Karnataka Assembly Election- 2018

ಬಿಜೆಪಿ ನಾಯಕರ ಮಧ್ಯೆ ‘ಬಿ ಫಾರ್ಮ್’ಗಾಗಿ ಕದನ! ರಾಜಧಾನಿಯಲ್ಲಿ ಬೀಡುಬಿಟ್ಟಿರುವ ಉಭಯನಾಯಕರು

Apr 22, 2018, 8:13 PM IST

ಕೊಪ್ಪಳ ಕ್ಷೇತ್ರದ ‘ಬಿ ಫಾರಂ’ಗಾಗಿ ಬಿಜೆಪಿ ನಾಯಕರು ಕಿತ್ತಾಟ ನಡೆಸುತ್ತಿದ್ದಾರೆ. ಕೊಪ್ಪಳ ಕ್ಷೇತ್ರದಿಂದ ಚಂದ್ರಶೇಖರ್ ಅವರ ಹೆಸರನ್ನು ಅಂತಿಮಗೊಳಿಸಿದೆ. ಆದರೆ ತನ್ನ ಮಗನಿಗೆ  ಬಿ ಫಾರಂ ನೀಡಬೇಕೆಂದು ಸಂಗಣ್ಣ ಕರಡಿ ಪಟ್ಟು ಹಿಡಿದಿದ್ದಾರೆ. ಈ ನಡುವೆ ಬಂಡಾಯ ಶಮನಕ್ಕಾಗಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಗಣ್ಣಗೆ ಬುಲಾವ್ ಮಾಡಿದ್ದಾರೆ. ಬಿ ಫಾರಂಗಾಗಿ ಉಭಯ ಬಣದ ನಾಯಕರು ಬೆಂಗಳೂರಿನಲ್ಲೇ ಬೀಡು ಬಿಟ್ಟಿದ್ದಾರೆ. ನಾಮಪತ್ರ ಸಲ್ಲಿಸಲು ಕೇವಲ 2 ದಿನಗಳು ಬಾಕಿ ಉಳಿದಿವೆ.