ನವದೆಹಲಿ (ಅ.11): 'ನಮ್ಮ ನೆಲವನ್ನು ಯಾವುದೇ ಗುಂಪಿಗೂ ಇನ್ನೊಂದು ದೇಶದ ವಿರುದ್ಧ ಬಳಸಲು ಅವಕಾಶ ನೀಡುವುದಿಲ್ಲ. ಈಗಾಗಲೇ ಲಷ್ಕರ್ ಎ ತೊಯ್ದಾ ಹಾಗೂ ಜೈಷ್ ಎ ಮೊಹಮ್ಮದ್ ಸಂಘಟನೆಗಳನ್ನು ಆಫ್ಘನ್ನಲ್ಲಿ ಮಟ್ಟ ಹಾಕಲಾಗಿದೆ' ಎಂದು ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮಿರ್ ಖಾನ್ ಮುತ್ತಖಿ ಹೇಳಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
10:55 PM (IST) Oct 11
100 ಬಿಲಿಯನ್ ಡಾಲರ್ ಸೆಕೆಂಡ್ನಲ್ಲಿ ಅಳಿಸಿಹಾಕಿದ್ರು, ಮೊದಲ ಬಾರಿಗೆ ನೋವು ತೋಡಿಕೊಂಡ ಅದಾನಿ, ತಪ್ಪು ಮಾಹಿತಿ ನೀಡಿ ಅಪಾರ ನಷ್ಟ ಮಾಡಿದರು ಎಂದು ಗೌತಮ್ ಅದಾನಿ ಹೇಳಿದ್ದಾರೆ. ಅಷ್ಟಕ್ಕೂ ಅದಾನಿ ಹೇಳಿದ ಈ ನಷ್ಟ ಯಾವುದು?
10:02 PM (IST) Oct 11
ಮುಂಬೈನಲ್ಲಿ ರಿಷಬ್ ಶೆಟ್ಟಿಗೆ ಅದ್ಧೂರಿ ಹೂಮಳೆ ಸ್ವಾಗತ, ಫ್ಯಾನ್ಸ್ ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ. ತೆರೆದ ಕಾರಿನ ಮೂಲಕ ಧನ್ಯವಾದ ಹೇಳುತ್ತಾ ಹೊರಟ ರಿಷಬ್ ಶೆಟ್ಟಿಗೆ ಅಭಿಮಾನಿಗಳು ಹೂವಿನ ಮಳೆ ಸುರಿಸಿ ಪ್ರೀತಿ ತೋರಿಸಿದ್ದಾರೆ.
08:12 PM (IST) Oct 11
ಮೊದಲ ಭೇಟಿಯಲ್ಲಿ ಮದ್ವೆ ಮಾತ್ರ ಅಗ್ಬೇಡ ಸಲಹೆ ನೀಡಿದ್ದ ಶಾರುಖ್ಗೆ ಸ್ಮತಿ ಇರಾನಿ ಕೊಟ್ಟ ಉತ್ತರವೇನು?ಸ್ಮೃತಿ ಇರಾನಿ ಉತರಕ್ಕೆ ಒಂದು ಕ್ಷಣ ಶಾರುಖ್ ಖಾನ್ ತಬ್ಬಿಬ್ಬಾಗಿದ್ದರು. ಖುದ್ದು ಸ್ಮೃತಿ ಇರಾನಿ ಮೊದಲ ಭೇಟಿಯ ಮಾತುಕತೆ ವಿವರ ಬಹಿರಂಗಪಡಿಸಿದ್ದಾರೆ.
07:12 PM (IST) Oct 11
06:44 PM (IST) Oct 11
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಯಶಸ್ವಿ ಜೈಸ್ವಾಲ್ 175 ರನ್ಗಳಿಗೆ ರನೌಟ್ ಆಗಿ ದ್ವಿಶತಕ ವಂಚಿತರಾದರು. ಈ ರನೌಟ್ಗೆ ಶುಭ್ಮನ್ ಗಿಲ್ ಕಾರಣವೆಂದು ಮೈದಾನದಲ್ಲೇ ಅಸಮಾಧಾನ ಹೊರಹಾಕಿದರು.
