Published : Oct 11, 2025, 07:49 AM ISTUpdated : Oct 11, 2025, 10:55 PM IST

India News Live: 100 ಬಿಲಿಯನ್ ಡಾಲರ್ ಸೆಕೆಂಡ್‌ನಲ್ಲಿ ಅಳಿಸಿಹಾಕಿದ್ರು, ಮೊದಲ ಬಾರಿಗೆ ನೋವು ತೋಡಿಕೊಂಡ ಅದಾನಿ

ಸಾರಾಂಶ

ನವದೆಹಲಿ (ಅ.11): 'ನಮ್ಮ ನೆಲವನ್ನು ಯಾವುದೇ ಗುಂಪಿಗೂ ಇನ್ನೊಂದು ದೇಶದ ವಿರುದ್ಧ ಬಳಸಲು ಅವಕಾಶ ನೀಡುವುದಿಲ್ಲ. ಈಗಾಗಲೇ ಲಷ್ಕ‌ರ್ ಎ ತೊಯ್ದಾ ಹಾಗೂ ಜೈಷ್ ಎ ಮೊಹಮ್ಮದ್ ಸಂಘಟನೆಗಳನ್ನು ಆಫ್ಘನ್‌ನಲ್ಲಿ ಮಟ್ಟ ಹಾಕಲಾಗಿದೆ' ಎಂದು ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮಿರ್ ಖಾನ್ ಮುತ್ತಖಿ ಹೇಳಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

10:55 PM (IST) Oct 11

100 ಬಿಲಿಯನ್ ಡಾಲರ್ ಸೆಕೆಂಡ್‌ನಲ್ಲಿ ಅಳಿಸಿಹಾಕಿದ್ರು, ಮೊದಲ ಬಾರಿಗೆ ನೋವು ತೋಡಿಕೊಂಡ ಅದಾನಿ

100 ಬಿಲಿಯನ್ ಡಾಲರ್ ಸೆಕೆಂಡ್‌ನಲ್ಲಿ ಅಳಿಸಿಹಾಕಿದ್ರು, ಮೊದಲ ಬಾರಿಗೆ ನೋವು ತೋಡಿಕೊಂಡ ಅದಾನಿ, ತಪ್ಪು ಮಾಹಿತಿ ನೀಡಿ ಅಪಾರ ನಷ್ಟ ಮಾಡಿದರು ಎಂದು ಗೌತಮ್ ಅದಾನಿ ಹೇಳಿದ್ದಾರೆ. ಅಷ್ಟಕ್ಕೂ ಅದಾನಿ ಹೇಳಿದ ಈ ನಷ್ಟ ಯಾವುದು?

Read Full Story

10:02 PM (IST) Oct 11

ಮುಂಬೈನಲ್ಲಿ ರಿಷಬ್ ಶೆಟ್ಟಿಗೆ ಅದ್ಧೂರಿ ಹೂಮಳೆ ಸ್ವಾಗತ, ಫ್ಯಾನ್ಸ್ ನಿಯಂತ್ರಿಸಲು ಪೊಲೀಸರ ಹರಸಾಹಸ

ಮುಂಬೈನಲ್ಲಿ ರಿಷಬ್ ಶೆಟ್ಟಿಗೆ ಅದ್ಧೂರಿ ಹೂಮಳೆ ಸ್ವಾಗತ, ಫ್ಯಾನ್ಸ್ ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ. ತೆರೆದ ಕಾರಿನ ಮೂಲಕ ಧನ್ಯವಾದ ಹೇಳುತ್ತಾ ಹೊರಟ ರಿಷಬ್ ಶೆಟ್ಟಿಗೆ ಅಭಿಮಾನಿಗಳು ಹೂವಿನ ಮಳೆ ಸುರಿಸಿ ಪ್ರೀತಿ ತೋರಿಸಿದ್ದಾರೆ.

