ಬೆಂಗಳೂರು (ಜುಲೈ 23): ಸಂಸತ್ತಿನ (Parilament Moonson Session)ಮುಂಗಾರು ಅಧಿವೇಶನ ಆರಂಭದ ದಿನವೇ ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್ (jagdeep dhankhar) ಅನಾರೋಗ್ಯದ ಕಾರಣ ನೀಡಿ ದಿಢೀರ್ ರಾಜೀನಾಮೆ ನೀಡಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅನಾರೋಗ್ಯದ ಹೊರತಾಗಿ ಅನ್ಯ ಕಾರಣವೂ ಇದೆ ಎಂದು ಅದಾಜಿಸಲಾಗಿದೆ. ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
11:07 PM (IST) Jul 23
BJP Leader Smriti Irani interview: ಸ್ಮೃತಿ ಇರಾನಿ ಅವರು ಅಮೇಥಿ ಕ್ಷೇತ್ರದ ಅನುಭವ, ರಾಹುಲ್ ಗಾಂಧಿ ವಿರುದ್ಧದ ಸ್ಪರ್ಧೆ ಹಾಗೂ ಸೋಲು-ಗೆಲುವಿನ ಕುರಿತು ಮಾತನಾಡಿದ್ದಾರೆ. ಅಮೇಥಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದ್ದಾರೆ.
10:19 PM (IST) Jul 23
07:37 PM (IST) Jul 23
07:21 PM (IST) Jul 23
07:13 PM (IST) Jul 23
ಗೂಗಲ್ ಪೇ- ಫೋನ್ ಪೇ ಸೇವೆ ಉಚಿತವಾಗಿದ್ದರೂ ಮಾಸಿಕ ಐದು ಸಾವಿರ ಕೋಟಿ ರೂಪಾಯಿಗೂ ಅಧಿಕ ಲಾಭ ಮಾಡುತ್ತಿವೆ ಎನ್ನುವುದು ಗೊತ್ತಾ? ಅದ್ಹೇಗೆ ನೋಡಿ... ಕುತೂಹಲದ ವಿಷ್ಯ ಇಲ್ಲಿದೆ...
06:57 PM (IST) Jul 23
ತಾಯಿ ಆನೆಯೊಂದು ತನ್ನ ಮರಿಗೆ ಸ್ನಾನ ಮಾಡಿಸುತ್ತಿರುವ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಹಾಗೆಯೇ ಶೋಲಾ ಕಾಡಿನಲ್ಲಿ ಆನೆಗಳ ಹಿಂಡು ನಿದ್ದೆ ಮಾಡುವ ಇನ್ನೊಂದು ವಿಡಿಯೋ ಕೂಡ ವೈರಲ್ ಆಗಿದೆ.
06:55 PM (IST) Jul 23
06:12 PM (IST) Jul 23
ಒಂದೇ ಶಾಲೆಯಲ್ಲಿ ಕಲಿತ ನಾಲ್ವರು ಸ್ನೇಹಿತರು ದಶಕಗಳ ನಂತರ ಸೇನೆಯ ವಿವಿದ ಉನ್ನತ ಹುದ್ದೆಯ ಅಧಿಕಾರಿಗಳಾಗಿ ತಮ್ಮ ಶಾಲೆಗೆ ಭೇಟಿ ನೀಡಿದರು. ಒಂದೇ ಬೆಂಚಿನಲ್ಲಿ ಕುಳಿತು ಪಾಠ ಕೇಳಿದ ಈ ಸ್ನೇಹಿತರು ಈಗ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
03:57 PM (IST) Jul 23
ತಮ್ಮ ಸಂಸ್ಥೆಯ ವಿದೇಶಿ ಗ್ರಾಹಕನನ್ನು ಸಂಸ್ಥೆಯ ಉದ್ಯೋಗಿಗಳು ಬಿಂದಾಸ್ ಆಗಿ ಡಾನ್ಸ್ ಮಾಡುವ ಮೂಲಕ ಸ್ವಾಗತಿಸಿದ್ದು, ಈ ಘಟನೆಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
03:39 PM (IST) Jul 23
ED ಪ್ರಕಾರ, ಮಿಂತ್ರಾ ಮತ್ತು ಅದರ ಸಂಬಂಧಿತ ಘಟಕಗಳು 'ಸಗಟು ನಗದು ಮತ್ತು ಸಾಗಣೆ' ವ್ಯವಹಾರಗಳಾಗಿ ಕಾರ್ಯನಿರ್ವಹಿಸುವುದಾಗಿ ಸುಳ್ಳು ಹೇಳಿಕೊಂಡು ಮಲ್ಟಿ-ಬ್ರಾಂಡ್ ಚಿಲ್ಲರೆ ವ್ಯಾಪಾರ (MBRT) ಚಟುವಟಿಕೆಗಳನ್ನು ನಡೆಸಿವೆ.
