ಶಿರಾಡಿ ಘಾಟ್ ದುರಸ್ತಿಗೆ ಎಷ್ಟು ದಿನ ಬೇಕು? ಸರ್ಕಾರಕ್ಕೆ ಒಂದೇ ಪ್ರಶ್ನೆ

Published : Aug 24, 2018, 07:18 PM ISTUpdated : Sep 09, 2018, 10:15 PM IST
ಶಿರಾಡಿ ಘಾಟ್ ದುರಸ್ತಿಗೆ ಎಷ್ಟು ದಿನ ಬೇಕು? ಸರ್ಕಾರಕ್ಕೆ ಒಂದೇ ಪ್ರಶ್ನೆ

ಸಾರಾಂಶ

ಬೆಂಗಳೂರು ಮತ್ತು ಮಂಗಳೂರನ್ನು ಸಂಪರ್ಕಿಸುವ ಶಿರಾಡಿ ಘಾಟ್ ನಲ್ಲಿ ಮಳೆ ಅಬ್ಬರ ಸಂಚಾರ ಅಸಾಧ್ಯ ಎಂಬಂತೆ ಮಾಡಿದ್ದು ಗೊತ್ತೆ ಇದೆ. ಈಗ ಮಳೆ ನಿಂತಿದ್ದು ರಾಜಕಾರಣಿಗಳ ನಡುವೆ ಕೆಸರೆರೆಚಾಟ ಆರಂಭವಾಗಿದೆ. ಇನ್ನೊಂದುಕಡೆ ಶುಕ್ರವಾರ ಬೆಳಗ್ಗೆಯಿಂದಲೇ #connectustoMangalore ಹಾಷ್ ಟ್ಯಾಗ್ ಟ್ರೆಂಡ್ ಆಗುತ್ತಿದೆ. ಏನಿದು ಕತೆ ಇಲ್ಲಿದೆ ಫುಲ್ ಡಿಟೇಲ್ಸ್..

ಬೆಂಗಳೂರು[ಆ.24] ಒಂದು ಕಡೆ ರಾಜ್ಯದ ಲೋಕೋಪಯೋಗಿ ಇಲಾಖೆ ಶಿರಾಡಿ ಘಾಟ್ ದುರಸ್ತಿಗೆ ತಿಂಗಳುಗಟ್ಟಲೆ ಬೇಕು ಎಂದು ಹೇಳುತ್ತಿದೆ. ಈ ಬಗ್ಗೆ ಅನೇಕ ಮಾಧ್ಯಮಗಳಲ್ಲೂ ವರದಿಯಾಗಿದೆ.  ಲೋಕೋಪಯೋಗಿ ಸಚಿವ ರೇವಣ್ಣ ಅವರಿಗೆ ಪತ್ರ ಬರೆದಿರುವ ಕೇಂದ್ರ ಸಚಿವ ಸದಾನಂದ ಗೌಡ, ರಸ್ತೆ ರಿಪೇರಿಗೆ ಒಂದು ವಾರ ಸಾಕು, ತಿಂಗಳು ಗಟ್ಟಲೇ ಬೇಕಾಗಿಲ್ಲ. ಕೂಡಲೇ ರಾಜ್ಯ ಸರಕಾರ ಕಾರ್ಯ ನಿರತವಾಗಬೇಕು ಎಂದು ವಿನಂತಿ ಮಾಡಿಕೊಂಡಿದ್ದಾರೆ.

ನಾಲ್ಕಾರು ಕಡೆ ಮಾತ್ರ ಸಮಸ್ಯೆ ಇದ್ದು ಒಂದು ವಾರದಲ್ಲಿ ಎಲ್ಲವನ್ನು ಬಗೆಹರಿಸಬಹುದು ಎಂದು ಸದಾನಂದ ಗೌಡರು ಹೇಳಿದ್ದಾರೆ. ಗೌಡರ ಮಾತಿಗೆ ಸೋಶಿಯಲ್ ಮೀಡಿಯಾದಲ್ಲಿ ಧ್ವನಿಗೂಡಿಸಿರುವ ನಾಗರಿಕರು, ಮಂಗಳೂರು ಭಾಗದ ಅನೇಕರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ, ಇದು ತುರ್ತಾಗಿ ಆಗಬೇಕಾದ ಕೆಲಸ, ಕೇವಲ ಮಳೆ ಒಂದೆ ಕಾರಣಕ್ಕೆ ಎರಡು ನಗರಗಳ ನಡುವಿನ ಪ್ರಮುಖ ದಾರಿಯನ್ನೇ ಬಂದ್ ಮಾಡುವುದು ಸರಿ ಅಲ್ಲ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಂಡವಾಳ ಆಕರ್ಷಣೆಗೆ ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ: ಸಚಿವ ಎಂ.ಬಿ.ಪಾಟೀಲ್‌
ಬೀಚ್‌ಗಳಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ಬಗ್ಗೆ ಚರ್ಚೆ: ಡಿ.ಕೆ.ಶಿವಕುಮಾರ್‌