Published : Sep 30, 2025, 06:51 AM ISTUpdated : Sep 30, 2025, 11:12 PM IST

India Latest News Live: ಪ್ರಖ್ಯಾತ ಡಾನ್ಸರ್‌ ಇದ್ದ ಕಾರ್‌ ರಿಕ್ಷಾಗೆ ಢಿಕ್ಕಿ; ಅಪಾಯದಿಂದ ಪಾರಾದ ಸೋಶಿಯಲ್‌ ಮೀಡಿಯಾ ಸ್ಟಾರ್‌!

ಸಾರಾಂಶ

ಚೆನ್ನೈ: ಟಿವಿಕೆ ಪಕ್ಷದ ಪ್ರಚಾರ ಸಭೆಗೆ ನಟ ವಿಜಯ್‌ ಅವರು ಉದ್ದೇಶಪೂರ್ವಕವಾಗಿ ವಿಳಂಬವಾಗಿ ಆಗಮಿಸಿದ್ದು, ಸ್ಥಳಕ್ಕೆ ಬಂದ ನಂತರವೂ ವಾಹನದೊಳಗೇ ಕೆಲ ಹೊತ್ತು ಉಳಿದಿದ್ದು ಕಾಲ್ತುಳಿತಕ್ಕೆ ಕಾರಣ ಎಂದು ಕರೂರು ಪೊಲೀಸರ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. 41 ಮಂದಿ ಸಾವಿನ ಕುರಿತ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಈ ಅಂಶ ಪ್ರಸ್ತಾಪಿಸಲಾಗಿದೆ. ಎಫ್‌ಐಆರ್‌ನಲ್ಲಿ ವಿಜಯ್‌ ಹೆಸರು ದಾಖಲಿಸಿಲ್ಲ. ಬದಲಾಗಿ ಟಿವಿಕೆ ಪಕ್ಷದ ಮೂವರು ಜಿಲ್ಲಾ ಮುಖಂಡರ ಹೆಸರು ಉಲ್ಲೇಖಿಸಲಾಗಿದೆ.

Gautami Patil Vehicle

11:12 PM (IST) Sep 30

ಪ್ರಖ್ಯಾತ ಡಾನ್ಸರ್‌ ಇದ್ದ ಕಾರ್‌ ರಿಕ್ಷಾಗೆ ಢಿಕ್ಕಿ; ಅಪಾಯದಿಂದ ಪಾರಾದ ಸೋಶಿಯಲ್‌ ಮೀಡಿಯಾ ಸ್ಟಾರ್‌!

Gautami Patil Vehicle Accident ಪ್ರಸಿದ್ಧ ಡಾನ್ಸರ್ ಗೌತಮಿ ಪಾಟೀಲ್ ಅವರ ಕಾರು ಪುಣೆಯ ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ರಿಕ್ಷಾಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ರಿಕ್ಷಾ ಚಾಲಕ ಗಾಯಗೊಂಡಿದ್ದು, ಅಪಘಾತದ ಸಮಯದಲ್ಲಿ ಗೌತಮಿ ಕಾರಿನಲ್ಲಿ ಇರಲಿಲ್ಲ. 

Read Full Story

09:45 PM (IST) Sep 30

ಕೋವಿಡ್‌ ಟೈಮ್‌ನಲ್ಲಿ ಲಸಿಕೆ ಉತ್ಪಾದನೆ ಮಾಡಿ ಜನರ ಜೀವ ಉಳಿಸಿದ್ದ ವ್ಯಕ್ತಿ ಆರ್‌ಸಿಬಿಗೆ ಹೊಸ ಬಾಸ್‌?

Adar Poonawalla RCB sale ಕೋವಿಶೀಲ್ಡ್‌ ಲಸಿಕೆ ಖ್ಯಾತಿಯ ಸೀರಮ್‌ ಇನ್ಸ್‌ಟಿಟ್ಯೂಟ್‌ ಸಿಇಒ ಆದರ್‌ ಪೂನಾವಾಲಾ, ಐಪಿಎಲ್‌ನ ಆರ್‌ಸಿಬಿ ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿದ್ದಾರೆ ಎಂದು ವರದಿಯಾಗಿದೆ. ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿಯವರ ಪೋಸ್ಟ್ ಈ ಊಹಾಪೋಹ ನೀಡಿದೆ.

