ಪಟನಾ : ಬಿಹಾರ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ತರಹೇವಾರಿ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ, ‘ಇಂಥ ಕೆಟ್ಟ ಭಾಷೆ ಬಳಸುವ ಪ್ರಧಾನಿಯನ್ನು ನಾನು ನೋಡಿಲ್ಲ’ ಎಂದು ವಿಪಕ್ಷ ಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಕಿಡಿಕಾರಿದ್ದಾರೆ.
‘ಆರ್ಜೆಡಿಯವರು ಕಾಂಗ್ರೆಸ್ನ ತಲೆಗೆ ‘ಕಟ್ಟಾ’ (ನಾಡಬಂದೂಕಿಗೆ ಇರುವ ಬಿಹಾರದ ಪಕ್ಕಾ ಹಳ್ಳಿ ಭಾಷೆ) ಇಟ್ಟು ಸಿಎಂ ಅಭ್ಯರ್ಥಿ ಹುದ್ದೆ ಬಾಚಿಕೊಂಡರು’ ಎಂದು ಭಾನುವಾರ ಮೋದಿ ಆರೋಪಿಸಿದ್ದರು. ಇದಕ್ಕೆ ಸೋಮವಾರ ಪ್ರತಿಕ್ರಿಯಿಸಿದ ತೇಜಸ್ವಿ ಯಾದವ್ ಅವರು, ‘ಯಾವುದೇ ಪ್ರಧಾನಿ ಇಂತಹ ಪದಗಳನ್ನು ಬಳಸುವುದನ್ನು ನಾನು ಎಂದಿಗೂ ಕೇಳಿಲ್ಲ. ಪ್ರಧಾನಿಯವರ ಹೇಳಿಕೆಯ ಬಗ್ಗೆ ನಾನು ಏನೂ ಹೇಳಲಾರೆ. ಇದು ಅವರ ಆಲೋಚನಾ ಪ್ರಕ್ರಿಯೆಯನ್ನು ತೋರಿಸುತ್ತದೆ" ಎಂದು ಹೇಳಿದರು. ‘ಪ್ರಧಾನಿ ಗುಜರಾತ್ಗೆ ಹೋದಾಗಲೆಲ್ಲಾ ಐಟಿ, ಸೆಮಿಕಂಡಕ್ಟರ್ ಘಟಕಗಳು ಮತ್ತು ಡೇಟಾ ಕೇಂದ್ರ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಬಿಹಾರಕ್ಕೆ ಬಂದಾಗ ಅವರು ‘ಕಟ್ಟಾ‘ ಬಗ್ಗೆ ಮಾತನಾಡುತ್ತಾರೆ’ ಎಂದು ಯಾದವ್ ಆರೋಪಿಸಿದರು.
09:38 PM (IST) Nov 04
ಚಿನ್ನದ ಬೆಲೆಯಲ್ಲಿ ಮತ್ತೆ 1,200 ರೂ ಇಳಿಕೆ, ಖರೀದಿಗೆ ಇದು ಸೂಕ್ತವ ಸಮಯವೇ? ಕಾರಣ ದಿನದಿಂದ ದಿನಕ್ಕೆ ಬಂಗಾರ ಬೆಲೆ ಇಳಿಕೆಯಾಗುತ್ತಿದೆ. ಹೀಗಾಗಿ ಕಾಯಬೇಕಾ ಅಥವಾ ಏರಿಕೆ ಕಾಣುವ ಮೊದಲೇ ಖರೀದಿಸಬೇಕಾ ಅನ್ನೋ ಚರ್ಚೆ ಶುರುವಾಗಿದೆ.
