LIVE NOW
Published : Dec 28, 2025, 07:01 AM ISTUpdated : Dec 28, 2025, 11:41 PM IST

India Latest News Live: ನಿಂದಿಸಿದ ಕೆಎಫ್‌ಸಿ ಮ್ಯಾನೇಜರ್ ವಿರುದ್ದ ಕೇಸ್, ₹81 ಲಕ್ಷ ಪರಿಹಾರ ಪಡೆದ ಭಾರತೀಯ ಮೂಲದ ಉದ್ಯೋಗಿ

ಸಾರಾಂಶ

ಢಾಕಾ: ಬಾಂಗ್ಲಾದಲ್ಲಿ ಭಾರತ ವಿರೋಧಿ ಧೋರಣೆ ಮುಂದುವರೆದಿದ್ದು, ಅಲ್ಲಿನ ಹಿಂದೂಗಳನ್ನು ಭಾರತೀಯರೆಂದು ಅವಮಾನಿಸಲಾಗುತ್ತಿದೆ. ಜತೆಗೆ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹಿಂದೂಗಳನ್ನು ಕೆಲಸದಿಂದ ವಜಾಗೊಳಿಸಿರುವ ಆರೋಪವೂ ಕೇಳಿ ಬಂದಿದೆ. ಎನ್‌ಡೀವಿ ಬಾಂಗ್ಲಾದಲ್ಲಿ ಪ್ರತ್ಯಕ್ಷ ವರದಿ ನಡೆಸಿದ್ದು, ಈ ವೇಳೆ ಹಿಂದೂಗಳು ತಮ್ಮ ಅಸಹಾಯಕತೆ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.

‘ ಇಸ್ಲಾಮಿಸ್ಟ್‌ಗಳು ನಮ್ಮನ್ನು ಹಿಂದೂಗಳೆಂದು ಕರೆಯುತ್ತಾರೆ. ಅವರನ್ನು ನಮ್ಮನ್ನು ಭಾರತಕ್ಕೆ ಮರಳಿ ಎನ್ನುತ್ತಾರೆ. ಸಮಾನವಾಗಿ ನೋಡುತ್ತಿಲ್ಲ. ಭಾರತದ ಏಜೆಂಟ್‌ ಎನ್ನುತ್ತಾರೆ. ನಾವು ಭಾರತೀಯರಲ್ಲ. ಬಾಂಗ್ಲಾದ ಹಿಂದೂಗಳು. ಇಲ್ಲಿಯೇ ಹುಟ್ಟಿದ್ದೇವೆ, ಇಲ್ಲಿಯೇ ಸಾಯುತ್ತೇನೆ’ ಎಂದು ಢಾಕಾ ನಿವಾಸಿಯೊಬ್ಬರು ನೋವು ತೋಡಿಕೊಂಡಿದ್ದಾರೆ, ಇನ್ನು ಕೆಲವರು, ಹಿಂದೂಗಳು ಎನ್ನುವ ಕಾರಣಕ್ಕೆ ಸರ್ಕಾರಿ ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

11:41 PM (IST) Dec 28

ನಿಂದಿಸಿದ ಕೆಎಫ್‌ಸಿ ಮ್ಯಾನೇಜರ್ ವಿರುದ್ದ ಕೇಸ್, ₹81 ಲಕ್ಷ ಪರಿಹಾರ ಪಡೆದ ಭಾರತೀಯ ಮೂಲದ ಉದ್ಯೋಗಿ

ನಿಂದಿಸಿದ ಕೆಎಫ್‌ಸಿ ಮ್ಯಾನೇಜರ್ ವಿರುದ್ದ ಕೇಸ್, ಜನಾಂಗೀಯ ನಿಂದನೆ ಜೊತೆಗೆ ದ್ವಷದ ಕಾರಣದಿಂದ ಕೆಲಸದಿಂದ ವಜಾ ಮಾಡಿದ ವಿರುದ್ಧಭಾರತೀಯ ಮೂಲದ ಉದ್ಯೋಗಿ ಕಾನೂನು ಹೋರಾಟ ನಡೆಸಿದ್ದಾರೆ. ಇದೀಗ 81 ಲಕ್ಷ ರೂಪಾಯಿ ಪರಿಹಾರ ಪಡೆದಿದ್ದಾನೆ.