05:42 PM (IST) Oct 11
ನವದೆಹಲಿ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಇನ್ನು ಇದೇ ವೇಳೆ ಮಾಜಿ ನಾಯಕರಾದ ರೋಹಿತ್ ಶರ್ಮಾ ಹಾಗೂ ಸೌರವ್ ಗಂಗೂಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಬ್ರೇಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
05:13 PM (IST) Oct 11
ಪ.ಬಂಗಾಳದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇ*P, ಕಾಲೇಜು ಎದುರಲ್ಲೇ ಘಟನೆ ನಡೆದಿದೆ. ವೈದ್ಯ ಮೇಲೆ ನಡೆದ ಪ್ರಕರಣದ ಹೋರಾಟಗಳು ನಡೆಯುತ್ತಿರುವ ನಡುವೆ ಇದೀಗ ಗೆಳೆಯನ ಜೊತೆಗಿದ್ದ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಪೈಶಾಚಿಕ ಕೃತ್ಯ ಎಸಗಲಾಗಿದೆ.
04:34 PM (IST) Oct 11
ಉದ್ಯಮಿ ಅನಿಲ್ ಅಂಬಾನಿ ಇಡಿ ಶಾಕ್, ರಿಲಯನ್ಸ್ ಪವರ್ ಕಾರ್ಯಾಕಾರಿ ನಿರ್ದೇಶಕ ಅರೆಸ್ಟ್ ಆಗಿದ್ದಾರೆ. 2023ರ ನಕಲಿ ಬ್ಯಾಂಕ್ ಗ್ಯಾರೆಂಟಿ ಪ್ರಕರಣದಡಿ ಇಡಿ ಅಧಿಕಾರಿಗಳು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ.
04:03 PM (IST) Oct 11
ನಟಿ ರಾಖಿ ಸಾವಂತ್ ಇದ್ದಲ್ಲಿ ಮನೋರಂಜನೆ ಗ್ಯಾರಂಟಿ. ಪರ್ಸನಲ್ ಇರಲಿ ಪ್ರೊಫೆಷನಲ್ ಲೈಫ್ ಇರಲಿ ರಾಖಿ ಸಾವಂತ್ ಲೈಫ್ಸ್ಟೈಲ್ ಫುಲ್ ಖುಲ್ಲಾಂಖುಲ್ಲಾ. ಕನ್ನಡದ ಅದರಲ್ಲೂ ಮೈಸೂರಿನ ಹುಡುಗ ಅದಿಲ್ ಖಾನ್ನನ್ನು ಮದ್ವೆಯಾಗಿ ಜೈಲಿನಲ್ಲಿ ಕಂಬಿ ಎಣಿಸುವಂತೆ ಮಾಡಿದ್ದ ರಾಖಿ ಸಾವಂತ್ ಈಗ ಮತ್ತೊಂದು ಮದ್ವೆ ಆಗ್ತಾರಾ?
03:15 PM (IST) Oct 11
ಬೆಂಗಳೂರು: ಟೀಂ ಇಂಡಿಯಾ ಯುವ ವೇಗದ ಬೌಲರ್ ಹರ್ಷಿತ್ ರಾಣಾ, ಭಾರತದ ಮೂರು ಮಾದರಿಯ ತಂಡದಲ್ಲಿ ಪದೇ ಪದೇ ಸ್ಥಾನ ಪಡೆಯುತ್ತಿದ್ದಾರೆ. ಇದು ಹಲವು ಮಾಜಿ ಕ್ರಿಕೆಟಿಗರ ಟೀಕೆಗೂ ಕಾರಣವಾಗಿದೆ. ಆದರೆ ನಿಜಕ್ಕೂ ಹರ್ಷಿತ್ ರಾಣಾ ಸ್ಥಾನ ಪಡೆಯುತ್ತಿರೋದೇಕೆ ಎನ್ನುವುದು ಬಯಲಾಗಿದೆ.