Read Full Story

08:12 PM (IST) Oct 11

ಮೊದಲ ಭೇಟಿಯಲ್ಲಿ ಮದ್ವೆ ಮಾತ್ರ ಅಗ್ಬೇಡ ಸಲಹೆ ನೀಡಿದ್ದ ಶಾರುಖ್‌ಗೆ ಸ್ಮತಿ ಇರಾನಿ ಕೊಟ್ಟ ಉತ್ತರವೇನು?

ಮೊದಲ ಭೇಟಿಯಲ್ಲಿ ಮದ್ವೆ ಮಾತ್ರ ಅಗ್ಬೇಡ ಸಲಹೆ ನೀಡಿದ್ದ ಶಾರುಖ್‌ಗೆ ಸ್ಮತಿ ಇರಾನಿ ಕೊಟ್ಟ ಉತ್ತರವೇನು?ಸ್ಮೃತಿ ಇರಾನಿ ಉತರಕ್ಕೆ ಒಂದು ಕ್ಷಣ ಶಾರುಖ್ ಖಾನ್ ತಬ್ಬಿಬ್ಬಾಗಿದ್ದರು. ಖುದ್ದು ಸ್ಮೃತಿ ಇರಾನಿ ಮೊದಲ ಭೇಟಿಯ ಮಾತುಕತೆ ವಿವರ ಬಹಿರಂಗಪಡಿಸಿದ್ದಾರೆ.

Read Full Story

07:12 PM (IST) Oct 11

ದೀಪಾವಳಿಗೆ ಮನೆ ಕ್ಲೀನ್ ಮಾಡ್ತಿದ್ದ ಅಮ್ಮನಿಗೆ ಸಿಕ್ತು ಬಂಡಲ್‌ಗಟ್ಟಲೇ 2 ಸಾವಿರ ರೂ. ನೋಟು - ಮುಂದೇನು?

ದೀಪಾವಳಿ ಹಬ್ಬಕ್ಕಾಗಿ ಮನೆಯನ್ನು ಸ್ವಚ್ಛಗೊಳಿಸುವಾಗ, ಕುಟುಂಬವೊಂದಕ್ಕೆ ಹಳೆಯ ಸೆಟ್-ಟಾಪ್ ಬಾಕ್ಸ್‌ನಲ್ಲಿ 2 ಲಕ್ಷ ಮೌಲ್ಯದ 2000 ರೂಪಾಯಿ ನೋಟುಗಳು ಸಿಕ್ಕಿವೆ. 2023ರಲ್ಲಿಯೇ ಈ ನೋಟುಗಳನ್ನು ಬ್ಯಾನ್ ಮಾಡಲಾಗಿದ್ದು, ಈ ಹಣವನ್ನು ಈಗ ಏನು ಮಾಡುವುದೆಂದು ತಿಳಿಯದೆ ಕುಟುಂಬವು ಆನ್‌ಲೈನ್‌ನಲ್ಲಿ ಸಲಹೆ ಕೇಳಿದೆ.
Read Full Story

06:44 PM (IST) Oct 11

ರನೌಟ್ ಆದ್ರೂ ಮೈದಾನ ತೊರೆಯಲು ನಿರಾಕರಿಸಿದ ಯಶಸ್ವಿ ಜೈಸ್ವಾಲ್! ವಿಡಿಯೋ ವೈರಲ್

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ 175 ರನ್‌ಗಳಿಗೆ ರನೌಟ್ ಆಗಿ ದ್ವಿಶತಕ ವಂಚಿತರಾದರು. ಈ ರನೌಟ್‌ಗೆ ಶುಭ್‌ಮನ್ ಗಿಲ್ ಕಾರಣವೆಂದು ಮೈದಾನದಲ್ಲೇ ಅಸಮಾಧಾನ ಹೊರಹಾಕಿದರು.

Read Full Story

05:42 PM (IST) Oct 11

ರೋಹಿತ್ ಶರ್ಮಾ, ಸೌರವ್ ಗಂಗೂಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಮುರಿದ ಶುಭ್‌ಮನ್ ಗಿಲ್!