Read Full Story

10:49 PM (IST) Dec 28

Mann Ki Baat - 2025 ಭಾರತದ ಆತ್ಮವಿಶ್ವಾಸ ಹೆಚ್ಚಿಸಿದ ವರ್ಷ; ದುಬೈ 'ಕನ್ನಡ ಪಾಠಶಾಲೆ'ಗೆ ಪ್ರಧಾನಿ ಮೋದಿ ಶ್ಲಾಘನೆ!

ಪ್ರಧಾನಿ ಮೋದಿಯವರು 2025ನೇ ವರ್ಷವನ್ನು ಭಾರತದ ಹೆಮ್ಮೆಯ ವರ್ಷವೆಂದು ಬಣ್ಣಿಸಿದ್ದು, ಮಹಾಕುಂಭ, ರಾಮಮಂದಿರದಂತಹ ಘಟನೆಗಳನ್ನು ಸ್ಮರಿಸಿದರು. ದುಬೈನಲ್ಲಿರುವ 'ಕನ್ನಡ ಪಾಠಶಾಲೆ', ಮಣಿಪುರದ ಯುವಕನ ಸೌರಶಕ್ತಿ ಕ್ರಾಂತಿ, ಸ್ವಾತಂತ್ರ್ಯ ಹೋರಾಟಗಾರ್ತಿ ಪಾರ್ವತಿ ಗಿರಿ ಅವರ ಸೇವೆ ಸ್ಮರಿಸಿದರು.

Read Full Story

10:38 PM (IST) Dec 28

ಪಿಎಫ್ to ಆದಾಯ ತೆರಿಗೆ, ಹೊಸ ವರ್ಷದಿಂದ ಬದಲಾವಣೆಯಾಗುತ್ತಿರುವ ಹಣದ ನಿಯಮ

ಪಿಎಫ್ to ಆದಾಯ ತೆರಿಗೆ, ಹೊಸ ವರ್ಷ (2026) ಹಲವು ನಿಯಮ ಬದಲಾಗುತ್ತಿದೆ. ಪಿಎಫ್, ಆದಾಯ ತೆರಿಗೆ, 8ನೇ ವೇತನ ಆಯೋಗ ಸೇರಿದಂತೆ ಹೊಸ ವರ್ಷದಲ್ಲಿ ಬದಲಾವಣೆಯಾಗುತ್ತಿರುವ ಹಣದ ನಿಯಮಗಳ ವಿವರ ಇಲ್ಲಿದೆ. ಇದು ನೇರವಾಗಿ ನಿಮ್ಮ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದೆ.

 

Read Full Story

09:09 PM (IST) Dec 28

ಮದುವೆಯಲ್ಲಿ ಅದನ್ನೇ ಮರತೆ ನವ ಜೋಡಿ, 5 ನಿಮಿಷದಲ್ಲಿ ಸಮಸ್ಯೆಗೆ ಪರಿಹಾರ ಹುಡುಕಿದ್ದು ಹೇಗೆ?

ಮದುವೆಯಲ್ಲಿ ಅದನ್ನೇ ಮರತೆ ನವ ಜೋಡಿ, 5 ನಿಮಿಷದಲ್ಲಿ ಸಮಸ್ಯೆಗೆ ಪರಿಹಾರ ಹುಡುಕಿದ್ದು ಹೇಗೆ?, ಮದುವೆ ಕಾರ್ಯಗಳು ನಡೆಯುತ್ತಿರುವ ನಡುವೆ ದಿಢೀರ್ ಇಬ್ಬರಿಗೂ ತಮ್ಮ ಮರೆವು ಗೊತ್ತಾಗಿದೆ. ಇತ್ತ ಮದುವೆ ಪ್ರಕ್ರಿಯೆ ಮುಂದುವರಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.

Read Full Story

08:24 PM (IST) Dec 28

ದಿಗ್ವಿಜಯ್ ಹೊಗಳಿಕೆ ಬೆನ್ನಲ್ಲೇ RSSನ್ನು ಅಲ್ ಖೈದಾ ಉಗ್ರ ಸಂಘಟನೆ ಎಂದ ಕಾಂಗ್ರೆಸ್ ನಾಯಕ

ದಿಗ್ವಿಜಯ್ ಹೊಗಳಿಕೆ ಬೆನ್ನಲ್ಲೇ RSSನ್ನು ಅಲ್ ಖೈದಾ ಉಗ್ರ ಸಂಘಟನೆ ಎಂದ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಆರ್‌ಎಸ್‌ಎಸ್ ಬಿಜೆಪಿ ಹೊಗಳಿಗೆ ಕಾಂಗ್ರೆಸ್‌ನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ಭಾರಿ ವಿವಾದ ಕಿಡಿ ಹೊತ್ತಿದ್ದಾರೆ.

