ನವದೆಹಲಿ (ಜ.30): ಗ್ಯಾರಂಟಿಯಿಂದ ರಾಜ್ಯಗಳ ಆರ್ಥಿಕತೆ ವಿನಾಶವಾಗಲಿದೆ ಎಂದು 2026ರ ಬಜೆಟ್ ಪೂರ್ವ ಕೇಂದ್ರ ಆರ್ಥಿಕ ಸಮೀಕ್ಷೆ ಎಚ್ಚರಿಕೆ ನೀಡಿದೆ. ನಗದು ವರ್ಗಾವಣೆಯಿಂದ ತಕ್ಷಣಕ್ಕೆ ಲಾಭ ಖಂಡಿತವಾಗಿ ಗೋಚರವಾಗಲಿದೆ, ಆದರೆ, ದೀರ್ಘಕಾಲದಲ್ಲಿ ಇದು ಆರ್ಥಿಕತೆಯ ಮೇಲೆ ಹೊಡೆತ ಬೀಳಲಿದೆ ಎಂದು ಎಚ್ಚರಿಸಿದೆ. ಸದ್ಯ ಗ್ಯಾರಂಟಿ ರಾಜ್ಯಗಳ ಸಂಖ್ಯೆ ದೇಶದಲ್ಲಿ ಐದು ಪಟ್ಟು ಹೆಚ್ಚಳವಾಗಿದೆ. ವರ್ಷಕ್ಕೆ 1.7 ಲಕ್ಷ ಕೋಟಿ ಇದಕ್ಕಾಗಿಯೇ ವೆಚ್ಚವಾಗುತ್ತಿದೆ. ಫ್ರೀ ಸ್ಕೀಮ್ಗಳಿಂದ ಬೊಕ್ಕಸಕ್ಕೆ ಭಾರೀ ಪೆಟ್ಟು ಬೀಳುತ್ತಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
10:30 PM (IST) Jan 30
ಮೆಗಾಸ್ಟಾರ್ ಚಿರಂಜೀವಿಯವರನ್ನು ಒಬ್ಬ ನಟಿ ಪ್ರೀತಿಯಿಂದ 'ನಲ್ಲ ಬಾವ' ಅಂತ ಕರೆಯುತ್ತಾರಂತೆ. ಹಾಗೆ ಕರೆದಾಗ ಚಿರಂಜೀವಿ ರಿಯಾಕ್ಷನ್ ಹೇಗಿತ್ತು? ಅವರ ಕುಟುಂಬದ ಜೊತೆ ಆ ನಟಿಗಿರುವ ಸಂಬಂಧವೇನು? ಈ ಸ್ಟೋರಿಯಲ್ಲಿದೆ ವಿವರ.
10:07 PM (IST) Jan 30
ಮದುವೆ ಸಮಾರಂಭವೊಂದರಲ್ಲಿ, ವೇಟರ್ ವೇಷದಲ್ಲಿ ಬಂದ ಕಳ್ಳನೊಬ್ಬ ಸುಮಾರು 1 ಕೋಟಿ ರೂ. ಮೌಲ್ಯದ ನಗದು ಮತ್ತು ಚಿನ್ನಾಭರಣಗಳಿದ್ದ ಬ್ಯಾಗನ್ನು ಕದ್ದಿದ್ದಾನೆ. ವಧುವಿನ ತಂದೆ ಕುರ್ಚಿಯ ಮೇಲೆ ಇಟ್ಟಿದ್ದ ಬ್ಯಾಗನ್ನು ಕಳ್ಳ ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
09:06 PM (IST) Jan 30
ಕದ್ದು ಮುಚ್ಚಿ ಖ್ಯಾತ ನಟಿಯ ಗೋಲ್ಮಾಲ್, ಸಿನಿಮಾ ಇಂಡಸ್ಟ್ರಿಯಲ್ಲಿ ಗುಸು ಗುಸು ಮಾತುಗಳು ಕೇಳಿಬರುತ್ತಿತ್ತು. ಆದರೆ ದೂರು ದಾಖಲಾಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ಇತ್ತ ನಟಿ ನಾಪತ್ತೆಯಾಗಿದ್ದಾರೆ.