ನವದೆಹಲಿ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಇನ್ನು ಇದೇ ವೇಳೆ ಮಾಜಿ ನಾಯಕರಾದ ರೋಹಿತ್ ಶರ್ಮಾ ಹಾಗೂ ಸೌರವ್ ಗಂಗೂಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಬ್ರೇಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

 

Read Full Story

05:13 PM (IST) Oct 11

ಪ.ಬಂಗಾಳದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇ*P, ಕಾಲೇಜು ಎದುರಲ್ಲೇ ಘಟನೆ

ಪ.ಬಂಗಾಳದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇ*P, ಕಾಲೇಜು ಎದುರಲ್ಲೇ ಘಟನೆ ನಡೆದಿದೆ. ವೈದ್ಯ ಮೇಲೆ ನಡೆದ ಪ್ರಕರಣದ ಹೋರಾಟಗಳು ನಡೆಯುತ್ತಿರುವ ನಡುವೆ ಇದೀಗ ಗೆಳೆಯನ ಜೊತೆಗಿದ್ದ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಪೈಶಾಚಿಕ ಕೃತ್ಯ ಎಸಗಲಾಗಿದೆ.

Read Full Story

04:34 PM (IST) Oct 11

ಉದ್ಯಮಿ ಅನಿಲ್ ಅಂಬಾನಿ ಇಡಿ ಶಾಕ್, ರಿಲಯನ್ಸ್ ಪವರ್ ಕಾರ್ಯಾಕಾರಿ ನಿರ್ದೇಶಕ ಅರೆಸ್ಟ್

ಉದ್ಯಮಿ ಅನಿಲ್ ಅಂಬಾನಿ ಇಡಿ ಶಾಕ್, ರಿಲಯನ್ಸ್ ಪವರ್ ಕಾರ್ಯಾಕಾರಿ ನಿರ್ದೇಶಕ ಅರೆಸ್ಟ್ ಆಗಿದ್ದಾರೆ. 2023ರ ನಕಲಿ ಬ್ಯಾಂಕ್ ಗ್ಯಾರೆಂಟಿ ಪ್ರಕರಣದಡಿ ಇಡಿ ಅಧಿಕಾರಿಗಳು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ.

Read Full Story

04:03 PM (IST) Oct 11

ನಟನ ಕಣ್ಣಲ್ಲಿ ಕಣ್ಣಿಟ್ಟು ನಂಗೆ ಪತಿ ಸಿಕ್ಕರೂ ಎಂದ ರಾಖಿ ಸಾವಂತ್ - ಕಕ್ಕಾಬಿಕ್ಕಿಯಾದ ನಟ

ನಟಿ ರಾಖಿ ಸಾವಂತ್ ಇದ್ದಲ್ಲಿ ಮನೋರಂಜನೆ ಗ್ಯಾರಂಟಿ. ಪರ್ಸನಲ್ ಇರಲಿ ಪ್ರೊಫೆಷನಲ್ ಲೈಫ್ ಇರಲಿ ರಾಖಿ ಸಾವಂತ್ ಲೈಫ್‌ಸ್ಟೈಲ್ ಫುಲ್ ಖುಲ್ಲಾಂಖುಲ್ಲಾ. ಕನ್ನಡದ ಅದರಲ್ಲೂ ಮೈಸೂರಿನ ಹುಡುಗ ಅದಿಲ್ ಖಾನ್‌ನನ್ನು ಮದ್ವೆಯಾಗಿ ಜೈಲಿನಲ್ಲಿ ಕಂಬಿ ಎಣಿಸುವಂತೆ ಮಾಡಿದ್ದ ರಾಖಿ ಸಾವಂತ್ ಈಗ ಮತ್ತೊಂದು ಮದ್ವೆ ಆಗ್ತಾರಾ?

