ಉಗ್ರರಿಂದ ಬಿಜೆಪಿ ಕಾರ್ಯಕರ್ತನ ಹತ್ಯೆ

By Web DeskFirst Published Aug 22, 2018, 1:26 PM IST
Highlights

ಜಮ್ಮು ಕಾಶ್ಮೀರದಲ್ಲಿ ಈದ್ ಹಬ್ಬದಂದೇ ನಡೆದ ಉಗ್ರರ ಗುಂಡಿಗೆ ಬಿಜೆಪಿ ಕಾರ್ಯಕರ್ತ ಶಬೀರ್ ಭಟ್ ಬಲಿಯಾಗಿದ್ದಾರೆ. ನಿವಾಸದಲ್ಲಿ ಇದ್ದ ವೇಳೆಯೇ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.

ಕಾಶ್ಮೀರ :  ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ  ಬಿಜೆಪಿ ಕಾರ್ಯಕರ್ತ  ಶಬೀರ್ ಅಹ್ಮದ್  ಬಟ್ ಮೃತಪಟ್ಟಿದ್ದಾರೆ. ಈದ್ ಹಬ್ಬದಂದೇ ಉಗ್ರರ ಗುಂಡೇಟಿಗೆ  ಭಟ್ ಬಲಿಯಾಗಿದ್ದಾರೆ. 

ಭಟ್ ಅವರು ಪುಲ್ವಾಮ ಜಿಲ್ಲೆಯ  ರಖ್ ಇ ಲಿಟ್ಟರ್ ಹಳ್ಳಿಯ ತಮ್ಮ ನಿವಾಸದಲ್ಲಿ ಇದ್ದ ವೇಳೆಯೇ ಈ ದುರ್ಘಟನೆ ಸಂಭವಿಸಿದೆ. 

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಈ ಘಟನೆಯನ್ನು ಖಂಡಿಸಿದ್ದು ಇದೊಂದು ಅತ್ಯಂತ ಅಮಾನವೀಯ ಘಟನೆ ಎಂದು ಹೇಳಿದ್ದಾರೆ. 

ಈ ಬಗ್ಗೆ ಅವರು ಟ್ವಿಟ್ಟರ್ ನಲ್ಲಿಯೂ ಕೂಡ ಬರೆದುಕೊಂಡು ಭಟ್ ಹತ್ಯೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.  ಬಿಜೆಪಿಯ ಪ್ರತೀ ನಾಯಕರೂ ಕೂಡ ಶಬೀರ್ ಅವರ ಕುಟುಂಬದೊಂದಿಗೆ ಇದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.  ಅಲ್ಲದೇ ಅವರ ಕುಟುಂಬಕ್ಕೆ ದೇವರು ದುಃಖವನ್ನು ತಡೆಯುವ ಶಕ್ತಿಯನ್ನು ನೀಡಲಿ ಎಂದು ಹೇಳಿದ್ದಾರೆ. 

 

Anguished to learn about the killing of BJP karyakarta, Shabir Ahmad Bhat by terrorists in Pulwama (J&K). This act of cowardice is highly condemnable. Extremists cannot stop the youth of Kashmir from choosing a better future for themselves. This cycle of violence won't last long. pic.twitter.com/hAOb4ptPeo

— Amit Shah (@AmitShah)
click me!