ದೇವನಹಳ್ಳಿ ಶಾಸಕರು ವಿಕೃತ ಕಾಮಿ ಅಂದಿದ್ದು ಯಾರಿಗೆ?

Jul 1, 2018, 8:26 PM IST

ಪಿಎಸ್ ಐ ಶ್ರೀನಿವಾಸ ಒಬ್ಬ ವಿಕೃತ ಕಾಮಿ ಎಂದು ದೇವನಹಳ್ಳಿ ಶಾಸಕ ಜೆಡಿಎಸ್ ನ ನಿಸರ್ಗ ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೇ ಪಿಎಸ್ ಐ ಶ್ರೀನಿವಾಸ ಜನರಿಂದ ಲಕ್ಷಾಂತರ ರೂ. ಲಂಚ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಶಾಸಕರ ಈ ಹೇಳಿಕೆ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಪರ -ವಿರೋಧದ ಅಭಿಪ್ರಾಯ ಕೇಳಿ ಬಂದಿದೆ.  ಶಾಸಕರ ಹೇಳಿಕೆ ವಿರುದ್ಧ ಕಾನೂನು ಹೋರಾಟ ಮಾಡಲು ಪಿಎಸ್ ಐ ಶ್ರೀನಿವಾಸ ನಿರ್ಧಾರ ಮಾಡಿದ್ದಾರೆ.