03:14 PM (IST) Oct 11
Sherry Singh Makes History Becomes First Indian to Win Mrs. Universe 2025 Crown ಶೆರ್ರಿ ಸಿಂಗ್ ಅವರು 2025 ರ ಮಿಸೆಸ್ ಯูನಿವರ್ಸ್ ಕಿರೀಟವನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ, ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
01:42 PM (IST) Oct 11
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ನಲ್ಲಿ, ಯಶಸ್ವಿ ಜೈಸ್ವಾಲ್ (173) ಹಾಗೂ ನಾಯಕ ಶುಭ್ಮನ್ ಗಿಲ್ (129*) ಅವರ ಶತಕಗಳ ನೆರವಿನಿಂದ ಟೀಂ ಇಂಡಿಯಾ 5 ವಿಕೆಟ್ಗೆ 518 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
01:11 PM (IST) Oct 11
01:04 PM (IST) Oct 11
Kerala High Court Slams Wakf Board Over Munambam Land Issue ಮುನಂಬಂ ಭೂಮಿಯನ್ನು ವಕ್ಫ್ ಎಂದು ಘೋಷಿಸುವುದನ್ನು "ಭೂಕಬಳಿಕೆ ತಂತ್ರ" ಎಂದು ಕೇರಳ ಹೈಕೋರ್ಟ್ ತೀಕ್ಷ್ಣವಾಗಿ ಹೇಳಿದೆ. ವಿವಾದಿತ ಭೂಮಿಯ ಮಾಲೀಕತ್ವದ ತನಿಖೆಗೆ ಸರ್ಕಾರ ನೇಮಿಸಿದ ಆಯೋಗವನ್ನು ನ್ಯಾಯಾಲಯ ಎತ್ತಿಹಿಡಿದಿದೆ.
12:40 PM (IST) Oct 11
ಬೆಂಗಳೂರು: ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಂದು ತಮ್ಮ 31ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹೊಸ ಗರ್ಲ್ಫ್ರೆಂಡ್ ಜತೆ ಕಾಣಿಸಿಕೊಂಡಿದ್ದು, ಹೊಸ ರೂಮರ್ಸ್ ಹುಟ್ಟುಹಾಕಿದೆ. ಅಷ್ಟಕ್ಕೂ ಯಾರೀಕೆ? ನೋಡೋಣ ಬನ್ನಿ
12:13 PM (IST) Oct 11
ಇಲ್ಲೊಬ್ಬರು ವೃದ್ಧ ಮಹಿಳೆ ತಾವು ಕಷ್ಟಪಟ್ಟು ಸಾಕಿ ಬೆಳೆಸಿದ ಬೃಹತ್ತಾದ ಆಲದ ಮರವನ್ನು ತಮ್ಮ ಮುಂದೆಯೇ ಕತ್ತರಿಸಿರುವುದನ್ನು ನೋಡಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಕತ್ತರಿಸಲ್ಪಟ್ಟಿರುವ ಅಶ್ವತ್ಥ ಮರದ ಬುಡಕ್ಕೆ ಪೂಜೆ ಮಾಡುವ ಮೂಲಕ ವೃದ್ಧ ಮಹಿಳೆ ಅದರ ಬುಡವನ್ನು ಹಿಡಿದುಕೊಂಡು ಕಣ್ಣೀರು ಹಾಕಿದ್ದಾರೆ.
11:53 AM (IST) Oct 11
11:27 AM (IST) Oct 11
Education Ministry to Introduce AI in School Curriculum from Class 3 2026-27ನೇ ಶೈಕ್ಷಣಿಕ ವರ್ಷದಿಂದ 3ನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆಯನ್ನು (AI) ಪಠ್ಯಕ್ರಮದ ಭಾಗವಾಗಿ ಪರಿಚಯಿಸಲು ಶಿಕ್ಷಣ ಸಚಿವಾಲಯ ಯೋಜಿಸುತ್ತಿದೆ.