09:02 PM (IST) Nov 04
ಫಿಸಿಕ್ಸ್ ಅರಿತರೂ ಕಾನೂನು ಮರೆತ ಫಿಸಿಕ್ಸ್ ವಾಲ್ಲಾ ವಿರುದ್ಧ ದೂರು, ಸಂಕಷ್ಟ ತಂದ ಅದ್ಭುತ ವಿಡಿಯೋ, 6 ಮಹೀದ್ರ ಸ್ಕಾರ್ಪಿಯೋ ಕಾರುಗಳ ಮೂಲಕ ಸುಂದರ ತಾಣದಲ್ಲಿ ಮಾಡಿದ ಜಾಹೀರಾತು ವಿಡಿಯೋದಿಂದ ಫಿಸಿಕ್ಸ್ ವಾಲ್ಲಾ ವಿರುದ್ದ ದೂರು ದಾಖಲಾಗಿದೆ.
07:50 PM (IST) Nov 04
China New Gold Rule Removal of VAT Exemption Likely to Hike Global Price ಚೀನಾ ಚಿನ್ನದ ಮೇಲಿನ ವ್ಯಾಟ್ ತೆಗೆದುಹಾಕಲು ನಿರ್ಧರಿಸಿದೆ. ಇದು ಬೆಲೆಗಳನ್ನು ಹೆಚ್ಚಿಸುತ್ತದೆ, ಅದರ ಖರೀದಿಯನ್ನು ಹೆಚ್ಚು ದುಬಾರಿಯನ್ನಾಗಿ ಮಾಡುತ್ತದೆ. ಹೊಸ ನಿಯಮವು ನವೆಂಬರ್ 1, 2025 ರಿಂದ ಜಾರಿಗೆ ಬಂದಿದೆ.
07:26 PM (IST) Nov 04
ಭಾರತೀಯ ಸೇನೆ ಶೇ.10ರಷ್ಟಿರುವ ಮೇಲ್ಜಾತಿ ಹಿಡಿತದಲ್ಲಿದೆ, ರಾಹುಲ್ ಗಾಂಧಿ ವಿವಾದದ ಹಿಂದೆ ಷಡ್ಯಂತ್ರ ಅಡಗಿದೆ. ಕೇಂದ್ರದಲ್ಲಿ ಅಧಿಕಾರ ಗಿಟ್ಟಿಸಲು ಇದೀಗ ರಾಹುಲ್ ಗಾಂಧಿ ನೆರೆ ದೇಶಗಳ ಮಾಡೆಲ್ ಅನುಸರಿಸುತ್ತಿದ್ದಾರ? ಇದಕ್ಕಾಗಿ ವೇದಿಕೆ ಸಿದ್ದಪಡಿಸುತ್ತಿದ್ದರಾ?
07:17 PM (IST) Nov 04
Prakash Raj Slammed by Child Artistes After Kerala State Awards ಪ್ರಕಾಶ್ ರಾಜ್ ನೇತೃತ್ವದ ತೀರ್ಪುಗಾರರು ಅತ್ಯುತ್ತಮ ಮಕ್ಕಳ ಚಿತ್ರ ಮತ್ತು ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಗಳನ್ನು ತಡೆಹಿಡಿದ ನಂತರ 2025 ರ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ವಿವಾದವನ್ನು ಹುಟ್ಟುಹಾಕಿದೆ.
07:03 PM (IST) Nov 04
ಸ್ಯಾನ್ ಫ್ರಾನ್ಸಿಸ್ಕೋದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ತಾಂತ್ರಿಕ ತೊಂದರೆಯ ಅನುಮಾನದಿಂದ ಮಂಗೋಲಿಯಾದ ಉಲಾನ್ಬತಾರ್ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. ಇದರಿಂದಾಗಿ 228 ಪ್ರಯಾಣಿಕರು 12 ಗಂಟೆಗಳ ಕಾಲ ಅಲ್ಲಿ ಸಿಲುಕಿದ್ದಾರೆ.
06:50 PM (IST) Nov 04
Mobile Recharge Plans Likely to See 10-12% Price Hike by December End, Driven by Jio-Airtel Growth ಟೆಲಿಕಾಂ ಕಂಪನಿಗಳು ತಮ್ಮ ರೀಚಾರ್ಜ್ ಯೋಜನೆಗಳ ದರವನ್ನು ಶೀಘ್ರದಲ್ಲೇ ಶೇಕಡಾ 10-12 ರಷ್ಟು ಹೆಚ್ಚಿಸಲು ಸಜ್ಜಾಗುತ್ತಿವೆ.
