ಹಂಪಿ ಶಿಲಾಕಂಭ ಧ್ವಂಸ: ಯುವಕನ ವಿಚಾರಣೆ; ಸ್ಥಳೀಯರು ಗರಂ!

Feb 2, 2019, 5:40 PM IST

ಹಂಪಿಯ ಐತಿಹಾಸಿಕ ಸ್ಮಾರಕವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾ ಎಸ್ಪಿ ಅರುಣ್ ರಂಗರಾಜನ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗಜಶಾಲೆಯ ಹಿಂಭಾಗದ ವಿಷ್ಣು ದೇವಸ್ಥಾನ ಸಂಪೂರ್ಣ ಪರಿಶೀಲಿಸಿದ ಎಸ್ಪಿಗೆ, ಪುರಾತತ್ವ ಇಲಾಖೆ, ಹಂಪಿ ಅಭಿವೃದ್ದಿ ಪ್ರಾಧಿಕಾರ ಅಧಿಕಾರಿಗಳು ಸಾಥ್ ನೀಡಿದ್ದಾರೆ.  ಸ್ಥಳೀಯ ಯುವಕನೊಬ್ಬನನ್ನು ವಿಚಾರಣೆಗೊಳಪಡಿಸಿದ ಎಸ್ಪಿ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ.