ಕನಕನಮರಡಿ ದುರಂತ ಕುಟುಂಬಗಳಿಗೆ ಸುಮಲತಾ ಸಹಾಯ

Jan 16, 2019, 12:33 PM IST

ಮಂಡ್ಯದ ಗಂಡು ಅಂಬರೀಶ್ ಇನ್ನಿಲ್ಲವಾದರೂ ಜನಮಾನಸದಲ್ಲಿ ಮಾತ್ರ ಅವರ ನೆನಉ ಅಜರಾಮರ. ಮಂಡ್ಯದ ಜನರಿಗೆ ಅಂಬಿ ಎಂದರೆ ಅಪಾರ ಪ್ರೀತಿ. ಅವರಿಗೂ ಅಷ್ಟೇ. ಯಾರೇ ಕಷ್ಟ ಎಂದೂ ಬಂದರೂ ಹಿಂದೆ ಕಳಿಸುತ್ತಿರಲಿಲ್ಲ. ಈಗ ಅವರ ಈ ಕೆಲಸವನ್ನು ಸುಮಲತಾ, ಅಭಿಷೇಕ್ ಮುಂದುವರಸಿಕೊಂಡು ಹೋಗುತ್ತಿದ್ದಾರೆ. ಸುಮಲತಾ, ಅಭಿಷೇಕ್ ಕಮ್ಮನಮರಡಿ ಅಪಘಾತದಲ್ಲಿ ಮಡಿದ ಕುಟುಂಬದವರಿಗೆ ಸಾಂತ್ವನ ಹೇಳಿದರು. ಚೆಕ್ ವಿತರಿಸಿದರು. ಇವರ ಈ ಕಾರ್ಯ ಜನಮೆಚ್ಚುಗೆಗೆ ಕಾರಣವಾಗಿದೆ.