ನಿಮ್ಮೆಲ್ಲರಲ್ಲೂ ಕಾಂಗ್ರೆಸ್ ಜೀವಂತ ಇದೆ: ರಾಹುಲ್!

Jul 20, 2018, 9:33 PM IST

ನವದೆಹಲಿ(ಜು.20): ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡನೆಯಾಗಿದೆ. ಈ ವೇಳೆ ಅವಿಶ್ವಾಸ ನಿರ್ಣಯದ ಪರ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿ ಕಾರ್ಯವೈಖರಿ ವಿರುದ್ಧ ಹರಿಹಾಯ್ದರು.

ತಮ್ಮ ಸುದೀರ್ಘ ಭಾಷಣದಲ್ಲಿ ಮೋದಿ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿದ ರಾಹುಲ್, ಬಿಜೆಪಿಯಿಂದ ದ್ವೇಷದ ರಾಜಕಾರಣ ನಡೆಯುತ್ತಿದೆ ಎಂದು ಹರಿಹಾಯ್ದರು. ಇದೇ ವೇಳೆ ಬಿಜೆಪಿಯರಿಗೆ ತಮ್ಮ ಮೇಲೆ ದ್ವೇಷ ಇದೆ, ಆದರೆ ನನ್ನ ಹೃದಯದಲ್ಲಿ ಅವರ ಕುರಿತು ಗೌರವ ಇದೆ ಎಂದು ರಾಹುಲ್ ಹೇಳಿದರು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..