Read Full Story

03:15 PM (IST) Oct 11

ಹರ್ಷಿತ್ ರಾಣಾಗೆ ಪದೇ ಪದೇ ಭಾರತ ತಂಡದಲ್ಲಿ ಸ್ಥಾನ ಸಿಗುತ್ತಿರುವುದೇಕೆ? ಕೊನೆಗೂ ಬಯಲಾಯ್ತು ಸತ್ಯ

ಬೆಂಗಳೂರು: ಟೀಂ ಇಂಡಿಯಾ ಯುವ ವೇಗದ ಬೌಲರ್ ಹರ್ಷಿತ್ ರಾಣಾ, ಭಾರತದ ಮೂರು ಮಾದರಿಯ ತಂಡದಲ್ಲಿ ಪದೇ ಪದೇ ಸ್ಥಾನ ಪಡೆಯುತ್ತಿದ್ದಾರೆ. ಇದು ಹಲವು ಮಾಜಿ ಕ್ರಿಕೆಟಿಗರ ಟೀಕೆಗೂ ಕಾರಣವಾಗಿದೆ. ಆದರೆ ನಿಜಕ್ಕೂ ಹರ್ಷಿತ್ ರಾಣಾ ಸ್ಥಾನ ಪಡೆಯುತ್ತಿರೋದೇಕೆ ಎನ್ನುವುದು ಬಯಲಾಗಿದೆ.

 

Read Full Story

03:14 PM (IST) Oct 11

ಭಾರತದ ಮೊಟ್ಟಮೊದಲ ಮಿಸೆಸ್‌ ಯುನಿವರ್ಸ್‌ ಗೆದ್ದು ಇತಿಹಾಸ ನಿರ್ಮಿಸಿದ ಶೆರ್ರಿ ಸಿಂಗ್‌!

Sherry Singh Makes History Becomes First Indian to Win Mrs. Universe 2025 Crown ಶೆರ್ರಿ ಸಿಂಗ್ ಅವರು 2025 ರ ಮಿಸೆಸ್ ಯูನಿವರ್ಸ್ ಕಿರೀಟವನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ, ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

Read Full Story

01:42 PM (IST) Oct 11

ವಿಂಡೀಸ್ ಎದುರು ಬೃಹತ್ ಮೊತ್ತ ಗಳಿಸಿ ಮೊದಲ ಇನ್ನಿಂಗ್ಸ್‌ ಡಿಕ್ಲೇರ್ ಮಾಡಿದ ಟೀಂ ಇಂಡಿಯಾ!

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್‌ನಲ್ಲಿ, ಯಶಸ್ವಿ ಜೈಸ್ವಾಲ್ (173) ಹಾಗೂ ನಾಯಕ ಶುಭ್‌ಮನ್ ಗಿಲ್ (129*) ಅವರ ಶತಕಗಳ ನೆರವಿನಿಂದ ಟೀಂ ಇಂಡಿಯಾ 5 ವಿಕೆಟ್‌ಗೆ 518 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. 

Read Full Story

01:11 PM (IST) Oct 11

ಭರ್ಜರಿ ಶತಕ ಸಿಡಿಸಿ ವಿರಾಟ್ ಕೊಹ್ಲಿಯ ಅಪರೂಪದ ದಾಖಲೆ ಸರಿಗಟ್ಟಿದ ಶುಭ್‌ಮನ್ ಗಿಲ್!

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ನಾಯಕ ಶುಭ್‌ಮನ್ ಗಿಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ, ನಾಯಕನಾಗಿ ಕ್ಯಾಲೆಂಡರ್ ವರ್ಷವೊಂದರಲ್ಲಿ 5 ಶತಕ ಸಿಡಿಸಿದ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಗಿಲ್ ಅವರ ಈ ಇನ್ನಿಂಗ್ಸ್‌ನಿಂದ ಭಾರತ ತಂಡ ಬೃಹತ್ ಮೊತ್ತ ಕಲೆಹಾಕಿದೆ.
Read Full Story

01:04 PM (IST) Oct 11

'ಭೂಕಬಳಿಕೆ ತಂತ್ರ..' ಮುನಂಬಮ್‌ ಭೂಮಿ ವಿಚಾರವಾಗಿ ವಕ್ಫ್‌ ಬೋರ್ಡ್‌ಗೆ ಛೀಮಾರಿ ಹಾಕಿದ ಕೇರಳ ಹೈಕೋರ್ಟ್‌!

Kerala High Court Slams Wakf Board Over Munambam Land Issue ಮುನಂಬಂ ಭೂಮಿಯನ್ನು ವಕ್ಫ್ ಎಂದು ಘೋಷಿಸುವುದನ್ನು "ಭೂಕಬಳಿಕೆ ತಂತ್ರ" ಎಂದು ಕೇರಳ ಹೈಕೋರ್ಟ್ ತೀಕ್ಷ್ಣವಾಗಿ ಹೇಳಿದೆ. ವಿವಾದಿತ ಭೂಮಿಯ ಮಾಲೀಕತ್ವದ ತನಿಖೆಗೆ ಸರ್ಕಾರ ನೇಮಿಸಿದ ಆಯೋಗವನ್ನು ನ್ಯಾಯಾಲಯ ಎತ್ತಿಹಿಡಿದಿದೆ.

Read Full Story

12:40 PM (IST) Oct 11

ಹಾರ್ದಿಕ್ ಪಾಂಡ್ಯ ಲವ್ ಸ್ಟೋರಿ; ಹೊಸ ಗರ್ಲ್‌ ಫ್ರೆಂಡ್ ಜತೆ ಬರ್ತ್‌ಡೇ ಸೆಲಿಬ್ರೇಟ್? ಯಾರೀಕೆ?

ಬೆಂಗಳೂರು: ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಂದು ತಮ್ಮ 31ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹೊಸ ಗರ್ಲ್‌ಫ್ರೆಂಡ್ ಜತೆ ಕಾಣಿಸಿಕೊಂಡಿದ್ದು, ಹೊಸ ರೂಮರ್ಸ್ ಹುಟ್ಟುಹಾಕಿದೆ. ಅಷ್ಟಕ್ಕೂ ಯಾರೀಕೆ? ನೋಡೋಣ ಬನ್ನಿ

Read Full Story

12:13 PM (IST) Oct 11

ತಾನು ಸಾಕಿ ಬೆಳೆಸಿದ ಬೃಹತ್ ಅಶ್ವತ್ಥ ಮರಕ್ಕೆ ಕತ್ತರಿ ಹಾಕಿದ ಕಿಡಿಗೇಡಿಗಳು - ಕಣ್ಣೀರಿಟ್ಟ ವೃದ್ಧ ಮಹಿಳೆ

ಇಲ್ಲೊಬ್ಬರು ವೃದ್ಧ ಮಹಿಳೆ ತಾವು ಕಷ್ಟಪಟ್ಟು ಸಾಕಿ ಬೆಳೆಸಿದ ಬೃಹತ್ತಾದ ಆಲದ ಮರವನ್ನು ತಮ್ಮ ಮುಂದೆಯೇ ಕತ್ತರಿಸಿರುವುದನ್ನು ನೋಡಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಕತ್ತರಿಸಲ್ಪಟ್ಟಿರುವ ಅಶ್ವತ್ಥ ಮರದ ಬುಡಕ್ಕೆ ಪೂಜೆ ಮಾಡುವ ಮೂಲಕ ವೃದ್ಧ ಮಹಿಳೆ ಅದರ ಬುಡವನ್ನು ಹಿಡಿದುಕೊಂಡು ಕಣ್ಣೀರು ಹಾಕಿದ್ದಾರೆ.

Read Full Story

11:53 AM (IST) Oct 11

ರೋಹಿತ್ ಶರ್ಮಾ ಬಾರಿಸಿದ ಸಿಕ್ಸರ್‌ಗೆ ಅವರದ್ದೇ ಲ್ಯಾಂಬೊರ್ಗಿನಿ ಕಾರು ಗ್ಲಾಸ್ ಪುಡಿ-ಪುಡಿ! ವಿಡಿಯೋ ವೈರಲ್

ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗಾಗಿ ಅಭ್ಯಾಸ ನಡೆಸಿದರು. ಈ ವೇಳೆ ಅವರು ಬಾರಿಸಿದ ಸಿಕ್ಸರ್‌ವೊಂದು ಅವರದ್ದೇ ಐಷಾರಾಮಿ ಕಾರಿಗೆ ಬಡಿದಿದೆ ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