Read Full Story

09:12 PM (IST) Sep 30

ಕಾಲ್ತುಳಿತ ದುರಂತ ಮಾಸುವ ಮುನ್ನವೇ ತಮಿಳುನಾಡಲ್ಲಿ ಮತ್ತೊಂದು ದುರಂತ, ಕಮಾನು ಕುಸಿದು 9 ಸಾವು!

North Chennai Power Plant Arch Collapse Kills 9 Workers ಎನ್ನೋರ್‌ನ ಉತ್ತರ ಚೆನ್ನೈ ಉಷ್ಣ ವಿದ್ಯುತ್ ಸ್ಥಾವರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಮಾನು ಕುಸಿದು ಒಂಬತ್ತು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಭೀಕರ ಅಪಘಾತದಲ್ಲಿ ಐದು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

Read Full Story

08:36 PM (IST) Sep 30

ದಸರಾ, ದೀಪಾವಳಿಗೆ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ - 30 ದಿನಗಳ ಸಂಬಳ ಬೋನಸ್ ಘೋಷಣೆ!

Central Govt Announces 30 Days Ad hoc Bonus ಮೋದಿ ಸರ್ಕಾರವು 2024-25ನೇ ಸಾಲಿಗೆ ಕೇಂದ್ರದ ಗ್ರೂಪ್ ಸಿ ಮತ್ತು ನಾನ್-ಗೆಜೆಟೆಡ್ ಗ್ರೂಪ್ ಬಿ ನೌಕರರಿಗೆ ಉತ್ಪಾದಕತೆ ಆಧಾರಿತವಲ್ಲದ ಬೋನಸ್ ಘೋಷಿಸಿದೆ. ಈ ಅಡ್-ಹಾಕ್ ಬೋನಸ್ 30 ದಿನಗಳ ಸಂಬಳಕ್ಕೆ ಸಮಾನವಾಗಿದೆ.

Read Full Story

08:36 PM (IST) Sep 30

ಸಲಿಂಗಿ ಮೇಕಪ್ ಆರ್ಟಿಸ್ಟ್‌ ಮಾತಿಗೆ ಶಾಕ್ ಆದ ಐಶ್ವರ್ಯಾ ರೈ - ಆಫ್ ಸ್ಕ್ರೀನ್ ವೀಡಿಯೋ ಭಾರಿ ವೈರಲ್

Aishwarya Rai fan love story: ಪ್ಯಾರೀಸ್ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿರುವ ನಟಿ ಐಶ್ವರ್ಯಾ ರೈ  ವೀಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಮೇಕಪ್ ಆರ್ಟಿಸ್ಟ್ ಆದಿತ್ಯ ಮದಿರಾಜು, ತಮ್ಮ ಹಾಗೂ ತಮ್ಮ ಪತಿಯ ಪ್ರೇಮಕಥೆಗೆ ಐಶ್ವರ್ಯಾ ರೈ ಹೇಗೆ ಕಾರಣರಾದರು ಎಂಬ ವೈಯಕ್ತಿಕ ವಿಚಾರವನ್ನು ಹಂಚಿಕೊಂಡಿದ್ದಾರೆ

Read Full Story

07:58 PM (IST) Sep 30

ಯಾರ ಸರ್ಕಾರ ಗೊತ್ತಾ? ಐ ಲವ್ ಮೊಹಮ್ಮದ್ ಪ್ರತಿಭಟನೆಯ ಮೌಲ್ವಿ ವಿರುದ್ಧ ನುಗ್ಗಿದ ಯೋಗಿ ಬುಲ್ಡೋಜರ್

ಯಾರ ಸರ್ಕಾರ ಗೊತ್ತಾ? ಯೋಗಿ ವಾರ್ನಿಂಗ್ ಬೆನ್ನಲ್ಲೇ ಮೌಲನಾ ವಿರುದ್ಧ ಬುಲ್ಡೋಜರ್ ಘರ್ಜನೆಯಾಗಿದೆ. ಐ ಲವ್ ಮೊಹಮ್ಮದ್ ಪ್ರತಿಭಟನೆಗೆ ಪ್ರಚೋದನೆ, ಬೆಂಬಲ ನೀಡಿದ ಆರೋಪ ಎದುರಿಸುತ್ತಿರುವ ಮೌಲನಾ ಮೊಹ್ಸಿನ್ ರಾಜಾ ಅಕ್ರಮ ಕಟ್ಟಡಗಳು ಧ್ವಂಸಗೊಂಡಿದೆ.

Read Full Story

07:32 PM (IST) Sep 30

ಎಐ ಬೆಳೆಯುತ್ತಿರುವ ಸಂದರ್ಭದಲ್ಲಿ ಭಾರತೀಯ ವೃತ್ತಿಪರರಿಂದ ಮಾನವೀಯ ಕೌಶಲ್ಯಗಳತ್ತ ಚಿತ್ತ!

ಲಿಂಕ್ಡ್‌ಇನ್ ವರದಿಯ ಪ್ರಕಾರ, ಕೃತಕ ಬುದ್ಧಿಮತ್ತೆಯು (ಎಐ) ಪುನರಾವರ್ತಿತ ಕೆಲಸಗಳನ್ನು ವಹಿಸಿಕೊಳ್ಳುತ್ತಿರುವುದರಿಂದ ಭಾರತೀಯ ವೃತ್ತಿಪರರು ಸೃಜನಶೀಲತೆ ಮತ್ತು ಸಂವಹನ ಅಗತ್ಯವಿರುವ ಮಾನವೀಯ ಕೌಶಲ್ಯಗಳ ಹುದ್ದೆಗಳತ್ತ ಸಾಗುತ್ತಿದ್ದಾರೆ. ಎಐ ಅನ್ನು ಉತ್ಪಾದಕತೆ ಹೆಚ್ಚಿಸುವ ಸಾಧನವಾಗಿ ನೋಡಲಾಗುತ್ತಿದೆ.

Read Full Story

06:11 PM (IST) Sep 30

ಸಾಹಸದ ವೇಳೆ ಕೆಳಗೆ ಬಿದ್ದು ಸರ್ಕಸ್ ಕಲಾವಿದೆ ಮರೀನಾ ಸಾವು

Trapeze stunt show tragedy: ಜರ್ಮನಿಯಲ್ಲಿ ನಡೆದ ಸರ್ಕಸ್ ಪ್ರದರ್ಶನದ ವೇಳೆ, 27 ವರ್ಷದ ಟ್ರಪೆಜ್ ಕಲಾವಿದೆ ಮರೀನಾ ಸುಮಾರು ಐದು ಮೀಟರ್ ಎತ್ತರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಸುರಕ್ಷತಾ ಹಗ್ಗವಿಲ್ಲದೆ ಏಕವ್ಯಕ್ತಿ ಸಾಹಸ ಪ್ರದರ್ಶಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.

Read Full Story

05:01 PM (IST) Sep 30

ಟಿಸಿಎಸ್‌ನಿಂದ ಮತ್ತೊಂದು ಶಾಕ್, 12 ಸಾವಿರ ಬಳಿಕ ಇದೀಗ 80 ಸಾವಿರ ಉದ್ಯೋಗ ಕಡಿತ

ಟಿಸಿಎಸ್‌ನಿಂದ ಮತ್ತೊಂದು ಶಾಕ್, 12 ಸಾವಿರ ಬಳಿಕ ಇದೀಗ 80 ಸಾವಿರ ಉದ್ಯೋಗ ಕಡಿತ, ಈಗಾಗಲೇ ಈ ಪ್ರಕ್ರಿಯೆ ಆರಂಭಗೊಂಡಿದೆ. ಈ ಉದ್ಯೋಗ ಕಡಿತದ ಅಡಿ ಹಲವು ಕೆಲಸ ಕಳೆದುಕೊಂಡಿದ್ದಾರೆ. ಹಲವರಿಗೆ ಯಾವುದೇ ಪರಿಹಾರವೂ ನೀಡಿಲ್ಲ. 

Read Full Story

04:53 PM (IST) Sep 30

ಭಾರತಕ್ಕೆ ಈಗಲೂ ಏಷ್ಯಾಕಪ್ ಟ್ರೋಫಿ ಕೊಡಲು ರೆಡಿ, ಆದ್ರೆ ಒಂದು ಕಂಡೀಷನ್ ಎಂದ ನಖ್ವಿ! ಏನದು?

ದುಬೈ: 17ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ ಟ್ರೋಫಿ ಸಿಕ್ಕಿಲ್ಲ. ಇದೀಗ ಟ್ರೋಫಿ ಬೇಕಿದ್ದರೇ ಒಂದು ಕಂಡೀಷನ್ ಇದೆ ಅಂತ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೊಸ ರಾಗ ಎಳೆದಿದ್ದಾರೆ.

Read Full Story

04:52 PM (IST) Sep 30

ಕರೂರು ಕಾಲ್ತುಳಿತಕ್ಕೆ ಸ್ಟ್ಯಾಲಿನ್‌ ನೇರ ಕಾರಣ ಎಂದ ವಿಜಯ್‌ ಜೋಸೆಫ್‌!

Vijay Blames Stalin for Karur Stampede FIR ಪಕ್ಷದ ರಾಲಿ ವೇಳೆ ನಡೆದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿ ನಟ ವಿಜಯ್ ವೀಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಘಟನೆಗೆ ತೀವ್ರ ದುಃಖ ವ್ಯಕ್ತಪಡಿಸಿರುವ ಅವರು, ಇದೊಂದು ರಾಜಕೀಯ ಪಿತೂರಿ ಎಂದಿದ್ದಾರೆ.

Read Full Story

04:51 PM (IST) Sep 30

35 ಕೋಟಿ ಮೌಲ್ಯದ ಡ್ರಗ್ಸ್‌ನೊಂದಿಗೆ ಸಿಕ್ಕಿಬಿದ್ದ 'ಸ್ಟೂಡೆಂಟ್ ಆಫ್ ದಿ ಇಯರ್' ನಟ

'ಸ್ಟೂಡೆಂಟ್ ಆಫ್ ದಿ ಇಯರ್' ಚಲನಚಿತ್ರದ ನಟನೊಬ್ಬನನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ 35 ಕೋಟಿ ಮೌಲ್ಯದ 3.5 ಕೆಜಿ ಕೊಕೇನ್‌ನೊಂದಿಗೆ ಬಂಧಿಸಲಾಗಿದೆ. ಸಿಂಗಾಪುರದಿಂದ ಬಂದಿಳಿದ ಈ ನಟನ ಗುರುತನ್ನು ಗೌಪ್ಯವಾಗಿಡಲಾಗಿದೆ.

Read Full Story

04:08 PM (IST) Sep 30

ಇದು ಭಾರತದ ಕಂಪನಿ, ಇಲ್ಲೇ ತೆರಿಗೆ ಕಟ್ಟುತ್ತಿದ್ದೇವೆ, ಗೊಂದಲಕ್ಕೆ ಸ್ಪಷ್ಟನೆ ಕೊಟ್ಟ ಝೋಹೋ ಸಂಸ್ಥಾಪಕ

ಇದು ಭಾರತದ ಕಂಪನಿ, ಇಲ್ಲೇ ತೆರಿಗೆ ಕಟ್ಟುತ್ತಿದ್ದೇವೆ, ಗೊಂದಲಕ್ಕೆ ಸ್ಪಷ್ಟನೆ ಕೊಟ್ಟ ಝೋಹೋ ಸಂಸ್ಥಾಪಕ ಶ್ರೀಧರ್ ವೆಂಬು. ಝೋಹೋ ಎಲ್ಲಾ ಪ್ರಾಡಕ್ಟ್ ಭಾರತದಲ್ಲೇ ಅಭಿವೃದ್ಧಿ ಮಾಡಲಾಗಿದೆ. ಮುಖ್ಯ ಕಚೇರಿ, ತೆರಿಗೆಯನ್ನು ಇಲ್ಲೇ ಪಾವತಿಸುತ್ತಿದ್ದೇವೆ ಎಂದಿದ್ದಾರೆ.

Read Full Story

02:42 PM (IST) Sep 30

ಪಾಕಿಸ್ತಾನದ ಪ್ಯಾರಾ ಮಿಲಿಟರಿ ಕಚೇರಿ ಮುಂದೆಯೇ ಪ್ರಬಲ ಕಾರ್ ಬಾಂಬ್ ಸ್ಪೋಟ - 10 ಸಾವು

ಪಾಕಿಸ್ತಾನದ ಬಲೋಚ್ ಪ್ರಾಂತ್ಯದಲ್ಲಿ ಭೀಕರವಾದ ಕಾರ್‌ ಬಾಂಬ್ ಸ್ಫೋಟಗೊಂಡಿದ್ದು, ಈ ದುರಂತದಲ್ಲಿ ಕನಿಷ್ಠ 10 ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.

Read Full Story

02:16 PM (IST) Sep 30

ತನ್ನ ಗರ್ಭಿಣಿಯಾಗಿಸಿ ಮದುವೆಗೊಪ್ಪದ ಬಾಯ್‌ಫ್ರೆಂಡ್ ಕತೆ ಮುಗಿಸಿದ 16ರ ಅಪ್ರಾಪ್ತೆ

Teenage Girl Kills Boyfriend: ಅಪ್ರಾಪ್ತೆಯೊಬ್ಬಳು ತನ್ನನ್ನು ಗರ್ಭಿಣಿಯಾಗಿಸಿದ ಮದುವೆಗೊಪ್ಪದ ಗೆಳೆಯನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆದಂತಹ ಆಘಾತಕಾರಿ ಘಟನೆ ಛತ್ತೀಸ್‌ಗಢದ ರಾಯ್ಪುರದಲ್ಲಿ ನಡೆದಿದೆ. ಇಂಜಿನಿಯರಿಂಗ್ ವಿದ್ಯಾರ್ಥಿ ಮೊಹಮ್ಮದ್ ಸದ್ದಾಂ ಕೊಲೆಯಾದವ.

Read Full Story

01:22 PM (IST) Sep 30

ಸಾವೆನ್ ಹರೇಂದ್ರ ಸಿಕ್ಸ್ಟಿ, ಪ್ರಿನ್ಸಿಪಲ್ ಬರೆದ ಚೆಕ್ ಸ್ಪೆಲ್ಲಿಂಗ್ ನೋಡಿ ಸುಸ್ತಾದ ಬ್ಯಾಂಕ್ ಸಿಬ್ಬಂದಿ

ಸಾವೆನ್ ಹರೇಂದ್ರ ಸಿಕ್ಸ್ಟಿ, ಪ್ರಿನ್ಸಿಪಲ್ ಬರೆದ ಚೆಕ್ ಸ್ಪೆಲ್ಲಿಂಗ್ ನೋಡಿ ಸುಸ್ತಾದ ಬ್ಯಾಂಕ್ ಸಿಬ್ಬಂದಿ, ಶಾಲಾ ಬಿಸಿಯೂಟದ ಸಿಬ್ಬಂದಿಗೆ ಬಾಕಿ ಮೊತ್ತ ನೀಡಲು ಪ್ರಿನ್ಸಿಪಲ್ ಚೆಕ್ ಬರೆದುಕೊಟ್ಟಿದ್ದಾರೆ. ಆದರೆ ಈ ಚೆಕ್ ರಿಜೆಕ್ಟ್ ಆಗಿದ್ದು ಮಾತ್ರವಲ್ಲ, ಬ್ಯಾಂಕ್ ಸಿಬ್ಬಂದಿ ಕಂಗಾಲಾಗಿದ್ದಾರೆ.

 

Read Full Story

01:07 PM (IST) Sep 30

ಸೋತು ಸುಣ್ಣವಾದ ಪಾಕ್ ಗಾಯದ ಮೇಲೆ ಮತ್ತೆ ಬರೆ ಎಳೆದ ಸೂರ್ಯಕುಮಾರ್ ಯಾದವ್!

ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಭಾರತ, ಪಹಲ್ಗಾಂ ದಾಳಿಯನ್ನು ಖಂಡಿಸಿ ಪಾಕ್ ಗೃಹ ಸಚಿವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ಈ ನಡುವೆ, ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಪಂದ್ಯದ ಸಂಭಾವನೆಯನ್ನು ಸೇನೆ ಮತ್ತು ಸಂತ್ರಸ್ತರಿಗೆ ಅರ್ಪಿಸಿ ದೇಶಪ್ರೇಮ ಮೆರೆದಿದ್ದಾರೆ.
Read Full Story

01:05 PM (IST) Sep 30

Arattai App - ವಾಟ್ಸ್ ಆ್ಯಪ್‌ಗೆ ಠಕ್ಕರ್ ಕೊಡಲು ಬರುತ್ತಿದೆ ದೇಸಿ ನಿರ್ಮಿತ ಅರಟ್ಟೈ

alternative app to WhatsApp: ಜೊಹೊ ಕಾರ್ಪೊರೇಷನ್ ನಿರ್ಮಿತ 'ಅರಟೈ' ಎಂಬ ಹೊಸ ದೇಶಿಯ ಮೆಸೇಜಿಂಗ್ ಆಪ್, ವಾಟ್ಸಾಪ್‌ಗೆ ಪರ್ಯಾಯವಾಗಿ ಅಪಾರ ಜನಪ್ರಿಯತೆ ಗಳಿಸುತ್ತಿದೆ. ಕೇವಲ ದಿನವೂ 3 ಲಕ್ಷಕ್ಕು ಅಧಿಕ ಜನ ಆಪ್ ಡೌನ್ಲೋಡ್ ಮಾಡುತ್ತಿದ್ದಾರೆ.

Read Full Story

12:38 PM (IST) Sep 30

30 ವರ್ಷ ಪೂರೈಸಿದ್ದು ಹೃದಯಸ್ಪರ್ಶಿ, ಕಳೆದ ಮೈಲಿಗಲ್ಲುಗಳನ್ನು ನೆನಪಿಸಿಕೊಳ್ಳುವ ಸಮಯ; ಏಷ್ಯಾನೆಟ್ ನ್ಯೂಸ್‌ಗೆ ಪ್ರಧಾನಿ ಶುಭಾಶಯ

PM Modi Asianet News anniversary: ಕಳೆದ ಮೂರು ದಶಕಗಳಿಂದ ಮಲಯಾಳಿಗಳಿಗೆ ಮಾಹಿತಿ ಮತ್ತು ಅರಿವು ಮೂಡಿಸುವಲ್ಲಿ ಏಷ್ಯಾನೆಟ್ ನ್ಯೂಸ್‌ನ ನಿರ್ಣಾಯಕ ಪಾತ್ರವನ್ನು ಅವರು ತಮ್ಮ ಶುಭಾಶಯ ಸಂದೇಶದಲ್ಲಿ ಶ್ಲಾಘಿಸಿದ್ದಾರೆ.

Read Full Story

12:18 PM (IST) Sep 30

2022ರಲ್ಲಿ ವಿವಾದ ತಪ್ಪಿಸಿದ್ದ ಆಗಿನ ACC ಅಧ್ಯಕ್ಷ ಜಯ್ ಶಾ! ಹಠಮಾರಿ ಪಾಕಿಗೆ ಬಿಸಿ ಮುಟ್ಟಿಸಲು ಬಿಸಿಸಿಐ ಪ್ಲಾನ್