09:01 PM (IST) Jan 30
ಚಿರತೆಯೊಂದು ತಂದೆ-ಮಗನ ಮೇಲೆ ದಾಳಿ ಮಾಡಿದೆ. ತನ್ನ ಮಗನನ್ನು ರಕ್ಷಿಸಲು, 60 ವರ್ಷದ ತಂದೆ ಈಟಿ ಮತ್ತು ಕುಡುಗೋಲಿನಿಂದ ಚಿರತೆಯೊಂದಿಗೆ ಹೋರಾಡಿ ಅದನ್ನು ಕೊಂದಿದ್ದಾರೆ. ಈ ಘಟನೆಯಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಈಗ ಅರಣ್ಯ ಇಲಾಖೆ ಅವರ ವಿರುದ್ಧವೇ ಪ್ರಕರಣ ದಾಖಲಿಸಿದೆ.
08:17 PM (IST) Jan 30
ಕರ್ತವ್ಯ ನಿರ್ವಹಿಸುತ್ತಿರುವ ಡಿಎಸ್ಪಿ ರಶ್ಮಿ ರಂಜನ್ ದಾಸ್ ತಮ್ಮ ಕೂದಲಿಗೆ ಕೆಂಪು ಬಣ್ಣ ಬಳಿದುಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ಇದನ್ನು ಶಿಸ್ತಿನ ಉಲ್ಲಂಘನೆ ಎಂದು ಪರಿಗಣಿಸಿರುವ ಪೊಲೀಸ್ ಇಲಾಖೆ, ಕೂದಲನ್ನು ಮತ್ತೆ ಕಪ್ಪು ಬಣ್ಣಕ್ಕೆ ಬದಲಾಯಿಸುವಂತೆ ಅವರಿಗೆ ಸೂಚನೆ ನೀಡಿದೆ.
07:09 PM (IST) Jan 30
ಅಜಿತ್ ಪವಾರ್ ಅವರ ವಿಮಾನ ಅಪಘಾತದ ನಿಧನದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಅವರ ಸಾವಿಗೂ ಮುನ್ನವೇ ವಿಕಿಪಿಡಿಯಾದಲ್ಲಿ ಮಾಹಿತಿ ಅಪ್ಡೇಟ್ ಆಗಿದೆ ಎಂಬ ಸ್ಕ್ರೀನ್ಶಾಟ್ಗಳು ಗೊಂದಲ ಸೃಷ್ಟಿಸಿದ್ದವು.ಇದರ ಹಿಂದಿರೋ ಅಸಲಿಯತ್ತು ಏನು?
06:07 PM (IST) Jan 30
ಮಹಿಳೆಯೊಬ್ಬಳು ಕಣ್ಣಿನ ಕಾಂಟ್ಯಾಕ್ಟ್ ಲೆನ್ಸ್ನಲ್ಲಿ ವಿಶೇಷ ಚಿಪ್ ಅಳವಡಿಸಿಕೊಂಡು ಕ್ಯಾಸಿನೋದಲ್ಲಿ ಇಸ್ಪೀಟ್ ಆಟವಾಡಿ ಮೋಸ ಮಾಡುತ್ತಿದ್ದಳು. ಎದುರಾಳಿಗಳ ಕಾರ್ಡ್ಗಳನ್ನು ಪತ್ತೆಹಚ್ಚಿ ಕೋಟ್ಯಂತರ ರೂಪಾಯಿ ಗೆದ್ದಿದ್ದ ಈಕೆ, ದೂರಿನ ಮೇರೆಗೆ ಸಿಕ್ಕಿಬಿದ್ದಿದ್ದಾಳೆ.
04:39 PM (IST) Jan 30
ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಪಾಪರಾಜಿಗಳು ಮದುವೆಯ ಬಗ್ಗೆ ಪ್ರಶ್ನಿಸಿದಾಗ, ರಶ್ಮಿಕಾ ಜಾಣ್ಮೆಯಿಂದ ಉತ್ತರಿಸದೆ ನುಣುಚಿಕೊಂಡಿದ್ದಾರೆ. ಈ ನಡುವೆ, ಅವರ ಎಐ ಮದುವೆ ಫೋಟೋಗಳು ಸಹ ವೈರಲ್ ಆಗುತ್ತಿವೆ.
04:28 PM (IST) Jan 30
ವಿದೇಶಿ ಮಹಿಳೆಗೆ 500 ಮೀಟರ್ ದೂರಕ್ಕೆ 18000 ರೂ ಚಾರ್ಜ್ ಮಾಡಿದ ಕ್ಯಾಬ್ ಚಾಲಕ ಅರೆಸ್ಟ್, ಎಕ್ಸ್ ಮೂಲಕ ಭಾರತದಲ್ಲಿ ಲೂಟಿ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಚಾಲಕನ ಅರೆಸ್ಟ್ ಮಾಡಿದ್ದಾರೆ.
03:23 PM (IST) Jan 30
ಬಂಡೀಪುರ ಹುಲಿ ಅಭಯಾರಣ್ಯದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ–766ರಲ್ಲಿನ ರಾತ್ರಿ ಸಂಚಾರ ನಿಷೇಧಕ್ಕೆ ಶಾಶ್ವತ ಪರಿಹಾರವಾಗಿ ಸುರಂಗ ರಸ್ತೆ ನಿರ್ಮಾಣದ ಸಾಧ್ಯತೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. ಈ ಕುರಿತು ಅಧ್ಯಯನ ನಡೆಸಲು ಜಂಟಿ ತಜ್ಞರ ಕಾರ್ಯಪಡೆ ರಚಿಸಲಾಗಿದೆ.
03:17 PM (IST) Jan 30
ತೆಲುಗು ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ದಿವಿ ವಾದ್ತ್ಯಾ, ಮದುವೆ ವ್ಯವಸ್ಥೆಯ ಮೇಲೆ ತನಗೆ ನಂಬಿಕೆಯಿಲ್ಲ ಎಂದು ಹೇಳಿದ್ದಾರೆ. ತನ್ನ ಸ್ನೇಹಿತರ ವಿಚ್ಛೇದನಗಳನ್ನು ನೋಡಿ ಮದುವೆಗಿಂತ ಪ್ರಾಮಾಣಿಕತೆಯಿರುವ ಲಿವಿಂಗ್ ಟುಗೆದರ್ ಸಂಬಂಧವೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
02:48 PM (IST) Jan 30
ಐದು ವರ್ಷಗಳ ಹಿಂದೆ ತಾನು ಆರೈಕೆ ಮಾಡುತ್ತಿದ್ದ ಲಿಲ್ಲಿ ಎಂಬ ಬೀದಿ ನಾಯಿಯನ್ನು ಯುವಕನೊಬ್ಬ ಮತ್ತೆ ಭೇಟಿಯಾಗುತ್ತಾನೆ. ಆತ ಕರೆದ ತಕ್ಷಣ, ಶ್ವಾನವು ಅವನನ್ನು ಗುರುತಿಸಿ, ಪ್ರೀತಿಯಿಂದ ಅವನ ಮೇಲೆ ಹಾರಿ ತನ್ನ ವಾತ್ಸಲ್ಯ ತೋರಿದೆ. ಈ ಭಾವನಾತ್ಮಕ ಪುನರ್ಮಿಲನದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
02:27 PM (IST) Jan 30
ಗೋವಾ ಫಿಲ್ಮ್ ಫೆಸ್ಟಿವಲ್ನಲ್ಲಿ 'ಕಾಂತಾರ' ದೈವವನ್ನು ಅನುಕರಿಸಿ ವಿವಾದ ಸೃಷ್ಟಿಸಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿದೆ. ದೈವಾರಾಧಕರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನ್ಯಾಯಾಲಯದ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ.
01:44 PM (IST) Jan 30
ಮಗ ಪ್ರೀತಿಸುತ್ತಿದ್ದ ಸ್ಯಾಂಡ್ವಿಚ್ ಮಾರುವ ಹುಡುಗಿಯನ್ನು ಪ್ರತಿಷ್ಠೆಯ ಕಾರಣಕ್ಕೆ ತಾಯಿ ನಿರಾಕರಿಸುತ್ತಾಳೆ. ಕಾರಿನಲ್ಲಿ ಆರಂಭವಾದ ಈ ಗಲಾಟೆ ಬೀದಿಯಲ್ಲಿ ಮಗ ಪ್ರೇಯಸಿಗೆ ಪ್ರಪೋಸ್ ಮಾಡುವುದರೊಂದಿಗೆ ತಾರಕಕ್ಕೇರುತ್ತದೆ. ಮುಂದೇನಾಯ್ತು ನೋಡಿ..
01:12 PM (IST) Jan 30
RCB's Shreyanka Patil & Mr Nags Dance to 'Na Drivera' Song ಆರ್ಸಿಬಿ ತಂಡದ ಸಹ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಹಾಗೂ ಮಿ.ನಾಗ್ಸ್ ಅವರು 'ನಾ ಡ್ರೈವರಾ' ಹಾಡಿಗೆ ಮಾಡಿದ ಡಾನ್ಸ್, ಮಂಕಾಗಿದ್ದ ಸ್ಮೃತಿಯನ್ನು ಮನಸಾರೆ ನಗುವಂತೆ ಮಾಡಿದೆ.
