Jul 15, 2018, 12:21 PM IST
ತುಮಕೂರು(ಜು.15): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೋರ್ವ ತನ್ನ ಹೆಂಡತಿ ಮತ್ತು ಸ್ವಂತ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಕಾಂತಯ್ಯನ ಪಾಳ್ಯದಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ನಾರಾಯಣಸ್ವಾಮಿ ತನ್ನ ಪತ್ನಿ ಸೌಮ್ಯಳೊಂದಿಗೆ ಮನಸ್ತಾಪ ಹೊಂದಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪತ್ನಿ ಸೌಮ್ಯಳೊಂದಿಗೆ ಜಗಳ ತೆಗೆದ ನಾರಾಯಣಸ್ವಾಮಿ, ಕೋಪದಲ್ಲಿ ಸೌಮ್ಯಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ಈ ವೇಳೆ ಸೊಸೆಯ ರಕ್ಷಣೆಗೆ ಮುಂದಾದ ತಂದೆ ಈರಣ್ಣ ಅವರನ್ನೂ ನಾರಾಯಣಸ್ವಾಮಿ ಕೊಚ್ಚಿ ಕೊಲೆ ಮಾಡಿದ್ದಾನೆ. ಇಷ್ಟೆಲ್ಲ ಆಗುವಾಗ ನಾರಾಯಣಸ್ವಾಮಿ ತಂದೆ ಮತ್ತು ಪತ್ನಿಯನ್ನು ಕೊಲೆ ಮಾಡುವಾಗ ಆತನ ನಾಲ್ಕು ವರ್ಷದ ಮಗಳು ಕೀರ್ತನಾ ಪಕ್ಕದಲ್ಲೇ ಇದ್ದಳು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..