03:24 PM (IST) Jul 23
₹5,000 monthly SIP over 10, 20, and 30 year ಕೇವಲ ₹5,000 ಮಾಸಿಕ SIP ನಿಂದ ನಿವೃತ್ತಿಯ ವೇಳೆಗೆ ₹1 ಕೋಟಿಗೂ ಹೆಚ್ಚು ಹಣ ಗಳಿಸಬಹುದು. ದೀರ್ಘಾವಧಿಯ ಹೂಡಿಕೆ ಮತ್ತು ಸರಿಯಾದ ನಿಧಿ ಆಯ್ಕೆ ಮೂಲಕ ಇದು ಸಾಧ್ಯ. ಈ ಲೇಖನದಲ್ಲಿ SIP ಹೂಡಿಕೆಯ ಬಗ್ಗೆ ತಿಳಿದುಕೊಳ್ಳಿ.
02:54 PM (IST) Jul 23
ಒಳ್ಳೆ ನೀರು ಯಾವುದು ಕೆಟ್ಟ ನೀರು ಯಾವುದು ಎಂದು ಮೇಲ್ನೋಟಕ್ಕೆ ಎಂಥ ದಡ್ಡರಿಗಾದರೂ ತಿಳಿಯುತ್ತೆ. ಆದರೆ ಇಲ್ಲೊಬ್ಬರು ಇನ್ಫ್ಲುಯೆನ್ಸರ್ ತಿಳಿಯದೇ ಬೀಚ್ನಲ್ಲಿ ಕೊಳಕು ನೀರಿನಲ್ಲಿ ಸ್ನಾನ ಮಾಡಿ ಈಗ ಬಾಯ್ಬಾಯಿ ಬಡ್ಕೊಂಡಿದ್ದಾಳೆ.
01:33 PM (IST) Jul 23
HDFC, SBI ಮತ್ತು Axis ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕುಗಳಲ್ಲಿ FY25ರಲ್ಲಿ ನೇಮಕಾತಿ ಗಣನೀಯವಾಗಿ ಕುಸಿತ ಕಂಡಿದೆ. ನಿಧಾನಗತಿಯ ಬೆಳವಣಿಗೆ, ಕಡಿಮೆಯಾದ ವಿಸ್ತರಣೆ ಮತ್ತು ಸುಧಾರಿತ ಕ್ಷೀಣತೆ ಮುಂತಾದ ಅಂಶಗಳು ಇದಕ್ಕೆ ಕಾರಣ ಎನ್ನಲಾಗಿದೆ.
01:27 PM (IST) Jul 23
ಗಾಜಿಯಾಬಾದ್ನ ಹರ್ಷವರ್ಧನ್ ಜೈನ್ ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದರು, ನಕಲಿ ರಾಜತಾಂತ್ರಿಕ ಪ್ಲೇಟ್ಗಳನ್ನು ಬಳಸುತ್ತಿದ್ದರು ಮತ್ತು ವಿದೇಶಿ ಉದ್ಯೋಗಗಳನ್ನು ನೀಡುವುದಾಗಿ ಹವಾಲಾ ದಂಧೆ ನಡೆಸುತ್ತಿದ್ದರು ಎಂದು ಯುಪಿ ಎಸ್ಟಿಎಫ್ ಹೇಳಿದೆ.
01:12 PM (IST) Jul 23
ವಿದಿಶಾದಲ್ಲಿ ಲೀವಿಂಗ್ ಪಾರ್ಟನರ್ ತನ್ನ ಸಂಗಾತಿ ಮತ್ತು ಮಗಳನ್ನು ಕೊಂದು ಗೋಡೆಯ ಮೇಲೆ ಲಿಪ್ಸ್ಟಿಕ್ನಿಂದ ಕೊಲೆಯ ಕಾರಣ ಬರೆದಿದ್ದಾನೆ. ರಾತ್ರಿಯಿಡಿ ಶವಗಳೊಂದಿಗೆ ಕಳೆದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
01:04 PM (IST) Jul 23
12:35 PM (IST) Jul 23
ಮನೆಯಲ್ಲಿಯೇ ಕುಳಿತು ದಿನಸಿ ಸಾಮಗ್ರಿಗಳನ್ನು ತರಿಸಿಕೊಳ್ಳುವುದು ನಿಮಗೆ ಇದಾಗಲೇ ಗೊತ್ತು. ಆದರೆ ತಲೆಬಿಸಿ ಇಲ್ಲದೇ ದಿನಸಿ ಸಾಮಗ್ರಿಗಳಲ್ಲಿಯೂ ಉಳಿತಾಯ ಮಾಡಲು ನೆರವಾಗಲಿದೆ ಈ ಹೊಸ ಆ್ಯಪ್. ಇಲ್ಲಿದೆ ಡಿಟೇಲ್ಸ್...
