ಈಗಾಗಲೇ ‘ರಿಲಯನ್ಸ್ ಜಿಯೋ’ ಸಿಮ್ ಮೂಲಕ ಮೊಬೈಲ್ ಫೋನ್ ವಲಯದಲ್ಲಿ ಧೂಳೆಬ್ಬಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಈಗ ಚಿಲ್ಲರೆ ಕಿರಾಣಿ ಕ್ಷೇತ್ರಕ್ಕೂ ಕಾಲಿಡುತ್ತಿದ್ದಾರೆ.
ಮುಂಬೈ: ಈಗಾಗಲೇ ‘ರಿಲಯನ್ಸ್ ಜಿಯೋ’ ಸಿಮ್ ಮೂಲಕ ಮೊಬೈಲ್ ಫೋನ್ ವಲಯದಲ್ಲಿ ಧೂಳೆಬ್ಬಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಈಗ ಚಿಲ್ಲರೆ ಕಿರಾಣಿ ಕ್ಷೇತ್ರಕ್ಕೂ ಕಾಲಿಡುತ್ತಿದ್ದಾರೆ.
ಕಿರಾಣಿ ಅಂಗಡಿಕಾರರು ಮತ್ತು ಜಿಯೋ ಸಿಮ್ ಬಳಕೆದಾರರ ನಡುವೆ ಸಂಪರ್ಕ ಸೇತುವಿನಂತೆ ಕಾರ್ಯ ನಿರ್ವಹಿಸಲಿದ್ದಾರೆ. ಆಯ್ದ ಕಿರಾಣಿ ಅಂಗಡಿಕಾರರ ಜತೆ ರಿಲಯನ್ಸ್ ಜಿಯೋ ಕಂಪನಿ ಒಪ್ಪಂದ ಮಾಡಿಕೊಳ್ಳಲಿದೆ.
ಇದೇ ವೇಳೆ ಈ ಅಂಗಡಿಗಳಲ್ಲಿ ಕಿರಾಣಿ ಸಾಮಾನು ಖರೀದಿಸಲು ಇಚ್ಛಿಸುವ ಜಿಯೋ ಸಿಮ್ ಬಳಕೆದಾರರಿಗೆ ಅಂಬಾನಿ ಡಿಸ್ಕೌಂಟ್ ಕೂಪನ್ ವಿತರಿಸುತ್ತಾರೆ.