Read Full Story

07:42 PM (IST) Dec 28

ಚಿನ್ನ, ಬ್ಯಾಂಕ್ ಠೇವಣಿ, ಷೇರು; ಯಾವುದು ಬೆಸ್ಟ್? 40 ವರ್ಷ ಹಿಂದೆ ₹100 ಹೂಡಿಕೆ ಮಾಡಿದ್ರೆ ಈಗ ಎಷ್ಟಾಗುತ್ತಿತ್ತು?

ಚಿನ್ನ, ಬ್ಯಾಂಕ್ ಠೇವಣಿ, ಷೇರು; ಯಾವುದು ಬೆಸ್ಟ್? 40 ವರ್ಷ ಹಿಂದೆ ₹100 ಹೂಡಿಕೆ ಮಾಡಿದ್ರೆ ಈಗ ಎಷ್ಟಾಗುತ್ತಿತ್ತು?, ಕಳೆದ 40 ವರ್ಷದ ಅಂಕಿ ಅಂಶದ ಪ್ರಕಾರ ನೀವು ಯಾವ ಮಾರ್ಗದಲ್ಲಿ ಹೂಡಿಕೆ ಮಾಡಿ ಉತ್ತಮ ರಿಟರ್ನ್ಸ್ ಪಡೆಯಬಹುದು?

 

Read Full Story

07:21 PM (IST) Dec 28

ಬೆಂಗಳೂರಿಗೆ ಹೋಗಿ ಕೆಲಸ ಹುಡುಕಿ - ಬಾಂಗ್ಲಾದೇಶಿ ಅಕ್ರಮ ನಿವಾಸಿಗಳಿಗೆ ಕರೆ ನೀಡಿದ ಮೀಯಾ ಮುಸ್ಲಿಂ ಮಹಿಳೆ

ಅಸ್ಸಾಂನ ಮುಸ್ಲಿಂ ಮಹಿಳೆಯೊಬ್ಬಳು, ಹಿಮಂತ್ ಬಿಸ್ವಾ ಶರ್ಮಾ ಇರುವವರೆಗೂ ಅಸ್ಸಾಂ ತೊರೆದು ಬೆಂಗಳೂರಿಗೆ ಬರುವಂತೆ ವಲಸಿಗರಿಗೆ ಕರೆ ನೀಡುವ ವೀಡಿಯೋ ವೈರಲ್ ಆಗಿದೆ. ಈ ಘಟನೆಯು ಬೆಂಗಳೂರಿನ ಜನಸಂಖ್ಯೆಯ ಮಧ್ಯೆ ನುಸುಳಿ ಹೋಗಿರುವ ಅಕ್ರಮ ವಲಸಿಗರ ಬಗ್ಗೆ ಪ್ರಶ್ನೆ ಮಾಡುವಂತಾಗಿದೆ.

Read Full Story

06:34 PM (IST) Dec 28

ಹವಾಮಾನ ಇಲಾಖೆ ಎಚ್ಚರಿಕೆ, ನಾಲ್ಕು ದಿನ ಭಾರಿ ಚಳಿ, ಈ ರಾಜ್ಯಗಳಲ್ಲಿ ಹಿಮಪಾತ ಸಾಧ್ಯತೆ

ಹವಾಮಾನ ಇಲಾಖೆ ಎಚ್ಚರಿಕೆ, ನಾಲ್ಕು ದಿನ ಭಾರಿ ಚಳಿ, ಈ ರಾಜ್ಯಗಳಲ್ಲಿ ಹಿಮಪಾತ ಸಾಧ್ಯತೆ, ದಟ್ಟವಾದ ಮಂಜು, ಅತೀಯಾದ ಚಳಿ ದೇಶದ ಬಹುತೇಕ ಕಡೆ ಆವರಿಸಲಿದೆ. ಈ ವರ್ಷದ ಅಂತಿಮ ಕೆಲ ದಿನಗಳು ಶೀತಮಯವಾಗಿರಲಿದೆ, ಜೊತೆ ಕೆಲ ರಾಜ್ಯಗಳಲ್ಲಿ ಹಿಮಪಾತವಾಗಲಿದೆ ಎಂದಿದ್ದಾರೆ.