06:28 PM (IST) Nov 04
Breaking ಬಿಲಾಸಪುರದಲ್ಲಿ ಪ್ರಯಾಣಿಕರ ರೈಲು ಅಪಘಾತ, ಸಾವಿನ ಸಂಖ್ಯೆ 5ಕ್ಕೆ ಏರಿಕೆ, ಗೂಡ್ಸ್ ರೈಲಿಗೆ ಡಿಕ್ಕಿಯಾದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದೆ. ಹಲವರು ಗಾಯಗೊಂಡಿದ್ದಾರೆ.
06:09 PM (IST) Nov 04
ಭಾರತೀಯ ಮಹಿಳಾ ಕ್ರಿಕೆಟ್ ತಂಡ 2025ರ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ದೆಹಲಿಯ ಯುವ ಕ್ರಿಕೆಟರ್ ಪ್ರತೀಕಾ ರಾವಲ್ ಪ್ರಮುಖ ಪಾತ್ರ ವಹಿಸಿದ್ದರು. ಹೀಗಿದ್ದರೂ ಆಕೆಗೆ ಚಾಂಪಿಯನ್ ತಂಡದ ಮೆಡಲ್ ಸಿಗಲಿಲ್ಲ. ಈಕೆಯ ಕ್ರಿಕೆಟ್ ಜರ್ನಿ ಹಲವರಿಗೆ ಸ್ಪೂರ್ತಿ.
05:59 PM (IST) Nov 04
Hinduja Group chairman passes away: ಹಿಂದೂಜಾ ಗ್ರೂಪ್ನ ಅಧ್ಯಕ್ಷರಾದ ಗೋಪಿಚಂದ್ ಪಿ ಹಿಂದೂಜಾ ಅವರು ಲಂಡನ್ನಲ್ಲಿ ತಮ್ಮ 85ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ನಷ್ಟದಲ್ಲಿದ್ದ ಅಶೋಕ್ ಲೇಲ್ಯಾಂಡ್ನಂತಹ ಕಂಪನಿಗಳನ್ನು ಮೇಲೆತ್ತಿ, ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಅವರದ್ದು.
05:13 PM (IST) Nov 04
₹14000 ಕೋಟಿ ವಸೂಲಿ ಲೆಕ್ಕ ಕೊಡ್ರಪ್ಪ, ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಿದ ವಿಜಯ್ ಮಲ್ಯ ಹೈಕೋರ್ಟ್ ಅರ್ಜಿ, ವಿವಿದ ವಿಚಾರಣೆಗೆ ಮಲ್ಯ ಹಾಜರಾಗಿಲ್ಲ ಎಂಬ ಹೈಕೋರ್ಟ್ ಪ್ರಶ್ನೆಗೂ ಮಲ್ಯ ಪರ ವಕೀಲರು ವಾದ ಮುಂದಿಟ್ಟಿದ್ದಾರೆ. ಲಂಡನ್ನಲ್ಲೇ ಕುಳಿತ ಮಲ್ಯ ಹಾಕಿದ ಗೂಗ್ಲಿ ಇದೀಗ ಗಿರಗಿರ ತಿರುಗುತ್ತಿದೆ.
05:11 PM (IST) Nov 04
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಿನಿ ಹರಾಜಿಗೂ ಮುನ್ನ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡುತ್ತಿದೆ. ತಂಡದ ಅತ್ಯಂತ ದುಬಾರಿ ಆಟಗಾರರನ್ನು ಸಹ ಬಿಟ್ಟುಕೊಡಲು ಸಿದ್ಧವಾಗಿದೆ ಎಂಬ ಮಾಹಿತಿ ಇದೆ. ಅಸಲಿಗೆ ಕಾವ್ಯಾ ಮಾರನ್ ಅವರ ತಂತ್ರವೇನು?
