ಕರುಣಾನಿಧಿ ಸ್ಥಿತಿ ಚಿಂತಾಜನಕ: ತಮಿಳುನಾಡಿದಾದ್ಯಂತ 1 ಲಕ್ಷ ಪೊಲೀಸರ ನಿಯೋಜನೆ!

Jul 30, 2018, 10:05 AM IST

ಡಿಎಂಕೆ ನಾಯಕ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಆರೋಗ್ಯ ಚಿಂತಾಜನಕವಾಗಿದ್ದು, ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಕ್ಷದ ಕಾರ್ಯಕರ್ತರು,  ಅಭಿಮಾನಿಗಳು ಕಾವೇರಿ ಆಸ್ಪತ್ರೆ ಹೊರಗೆ ಬೀಡು ಬಿಟ್ಟಿದ್ದಾರೆ. ತಮಿಳುನಾಡಿದಾದ್ಯಂತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.