
ನವದೆಹಲಿ: ದಶಕಗಳ ಹಿಂದೆ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ಹೋಗಿ, ಬಳಿಕ ಅಲ್ಲೇ 15 ವರ್ಷ ಕಳೆದು, 2 ವರ್ಷಗಳ ಹಿಂದೆ ಮರಳಿದ್ದ ಕಿವುಡು ಮತ್ತು ಮೂಗ ಅನಾಥ ಯುವತಿ ಗೀತಾಗೆ ಇದೀಗ ವಿವಾಹದ ಸಂಭ್ರಮ. ವಿಶೇಷವೆಂದರೆ ಆಕೆಗೆ ಮದುವೆ ಮಾಡಿಸಲು ಮುಂದೆ ನಿಂತು ವ್ಯವಸ್ಥೆ ಮಾಡಿಕೊಡುತ್ತಿರುವುದು ಸ್ವತಃ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್.
ಗೀತಾ ಭಾರತಕ್ಕೆ ಬಂದಾಗಿನಿಂದಲೂ ಆಕೆಯ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಿರುವ ಸಚಿವೆ ಸುಷ್ಮಾ, ಇದೀಗ ವಧೂ-ವರರ ಕೇಂದ್ರದ ನೆರವಿನ ಮೂಲಕ ಅರ್ಹ ಮೂಗ- ಕಿವುಡ ವರನ ಹುಡುಕಾಟ ನಡೆಸಿದ್ದಾರೆ. ಇತ್ತೀಚೆಗೆ ಇಂಥದ್ದೇ ಒಬ್ಬ ಹುಡುಗ ಸಿಕ್ಕಿದ್ದು, ಆತನನ್ನು ಸುಷ್ಮಾ ತಮ್ಮ ದೆಹಲಿ ನಿವಾಸಕ್ಕೆ ಕರೆಸಿಕೊಂಡು ಮಾತನಾಡಿದ್ದಾರೆ.
ಆದರೆ ಈ ಪ್ರಸ್ತಾವವನ್ನು ಗೀತಾ ತಿರಸ್ಕರಿಸಿದ್ದಾಳೆ. ಹೀಗಾಗಿ ಅರ್ಹ ವರನಿಗಾಗಿ ಹುಡುಕಾಟ ಮುಂದುವರೆದಿದ್ದು, ಇದೀಗ ಯೋಧ, ಎಂಜಿನಿಯರ್, ಜ್ಯೋತಿಷಿ, ರೈತರು ಸೇರಿ ಹಲವರಿಂದ ಪ್ರಸ್ತಾಪ ಬಂದಿದೆ. ಇವರೆಲ್ಲಾರಿಗೂ ನೀವು ಗೀತಾಳನ್ನೇ ಏಕೆ ಮದುವೆಯಾಗ ಬಯಸಿದ್ದೀರಿ ಎಂಬದೂ ಸೇರಿ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಈ ಪೈಕಿ ಯಾರಾದರೂ ಅರ್ಹ ವರ ಸಿಕ್ಕಿದರೆ ಶೀಘ್ರವೇ ವಿವಾಹ ನೆರವೇರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.