04:55 PM (IST) Nov 04
ಏಕದಿನ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ತಂಡಕ್ಕೆ ಕೋಟಿಗಟ್ಟಲೆ ಬಹುಮಾನದ ಸುರಿಮಳೆಯಾಗಿದೆ. ಆದರೆ, ಪುರುಷರ ತಂಡಕ್ಕೆ ಹೋಲಿಸಿದರೆ ಬಹುಮಾನದ ಮೊತ್ತ ಮತ್ತು ಬಿಸಿಸಿಐ ವಾರ್ಷಿಕ ಗುತ್ತಿಗೆಯ ಸಂಭಾವನೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ.
04:38 PM (IST) Nov 04
ಆ್ಯಂಡ್ರಾಯ್ಡ್ ಅಥವಾ ಐಫೋನ್ ಯಾವುದು ಹೆಚ್ಚು ಸುರಕ್ಷಿತ? ಗೂಗಲ್-YouGov ಸರ್ವೆ ವರದಿ, ಬಹುತೇಕರು ಐಫೋನ್ ದುಬಾರಿಯಾದರೂ ಸುರಕ್ಷತೆ ಹಾಗೂ ಗಣಮಟ್ಟದ ಕಾರಣದಿಂದ ಖರೀದಿಸುತ್ತಾರೆ. ಆದರೆ ಅಧ್ಯಯನ ವರದಿಯಲ್ಲಿ ಅಚ್ಚರಿ ಮಾಹಿತಿ ಹೊರಬಂದಿದೆ.
04:03 PM (IST) Nov 04
Bihar bridge collapse Araria: ಸುಮಾರು ₹4 ಕೋಟಿ ವೆಚ್ಚದಲ್ಲಿ ಆರು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಸೇತುವೆಯೊಂದು ಕುಸಿದು ಬಿದ್ದಿದೆ. ಬಿಹಾರ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಈ ಘಟನೆ ನಡೆದಿದ್ದು, ಇದು ರಾಜ್ಯದಲ್ಲಿ ಸೇತುವೆ ಕುಸಿತದ ಸರಣಿ ಘಟನೆಗಳ ಮುಂದುವರಿದ ಭಾಗವಾಗಿದೆ.
03:46 PM (IST) Nov 04
ಗರ್ಲ್ಫ್ರೆಂಡ್ಗಾಗಿ 530 ಕೋಟಿ ರೂ ಸರ್ಕಾರದ ವಿಮಾನ ಬಳಸಿದ್ರಾ FBI ಮುಖ್ಯಸ್ಥ ಕಾಶ್ ಪಟೇಲ್, ಟೀಕೆ, ಆರೋಪಿಗಳಿಗೆ ಕಾಶ್ ಪಟೇಲ್ ಉತ್ತರಿಸಿದ್ದಾರೆ. ಇದೇ ವೇಳೆ ಪತ್ನಿ ಬಗ್ಗೆ ಮೌನವಾಗಿರುವ ಕಾಶ್ ಪಟೇಲ್ ಗರ್ಲ್ಫ್ರೆಂಡ್ ಪರ ಬ್ಯಾಟ್ ಬೀಸುತ್ತಿದ್ದಾರೆ ಎಂದು ಮತ್ತೊಂದು ಆರೋಪ ಕೇಳಿಬಂದಿದೆ.
03:11 PM (IST) Nov 04
Free Flight Ticket Cancellation/Change Within 48 Hours of Booking ಈ ನಿಯಮದ ಪ್ರಕಾರ, ಬುಕಿಂಗ್ ಮಾಡಿದ 48 ಗಂಟೆಗಳ ಒಳಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಟಿಕೆಟ್ಗಳನ್ನು ರದ್ದುಗೊಳಿಸಲು ಅವಕಾಶ ನೀಡಲಿದೆ.
