ಕಾವೇರಿ ನೀರು ಕೇಳಿದ ರಜನಿಕಾಂತ್‌ಗೆ ಎಚ್‌ಡಿಕೆ ತಿರುಗೇಟು

May 20, 2018, 7:42 PM IST

ತಮಿಳುನಾಡಿಗೆ ನೀರು ಬಿಡಬೇಕೆಂದು ಒತ್ತಡ ಹಾಕಿದ ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ಗೆ, ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ನಮ್ಮ ಬಳಿ ನೀರಿದ್ದರೆ ತಾನೇ ತಮಿಳುನಾಡಿಗೆ ನೀರು ಕೊಡೋದು? ಎಂದು ಎಚ್‌ಡಿಕೆ ಪ್ರಶ್ನಿಸಿದ್ದಾರೆ.