12:49 PM (IST) Jan 30
ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಹೋಲಿಸಿದರೆ, ಅಂಚೆ ಕಚೇರಿಯು ಇದೀಗ ಸುರಕ್ಷಿತ ಮತ್ತು ಅಧಿಕ ಬಡ್ಡಿ ದರಗಳನ್ನು ನೀಡುವ ಯೋಜನೆಗಳನ್ನು ಜಾರಿಗೆ ತಂದಿದೆ. ನಿಮ್ಮ ಹಣಕ್ಕೆ ಸಂಪೂರ್ಣ ಭದ್ರತೆ ಒದಗಿಸುವುದರ ಜೊತೆಗೆ, ಟರ್ಮ್ ಡೆಪಾಸಿಟ್, ಸುಕನ್ಯಾ ಸಮೃದ್ಧಿ, ಮತ್ತು ಹಿರಿಯ ನಾಗರಿಕರ ಯೋಜನೆಗಳ ಮಾಹಿತಿ ಇಲ್ಲಿದೆ.
12:40 PM (IST) Jan 30
ಪ್ರಯಾಗ್ರಾಜ್ನ ವಾರ್ಷಿಕ ಮಾಘ ಮೇಳದಲ್ಲಿ, ಮೌನಿ ಅಮವಾಸ್ಯೆಯಂದು ಪುಣ್ಯ ಸ್ನಾನಕ್ಕೆ ತೆರಳುತ್ತಿದ್ದ ಸ್ವಾಮಿ ಅವಿಮುಕ್ತೇಶ್ವರಾನಂದರ ಪಲ್ಲಕ್ಕಿ ಮೆರವಣಿಗೆಯನ್ನು ಪೊಲೀಸರು ತಡೆದಿದ್ದಾರೆ. ಈ ಘಟನೆಯು ಸ್ವಾಮೀಜಿ, ಶಿಷ್ಯರು ಮತ್ತು ಪೊಲೀಸರ ನಡುವೆ ನೂಕಾಟ-ತಳ್ಳಾಟಕ್ಕೆ ಕಾರಣವಾಯಿತು.
11:48 AM (IST) Jan 30
ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪೆನಿ ಅಮೆಜಾನ್, ಇತ್ತೀಚೆಗೆ 16,000 ಉದ್ಯೋಗಿಗಳನ್ನು ವಜಾಗೊಳಿಸಿದೆ, ಇದರಿಂದ ಒಟ್ಟು ವಜಾ ಸಂಖ್ಯೆ 30,000ಕ್ಕೆ ಏರಿದೆ. ಈ ಉದ್ಯೋಗ ಕಡಿತವು ಭಾರತದ ಮೇಲೂ ಪರಿಣಾಮ ಬೀರಿದ್ದು, ನಿರ್ವಹಣೆಯನ್ನು ಸುಧಾರಿಸುವುದು ಮತ್ತು ಕೃತಕ ಬುದ್ಧಿಮತ್ತೆಯಲ್ಲಿನ ಹೂಡಿಕೆ ಕಾರಣಗಳಾಗಿವೆ.
11:18 AM (IST) Jan 30
ಬಾಂಗ್ಲಾದೇಶದ ಪರವಾಗಿ ಟಿ20 ವಿಶ್ವಕಪ್ ಬಹಿಷ್ಕರಿಸುವ ಬೆದರಿಕೆ ಹಾಕಿದ್ದ ಪಾಕಿಸ್ತಾನ, ಇದೀಗ ತನ್ನ ನಿಲುವು ಬದಲಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನ್ನ ಆಟಗಾರರನ್ನು ವಿಶ್ವಕಪ್ಗಾಗಿ ಶ್ರೀಲಂಕಾಕ್ಕೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ.
11:10 AM (IST) Jan 30
China Corruption: 13.5 Tons of Gold, 23 Tons of Cash Seized from Mayor's House ಚೀನಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಮೇಯರ್ ಒಬ್ಬರ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನದ ಗಟ್ಟಿ ಹಾಗೂ ನಗದು ಪತ್ತೆಯಾಗಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
10:48 AM (IST) Jan 30
ಬಾಲಿವುಡ್ನ ಖ್ಯಾತ ಗಾಯಕ ಅರಿಜಿತ್ ಸಿಂಗ್ ತಮ್ಮ ಗಾಯನ ಕ್ಷೇತ್ರಕ್ಕೆ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. 'ಆಶಿಕಿ 2' ಚಿತ್ರದ 'ತುಮ್ ಹಿ ಹೋ' ಹಾಡಿನ ಮೂಲಕ ಜಗದ್ವಿಖ್ಯಾತರಾದ ಅವರು, ಬೋರ್ ಆಗಿದೆ ಎಂಬ ಕಾರಣ ನೀಡಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ.