12:12 PM (IST) Jul 23
ಭಾರತೀಯ ಉದ್ಯೋಗಿಯ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಎರಡೇ ದಿನಕ್ಕೆ ಸಿಂಗಾಪುರ ಮಹಿಳೆ ಸಾವನ್ನಪ್ಪಿದ್ದು, ಅಲ್ಲಿನ ವ್ಯಾಪಾರಿ ವಲಯದಲ್ಲಿ ಈ ಸಾವು ಭಯ ಮೂಡಿಸಿದೆ.
11:23 AM (IST) Jul 23
ಆಕೆಗೆ ತಾಳಿ ಕಟ್ಟಿ ಕರೆತಂದವನ್ನೇ ಯಾರೂ ಮಾಡಲೇಬಾರದ್ದಂತಹ ಪೈಶಾಚಿಕ ಕೃತ್ಯವನ್ನು ಮಾಡಿದರೆ ಅಳುವುದಾದರೂ ಯಾರ ಬಳಿ, ಇಂತಹದ್ದೊಂದು ಸಂದಿಗ್ಧ ಸ್ಥಿತಿಗೆ ಸಿಕ್ಕ ಹೆಣ್ಣೊಬ್ಬಳು ಕಡೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಹಾಗಿದ್ದರೆ ಗಂಡ ಮಾಡಿದ್ದೇನು ಇಲ್ಲಿದೆ ನೋಡಿ ಡಿಟೇಲ್ ಸ್ಟೋರಿ...
09:54 AM (IST) Jul 23
08:08 AM (IST) Jul 23
ಸಂಸತ್ತಿನ ಮುಂಗಾರು ಅಧಿವೇಶನ ಆರಂಭದ ದಿನವೇ ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್ ಅನಾರೋಗ್ಯದ ಕಾರಣ ನೀಡಿ ದಿಢೀರ್ ರಾಜೀನಾಮೆ ನೀಡಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
08:07 AM (IST) Jul 23
ತೆರಿಗೆ ಸಂಗ್ರಹದಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿರುವ ಕರ್ನಾಟಕ, ಕಳೆದೊಂದು ದಶಕದಲ್ಲಿ ತಲಾದಾಯ ಹೆಚ್ಚಳ ಪ್ರಮಾಣದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶಗಳು ಹೇಳಿವೆ.
08:07 AM (IST) Jul 23
ತನ್ನ ಒಡೆತನದ ಯಾವುದೇ ಬೋಯಿಂಗ್ 787 ಮತ್ತು 737 ಮಾದರಿಯ ವಿಮಾನಗಳಲ್ಲಿ ಇಂಧನ ನಿಯಂತ್ರಣ ಮಾಡುವ ಸ್ವಿಚ್ ವ್ಯವಸ್ಥೆಯಲ್ಲಿ ಯಾವುದೇ ಲೋಪದೋಷ ಕಂಡುಬಂದಿಲ್ಲ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.
08:07 AM (IST) Jul 23
2024ರಲ್ಲಿ ದೇಶದಲ್ಲಿ 37 ಲಕ್ಷ ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಈ ಪೈಕಿ 54 ಮಂದಿ ಶಂಕಿತ ರೇಬಿಸ್ಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.
08:06 AM (IST) Jul 23
ಬೆಂಗಳೂರು ಮತ್ತು ಕೋಲ್ಕತಾದಲ್ಲಿ ಕುಳಿತಿರುವ ಕೆಲ ನಗರ ನಕ್ಸಲರು ವಿದೇಶಗಳಿಂದ ಹಣ ಪಡೆದು ಮಹಾರಾಷ್ಟ್ರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ, ಇಲ್ಲಿನ ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದಾರೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆರೋಪಿಸಿದ್ದಾರೆ.
