ಬಂಗಾರಪ್ಪ ಮಕ್ಕಳು ಹಾಗೂ ಗೌಡರ ಮಕ್ಕಳು ಅ್ಷಟೇ ರಾಜ್ಯದಲ್ಲಿ ರಾಜಕೀಯ ಮಾಡಬೇಕೆ ಎಂದು ಸಾಹಿತಿ ಕುಂ ವೀರಬದ್ರಪ್ಪ ಕುಟುಂಬ ರಾಜಕಾರಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡ : ‘ರಾಜಕಾರಣ ಬರೀ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಂಗಾರಪ್ಪನಂಥವರಿಗೆ ಮಾತ್ರ ಸೀಮಿತವೇ? ಅವರು ಹಾಗೂ ಅವರ ಮಕ್ಕಳು, ಮೊಮ್ಮಕ್ಕಳೇ ರಾಜಕೀಯ ಮಾಡಬೇಕಾ? ಅವರೇ ಎಂಎಲ್ಎ ಆಗಬೇಕಾ? ವಿಧಾನಸೌಧ ಇವರ ಅಪ್ಪನ ಮನೆಯ ಜಹಾಗೀರಾ?’’ ಕುಟುಂಬ ರಾಜಕಾರಣದ ವಿರುದ್ಧ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಟೀಕಿಸಿದ ರೀತಿ ಇದು.
ಕರ್ನಾಟಕ ನವ ನಿರ್ಮಾಣ ಸೇನೆ ಧಾರವಾಡದಲ್ಲಿ ಬುಧವಾರ ಆಯೋಜಿಸಿದ್ದ ಪ್ರತ್ಯೇಕ ರಾಜ್ಯಅಧಿಕಾರಕ್ಕೋ ಅಥವಾ ಅಭಿವೃದ್ಧಿಗೋ ವಿಷಯ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿ, ಎಲ್ಲ ಪಕ್ಷದ ರಾಜಕಾರಣಿಗಳೂ ತಮ್ಮ ಮಕ್ಕಳನ್ನು ರಾಜಕೀಯದಲ್ಲಿ ಮುನ್ನಡೆಸಲು ಯತ್ನಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ನೀವೇ ತುಂಬಿಕೊಂಡಿರಬೇಕಾ? ನಾವೂ ಚುನಾವಣೆಗೆ ನಿಲ್ಲಬೇಕು, ನಾವೂ ಎಂಎಲ್ಎ ಆಗಬೇಕೆಂಬ ಆಸೆ ಯುವಕರಿಗಿದ್ದು ಇದನ್ನು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ದೇಶದ ದೊಡ್ಡಶಕ್ತಿ ಯುವಕರಾಗಿದ್ದು, ರಾಜ್ಯದ ಭವಿಷ್ಯ ರೂಪಿಸುವಲ್ಲಿ ಪಣತೊಡಿ ಎಂದರು.
ಉತ್ತರ ಕರ್ನಾಟಕದ ಅಭಿವೃದ್ಧಿಯ ಹಿನ್ನಡೆಗೆ ಈ ಭಾಗದ ಜನಪ್ರತಿನಿಧಿಗಳೇ ಹೊರತು ಬೇರಾರು ಅಲ್ಲ. ಇಲ್ಲಿನ ರಾಜಕಾರಣಿಗಳು ತುಂಬಾ ಡೇಂಜರ್. ಉತ್ತರ ಕರ್ನಾಟಕದಲ್ಲಿ ನಿರುಪದ್ರವಿ ಪ್ರಜೆಗಳಿದ್ದಾರೆ. ಹಿಂದೆ ಬಂದರೆ ಒದೆಯೋದಿಲ್ಲ, ಮುಂದೆ ಬಂದರೆ ಹಾಯೋದಿಲ್ಲ ಎಂಬುದನ್ನು ಅರಿತ ಜನಪ್ರತಿನಿಧಿಗಳು ಅಭಿವೃದ್ಧಿಗೆ ಬಂದ ಹಣವನ್ನು ಕಮೀಶನ್ ಆಧಾರದಲ್ಲಿ ಗಬಗಬನೆ ತಿನ್ನುತ್ತಿದ್ದಾರೆ. ಜನ ನೀರು, ಆಹಾರಕ್ಕಾಗಿ ಪರದಾಡುತ್ತಿದ್ದರೆ, ಈ ಭಾಗದ ಜನಪ್ರತಿನಿಧಿಗಳು ರಾಜಧಾನಿಯಲ್ಲಿ ಡಾಲರ್ಸ್ ಕಾಲೋನಿ, ಜಯನಗರ, ಸದಾಶಿವನಗರದಲ್ಲಿ ಮನೆ ಮಾಡಿಕೊಂಡು ವಿಲಾಸಿ ಜೀವನ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಒಬ್ಬೊಬ್ಬರು ಹತ್ತತ್ತು ಸೈಟ್ಗಳನ್ನು ಮಾಡಿಟ್ಟಿದ್ದಾರೆ. ಅವರ ಮಕ್ಕಳನ್ನು ಆಸ್ಪ್ರೇಲಿಯಾ, ಜರ್ಮನ್ ದೇಶಗಳಲ್ಲಿ ಕಲಿಸುತ್ತಿದ್ದಾರೆ. ಇವರನ್ನು ಹೀಗೆ ಬಿಟ್ಟರೆ ಇಡೀ ಕರ್ನಾಟಕವನ್ನು ನುಂಗಿ ನೀರು ಕುಡಿಯುತ್ತಾರೆ ಎಂದು ಟೀಕಿಸಿದರು.