09:27 AM (IST) Jan 30
ಇಂಡಿಯಾ ಟುಡೇ-ಸಿ ವೋಟರ್ ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯ ಪ್ರಕಾರ, ಇಂದು ಲೋಕಸಭಾ ಚುನಾವಣೆ ನಡೆದರೆ ಎನ್ಡಿಎ ಮೈತ್ರಿಕೂಟ 352 ಸ್ಥಾನಗಳನ್ನು ಗೆಲ್ಲಲಿದೆ. ಇದಕ್ಕೆ ಪ್ರತಿಯಾಗಿ, ಇಂಡಿಯಾ ಒಕ್ಕೂಟವು 182 ಸ್ಥಾನಗಳಿಗೆ ಕುಸಿಯಲಿದೆ ಎಂದು ಸಮೀಕ್ಷೆ ತಿಳಿಸಿದೆ.
08:59 AM (IST) Jan 30
ರೆನೊ ಇಂಡಿಯಾ ಕಂಪನಿಯು ತನ್ನ ಪ್ರಸಿದ್ಧ ಡಸ್ಟರ್ ಕಾರನ್ನು ಆಧುನಿಕ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಮರು ಬಿಡುಗಡೆ ಮಾಡಿದೆ. ಚೆನ್ನೈನಲ್ಲಿ ಅನಾವರಣಗೊಂಡ ಈ ಕಾರು, ಪನೋರಾಮಿಕ್ ಸನ್ರೂಫ್, ಹೈಬ್ರಿಡ್ ಎಂಜಿನ್ ಆಯ್ಕೆ, ಮತ್ತು 5-ಸ್ಟಾರ್ ಸುರಕ್ಷತಾ ಮಾನದಂಡಗಳೊಂದಿಗೆ ಬರುತ್ತದೆ.
07:58 AM (IST) Jan 30
ಹಲವಾರು ರಾಜ್ಯಗಳಲ್ಲಿ ನಡೆಯುತ್ತಿರುವ ಬೇಷರತ್ ನೇರ ನಗದು ವರ್ಗಾವಣೆ (ಯುಸಿಟಿ) ಯೋಜನೆಗಳು ಆರ್ಥಿಕತೆಗೆ ಅಪಾಯ ಉಂಟುಮಾಡುತ್ತದೆ ಮತ್ತು ಮುಂದಿನ ದಿನಗಳಲ್ಲಿ ಸಮಸ್ಯೆ ಸೃಷ್ಟಿಸುತ್ತವೆ ಎಂದು 2026 ರ ಆರ್ಥಿಕ ಸಮೀಕ್ಷೆ ಗುರುವಾರ ಹೇಳಿದೆ.
07:58 AM (IST) Jan 30
ವಿವಿ ಹಾಗೂ ವಿವಿ ಸಂಯೋಜಿತ ಕಾಲೇಜುಗಳ ಕ್ಯಾಂಪಸ್ಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಘದವರ ವಿರುದ್ಧ ನಡೆಯುವ ಜಾತಿ ಆಧಾರಿತ ತಾರತಮ್ಯ ತಡೆಗಟ್ಟುವ ಕುರಿತು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ರೂಪಿಸಿದ್ದ ನಿಯಮಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ
07:57 AM (IST) Jan 30
ಅಂತಾರಾಷ್ಟ್ರೀಯ ಏರಿಳಿತಗಳು, ವ್ಯಾಪಾರ ಆಘಾತಗಳ ನಡುವೆಯೂ ನಡುವೆಯೂ 2026-27ನೇ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಉತ್ತಮವಾಗಿಯೇ ಇರಲಿದೆ. ಏಪ್ರಿಲ್ನಿಂದ ಆರಂಭವಾಗಲಿರುವ ಮುಂದಿನ ವಿತ್ತ ವರ್ಷದಲ್ಲಿ ದೇಶ ಶೇ.6.8ರಿಂದ ಶೇ.7.2ರ ನಡುವೆ ಆರ್ಥಿಕ ಬೆಳವಣಿಗೆ ದಾಖಲಿಸಲಿದೆ ಎಂದು ಅಂದಾಜಿಸಲಾಗಿದೆ.