Read Full Story

06:15 PM (IST) Dec 28

ಡ್ರಗ್ ಡೀಲರ್ ಅಮ್ಮ, ಗೂಢಚಾರಿ ಅಪ್ಪ - ಮಗುವನ್ನೇ ಮಾರಲೆತ್ನಿಸಿದ್ದ ಪೋಷಕರು - ಸಿನಿಮಾಗಿಂತ ಕಡಿಮೆ ಇಲ್ಲ ಈ ನಟನ ಬದುಕು

ಜಾಗತಿಕ ಸಿನಿಮಾದಲ್ಲಿ ಅತ್ಯಂತ ಗುರುತಿಸಬಹುದಾದ ಮುಖಗಳಲ್ಲಿ ಒಬ್ಬರಾಗುವ ಮೊದಲು ವಿಶ್ವವಿಖ್ಯಾತ ನಟ ಜಾಕಿ ಚಾನ್ ಅವರ ಕುಟುಂಬದ ಹಿನ್ನೆಲೆ ಬಹುತೇಕರಿಗೆ ತಿಳಿದಿಲ್ಲ. ಅವರ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ...

Read Full Story

06:14 PM (IST) Dec 28

ಡ್ರೈವಿಂಗ್​ ಲೈಸೆನ್ಸ್ ಕುರಿತು ಸುಪ್ರೀಂಕೋರ್ಟ್​ ಮಹತ್ವದ ತೀರ್ಪು - ಪಾಲನೆ ಮಾಡಿದಿದ್ದರೆ ಭಾರಿ ಅಪಾಯ!

ಸುಪ್ರೀಂಕೋರ್ಟ್ ಚಾಲನಾ ಪರವಾನಗಿ (DL) ಕುರಿತು ಮಹತ್ವದ ತೀರ್ಪು ನೀಡಿದ್ದು, ಪರವಾನಗಿ ಅವಧಿ ಮುಗಿದ ನಂತರ ನವೀಕರಣಕ್ಕೆ ಲಭ್ಯವಿದ್ದ 30 ದಿನಗಳ ಅವಕಾಶವನ್ನು ರದ್ದುಪಡಿಸಿದೆ. ಈ ಹೊಸ ನಿಯಮದ ಪ್ರಕಾರ, ಲೈಸೆನ್ಸ್ ಅವಧಿ ಮುಗಿದ ಮರುದಿನದಿಂದಲೇ ಅದು ಅಮಾನ್ಯವಾಗಲಿದೆ. 

Read Full Story

05:22 PM (IST) Dec 28

ಡೆಲ್ಲಿ ಪರ ವಿರಾಟ್ ಕೊಹ್ಲಿ ಮತ್ತೆ ವಿಜಯ್ ಹಜಾರೆ ಟ್ರೋಫಿ ಆಡೋದು ಯಾವಾಗ?

ಬೆಂಗಳೂರು: ಭಾರತದ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ಬರೋಬ್ಬರಿ 15 ವರ್ಷಗಳ ಬಳಿಕ ಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಂಡು ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಸದ್ಯ ಬಿಡುವು ಪಡೆದುಕೊಂಡಿರುವ ಕೊಹ್ಲಿ ಮತ್ತೆ ವಿಜಯ್ ಹಜಾರೆ ಟ್ರೋಫಿ ಟೂರ್ನಿ ಆಡೋದು ಯಾವಾಗ ನೋಡೋಣ ಬನ್ನಿ.

Read Full Story

04:50 PM (IST) Dec 28

Breaking News - ಮಾಜಿ ಸಿಎಂ ಮೆಹಬೂಬಾ ಮುಫ್ತಿ ಸೇರಿ ಹಲವು ನಾಯಕರು ಗೃಹಬಂಧನ!

Mehbooba Mufti House Arrest: ಜಮ್ಮು ಮತ್ತು ಕಾಶ್ಮೀರದಲ್ಲಿನ ಹಾಲಿ ಮೀಸಲಾತಿ ನೀತಿ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ಹೇಳಿದ ಬೆನ್ನಲ್ಲೇ ಮೆಹಬೂಬಾ ಮುಫ್ತಿ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ.

