ಸುವರ್ಣ ನ್ಯೂಸ್ ವರದಿಗೆ ಸಿಕ್ತು ಜಯ; ರಾಮಗಿರಿ ಜನರ ಸಮಸ್ಯೆ ಬಗೆಹರಿಸುವುದಾಗಿ ಸಚಿವರ ಭರವಸೆ

Jun 18, 2018, 12:29 PM IST

ಬೆಂಗಳೂರು (ಜೂ. 18): ವಿದ್ಯುನ್ಮಾನ ಮಾಧ್ಯಮದಲ್ಲೆ ಹೊಚ್ಚ ಹೊಸ ಸಾಹಸಕ್ಕೆ ಮುಂದಾದ ಸುವರ್ಣ ನ್ಯೂಸ್’ಗೆ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಿಕ್ಕಿದೆ. ಜನರ ಸಮಸ್ಯೆಗೆ ಧ್ವನಿಯಾಗುವ ಬಿಗ್-3 ವಿನೂತನ ಕಾರ್ಯಕ್ರಮದ ಮೊದಲ ದಿನವಾದ ಇಂದು ಹೊಳಲ್ಕರೆ ತಾಲೂಕಿನ ರಾಮಗಿರಿ ಜನರ ಗೋಳನ್ನು ಬಿಚ್ಚಿಟ್ಟಿತ್ತು. ಸುವರ್ಣ ನ್ಯೂಸ್ ವರದಿ ಬಿತ್ತರವಾಗುತ್ತಿದ್ದಂತೆ ಅಧಿಕಾರಿಗಳು, ಶಾಸಕರು ಎಚ್ಚೆತ್ತುಕೊಂಡಿದ್ದಾರೆ. ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಇನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ.