Published : Mar 19, 2026, 07:00 AM ISTUpdated : Mar 19, 2026, 11:58 PM IST

Karnataka News Live: ದಾವಣಗೆರೆಯಲ್ಲಿ ಬಹುಕೋಟಿ ಉದ್ಯೋಗ ವಂಚನೆ - ಹಿರೇಉಡ ತಾಂಡಾ ವಂಚಕರ ವಿರುದ್ಧ ಕ್ರಮಕ್ಕೆ 15 ದಿನಗಳ ಗಡುವು!

ಸಾರಾಂಶ

ಇಂದು ಯುಗಾದಿ ಹಬ್ಬದ ಸಂಭ್ರಮ. ರಾಜ್ಯದೆಲ್ಲೆಡೆ ಹಬ್ಬದ ವಾತಾವರಣ ಕಳೆಗೆಟ್ಟಿದೆ. ಬೆಂಗಳೂರಿನಲ್ಲಿ ಹಬ್ಬದ ಖರೀದಿ ಜೋರಾಗಿ ನಡೆಯುತ್ತಿದೆ. ಕೆಆರ್ ಮಾರುಕಟ್ಟೆಯಲ್ಲಿ ಕಿಕ್ಕಿರಿದು ಜನ ತುಂಬಿದ್ದಾರೆ. ಹೂವು,ಹಣ್ಣು, ಮಾವಿನ ಸೊಪ್ಪು, ಬೇವಿನಸೊಪ್ಪು ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ಮಧ್ಯರಾತ್ರಿಯಿಂದಲೇ ಕೆ.ಆರ್ ಮಾರ್ಕೆಟ್ ನಲ್ಲಿ ವ್ಯಾಪಾರ ಆರಂಭಗೊಂಡಿದೆ. ಮತ್ತೊಂದೆಡೆ ರಾಜ್ಯದಲ್ಲಿ ರಾಜಕೀಯ ರಂಗು ಪಡೆದುಕೊಂಡಿದೆ. ಒಂದೆಡೆ ಉಪ ಚುನಾವಣೆ ಕಾವು ಏರತೊಡಗಿದರೆ ಮತ್ತೊಂದೆಡೆ ಮಂಡ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ.

Davanagere job scam

11:58 PM (IST) Mar 19

ದಾವಣಗೆರೆಯಲ್ಲಿ ಬಹುಕೋಟಿ ಉದ್ಯೋಗ ವಂಚನೆ - ಹಿರೇಉಡ ತಾಂಡಾ ವಂಚಕರ ವಿರುದ್ಧ ಕ್ರಮಕ್ಕೆ 15 ದಿನಗಳ ಗಡುವು!

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಿರೇಉಡ ತಾಂಡಾದಲ್ಲಿ ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ನೂರಾರು ನಿರುದ್ಯೋಗಿಗಳಿಂದ ಸುಮಾರು ₹60 ಕೋಟಿ ವಂಚಿಸಲಾಗಿದೆ. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರೈತ ಸಂಘ ಒತ್ತಾಯಿಸಿದ್ದು, ಪೊಲೀಸರ ನಿಷ್ಕ್ರಿಯತೆ ವಿರುದ್ಧ 15 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.
Read Full Story

11:43 PM (IST) Mar 19

8 ವರ್ಷಗಳ ಬಳಿಕ ಕೃಷಿ ಇಲಾಖೆಯಲ್ಲಿ ನೇಮಕಾತಿ - 945 ಹುದ್ದೆಗಳ ಭರ್ತಿಗೆ ಮೂರು ತಿಂಗಳೊಳಗೆ ಮುಹೂರ್ತ - ಚಲುವರಾಯ

ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು, ಕೃಷಿ ಇಲಾಖೆಯ 945 ಗ್ರೂಪ್‌ ‘ಬಿ’ ಮತ್ತು ‘ಸಿ’ ವೃಂದದ ಹುದ್ದೆಗಳನ್ನು ಮೂರು ತಿಂಗಳೊಳಗೆ ಭರ್ತಿ ಮಾಡುವುದಾಗಿ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ. ಒಳ ಮೀಸಲಾತಿ ಕಾರಣದಿಂದ ರದ್ದಾಗಿದ್ದ ಹಿಂದಿನ ಅಧಿಸೂಚನೆಯ ಬದಲಿಗೆ, ಹೊಸ ನೇಮಕಾತಿ ಅಧಿಸೂಚನೆಗೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
Read Full Story

11:17 PM (IST) Mar 19

ಬಾಗಲಕೋಟೆ, ದಾವಣಗೆರೆಯಲ್ಲಿ ಬಿಜೆಪಿ ಗೆಲುವು ಖಚಿತ - ಸಂಸದ ಗೋವಿಂದ ಕಾರಜೋಳ

ಎರಡೂ ಕ್ಷೇತ್ರಗಳಲ್ಲಿ ಯಾವುದೇ ಬಂಡಾಯ ಇಲ್ಲ.ಬಾಗಲಕೋಟೆ ಹಾಗೂ ದಾವಣಗೆರೆ ಉಪ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಗೆಲುವು ಸಾಧಿಸಲಿದೆ ಎಂದು ಸಂಸದ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.

Read Full Story

11:16 PM (IST) Mar 19

ಅಮೆರಿಕಾದ F-35 ಯುದ್ಧ ವಿಮಾನಕ್ಕೂ ಹೊಡೆಯಿತಾ ಇರಾನ್ - ಅಮೆರಿಕಾ ಹೇಳಿದ್ದೇನು?

ಇರಾನ್-ಅಮೆರಿಕಾ-ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಅಮೆರಿಕದ ಎಫ್-35 ಫೈಟರ್ ಜೆಟ್ ಮೇಲೆ ಇರಾನ್ ದಾಳಿ ನಡೆಸಿದೆ ಎನ್ನಲಾಗಿದೆ. ಅಲ್ಲದೇ ತನ್ನ ಮೂಲಸೌಕರ್ಯಗಳ ಮೇಲೆ ಮತ್ತೊಮ್ಮೆ ದಾಳಿಯಾದರೆ ಸಂಯಮ ತೋರುವುದಿಲ್ಲ ಎಂದು ಇರಾನ್  ತನ್ನ ಶತ್ರುರಾಷ್ಟ್ರಗಳಾದ ಅಮೆರಿಕಾ ಹಾಗೂ ಇಸ್ರೇಲ್‌ಗೆ ಎಚ್ಚರಿಸಿದೆ.

Read Full Story

11:02 PM (IST) Mar 19

ರೀಲ್ಸ್ ಹುಚ್ಚಿಗೆ ಬಿಜೆಪಿ ನಾಯಕನ ಪುತ್ರ ಬಲಿ, ಘಟನೆ ಒಂದು ಪಾಠ ಎಂದ ಶಾಸಕ ಮಹೇಶ್ ಟೆಂಗಿನಕಾಯಿ, ಜಾಲತಾಣ ಬ್ಯಾನ್ ಯಾರಿಗೆ?

ಹುಬ್ಬಳ್ಳಿಯಲ್ಲಿ ಸಾಮಾಜಿಕ ಜಾಲತಾಣಕ್ಕಾಗಿ ರೀಲ್ಸ್ ಮಾಡುವಾಗ ನಡೆದ ಅಪಘಾತದಲ್ಲಿ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಬಿಜೆಪಿ ಮುಖಂಡರ ಪುತ್ರನಾದ ಈತ, ಬೈಕ್ ಮತ್ತು ಕಾರಿನ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದು, ಈ ಘಟನೆಯು ಯುವಕರಲ್ಲಿ ಹೆಚ್ಚುತ್ತಿರುವ ರೀಲ್ಸ್ ಹುಚ್ಚಾಟದ ಅಪಾಯಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

10:33 PM (IST) Mar 19

ಬೆಂಗಳೂರು ಮನೆ ಮಾಲೀಕರ 'ಡೆಪಾಸಿಟ್' ವಂಚನೆ - ₹70 ಸಾವಿರ ಪಡೆದು ₹18 ಸಾವಿರ ವಾಪಸ್; ಯುವತಿಯ ಆಕ್ರೋಶ ವೈರಲ್!

ಬೆಂಗಳೂರಿನ ಯಶವಂತಪುರದಲ್ಲಿ, ಮನೆ ಮಾಲೀಕರು ಆಸ್ತಿ ಮಾರಾಟದ ನಂತರ ಯುವತಿಯೊಬ್ಬರಿಗೆ ನೀಡಬೇಕಿದ್ದ ₹70,000 ಸೆಕ್ಯೂರಿಟಿ ಡೆಪಾಸಿಟ್‌ನಲ್ಲಿ ₹52,000 ಕಡಿತಗೊಳಿಸಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಮಗಾದ ಅನ್ಯಾಯದ ಬಗ್ಗೆ ಯುವತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋ ವೈರಲ್ ಆಗಿದೆ.

Read Full Story

09:58 PM (IST) Mar 19

ಬೆಂಗಳೂರು - ಪ್ರೀತ್ಸೇ..ಪ್ರೀತ್ಸೇ.. 3 ಮಕ್ಕಳ ತಾಯಿ ಹಿಂದೆ ಬಿದ್ದ ಯುವಕ, ಒಪ್ಪದ್ದಕ್ಕೆ ಮಹಿಳೆಯನ್ನು ಕೊಂದೇ ಬಿಟ್ಟ!

ಬೆಂಗಳೂರಿನ ಚಂದ್ರಾ ಲೇಔಟ್ ವ್ಯಾಪ್ತಿಯಲ್ಲಿ, ಫಿರ್ದೋಸ್ ಭಾನು ಎಂಬ ವಿವಾಹಿತ ಮಹಿಳೆಯನ್ನು ಪ್ರೀತಿ ನಿರಾಕರಿಸಿದ ಕಾರಣಕ್ಕೆ ಅಫೀಸ್ ಎಂಬಾತ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಈ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ, ಆರೋಪಿ ಮಹಿಳೆಯನ್ನು ಹಿಂಬಾಲಿಸಿ ಈ ಕೃತ್ಯ ಎಸಗಿದ್ದು, ಸದ್ಯ ಪರಾರಿಯಾಗಿದ್ದಾನೆ.
Read Full Story

09:31 PM (IST) Mar 19

ಹಾವೇರಿ - ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ; 10ಕ್ಕೂ ಅಧಿಕ ಎಮ್ಮೆಗಳು ಸಜೀವ ದಹನ, ರೈತ ಕಂಗಾಲು!

ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ರೈತರೊಬ್ಬರಿಗೆ ಸೇರಿದ 10ಕ್ಕೂ ಹೆಚ್ಚು ಎಮ್ಮೆಗಳು ಸಜೀವ ದಹನವಾಗಿವೆ. ಇದು ತಿಂಗಳ ಅವಧಿಯಲ್ಲಿ ನಡೆದ ಐದನೇ ಬೆಂಕಿ ಅವಘಡವಾಗಿದ್ದು, ಗ್ರಾಮಸ್ಥರು ಕಿಡಿಗೇಡಿಗಳ ಕೃತ್ಯದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
Read Full Story

09:03 PM (IST) Mar 19

ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ - ರೀಲ್ಸ್ ಹುಚ್ಚಿಗೆ ಬಿಜೆಪಿ ಮುಖಂಡ ವೀರೇಶ್‌ ಸಂಗಳದ ಪುತ್ರ ಬಲಿ!

ಹುಬ್ಬಳ್ಳಿಯಲ್ಲಿ ಸಾಮಾಜಿಕ ಜಾಲತಾಣದ ರೀಲ್ಸ್ ಮಾಡುವಾಗ ನಡೆದ ಭೀಕರ ಅಪಘಾತದಲ್ಲಿ ಬಿಜೆಪಿ ಮುಖಂಡನ 15 ವರ್ಷದ ಪುತ್ರ ನಮೀಷ್ ಸಂಗಳದ ಮೃತಪಟ್ಟಿದ್ದಾನೆ. ಅತೀ ವೇಗವಾಗಿ ಬೈಕ್ ಮತ್ತು ಆಡಿ ಕಾರು ಚಲಾಯಿಸುವ ಸಾಹಸದ ವಿಡಿಯೋ ಚಿತ್ರೀಕರಿಸುವಾಗ ಈ ದುರಂತ ಸಂಭವಿಸಿದ್ದು, ಕಾರು ಚಲಾಯಿಸುತ್ತಿದ್ದವನೂ ಅಪ್ರಾಪ್ತನಾಗಿದ್ದ.
Read Full Story

08:48 PM (IST) Mar 19

ಸರ್ಕಾರಿ ನೌಕರರ ವರ್ಗಾವಣೆಗೆ 'ಸಿಎಂ ಹಸ್ತಕ್ಷೇಪ' ಸಲ್ಲದು, ಮಾಡಲು ಇದಕ್ಕಿಂತ ದೊಡ್ಡ ಕೆಲಸಗಳಿವೆ - ಹೈಕೋರ್ಟ್ ತರಾಟೆ!

ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಮುಖ್ಯಮಂತ್ರಿಗಳ ಕಚೇರಿಯ ನೇರ ಹಸ್ತಕ್ಷೇಪಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವರ್ಗಾವಣೆ ವಿಚಾರಗಳನ್ನು ಆಯಾ ಇಲಾಖೆಗಳಿಗೆ ಬಿಡಬೇಕು ಮತ್ತು ಸಿಎಂ ಇಂತಹ ಸಣ್ಣ ವಿಚಾರಗಳಲ್ಲಿ ಸಮಯ ವ್ಯಯಿಸಬಾರದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Read Full Story

08:46 PM (IST) Mar 19

ಕೊಡಗಿನಲ್ಲಿ ಆನೆ-ಮಾನವ ಸಂಘರ್ಷಕ್ಕೆ ಕಟ್ಟುನಿಟ್ಟಿನ ಕ್ರಮ - ಸಚಿವ ಈಶ್ವರ್ ಖಂಡ್ರೆ ಸೂಚನೆ

ಮಾನವ-ಆನೆ ಸಂಘರ್ಷ ನಿಯಂತ್ರಣಕ್ಕೆ ತೋಡಲಾಗಿರುವ ಆನೆ ಕಂದಕ ಮತ್ತು ಅಳವಡಿಸಿರುವ ತೂಗು ಸೌರಬೇಲಿಯ ಸಮರ್ಪಕ ನಿರ್ವಹಣೆ ಮಾಡುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.

Read Full Story

08:23 PM (IST) Mar 19

ಯುಗಾದಿಗೆ ರಿಷಬ್ ಶೆಟ್ಟಿ ಭರ್ಜರಿ ನ್ಯೂಸ್‌ - 'ಅಧ್ಯಾಯ 2' ಘೋಷಿಸಿದ ಡಿವೈನ್ ಸ್ಟಾರ್; ಯಾವ ಸಿನಿಮಾ ಇದು?

ಯುಗಾದಿ ಹಬ್ಬದಂದು ನಟ ರಿಷಬ್ ಶೆಟ್ಟಿ ತಮ್ಮ ನಿರ್ಮಾಣ ಸಂಸ್ಥೆಯಡಿ ಹೊಸ ಸಿನಿಮಾವನ್ನು ಘೋಷಿಸಿದ್ದಾರೆ. 'ಅಧ್ಯಾಯ ಎರಡು ಇಲ್ಲಿಂದ ಶುರು' ಎಂಬ ಪೋಸ್ಟರ್ ಹಂಚಿಕೊಂಡಿದ್ದು, ಇದು 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ'ಯ ಮುಂದುವರಿದ ಭಾಗವೇ ಅಥವಾ 'ಕಾಂತಾರ' ಸರಣಿಯ ಹೊಸ ಚಿತ್ರವೇ ಎಂಬ ಕುತೂಹಲ ಮೂಡಿಸಿದೆ.
Read Full Story

08:21 PM (IST) Mar 19

1948ರ ಮುಸ್ಲಿಂ ವಿವಾಹ ಆಮಂತ್ರಣ ಪತ್ರಿಕೆ ವೈರಲ್​ - ಕನ್ನಡದಲ್ಲಿ ಏನು ಬರೆದಿದ್ದಾರೆ ನೋಡಿ

1948ರಲ್ಲಿ ಮುದ್ರಣಗೊಂಡ ಮುಸ್ಲಿಂ ಸಮುದಾಯದ ಮದುವೆ ಆಮಂತ್ರಣ ಪತ್ರಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ಗುರುಮಹಮ್ಮದ್ ಪ್ರಸನ್ನ' ಎಂದು ಆರಂಭವಾಗುವ ಈ ಪತ್ರಿಕೆಯಲ್ಲಿ ಬಳಸಲಾದ ಅಚ್ಚ ಕನ್ನಡ ಪದಗಳು ಮತ್ತು ಅಂದಿನ ಸಾಮರಸ್ಯದ ಕುರಿತು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Read Full Story

08:05 PM (IST) Mar 19

ಕರಾವಳಿಯಲ್ಲಿ ನಾಳೆ 'ಈದುಲ್ ಫಿತ್ರ್' ಸಂಭ್ರಮ - ಚಂದ್ರದರ್ಶನ ಹಿನ್ನೆಲೆ ಶುಕ್ರವಾರ ಈದ್ ಆಚರಣೆಗೆ ಖಾಝಿಗಳ ಘೋಷಣೆ

ಶವ್ವಾಲ್ ತಿಂಗಳ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಾಳೆ 'ಈದುಲ್ ಫಿತ್ರ್' ಹಬ್ಬವನ್ನು ಆಚರಿಸಲು ಜಿಲ್ಲಾ ಖಾಝಿಗಳು ಘೋಷಿಸಿದ್ದಾರೆ. ಒಂದು ತಿಂಗಳ ರಂಜಾನ್ ಉಪವಾಸದ ಬಳಿಕ ಕರಾವಳಿಯಾದ್ಯಂತ ಹಬ್ಬದ ಸಂಭ್ರಮ ಮನೆಮಾಡಿದ್ದು, ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗೆ ಸಿದ್ಧತೆ ನಡೆದಿದೆ.
Read Full Story

07:40 PM (IST) Mar 19

'ಸೆರಗ ಸರ್ಸೆ' ವಿವಾದದ ಬೆನ್ನಲ್ಲೇ ಸೋಷಿಯಲ್​ ಮೀಡಿಯಾದ ಎಲ್ಲಾ ಖಾತೆ ಡಿಲೀಟ್ ಮಾಡಿದ ಗಾಯಕಿ​- ಆಗಿದ್ದೇನು

ಕೆಡಿ ಚಿತ್ರದ 'ಸೆರಗ ಸರ್ಸೆ' ಹಾಡಿನ ಅಶ್ಲೀಲ ಸಾಹಿತ್ಯದ ವಿವಾದ ಭುಗಿಲೆದ್ದಿದೆ. ನಿರ್ದೇಶಕ ಪ್ರೇಮ್ ಕ್ಷಮೆಯಾಚಿಸಿದ್ದರೆ, ನಟಿ ನೋರಾ ಫತೇಹಿ ಸಾಹಿತ್ಯದ ಅರ್ಥ ತಿಳಿದಿರಲಿಲ್ಲ ಎಂದಿದ್ದಾರೆ. ಈ ನಡುವೆ, ಗಾಯಕಿ ಐಶ್ವರ್ಯಾ ರಂಗರಾಜನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ.

Read Full Story

07:37 PM (IST) Mar 19

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ - ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಘೋಷಣೆ

ಪ್ರಸಕ್ತ ವರ್ಷದಲ್ಲಿ ರಾಜ್ಯದ ಐದು ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರಿ ಮಾಂಟೆಸ್ಸರಿ (ಎಲ್‌ಕೆಜಿ-ಯುಕೆಜಿ) ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ತಿಳಿಸಿದ್ದಾರೆ.

Read Full Story

07:20 PM (IST) Mar 19

ಒಂದೇ ಫ್ರೇಮ್​ನಲ್ಲಿ ಸ್ಟಾರ್​ ನಟರ ಯುಗಾದಿ ವಿಷ್​ - ರಾಜ್​, ಅಪ್ಪು, ವಿಷ್ಣು, ಅಂಬಿ ​ಕಂಡು ಫ್ಯಾನ್ಸ್​ ಪುಳಕ- AI Video Viral

ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾದ ವಿಡಿಯೋವೊಂದು ಯುಗಾದಿ ಹಬ್ಬದಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ರಿಂದ ಹಿಡಿದು ಯಶ್, ದರ್ಶನ್, ಸುದೀಪ್‌ರಂತಹ ಇಂದಿನ ನಟರವರೆಗೆ ಎಲ್ಲರನ್ನೂ ಒಂದೇ ಫ್ರೇಮ್‌ನಲ್ಲಿ ಒಟ್ಟಿಗೆ ತರಲಾಗಿದೆ.
Read Full Story

06:34 PM (IST) Mar 19

ದಿನವಿಡೀ ಕುಡೀತಿದ್ರಾ ರಾಮ ಶ್ಯಾಮ ಭಾಮ ನಟಿ ಊರ್ವಶಿ? ರಂಗನಾಥನ್ ಹೇಳಿದ ಆ ಶಾಕಿಂಗ್ ಸತ್ಯವೇನು?

ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಹಿರಿಯನಟಿ ಊರ್ವಶಿ ಅವರಿಗೆ ವಿಪರೀತ ಕುಡಿಯುವ ಅಭ್ಯಾಸವಿತ್ತು ಎಂದು ನಟ ಹಾಗೂ ಪತ್ರಕರ್ತ ಬಯಿಲ್ವಾನ್ ರಂಗನಾಥನ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

Read Full Story

06:29 PM (IST) Mar 19

ಈ ಕನ್ನಡ ಸೀರಿಯಲ್ಸ್​ ನಟರ ಬದಲಾವಣೆಗೆ ದೇವರ ಮೊರೆ ಹೋದ ವೀಕ್ಷಕರು! ಅಷ್ಟಕ್ಕೂ ಆಗಿದ್ದೇನು?

ಬಹುತೇಕ ಕನ್ನಡ ಧಾರಾವಾಹಿಗಳು ಮಹಿಳಾ ಪ್ರಧಾನವಾಗಿದ್ದು, ಇದರಲ್ಲಿನ ನಾಯಕ ಪಾತ್ರಗಳನ್ನು ಪೆದ್ದು ಮತ್ತು ಮುಗ್ಧರೆಂದು ಚಿತ್ರಿಸಲಾಗುತ್ತದೆ. ಬ್ರಹ್ಮಗಂಟು, ಅಣ್ಣಯ್ಯ, ನಾ ನಿನ್ನ ಬಿಡಲಾರೆ ಸೀರಿಯಲ್​ಗಳ ನಾಯಕರು ವಿಲನ್​ಗಳ ಅಸಲಿಯತ್ತನ್ನು ತಿಳಿಯದೇ ಇರುವುದು ಪ್ರೇಕ್ಷಕರನ್ನು ಕೆರಳಿಸಿದೆ.

Read Full Story

06:14 PM (IST) Mar 19

ಧಾರವಾಡದಲ್ಲಿ ಯುಗಾದಿ ದಿನವೇ ರಕ್ತಪಾತ - ಆಸ್ತಿಗಾಗಿ ಹುಟ್ಟಿದ ತಂಗಿಯನ್ನೇ ಬರ್ಬರವಾಗಿ ಕೊಚ್ಚಿ ಕೊಂದ ಅಣ್ಣ!

ಧಾರವಾಡದ ಅಮ್ಮಿನಬಾವಿ ಗ್ರಾಮದಲ್ಲಿ ಯುಗಾದಿ ಹಬ್ಬದ ದಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣನೇ ತನ್ನ ತಂಗಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಜಮೀನಿನಲ್ಲಿ ಪಾಲು ಕೇಳಿದ್ದಕ್ಕೆ ಶುರುವಾದ ಜಗಳವು ಕೊಲೆಯಲ್ಲಿ ಅಂತ್ಯಗೊಂಡಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Read Full Story

05:47 PM (IST) Mar 19

ಸರ್ಕಾರ ದೇವಸ್ಥಾನದ ಹುಂಡಿ ಹಣವನ್ನೂ ಲೂಟಿ ಮಾಡುತ್ತಿದೆ - ಮಾಜಿ ಸಚಿವ ಸಾ.ರಾ.ಮಹೇಶ್ ಆರೋಪ

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ, ಈಗ ಭ್ರಷ್ಟಾಚಾರದಲ್ಲೇ ಮುಳುಗಿದ್ದು ದೇವಸ್ಥಾನದ ಹುಂಡಿ ಹಣವನ್ನೂ ಲೂಟಿ ಮಾಡುವ ದರಿದ್ರ ಸ್ಥಿತಿಗೆ ತಲುಪಿದೆ ಎಂದು ಮಾಜಿ ಸಚಿವ, ಜೆಡಿಎಸ್‌ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಆರೋಪಿಸಿದರು.

Read Full Story

05:45 PM (IST) Mar 19

ಮುಂಬೈನಲ್ಲಿದ್ದ ತನ್ನ ಐಶಾರಾಮಿ ಆಸ್ತಿಯನ್ನು 14 ವರ್ಷದ ಬಳಿಕ ಕೇವಲ 35 ಲಕ್ಷ ಲಾಭಕ್ಕೆ ಮಾರಿದ ಕನ್ನಡದ ನಟ!

ಖ್ಯಾತ ನಟ ಪ್ರಭುದೇವ ಅವರು ಮುಂಬೈನಲ್ಲಿದ್ದ ತಮ್ಮ ಎರಡು ಅಪಾರ್ಟ್‌ಮೆಂಟ್‌ಗಳನ್ನು ₹14.80 ಕೋಟಿಗೆ ಮಾರಾಟ ಮಾಡಿದ್ದಾರೆ. 2012ರಲ್ಲಿ ₹14.45 ಕೋಟಿಗೆ ಖರೀದಿಸಿದ್ದ ಈ ಆಸ್ತಿಯ ಮೇಲೆ ಸುಮಾರು ಒಂದು ದಶಕದ ನಂತರ ಕೇವಲ ₹35 ಲಕ್ಷ ಲಾಭ ಗಳಿಸಿದ್ದು, ರಿಯಲ್ ಎಸ್ಟೇಟ್ ಹೂಡಿಕೆ ಮುಖವನ್ನು ತೋರಿಸುತ್ತದೆ.

Read Full Story

05:44 PM (IST) Mar 19

ಸಿದ್ದರಾಮಯ್ಯ 'ಅನ್ನಭಾಗ್ಯ' ಆರಂಭಿಸಿದ ಹಿಂದಿದೆ Loose Motion ಕಥೆ - ಆ ನೋವಿನ ದಿನ ನೆನೆದ ವಕ್ತಾರೆ

ಕರ್ನಾಟಕದ ಅನ್ನಭಾಗ್ಯ ಯೋಜನೆಯು ಜನರನ್ನು ಸೋಮಾರಿಗಳನ್ನಾಗಿಸುತ್ತಿದೆ ಎಂಬ ಟೀಕೆಗಳ ನಡುವೆ, ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಈ ಯೋಜನೆಯ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಬಾಲ್ಯದಲ್ಲಿ ನಡೆದ ಒಂದು ಘಟನೆ, ಬಡತನದಲ್ಲಿ ಹಸಿವಿನಿಂದ ಬಳಲುವವರಿಗೆ ಅನ್ನ ಸಿಗಬೇಕೆಂಬ ಅವರ ಮಹದಾಸೆಗೆ ಹೇಗೆ ಕಾರಣವಾಯಿತು ಎಂಬುದನ್ನು ಈ ಲೇಖನ ವಿವರಿಸುತ್ತದೆ.
Read Full Story

05:37 PM (IST) Mar 19

Dhurandhar The Revenge - ಆಗ ರಣವೀರ್‌ಗೆ 25, ನಾಯಕಿಗೆ 5 ವರ್ಷ! ಈಗ ಇದೇ ಹೀರೋಯಿನ್ ಜೊತೆ ರೊಮ್ಯಾನ್ಸ್

ನಟ ರಣವೀರ್ ಸಿಂಗ್ 'ಧುರಂಧರ್: ದಿ ರಿವೆಂಜ್' ಚಿತ್ರದಿಂದಾಗಿ ಸಖತ್ ಸುದ್ದಿಯಲ್ಲಿದ್ದಾರೆ. ರಣವೀರ್ ಸಿಂಗ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದಾಗ ಸಾರಾ ಅರ್ಜುನ್‌ಗೆ ಎಷ್ಟು ವಯಸ್ಸಾಗಿತ್ತು ಗೊತ್ತಾ?

Read Full Story

05:13 PM (IST) Mar 19

KD Film - ಸೆರಗು ಸರಿಸಿ ಪ್ರದರ್ಶಿಸಿದ ನಟಿ ನೋರಾ ಯು- ಟರ್ನ್​! ಪ್ರೇಮ್​ ಕೊಟ್ರು ಶಾಕಿಂಗ್​ ಸ್ಟೇಟ್​ಮೆಂಟ್​

'ಕೆಡಿ' ಚಿತ್ರದ 'ಸೆರಗು ಸರ್ಸೆ' ಹಾಡಿನ ಅಶ್ಲೀಲ ಸಾಹಿತ್ಯದ ವಿವಾದದಿಂದಾಗಿ ಅದನ್ನು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿದೆ. ಈ ಬಗ್ಗೆ ನಟಿ ನೋರಾ ಫತೇಹಿ ನೀಡಿದ ಹೇಳಿಕೆ ಮತ್ತು ನಂತರದ ಯು-ಟರ್ನ್ ನಿರ್ದೇಶಕ ಪ್ರೇಮ್ ಅವರಿಗೆ ತೀವ್ರ ಬೇಸರ ತರಿಸಿದೆ.

Read Full Story

05:02 PM (IST) Mar 19

Nora Fatehi Fitness - ಫಿಟ್ನೆಸ್ ಕ್ವೀನ್ ನೋರಾ ಸೀಕ್ರೆಟ್ ಇದೇನಾ! ಈ 4 ಟಿಪ್ಸ್‌ನಿಂದ ಸದಾ ಫಿಟ್

ನೋರಾ ಫತೇಹಿ ಅವರ ಹಾಗೆ ಸ್ಲಿಮ್ ಮತ್ತು ಫಿಟ್ ಆಗಿರೋ ದೇಹ ನಿಮ್ಮದಾಗಬೇಕಾ? ಹಾಗಿದ್ರೆ ಅವರ ಫಿಟ್ನೆಸ್ ಸೀಕ್ರೆಟ್ ಏನು ಅಂತ ತಿಳ್ಕೊಳ್ಳಿ. ಬೆಲ್ಲಿ ಡ್ಯಾನ್ಸ್, ಪಿಲಾಟೆಸ್, ಸ್ಟ್ರೆಂತ್ ಟ್ರೈನಿಂಗ್ ಹಾಗೂ ಬ್ಯಾಲೆನ್ಸ್ಡ್ ಡಯಟ್ ಮೂಲಕ ಅವರು ಹೇಗೆ ಫಿಟ್ ಆಗಿರ್ತಾರೆ ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

Read Full Story

04:48 PM (IST) Mar 19

ಈ ವರ್ಷ ರಾಜ್ಯಕ್ಕೆ 1000 ಸಾವಿರ ಹೊಸ ಬಸ್‌ ಖರೀದಿ - ಸಚಿವ ರಾಮಲಿಂಗಾರೆಡ್ಡಿ ಘೋಷಣೆ

ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ವಿವಿಧ ಬಗೆಯ ಹೊಸ ಬಸ್‌ ಖರೀದಿ ಮಾಡುತ್ತಿದ್ದು, ಕಳೆದ ವರ್ಷ ಬಜೆಟ್‌ನಲ್ಲಿ ಘೋಷಿಸಿರುವ ಎರಡು ಸಾವಿರ ಬಸ್‌ ಸೇರಿದಂತೆ ಈ ವರ್ಷ ಒಂದು ಸಾವಿರ ಬಸ್‌ಗಳನ್ನು ಖರೀದಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

Read Full Story

04:31 PM (IST) Mar 19

ಸಂಸ್ಕಾರ, ಸಂಸ್ಕೃತಿ ಮುಂದಿನ ಪೀಳಿಗೆಗೆ ತಲುಪಿಸುವ ಪ್ರಯತ್ನ ಸಂಕೀರ್ತನ - ಪದ್ಮಲತಾ ಗುಂಡೂರಾವ್‌

ಟೈಲರಿಂಗ್‌ ಮಾಡುತ್ತಿದ್ದ ನಾನು ಕಾಸ್ಟ್ಯೂಮ್‌ ಡಿಸೈನರ್‌ ಆದೆ. ವಸ್ತ್ರ ವಿನ್ಯಾಸಕ್ಕೆ ಬಂದವಳು ಮುಂದೆ ನಟನೆಯನ್ನೂ ಮಾಡಿದೆ. ಇಲ್ಲಿವರೆಗೂ ನೂರಾರು ಧಾರಾವಾಹಿಗಳಲ್ಲಿ ನಟಿಸಿದ್ದೇನೆ ಎಂದರು ಪದ್ಮಲತಾ ಗುಂಡೂರಾವ್‌.

Read Full Story

04:07 PM (IST) Mar 19

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ - ಸೋದರಿಯ ಅಗಲಿಕೆಗೆ ಕಂಬನಿ ಮಿಡಿದ ‘ದೊಡ್ಡಗೌಡರು’

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ತಂಗಿ ಜವರಮ್ಮ (88) ಅವರು ವಯೋಸಹಜ ಕಾಯಿಲೆಯಿಂದ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸಹೋದರಿಯ ನಿಧನಕ್ಕೆ ದೇವೇಗೌಡರು ಭಾವುಕರಾಗಿದ್ದು, ಅವರ ಅಂತ್ಯಕ್ರಿಯೆ ಸ್ವಗ್ರಾಮ ಬಸವನಾಯಕನಹಳ್ಳಿಯಲ್ಲಿ ನಡೆಯಲಿದೆ.

Read Full Story

03:54 PM (IST) Mar 19

ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕವನ್ನ 'ಹಣ ಕೊಡುವ ಕಾಮಧೇನು' ಮಾಡಿಕೊಂಡಿದೆ; ಡಿಕೆಶಿಗೆ ಐಶ್ವರ್ಯಾ ಅನಂತ್ ಕುಮಾರ್ ತರಾಟೆ

ಐಶ್ವರ್ಯಾ ಅನಂತ ಕುಮಾರ್, ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕವನ್ನು 'ಕ್ಯಾಶ್ ಕೌ' ಆಗಿ ಬಳಸಿಕೊಂಡು ಪಂಚ ರಾಜ್ಯಗಳ ಚುನಾವಣೆಗೆ ಹಣ ಸಂಗ್ರಹಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯ ಸಾಲದ ಸುಳಿಯಲ್ಲಿರುವಾಗ ಹೈಕಮಾಂಡ್‌ಗೆ ಹಣ ನೀಡುವುದೇಕೆ ಎಂದು ಡಿಕೆಶಿಗೆ  ನೇರವಾಗಿ ಪ್ರಶ್ನಿಸಿದ್ದಾರೆ.