Read Full Story

04:49 PM (IST) Dec 28

ಹೆಂಡ್ತಿ ತವರಿಗೆ ಹೋಗಿದ್ದೇ ತಪ್ಪಾಯ್ತು - ಅತ್ತೆ ಮನೆಗೆ ಜೆಸಿಬಿ ನುಗ್ಗಿಸಿದ ಅಳಿಯ

ಪತ್ನಿ ಆಗಾಗ ತವರು ಮನೆಗೆ ಹೋಗುತ್ತಾಳೆಂಬ ಕೋಪಕ್ಕೆ ಗಂಡನೊಬ್ಬ ಜೆಸಿಬಿ ಬಳಸಿ ಆಕೆಯ ತವರು ಮನೆಯನ್ನೇ ಧ್ವಂಸಗೊಳಿಸಲು ಯತ್ನಿಸಿದ ವಿಚಿತ್ರ ಘಟನೆ ಜಾರ್ಖಂಡ್‌ನ ಗಿರಿದ್‌ನಲ್ಲಿ ನಡೆದಿದೆ. ಗಂಡನ ಕಿರುಕುಳದಿಂದ ಬೇಸತ್ತು ತವರಿಗೆ ಬಂದಿದ್ದೆ ಎಂದು ಪತ್ನಿ ಆರೋಪಿಸಿದ್ದಾಳೆ.

Read Full Story

04:36 PM (IST) Dec 28

ಸುಂದರ್ ಪಿಚೈ, ನಾಡೆಲ್ಲ ಹಿಂದಿಕ್ಕಿ ಭಾರತೀಯ ಮೂಲದ ಶ್ರೀಮಂತರ ಪಟ್ಟಿಯಲ್ಲಿ ಜಯಶ್ರಿ ಉಲ್ಲಾಳ್ ನಂ.1

ಸುಂದರ್ ಪಿಚೈ, ನಾಡೆಲ್ಲ ಹಿಂದಿಕ್ಕಿ ಭಾರತೀಯ ಮೂಲದ ಶ್ರೀಮಂತರ ಪಟ್ಟಿಯಲ್ಲಿ ಜಯಶ್ರಿ ಉಲ್ಲಾಳ್ ನಂ.1, ಹುರನ್ ಇಂಡಿಯಾ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಜಯಶ್ರಿ ಮೊದಲ ಸ್ಥಾನ ಪಡೆದಿದ್ದಾರೆ. ಯಾರಿದು ಜಯಶ್ರಿ ಉಲ್ಲಾಳ್

Read Full Story

03:30 PM (IST) Dec 28

ಈ ಕೆಟ್ಟ ವ್ಯವಸ್ಥೆಯಲ್ಲಿ ಆಗಲ್ಲ, 4 ಕೋಟಿ ತೆರಿಗೆ ಕಟ್ಟುತ್ತಿರುವ ಬೆಂಗಳೂರು ಕಂಪನಿ ವಿದೇಶಕ್ಕೆ ಶಿಫ್ಟ್

ಈ ಕೆಟ್ಟ ವ್ಯವಸ್ಥೆಯಲ್ಲಿ ಆಗಲ್ಲ, 4 ಕೋಟಿ ತೆರಿಗೆ ಕಟ್ಟುತ್ತಿರುವ ಬೆಂಗಳೂರು ಕಂಪನಿ ವಿದೇಶಕ್ಕೆ ಶಿಫ್ಟ್ ಆಗುತ್ತಿದೆ. ಹೊಸ ವರ್ಷಕ್ಕೆ ಕಂಪನಿ ಬೆಂಗಳೂರು ತೊರೆದು ವಿದೇಶದಲ್ಲಿ ಆರಂಭಗೊಳ್ಳುತ್ತಿದೆ. ಇದಕ್ಕ ಕಾರಣವನ್ನು ಕಂಪನಿ ಸಂಸ್ಥಾಪಕ ಬಹಿರಂಗಪಡಿಸಿದ್ದಾರೆ.

 

Read Full Story

03:20 PM (IST) Dec 28

ವಿಜಯ್ ಹಜಾರೆ ಟ್ರೋಫಿ - ಎರಡು ಪಂದ್ಯಗಳಿಂದ ಕೊಹ್ಲಿ ಗಳಿಸಿದ ಪ್ರೈಜ್ ಮನಿ ಎಷ್ಟು?

ಬೆಂಗಳೂರು: ಬರೋಬ್ಬರಿ 15 ವರ್ಷಗಳ ಬಳಿಕ ಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಂಡ ವಿರಾಟ್ ಕೊಹ್ಲಿ ಅದ್ಬುತ ಪ್ರದರ್ಶನದ ಮೂಲಕ ಮಿಂಚಿದ್ದಾರೆ. ಬನ್ನಿ ನಾವಿಂದು ಟೂರ್ನಿಯಲ್ಲಿ ಕೊಹ್ಲಿ ಗಳಿಸಿದ ಒಟ್ಟು ಪ್ರೈಜ್ ಮನಿ ಎಷ್ಟು ಎನ್ನುವುದನ್ನು ನೋಡೋಣ.

