ಮುಂಗಾರು ಅಬ್ಬರ: ಬೋಟ್ ಮುಳುಗಡೆ; ಇಬ್ಬರು ಮೀನುಗಾರರು ನಾಪತ್ತೆ

May 29, 2018, 5:48 PM IST

ಕರ್ನಾಟಕ ಕರಾವಳಿಯಲ್ಲಿ ಮುಂಗಾರು ಅಬ್ಬರ ಶುರುವಾಗಿದೆ.  ಹೊನ್ನಾವರದ ಬಳಿ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ. ಬೋಟ್‌ನಲ್ಲಿ 6 ಮೀನುಗಾರರಿದ್ದರು ಎನ್ನಲಾಗಿದೆ. ಅವರ ಪೈಕಿ ನಾಲ್ವರನ್ನು ರಕ್ಷಿಸಲಾಗಿದೆ. ನಾಪತ್ತೆಯಾಗಿರುವ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.