ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಸುವರ್ಣ ನ್ಯೂಸ್ ಜೊತೆ ಕಂಬಾರರ ಮಾತುಕತೆ

Jan 4, 2019, 11:50 AM IST

ಕರ್ನಾ​ಟಕ ಏಕೀಕರಣ ಹೋರಾಟದ ಕೇಂದ್ರ ಬಿಂದುವಾಗಿದ್ದ ಧಾರ​ವಾ​ಡ​ದ ನೆಲವೀಗ ಆರು ದಶ​ಕ​ಗಳ ಬಳಿಕ ಮತ್ತೊಂದು ‘ಅಕ್ಷರ ತೇರು’ ಎಳೆಯಲು ಸಜ್ಜಾಗಿ ನಿಂತಿದೆ. ನಾಡಿನ ಕಲೆ,​ ಸಂಸ್ಕೃತಿ, ಪರಂಪರೆಯ ಪ್ರಜ್ಞೆ​ಯನ್ನು ಜಾಗೃತಗೊಳಿಸುವ, ಮೂರು ದಿನ ಕಾಲ ನಡೆಯುವ 84ನೇ ಸಾಹಿತ್ಯ ಸಮ್ಮೇಳನಕ್ಕೆ ಸಾಂಸ್ಕೃತಿಕ ನಗರಿ ಧಾರವಾಡ ಸಾಕ್ಷಿಯಾಗಲಿದೆ. ಸಮ್ಮೇಳನದ ಅಧ್ಯಕ್ಷತೆಯನ್ನು ಚಂದ್ರವಶೇಖರ್ ಕಂಬಾರರು ವಹಿಸಿದ್ದಾರೆ. ಸಮ್ಮೇಳನದ ಬಗ್ಗೆ, ಯಾವೆಲ್ಲಾ ವಿಚಾರಗಳು ಚರ್ಚೆಯಾಗುತ್ತವೆ ಎನ್ನುವ ಬಗ್ಗೆ  ಸುವರ್ಣ ನ್ಯೂಸ್ ಜೊತೆ ಕಂಬಾರರು ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ.