Oct 21, 2018, 9:22 PM IST
ಸಾಂಸ್ಕೃತಿಕ ರಾಜಧಾನಿಗೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಎಸ್ ವೈ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ತರಾಟೆಗೆ ತೆಗೆದುಕೊಂಡರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೋಟೆನು ಯಡಿಯೂರಪ್ಪನ ಜೇಬಲ್ಲೇನು ಇಲ್ಲ. ಶೋಭಾ ಮಾತಿಗೂ ಪ್ರತಿಕ್ರಿಯಿಸಿದ ಸಿದ್ದು ಅವರ ಹಲ್ಲೆನು ಬಿಗಿಯಾಗಿದೀಯಾ ಬೆಂಗಳೂರಿನ ರಾಜಾಜಿ ನಗರದಲ್ಲಿ ಅವರು ಸೋತಿಲ್ಲವೇ. ಬಿಜೆಪಿಯವರು ಒಣ ಜಂಬ ಬಿಡಬೇಕು. ನಮ್ಮ ಸರ್ಕಾರ ಸುಭದ್ರವಾಗಿದೆ ಯಾವುದೆ ಕಾರಣಕ್ಕೂ ಸರ್ಕಾರ ಬಿಳುವುದಿಲ್ಲ. ಅವರು ನೀಡಿದ ಹಲವು ಡೆಡ್ ಲೈನ್ ಗಳು ಮುಗಿದೆವೆ ಎಂದು ವಾಗ್ದಾಳಿ ನಡೆಸಿದರು.