08:06 AM (IST) Jul 23
ಇತ್ತೀಚೆಗಷ್ಟೇ 5 ರಾಷ್ಟ್ರಗಳ ಪ್ರವಾಸ ಮುಗಿಸಿ ಬಂದ ಬೆನ್ನಲ್ಲೇ ಪ್ರಧಾನಿ ಮೋದಿ ಜು.23ರಿಂದ 4 ದಿನಗಳ ಕಾಲ ಬ್ರಿಟನ್ ಮತ್ತು ಮಾಲ್ಡೀವ್ಸ್ಗೆ ಭೇಟಿ ನೀಡಲಿದ್ದಾರೆ.
08:05 AM (IST) Jul 23
‘ಸುಶಿಕ್ಷಿತರಾಗಿರುವ ನೀವು ಜೀವನಾಂಶವನ್ನೇಕೆ ಅವಲಂಬಿಸುತ್ತೀರಾ? ನೀವೇ ಯಾಕೆ ದುಡಿಯಬಾರದು’ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾ। ಬಿ.ಆರ್. ಗವಾಯಿ ಅವರು, ವಿಚ್ಛೇದಿತ ಮಹಿಳೆಯೊಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
08:05 AM (IST) Jul 23
ಪಕ್ಷಕ್ಕಿಂತ ರಾಷ್ಟ್ರೀಯ ಭದ್ರತೆ ದೊಡ್ಡದು’ ಎಂದಿದ್ದ ಶಶಿ ತರೂರ್ ಅವರನ್ನು ಕಾಂಗ್ರೆಸ್ ಸದಸ್ಯರೆಂದು ಪರಿಗಣಿಸುವುದಿಲ್ಲ ಎಂದಿದ್ದ ಕೇರಳದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಕೆ. ಮುರಳೀಧರನ್ ಹೇಳಿಕೆಗೆ ತಿರುಗೇಟು ನೀಡಿರುವ ತರೂರ್, ‘ಪಕ್ಷದಲ್ಲಿ ಅವರ ಸ್ಥಾನವಾದರೂ ಏನು’ ಎಂದು ಕೇಳಿದ್ದಾರೆ.
08:05 AM (IST) Jul 23
ಕಾಂಗ್ರೆಸ್ ಸಂಸದ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರಿಗೆ ನೀಡಲಾಗಿದ್ದ ವೈ ಪ್ಲಸ್ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.
08:04 AM (IST) Jul 23
ದೇಣಿಗೆ ಮೂಲಕ ಬಂದ 199 ಕೋಟಿ ರು. ಆದಾಯಕ್ಕೆ ತೆರಿಗೆ ವಿನಾಯಿತಿಯ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. 2018-19ನೇ ವರ್ಷದಲ್ಲಿ 199.15 ಕೋಟಿ ರು. ಆದಾಯಕ್ಕೆ ತೆರಿಗೆ ವಿನಾಯಿತಿ ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ಮೇಲ್ಮನವಿ ನ್ಯಾಯಮಂಡಳಿ(ಐಟಿಎಟಿ) ವಜಾಗೊಳಿಸಿದೆ.
08:04 AM (IST) Jul 23
ಸೋಮವಾರದಿಂದ ಆರಂಭವಾಗಿರುವ ಸಂಸತ್ ಅಧಿವೇಶನ 2ನೇ ದಿನವೂ ವಿಪಕ್ಷಗಳ ಗದ್ದಲಕ್ಕೆ ಬಲಿಯಾಯಿತು. ಬಿಹಾರದಲ್ಲಿ ನಡೆಯುತ್ತಿರುವ ಮತಪಟ್ಟಿ ಪರಿಷ್ಕರಣೆ ಉಭಯ ಸದನಗಳಲ್ಲಿ ಕಲಾಪವನ್ನು ಬಲಿ ಪಡೆದಿದ್ದರಿಂದ ಅದು ಬುಧವಾರಕ್ಕೆ ಮುಂದೂಡಿಕೆಯಾಯಿತು.
08:03 AM (IST) Jul 23
ಹೈದರಾಬಾದ್ನ ಇಬ್ಬರು 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ರಾಡಾರ್ ತಪ್ಪಿಸುವ ಡ್ರೋನ್ಗಳನ್ನು ತಯಾರಿಸಿ ಭಾರತೀಯ ಸೇನೆಗೆ ಮಾರಾಟ ಮಾಡಿದ್ದಾರೆ. ಕ್ಯಾಮಿಕಾಜೆ ಡ್ರೋನ್ಗಳು ಗಂಟೆಗೆ 300 ಕಿ.ಮೀ ವೇಗದಲ್ಲಿ ಚಲಿಸಬಲ್ಲವು ಮತ್ತು 1 ಕೆ.ಜಿ. ಸರಕು ಹೊತ್ತೊಯ್ಯಬಲ್ಲವು.