11:27 AM (IST) Oct 11

2026-27 ಶೈಕ್ಷಣಿಕ ವರ್ಷದಿಂದ 3ನೇ ತರಗತಿಯಿಂದಲೇ AI ಪಾಠ ಸೇರಿಸಲು ಶಿಕ್ಷಣ ಇಲಾಖೆ ನಿರ್ಧಾರ

Education Ministry to Introduce AI in School Curriculum from Class 3 2026-27ನೇ ಶೈಕ್ಷಣಿಕ ವರ್ಷದಿಂದ 3ನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆಯನ್ನು (AI) ಪಠ್ಯಕ್ರಮದ ಭಾಗವಾಗಿ ಪರಿಚಯಿಸಲು ಶಿಕ್ಷಣ ಸಚಿವಾಲಯ ಯೋಜಿಸುತ್ತಿದೆ. 

Read Full Story

11:11 AM (IST) Oct 11

ಮಗನ ನೆನಪಿಗಾಗಿ 1.6 ಕೋಟಿ ಮೌಲ್ಯದ ಜಾಗ ಕ್ರೀಡಾಂಗಣ ಮಾಡಲು ದಾನ - ಮಾಜಿ ಏರ್‌ಪೋರ್ಸ್ ಅಧಿಕಾರಿಯ ಔದಾರ್ಯ!

Ex-Air Force Officer Donates ₹1.6 Cr Land for Football Ground ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ, 86 ವರ್ಷದ ಮಾಜಿ ವಾಯುಪಡೆ ಅಧಿಕಾರಿಯೊಬ್ಬರು ತಮ್ಮ ದಿವಂಗತ ಮಗನ ನೆನಪಿಗಾಗಿ 1.6 ಕೋಟಿ ರೂ. ಮೌಲ್ಯದ ಜಮೀನನ್ನು ಕ್ರೀಡಾಂಗಣ ನಿರ್ಮಿಸಲು ಪಂಚಾಯತ್‌ಗೆ ದಾನ ಮಾಡಿದ್ದಾರೆ. 

Read Full Story

10:36 AM (IST) Oct 11

ದೆಹಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿಗೆ ಮಹಿಳಾ ಪತ್ರಕರ್ತರಿಗೆ ನಿಷೇಧ ಹೇರಿದ ಅಫ್ಘಾನ್ ಸಚಿವ

ಭಾರತ ಪ್ರವಾಸದಲ್ಲಿರುವ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಖಿ, ನವದೆಹಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿಗೆ ಮಹಿಳಾ ಪತ್ರಕರ್ತರಿಗೆ ಪ್ರವೇಶ ನಿರಾಕರಿಸಿ ತೀವ್ರ ವಿವಾದ ಸೃಷ್ಟಿಸಿದ್ದಾರೆ. 

Read Full Story

10:28 AM (IST) Oct 11

ಕಾಬೂಲ್‌ ಏರ್‌ಸ್ಟ್ರೈಕ್‌ ಬಗ್ಗೆ ಪಾಕಿಸ್ತಾನ ಮೌನ, ಅಫ್ಘಾನಿಸ್ತಾನದ ಟೆರರ್‌ ಬೇಸ್‌ ಭಾರತ ಬಳಸಿಕೊಳ್ಳುತ್ತಿದೆ ಎಂದ ISPR

ISPR Claims India Using Afghan Soil as Terror Base ಪಾಕಿಸ್ತಾನದ ಐಎಸ್‌ಪಿಆರ್ ಮಹಾನಿರ್ದೇಶಕರು, ಅಫ್ಘಾನ್ ಪ್ರದೇಶವನ್ನು ಭಾರತವು ಪಾಕಿಸ್ತಾನದ ವಿರುದ್ಧ ಭಯೋತ್ಪಾದನೆಗೆ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. 