03:09 PM (IST) Nov 04
ನಿಮ್ಮ ವ್ಯಾಟ್ಸಾಪ್ಗೆ ವಾಹನದ RTO ಚಲನ್ ಬಂದಿದೆಯಾ? ಅಪ್ಪಿ ತಪ್ಪಿಯೂ ಓಪನ್ ಮಾಡಬೇಡಿ, ಕಾರಣ ಹೊಸ ಸ್ಕ್ಯಾಮ್ ಶುರುವಾಗಿದ್ದು, ಡೌನ್ಲೋಡ್ ಮಾಡಿದರೆ, ಓಪನ್ ಮಾಡಿದರೆ ನಿಮ್ಮ ಫೋನ್ ಹ್ಯಾಕ್ ಆಗಲಿದೆ.
03:04 PM (IST) Nov 04
Celina Jaitly moves delhi court: ಬಾಲಿವುಡ್ ನಟಿ ಸೆಲೀನಾ ಜೇಟ್ಲಿ, ಯುಎಇನಲ್ಲಿ ಬಂಧಿತರಾಗಿರುವ ತಮ್ಮ ಸೋದರ, ನಿವೃತ್ತ ಮೇಜರ್ ವಿಕ್ರಾಂತ್ ಕುಮಾರ್ ಜೇಟ್ಲಿಗಾಗಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವಿಕ್ರಾಂತ್ ಅವರ ಬಿಡುಗಡೆಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
01:42 PM (IST) Nov 04
01:02 PM (IST) Nov 04
Hyderabad cricket fans viral video: ಭಾರತ ಮಹಿಳಾ ಕ್ರಿಕೆಟ್ ತಂಡದ ವಿಶ್ವಕಪ್ ಗೆಲುವನ್ನು ಹೈದರಾಬಾದ್ನಲ್ಲಿ ಯುವಕರು ವಿಶಿಷ್ಟವಾಗಿ ಸಂಭ್ರಮಿಸಿದ್ದಾರೆ. ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಯನ್ನೇ ಗಾಳಿಯಲ್ಲಿ ಹಾರಿಸಿ ಕುಣಿದಾಡಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
11:51 AM (IST) Nov 04
Coimbatore rape suspects ತಮಿಳುನಾಡಿನ ಕೊಯಮತ್ತೂರಿನಲ್ಲಿ, ತನ್ನ ಗೆಳೆಯನೊಂದಿಗೆ ಕಾರಿನಲ್ಲಿದ್ದ ಸ್ನಾತಕೋತ್ತರ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳು ಅಪಹರಿಸಿ ಸಾಮೂಹಿಕ ಅತ್ಯಾ*ಚಾರ ಎಸಗಿದ್ದಾರೆ. ಗೆಳೆಯನ ಮೇಲೆ ಹಲ್ಲೆ ನಡೆಸಿ, ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಈ ಘೋರ ಕೃತ್ಯವೆಸಗಿದ್ದಾರೆ.
11:44 AM (IST) Nov 04
10:41 AM (IST) Nov 04
ಹರ್ಮನ್ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಐಸಿಸಿ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಐತಿಹಾಸಿಕ ಸಂಭ್ರಮದ ನಡುವೆಯೇ, ಮಹಿಳಾ ಕ್ರಿಕೆಟ್ ಕುರಿತು ಸೌರವ್ ಗಂಗೂಲಿ ನೀಡಿದ್ದ ಹಳೆಯ ಹೇಳಿಕೆಯ ವಿಡಿಯೋವೊಂದು ವೈರಲ್ ಆಗಿ, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
08:57 AM (IST) Nov 04
ಮುಂಬೈ: ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಚೊಚ್ಚಲ ಐಸಿಸಿ ಏಕದಿನ ಟ್ರೋಫಿ ಗೆದ್ದು ಬೀಗಿದೆ.ಇದರ ಬೆನ್ನಲ್ಲೇ ಹರ್ಮನ್ ನಾಯಕತ್ವದಿಂದ ಕೆಳಗಿಳಿಯಲಿ ಎಂದು ಕನ್ನಡತಿ ಹಾಗೂ ಭಾರತದ ಮೊದಲ ಮಹಿಳಾ ಕ್ಯಾಪ್ಟನ್ ಶಾಂತಾ ರಂಗಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.