇಶ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಹಾಗಾಗಿ, ಐಪಿಸಿ ಸಕ್ಷಂ ೩೭೬, ೨೦೨, ೩೭ರ ಅಡಿ ಪ್ರಕರಣ ದಾಖಲಾಗಿದೆ. ಎಫ್ ಐ ಆರ್ ದಾಖಲಿಸಿ ಅಮಾನತು ಮಾಡಲಾಗಿದೆ.