Read Full Story

02:07 PM (IST) Mar 19

ದಾವಣಗೆರೆಯಲ್ಲಿ ಕೊನೆಕ್ಷಣ ಏನಾದರೂ ಆಗಬಹುದು - ಶಾಮನೂರು ಕುಟುಂಬಕ್ಕೆ ‌ಬಿಜೆಪಿ ಟಿಕೆಟ್ ಕೊಟ್ಟರು ಅಚ್ಚರಿಯಿಲ್ಲ - ಯತ್ನಾಳ್

ಬಸವನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ದಾವಣಗೆರೆಯಲ್ಲಿ ಶಾಮನೂರು ಕುಟುಂಬದೊಂದಿಗೆ ಬಿಜೆಪಿ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದು, ಕೊನೆ ಕ್ಷಣದಲ್ಲಿ ಅಭ್ಯರ್ಥಿ ಬದಲಾದರೂ ಅಚ್ಚರಿಯಿಲ್ಲ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

Read Full Story

01:53 PM (IST) Mar 19

Bengaluru Cab Scam - ₹285ರ ಟ್ರಿಪ್‌ಗೆ ₹5,950 ಬಿಲ್! ಬೆಂಗಳೂರಲ್ಲಿ ಕ್ಯಾಬ್ ಡ್ರೈವರ್‌ಗಳ ಹೊಸ ಕಳ್ಳಾಟ ಬಯಲು

ಬೆಂಗಳೂರಿನಲ್ಲಿ ಓಲಾ ಕ್ಯಾಬ್ ಬುಕ್ ಮಾಡಿದ ಪ್ರಯಾಣಿಕರೊಬ್ಬರಿಗೆ ಶಾಕ್! ₹285ರ ಬಾಡಿಗೆ ಬದಲಿಗೆ ಚಾಲಕ ₹5,950 ಕೇಳಿದ್ದಾನೆ. ಹಳೆ ಕ್ಯಾನ್ಸಲೇಷನ್‌ಗೆ ಈ ದುಡ್ಡು ಅಂತ ಹೇಳಿ ಜಗಳಕ್ಕಿಳಿದಿದ್ದಾನೆ. ಓಲಾ ಎಮರ್ಜೆನ್ಸಿ ಸಪೋರ್ಟ್ ಕೂಡ ಕೈಕೊಟ್ಟಿದ್ದು, ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Read Full Story

12:37 PM (IST) Mar 19

ಆಲಿಕಲ್ಲು ಸುರಿಮಳೆ - ಹವಾಮಾನ ವೈಪರೀತ್ಯದ ಎಚ್ಚರಿಕೆ ಗಂಟೆ..!

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹವಾಮಾನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪೋತದಾರ ಸೇರಿದಂತೆ ಹವಾಮಾನ ತಜ್ಞರು ಆಲಿಕಲ್ಲು ಮಳೆ ಹವಾಮಾನ ವೈಪರೀತ್ಯದ ಪರಿಣಾಮಗಳಲ್ಲಿ ಒಂದು ಎನ್ನುತ್ತಾರೆ.

Read Full Story

12:07 PM (IST) Mar 19

ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್ - ಹಬ್ಬದ ಹೊತ್ತಲ್ಲೇ ರೆಡಿಮೇಡ್ ಬಟ್ಟೆಗಳು ತುಟ್ಟಿ! ಏಪ್ರಿಲ್‌ನಿಂದ ಶೇ. 15 ಬೆಲೆ ಏರಿಕೆ ಫಿಕ್ಸ್?

ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಜವಳಿ ರಫ್ತು ಸ್ಥಗಿತಗೊಂಡಿದ್ದು, ಕಚ್ಚಾ ವಸ್ತುಗಳ ಕೊರತೆ ಉಂಟಾಗಿದೆ. ಇದರಿಂದಾಗಿ ಬೆಂಗಳೂರಿನ ಚಿಕ್ಕಪೇಟೆ ಸೇರಿದಂತೆ ದೇಶೀಯ ಮಾರುಕಟ್ಟೆಯಲ್ಲಿ ಏಪ್ರಿಲ್‌ನಿಂದ ರೆಡಿಮೇಡ್ ಬಟ್ಟೆಗಳ ದರ ಶೇ. 10-15 ರಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ.
Read Full Story

12:07 PM (IST) Mar 19

Love Mocktail 3 Review - ಲವ್‌ ಮಾಕ್ಟೇಲ್‌ 3 ಹೇಗಿದೆ? ಸಿನಿಮಾ ನೋಡಿ ಪ್ರೇಕ್ಷಕರಿಗೆ ಬಯಕೆ ಶುರುವಾಯ್ತು!

Love Mocktail 3 Review: ಲವ್‌ ಮಾಕ್ಟೇಲ್‌ ಸಿನಿಮಾ ಹಿಟ್‌ ಆಗಿತ್ತು. 2ನೇ ಪಾರ್ಟ್‌ ಕೂಡ ರೆಡಿ ಆಗಿ ರಿಲೀಸ್‌ ಆಗಿತ್ತು, 3ನೇ ಪಾರ್ಟ್‌ ಕೂಡ ರಿಲೀಸ್‌ ಆಗಿದೆ. ಎರಡು ಪಾರ್ಟ್‌ಗಳಲ್ಲಿದ್ದ ಮನರಂಜನೆ, ಎಮೋಶನಲ್‌, ಆಕ್ಷನ್‌, ಲವ್‌ಸ್ಟೋರಿ ಪಾರ್ಟ್‌ 3ರಲ್ಲಿ ಇದೆ ಎಂದು ಡಾರ್ಲಿಂಗ್‌ ಕೃಷ್ಣ ಹೇಳಿದ್ದರು. 