Read Full Story

10:06 AM (IST) Oct 11

ಅಫ್ಘನ್‌ ವಿದೇಶಾಂಗ ಸಚಿವರ ಸುದ್ದಿಗೋಷ್ಠಿಗೆ ಮಹಿಳಾ ಪತ್ರಕರ್ತರಿಗೆ ಬ್ಯಾನ್‌!

Women Journalists Banned from Afghan Foreign Minister Muttaqis Press Conference ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ನವದೆಹಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಗೆ ಮಹಿಳಾ ಪತ್ರಕರ್ತರನ್ನು ನಿಷೇಧಿಸಲಾಗಿದೆ ಎಂದು ವರದಿಯಾಗಿದೆ. 

Read Full Story

09:11 AM (IST) Oct 11

ವಿಂಡೀಸ್ ಎದುರು ಭರ್ಜರಿ ಶತಕ ಸಿಡಿಸಿ ಡಾನ್ ಬ್ರಾಡ್ಮನ್, ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ ಅಜೇಯ ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್, ಶತಕಗಳನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ಡಾನ್ ಬ್ರಾಡ್ಮನ್‌ರನ್ನೂ ಮೀರಿಸಿದ್ದಾರೆ. ಈ ಮೂಲಕ ಅವರು ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.

Read Full Story

08:45 AM (IST) Oct 11

ಪ್ರೊ ಕಬಡ್ಡಿ ಪ್ಲೇ-ಆಫ್ ವೇಳಾಪಟ್ಟಿ ಪ್ರಕಟ, ಬೆಂಗಳೂರಿಗೆ ಶಾಕ್!

12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ನಾಕೌಟ್ ಮತ್ತು ಫೈನಲ್ ಪಂದ್ಯದ ವೇಳಾಪಟ್ಟಿ ಪ್ರಕಟಗೊಂಡಿದೆ. ಅಕ್ಟೋಬರ್ 26ರಿಂದ ನವದೆಹಲಿಯಲ್ಲಿ ಪ್ಲೇ-ಆಫ್ ಪಂದ್ಯಗಳು ಆರಂಭವಾಗಲಿದ್ದು, ಅಕ್ಟೋಬರ್ 31ರಂದು ಫೈನಲ್ ನಡೆಯಲಿದೆ.  

Read Full Story

07:50 AM (IST) Oct 11

ಆಂಧ್ರದಲ್ಲಿ ಅಗ್ನಿ ದುರಂತ : ₹550 ಕೋಟಿ ತಂಬಾಕು ಬೆಂಕಿಗೆ ಆಹುತಿ

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ತಂಬಾಕು ಕಾರ್ಖಾನೆಯಲ್ಲಿ ಶುಕ್ರವಾರ ಭೀಕರ ಅಗ್ನಿ ಅವಘಢ ಸಂಭವಿಸಿ 550 ಕೋಟಿ ರು. ಮೌಲ್ಯದ ತಂಬಾಕು ಬೆಂಕಿಗೆ ಆಹುತಿಯಾಗಿದೆ. ನಸುಕಿನ ಜಾವ ಬೆಂಕಿ ಹತ್ತಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

Read Full Story

07:50 AM (IST) Oct 11

ನೋಟು ರದ್ದತಿಯಿಂದ ₹60 ಕೋಟಿ ಸಾಲ ಕಟ್ಟಿಲ್ಲ : ಕುಂದ್ರಾ

ಉದ್ಯಮಿಯೊಬ್ಬರಿಗೆ 60 ಕೋಟಿ ರು. ವಂಚಿಸಿರುವ ಆರೋಪ ಎದುರಿಸುತ್ತಿರುವ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್‌ ಕುಂದ್ರಾ, ‘500 ಹಾಗೂ 1000 ರು. ನೋಟು ರದ್ದತಿ ಕಾರಣ ಉದ್ಯಮಕ್ಕೆ ಭಾರೀ ನಷ್ಟವಾಗಿದ್ದರಿಂದ ಸಾಲ ಮರುಪಾವತಿಸಲು ಸಾಧ್ಯವಾಗಲಿಲ್ಲ’ ಎಂದು ಹೇಳಿದ್ದಾರೆ.

 

Read Full Story

More Trending News