ತೇಲಿ ಬಂತು ಮತ್ತೊಂದು ಸುದ್ದಿ, ರಮೇಶ್ ಜಾರಕಿಹೊಳಿಗೆ ಡಿಸಿಎಂ ಹುದ್ದೆ?

Sep 18, 2018, 12:07 PM IST

ಜಾರಕಿಹೊಳಿ ಬ್ರದರ್ಸ್ ಮುನಿಸಿನಿಂದ ಮೈತ್ರಿ ಸರ್ಕಾರ ಅಲಗಾಡುತ್ತಿದೆ. ಇದ್ರಿಂದ ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಭಿನ್ನಾಭಿಪ್ರಾಯಕ್ಕೆ ಮುಲಾಮು ಹಚ್ಚಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಾಗಿದ್ದು, ಈ ಬಗ್ಗೆ ಸೋಮವಾರ ರಮೇಶ್ ಜಾರಕಿಹೊಳಿ ಜೊತೆ ಮಾತುಕತೆ ನಡೆಸಿದರು.ತಮಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿ. ಇಲ್ಲ ಡಿಸಿಎಂ ಹುದ್ದೆಗೆ ಸರಿಸಮಾನವಾದ ಸ್ಥಾನ ನೀಡಿ.ನನಗೆ ಬಿಜೆಪಿಯಿಂದ ಡಿಸಿಎಂ ಆಫರ್ ಬಂದಿದ್ದು, ನನಗೆ ಸ್ವತಂತ್ರವಾಗಿ ಬಿಟ್ಟುಬಿಡಿ ಎಂದು ಸಿದ್ದರಾಮಯ್ಯ ಅವರಿಗೆ ರಮೇಶ್ ಖಡಕ್ ಆಗಿ ಹೇಳಿದ್ದಾರೆ.