 

Read Full Story

11:58 AM (IST) Mar 19

ಜಗದ್ಗುರು ಶಿವಾನಂದ ಮಠ ಸ್ವಾಮೀಜಿ, ರಾಯಚೂರು ಮುಖ್ಯ ಶಿಕ್ಷಕ ದೇವೇಂದ್ರಪ್ಪ ದುರಂತ ಅಂತ್ಯ

ಜಗದ್ಗುರು ಶಿವಾನಂದ ಮಠ ಸ್ವಾಮೀಜಿ, ರಾಯಚೂರು ಮುಖ್ಯ ಶಿಕ್ಷಕ ದೇವೇಂದ್ರಪ್ಪ ದುರಂತ ಅಂತ್ಯ, ಬೆಳಗ್ಗೆಯಿಂದ ಸಂಜೆ ವರೆಗೆ ಶಿಕ್ಷಕ ವೃತ್ತಿ,ಸಂಜೆಯಿಂದ ರಾತ್ರಿ ವರೆಗೆ ಸ್ವಾಮೀಜಿಯಾಗಿ ಪ್ರವಚನ ನೀಡುತಿದದ್ದ ದೇವೇಂದ್ರಪ್ಪ ಆತ್ಮ**ತ್ಯೆ ಮಾಡಿಕೊಂಡಿದ್ದಾರೆ.

Read Full Story

11:38 AM (IST) Mar 19

ಚಿಕ್ಕಮಗಳೂರು - ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಯ್ತು ಕಾಡಾನೆಗಳ ಅಪರೂಪದ ದೃಶ್ಯ

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು, ಬೆಳೆ ನಾಶವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇದರ ನಡುವೆಯೇ, ಆನೆಗಳು ತಮ್ಮ ಮರಿಗಳನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿರುವ ಅಪರೂಪದ ದೃಶ್ಯ ಡ್ರೋನ್‌ನಲ್ಲಿ ಸೆರೆಯಾಗಿದೆ.

Read Full Story

11:34 AM (IST) Mar 19

ಶಾಸಕರ ಭವನದಲ್ಲೇ ಇಡ್ಲಿ, ದೋಸೆ ಸಿಗುತ್ತಿಲ್ಲ! ವಿಧಾನ ಪರಿಷತ್‌ನಲ್ಲಿ ಉಪಹಾರದ ಸಮಸ್ಯೆ ಪ್ರಸ್ತಾಪಿಸಿದ ಐವನ್ ಡಿಸೋಜಾ

ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಅವರು, ಶಾಸಕರ ಭವನದಲ್ಲೂ ಇಡ್ಲಿ, ದೋಸೆ ಸಿಗುತ್ತಿಲ್ಲ ಎಂದು ಉಪಹಾರದ ಸಮಸ್ಯೆಯನ್ನು ಪ್ರಸ್ತಾಪಿಸಿದರು. ಗ್ಯಾಸ್ ಕೊರತೆಯಿಂದ ಈ ಸಮಸ್ಯೆ ಉಂಟಾಗಿದೆ ಎಂದು ಚರ್ಚೆಯಾದಾಗ, ಸಭಾಪತಿಗಳು ಹಾಸ್ಯಮಯವಾಗಿ ತಿಂಡಿ ತಿಂದು ಬರಲು ಸಮಯಾವಕಾಶ ನೀಡಿದರು.
Read Full Story

11:02 AM (IST) Mar 19

ದಾವಣಗೆರೆ ದಕ್ಷಿಣ ಬಿಜೆಪಿ ಟಿಕೆಟ್ ಸಿಗ್ತಿದ್ದಂತೆ ಹಮಾಲಿಯಾಗಿದ್ದ ತಂದೆಯ ನೆನೆದು ಭಾವುಕರಾದ ಶ್ರೀನಿವಾಸ್ ದಾಸಕರಿಯಪ್ಪ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಶ್ರೀನಿವಾಸ ದಾಸಕರಿಯಪ್ಪ ಆಯ್ಕೆಯಾಗಿದ್ದಾರೆ. ಯುಗಾದಿ ಹಬ್ಬಕ್ಕೆ ಹೂವು ಖರೀದಿಸಲು ಮಾರುಕಟ್ಟೆಗೆ ಹೋಗಿದ್ದಾಗ ಅವರಿಗೆ ಈ ಸುದ್ದಿ ತಿಳಿದಿದ್ದು, ತಂದೆಯನ್ನು ನೆನೆದು ಭಾವುಕರಾದರು. 

Read Full Story

10:49 AM (IST) Mar 19

ಡಿಜೆ ಹಳ್ಳಿ ಅಪ್ರಾಪ್ತೆ ಕೊಲೆ ಕೇಸ್ ಸ್ಫೋಟಕ ಮಾಹಿತಿ, ಆರೋಪಿ ಶಬೀಲ್ ಕೌರ್ಯಕ್ಕೆ ಬೆಚ್ಚಿ ಬಿದ್ದ ಬೆಂಗಳೂರು

ಡಿಜೆ ಹಳ್ಳಿ ಅಪ್ರಾಪ್ತೆ ಕೊಲೆ ಕೇಸ್ ಸ್ಫೋಟಕ ಮಾಹಿತಿ, ಆರೋಪಿ ಶಬೀಲ್ ಕೌರ್ಯಕ್ಕೆ ಬೆಚ್ಚಿ ಬಿದ್ದ ಬೆಂಗಳೂರು, ಅಪ್ರಾಪ್ತೆಯನ್ನು ಪಾಳು ಬಿದ್ದ ಮನೆಗೆ ಕರೆಯಿಸಿ ಅತೀ ಭೀಕರವಾಗಿ ಕೊಲೆ ಮಾಡಿದ ಘಟನೆ ಬಹಿರಂಗವಾಗಿದೆ.

 

Read Full Story

More Trending News