ಪಾವಿತ್ರ್ಯ ಕಳೆದುಕೊಂಡ ಸೌಧ: ವಿಧಾನಸೌಧದಲ್ಲಿ ಈಗ ಮೊದಲಿದ್ದ ಪಾವಿತ್ರ್ಯ ಉಳಿದಿಲ್ಲ. ಬಿಗ್ ಬಜಾರ್ ರೀತಿ ಆಗಿದೆ. ಶಾಸಕರನ್ನು ಕೋಟಿ-ಕೋಟಿಗೆ ಹರಾಜು ಹಾಕುವ ಸಂತೆಯಾಗಿದೆ. ಜನಪ್ರತಿನಿಧಿಗಳು ಕೋಳಿ, ಕುರಿ, ನಾಯಿಗಳಾ? ಅವರನ್ನು ಎಲ್ಲೆಲ್ಲಿಯೋ ಕರೆದುಕೊಂಡು ಹೋಗಿ ಬಚ್ಚಿಡಲಾಗುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಅರಾಜಕತೆ ಉಂಟಾಗುತ್ತಿದೆ. ಇದರೊಂದಿಗೆ ಧರ್ಮದ ಹೆಸರಿನಲ್ಲಿ ಹಲ್ಲೆಗಳು ನಡೆಯುತ್ತಿವೆ. ನೈತಿಕ ಪೊಲೀಸ್ಗಿರಿ ನಡೆಯುತ್ತಿದೆ. ಸ್ಥಳೀಯ ಸಮಸ್ಯೆಗಳಿಂದ ಹೀಗಾಗುತ್ತಿದ್ದು, ಸ್ಥಳೀಯವಾಗಿ ಆ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಪ್ರಯತ್ನಗಳು ನಡೆಯಬೇಕಿದೆ ಎಂದರು.
ಇವೇವೇಳೆ ಉತ್ತರ ಕರ್ನಾಟಕದ ರಾಜಕಾರಣಿಗಳ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ ಅವರು, ಉತ್ತರ ಕರ್ನಾಟಕವು ಅಭಿವೃದ್ಧಿಯಲ್ಲಿ ಹಿಂದೆ ಬೀಳಲು ಇಲ್ಲಿನ ರಾಜಕಾರಣಿಗಳೇ ಕಾರಣ ಹೊರತು ಬೇರಾರೂ ಅಲ್ಲ. ಅಭಿವೃದ್ಧಿಯ ಹಣವನ್ನು ಕಮೀಶನ್ ಆಧಾರದ ಮೇಲೆ ನುಂಗುತ್ತಿದ್ದಾರೆ. ಆದ್ದರಿಂದ ಅಭಿವೃದ್ಧಿಗಾಗಿ ನಿಮ್ಮ ಜನಪ್ರತಿನಿಧಿಗಳನ್ನೇ ಪ್ರಶ್ನಿಸಿ ಎಂದರು.
ಈ ಜನಪ್ರತಿನಿಧಿಗಳ ಕೊರಳು ಪಟ್ಟಿಹಿಡಿದು ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕೆ ಹೊರತು ಪ್ರತ್ಯೇಕ ಕರ್ನಾಟಕದ ಮಾತು ಬೇಡ ಎಂಬ ಸಲಹೆಯನ್ನು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ನೀಡಿದರು. ಉತ್ತರ ಕರ್ನಾಟಕದಲ್ಲಿ ನಿರುಪದ್ರವಿ ಪ್ರಜೆಗಳಿದ್ದಾರೆ. ಹಿಂದೆ ಬಂದರೆ ಒದೆಯೋದಿಲ್ಲ, ಮುಂದೆ ಬಂದರೆ ಹಾಯೋದಿಲ್ಲ ಎಂಬುದನ್ನು ಅರಿತ ಜನಪ್ರತಿನಿಧಿಗಳು ಅಭಿವೃದ್ಧಿಗೆ ಬಂದ ಹಣವನ್ನು ಕಮೀಶನ್ ಆಧಾರದಲ್ಲಿ ಗಬಗಬನೆ ತಿನ್ನುತ್ತಿದ್ದಾರೆ. ವಿಲಾಸಿ ಹೋಟೆಲ್ಗಳಲ್ಲಿ ಕುಳಿತು ಅಧಿಕಾರಿಗಳೊಂದಿಗೆ ಕಮಿಶನ್ ವ್ಯವಹಾರ ಮಾಡುತ್ತಿದ್ದಾರೆ. ಈ ಭಾಗದ ಜನ ನೀರು, ಆಹಾರಕ್ಕಾಗಿ ಪರದಾಡುತ್ತಿದ್ದರೆ, ಈ ಭಾಗದ ಜನಪ್ರತಿನಿಧಿಗಳು ರಾಜಧಾನಿಯಲ್ಲಿ ಡಾಲರ್ಸ್ ಕಾಲೋನಿ, ಜಯನಗರ, ಸದಾಶಿವನಗರದಲ್ಲಿ ಮನೆ ಮಾಡಿಕೊಂಡು ವಿಲಾಸಿ ಜೀವನ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಒಬ್ಬೊಬ್ಬರು ಹತ್ತತ್ತು ಸೈಟ್ಗಳನ್ನು ಮಾಡಿಟ್ಟಿದ್ದಾರೆ. ಅವರ ಮಕ್ಕಳನ್ನು ಆಸ್ಪ್ರೇಲಿಯಾ, ಜರ್ಮನ್ ದೇಶಗಳಲ್ಲಿ ಕಲಿಸುತ್ತಿದ್ದಾರೆ. ಇವರನ್ನು ಹೀಗೆ ಬಿಟ್ಟರೆ ಇಡೀ ಕರ್ನಾಟಕವನ್ನು ನುಂಗಿ ನೀರು ಕುಡಿಯುತ್ತಾರೆ ಎಂದು ಆರೋಪಿಸಿದರು.