ಏಷ್ಯಾಕಪ್ ಗೆದ್ದ ಭಾರತ ತಂಡ, ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ನಖ್ವಿಯ ಹಠದಿಂದಾಗಿ ಟ್ರೋಫಿ ಪ್ರದಾನ ಸಮಾರಂಭದಲ್ಲಿ ವಿವಾದ ಸೃಷ್ಟಿಯಾಗಿದ್ದು, ಈ ನಡೆಯನ್ನು ಬಿಸಿಸಿಐ ತೀವ್ರವಾಗಿ ಖಂಡಿಸಿದೆ ಮತ್ತು ಪ್ರತಿಭಟನೆ ದಾಖಲಿಸುವ ಎಚ್ಚರಿಕೆ ನೀಡಿದೆ.
Read Full Story

11:39 AM (IST) Sep 30

ಗರ್ಭ ನಿರೋಧಕ ಕಾಪರ್‌ ಟಿಯನ್ನು ಕೈಯಲ್ಲಿ ಹಿಡಿದುಕೊಂಡೆ ಜನಿಸಿದ ಮಿರಾಕಲ್ ಬೇಬಿ!

Pregnancy despite IUD insertion: ಗರ್ಭ ನಿರೋಧಕ ಸಾಧನವಾದ ಕಾಪರ್ ಟೀ ಅಳವಡಿಸಿದ್ದರೂ ಬ್ರೆಜಿಲ್‌ನಲ್ಲಿ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಚ್ಚರಿಯೆಂದರೆ, ಆ ಮಗು ಜನಿಸುವಾಗ ತನ್ನ ಕೈಯಲ್ಲಿ ಕಾಪರ್ ಟೀಯನ್ನು ಹಿಡಿದುಕೊಂಡಿತ್ತು.

Read Full Story

10:56 AM (IST) Sep 30

ಏಷ್ಯಾಕಪ್ ಗೆದ್ದರೂ ಭಾರತಕ್ಕೆ ಸಿಗದ ಟ್ರೋಫಿ! ಅಷ್ಟಕ್ಕೂ ದುಬೈನಲ್ಲಿ ಮಧ್ಯರಾತ್ರಿ ನಡೆದಿದ್ದು ಏನು?

ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದರೂ, ಪಹಲ್ಗಾಂ ದಾಳಿಯನ್ನು ವಿರೋಧಿಸಿ ಭಾರತ ತಂಡವು ಎಸಿಸಿ ಅಧ್ಯಕ್ಷ ಮೊಹಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ಇದರಿಂದಾಗಿ ನಖ್ವಿ ಟ್ರೋಫಿಯನ್ನು ಹೊತ್ತೊಯ್ದಿದ್ದು, ಇದೀಗ ಬಿಸಿಸಿಐ ಟ್ರೋಫಿ ಮರಳಿಸುವಂತೆ ಆಗ್ರಹಿಸಿದೆ.

Read Full Story

10:48 AM (IST) Sep 30

ಇಂದಿನ ಚಿನ್ನದ ಬೆಲೆ ಕೇಳಿದ್ರೆ ನಿದ್ದೆ ಮಾಡ್ತಿದ್ರೂ ಬೆಚ್ಚಿ ಬೀಳ್ತೀರಿ; ಏರಿಕೆಯಾದ ಬೆಲೆ ಹಲವು ಜನರ ತಿಂಗಳ ಸಂಬಳ

Today gold price in India: ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಈ ಲೇಖನದಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ಇಂದಿನ ದರ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಬೆಲೆ ವಿವರಗಳನ್ನು ನೀಡಲಾಗಿದೆ. ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ.

Read Full Story

10:02 AM (IST) Sep 30

ಇಂದಿನಿಂದ ಮಹಿಳಾ ವಿಶ್ವಕಪ್ - ಉದ್ಘಾಟನಾ ಪಂದ್ಯದಲ್ಲಿಂದು ಭಾರತ-ಶ್ರೀಲಂಕಾ ಫೈಟ್!

13ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ಗೆ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯ ವಹಿಸುತ್ತಿವೆ. ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, 47 ವರ್ಷಗಳ ಟ್ರೋಫಿ ಬರ ನೀಗಿಸಲು ಭಾರತ ತಂಡ ತವರಿನಲ್ಲಿ ಸೆಣಸಾಡಲಿದೆ.
Read Full Story

More Trending News