ಅಮಾನವೀಯ ಶಿಕ್ಷೆಗೊಳಗಾಗಿದ್ದ ಮಹಿಳೆಗೆ ಬಂಧ ಮುಕ್ತಿ

Jul 19, 2018, 6:35 PM IST

ಚಿತ್ರದುರ್ಗ: ಅಮಾನವೀಯ ಶಿಕ್ಷೆಗೊಳಗಾಗಿದ್ದ ಮಹಿಳೆಗೆ ಬಂಧನದಿಂದ ಮುಕ್ತಿಗೊಳಿಸಿ, ರಕ್ಷಿಸಿದ್ದಾರೆ ಪೊಲೀಸ್ ಅಧಿಕಾರಿಗಳು. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಕೋನಾಪುರದಲ್ಲಿ ಸರಸ್ವತಿ ಎಂಬ ಮಾನಸಿಕ ಅಸ್ವಸ್ಥೆ ಕಾಲಿಗೆ ಸರಪಳಿ ಕಟ್ಟಿ, ಬಂಧಿಸಿಡಲಾಗಿತ್ತು.  ಸ್ಥಳಕ್ಕೆ ಧಾವಿಸಿದ ಪೋಲಿಸರು ಪರಿಶೀಲನೆ ನಡೆಸಿ, ಸಂತ್ರಸ್ಥೆ ಕಾಲಿಗೆ ಕಟ್ಟಿದ್ದ ಸರಪಳಿ ಬಿಚ್ಚಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.