Karnataka Assembly Election- 2018
May 18, 2018, 9:23 AM IST
ಬೆಂಗಳೂರು (ಮೇ. 18): ರೆಸಾರ್ಟ್ ರಾಜಕಾರಣ ರಂಗೇರಿದೆ. ಕಾಂಗ್ರೆಸ್ - ಜೆಡಿಎಸ್ ಶಾಸಕರು ರೆಸಾರ್ಟ್ ತಲುಪಿದ್ದಾರೆ.
ಶಾಸಕರಿಗೆ ಬೌನ್ಸರ್ಗಳ ಭದ್ರತೆ ಒದಗಿಸಲಾಗಿದೆ. ವಿಶೇಷವಾಗಿ ನಾಗೇಂದ್ರ ಮತ್ತು ಕಂಪ್ಲಿ ಶಾಸಕ ಗಣೇಶ್ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಇಬ್ಬರು ಶಾಸಕರ ಮೇಲೆ ಹೆಚ್ಚಿನ ನಿಗಾ ಇಡುವಂತೆ ಬೌನ್ಸರ್ಗಳಿಗೆ ಡಿಕೆಶಿ ಸೂಚನೆ ನೀಡಿದ್ದಾರೆ.
ನಾಗೇಂದ್ರ & ಗಣೇಶ್ ನಮ್ಮನ್ನು ಬಿಡಿ ಎಂದು ಡಿ.ಕೆ ಶಿವಕುಮಾರ್ಗೆ ಒತ್ತಾಯಿಸಿದ್ದಾರೆ. ಆದರೆ ಇಬ್ಬರು ತಪ್ಪಿಸಿಕೊಂಡ್ರೆ ಕಾಂಗ್ರೆಸ್ ಕೈಗೆ ಸಿಗಲ್ಲ ಎಂದು ಕಟ್ಟೆಚ್ಚರ ವಹಿಸಲು ಡಿಕೆಶಿ ಸೂಚನೆ ನೀಡಿದ್ದಾರೆ. ಬಿಎಸ್ ವೈ ಎಷ್ಟು ದಿನಗಳೊಳಲಾಗಿ ಬಹುಮತ ಸಾಬೀತುಪಡಿಸಬೇಕೆಂದು 10.30 ಕ್ಕೆ ಸುಪ್ರೀಂಕೋರ್ಟ್ ಆದೇಶ ಹೊರ ಬೀಳಲಿದ್ದು, ಬಿಜೆಪಿ ಬಹುಮತ ಸಾಬೀತು ಪಡಿಸುವ ಒತ್ತಡದಲ್ಲಿದೆ.