ನಿಗದಿಯಂತೆ ಆಯುಷ್ಯ ಹೋಮ ಮಾಡಿದ್ರೆ ಅಂಬಿ ಬದುಕುತ್ತಿದ್ದರಾ?

Nov 26, 2018, 11:01 AM IST

ಅಂಬರೀಶರನ್ನು ನೆನೆದು ಜಗ್ಗೇಶ್ ಭಾವುಕರಾಗಿದ್ದಾರೆ. ಅಂಬರೀಶ್ ಜಾತಕದಲ್ಲಿ ಸ್ವಲ್ಪ ಸಮಸ್ಯೆಯಿತ್ತು. ಆಯುಷ್ಯ ಹೋಮ ಮಾಡೋಣ ಎಂದು ಜ್ಯೋತಿಷಿಯೊಬ್ಬರು ತಿಳಿಸಿದ್ದರಂತೆ. ಅದರಂತೆ ನವೆಂಬರ್ 12 ಕ್ಕೆ ಹೋಮ ಮಾಡಬೇಕೆಂದು ನಿಗದಿಯಾಗಿತ್ತು. ಆದರೆ ಅನಂತ್ ಕುಮಾರ್ ನಿಧನದಿಂದ ಅದು ಮುಂದೂಡಲ್ಪಟ್ಟಿತು. ಕೊನೆಗೆ ನಡೆದಿದ್ದು ವಿಧಿ ಲಿಖಿತ ಎಂದು ಜಗ್ಗೇಶ್ ಹೇಳಿದರು.