11:11 AM (IST) Oct 11
Ex-Air Force Officer Donates ₹1.6 Cr Land for Football Ground ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ, 86 ವರ್ಷದ ಮಾಜಿ ವಾಯುಪಡೆ ಅಧಿಕಾರಿಯೊಬ್ಬರು ತಮ್ಮ ದಿವಂಗತ ಮಗನ ನೆನಪಿಗಾಗಿ 1.6 ಕೋಟಿ ರೂ. ಮೌಲ್ಯದ ಜಮೀನನ್ನು ಕ್ರೀಡಾಂಗಣ ನಿರ್ಮಿಸಲು ಪಂಚಾಯತ್ಗೆ ದಾನ ಮಾಡಿದ್ದಾರೆ.
10:36 AM (IST) Oct 11
ಭಾರತ ಪ್ರವಾಸದಲ್ಲಿರುವ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಖಿ, ನವದೆಹಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿಗೆ ಮಹಿಳಾ ಪತ್ರಕರ್ತರಿಗೆ ಪ್ರವೇಶ ನಿರಾಕರಿಸಿ ತೀವ್ರ ವಿವಾದ ಸೃಷ್ಟಿಸಿದ್ದಾರೆ.
10:28 AM (IST) Oct 11
ISPR Claims India Using Afghan Soil as Terror Base ಪಾಕಿಸ್ತಾನದ ಐಎಸ್ಪಿಆರ್ ಮಹಾನಿರ್ದೇಶಕರು, ಅಫ್ಘಾನ್ ಪ್ರದೇಶವನ್ನು ಭಾರತವು ಪಾಕಿಸ್ತಾನದ ವಿರುದ್ಧ ಭಯೋತ್ಪಾದನೆಗೆ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.
10:06 AM (IST) Oct 11
Women Journalists Banned from Afghan Foreign Minister Muttaqis Press Conference ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ನವದೆಹಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಗೆ ಮಹಿಳಾ ಪತ್ರಕರ್ತರನ್ನು ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.
09:11 AM (IST) Oct 11
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ನಲ್ಲಿ ಅಜೇಯ ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್, ಶತಕಗಳನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ಡಾನ್ ಬ್ರಾಡ್ಮನ್ರನ್ನೂ ಮೀರಿಸಿದ್ದಾರೆ. ಈ ಮೂಲಕ ಅವರು ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.
08:45 AM (IST) Oct 11
12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನ ನಾಕೌಟ್ ಮತ್ತು ಫೈನಲ್ ಪಂದ್ಯದ ವೇಳಾಪಟ್ಟಿ ಪ್ರಕಟಗೊಂಡಿದೆ. ಅಕ್ಟೋಬರ್ 26ರಿಂದ ನವದೆಹಲಿಯಲ್ಲಿ ಪ್ಲೇ-ಆಫ್ ಪಂದ್ಯಗಳು ಆರಂಭವಾಗಲಿದ್ದು, ಅಕ್ಟೋಬರ್ 31ರಂದು ಫೈನಲ್ ನಡೆಯಲಿದೆ.
07:50 AM (IST) Oct 11
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ತಂಬಾಕು ಕಾರ್ಖಾನೆಯಲ್ಲಿ ಶುಕ್ರವಾರ ಭೀಕರ ಅಗ್ನಿ ಅವಘಢ ಸಂಭವಿಸಿ 550 ಕೋಟಿ ರು. ಮೌಲ್ಯದ ತಂಬಾಕು ಬೆಂಕಿಗೆ ಆಹುತಿಯಾಗಿದೆ. ನಸುಕಿನ ಜಾವ ಬೆಂಕಿ ಹತ್ತಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
07:50 AM (IST) Oct 11
ಉದ್ಯಮಿಯೊಬ್ಬರಿಗೆ 60 ಕೋಟಿ ರು. ವಂಚಿಸಿರುವ ಆರೋಪ ಎದುರಿಸುತ್ತಿರುವ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ, ‘500 ಹಾಗೂ 1000 ರು. ನೋಟು ರದ್ದತಿ ಕಾರಣ ಉದ್ಯಮಕ್ಕೆ ಭಾರೀ ನಷ್ಟವಾಗಿದ್ದರಿಂದ ಸಾಲ ಮರುಪಾವತಿಸಲು ಸಾಧ್ಯವಾಗಲಿಲ್ಲ’ ಎಂದು ಹೇಳಿದ್ದಾರೆ.