 

Read Full Story

02:46 PM (IST) Dec 28

ಹಿಮಾಚಲ ಪ್ರವಾಸಿ ತಾಣದಲ್ಲಿ ಪ್ಯಾರಾಗ್ಲೈಡಿಂಗ್ ಪತನ, ಓರ್ವ ಸಾವು, ಮತ್ತೊರ್ವನಿಗೆ ಗಾಯ

ಹಿಮಾಚಲ ಪ್ರವಾಸಿ ತಾಣದಲ್ಲಿ ಪ್ಯಾರಾಗ್ಲೈಡಿಂಗ್ ಪತನ, ಓರ್ವ ಸಾವು, ಮತ್ತೊರ್ವನಿಗೆ ಗಾಯ, ಹೊಸ ವರ್ಷದ ಸಂಭ್ರಮದಲ್ಲಿ ಅಡ್ವೆಂಚರ್ ಪ್ರವಾಸದಲ್ಲಿ ಈ ಅವಘಡ ಸಂಭವಿಸಿದೆ. ಪ್ಯಾರಾಗ್ಲೈಡರ್ ಮೃತಪಟ್ಟಿದ್ದರೆ, ಪ್ರವಾಸಿ ಗಾಯಗೊಂಡಿದ್ದಾರೆ.

 

Read Full Story

02:25 PM (IST) Dec 28

ಚೈನೀಸ್ ಎಂದು ನಿಂದಿಸಿ ಚಾಕು ಇರಿತ - ನಾನು ಭಾರತೀಯ ಎಂದು ಹೇಳಿ ಕೊನೆಯುಸಿರೆಳೆದ ತ್ರಿಪುರಾ ವಿದ್ಯಾರ್ಥಿ

ಉತ್ತರಾಖಂಡ್‌ನಲ್ಲಿ BSF ಯೋಧರೋರ್ವರ ಪುತ್ರ ಎಂಬಿಎ ವಿದ್ಯಾರ್ಥಿಯನ್ನು ಚೈನೀಸ್ ನೇಪಾಳಿ ಎಂದೆಲ್ಲಾ ನಿಂದಿಸಿ ಗುಂಪೊಂದು ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದು, ಆ ವಿದ್ಯಾರ್ಥಿ ಸಾಯುವ ಮೊದಲು ತಾನು ಭಾರತೀಯ ಎಂದು ಹೇಳಿ ಪ್ರಾಣ ಬಿಟ್ಟಿದ್ದಾನೆ. ಆತನ ಸಾವು ಈಗ ಈಶಾನ್ಯ ಭಾರತೀಯರ ರಕ್ತ ಕುದಿಯುವಂತೆ ಮಾಡಿದೆ.

Read Full Story

12:50 PM (IST) Dec 28

ಮದುವೆ ದಿನವೇ ವರನಿಗೆ ಮುತ್ತು ಕೊಡಲು ಬಂದ ಮಾಜಿ ಗೆಳತಿ - ನೆಲಕ್ಕೆ ಕೆಡವಿ ಬಾರಿಸಿದ ವಧು - ವೀಡಿಯೋ

 ಮದುವೆಯ ಆರತಕ್ಷತೆಯೊಂದರಲ್ಲಿ, ವರನ ಮಾಜಿ ಗೆಳತಿ ವೇದಿಕೆ ಮೇಲೆ ಬಂದು ವರನ ಕೈಗೆ ಮುತ್ತಿಡಲು ಯತ್ನಿಸಿದ್ದಾಳೆ. ಇದರಿಂದ ಕೋಪಗೊಂಡ ನವವಧು, ಆಕೆಯನ್ನು ವೇದಿಕೆಯಿಂದ ಕೆಳಗೆಳೆದು ಥಳಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read Full Story

12:21 PM (IST) Dec 28

2026ರ ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನಕ್ಕೆ ಬಿಗ್ ಶಾಕ್; 'ಪ್ರೀಮಿಯರ್ ವೇಗಿ'ಗೆ ಗಾಯ!

ಅಡಿಲೇಡ್‌: ಬಹುನಿರೀಕ್ಷಿತ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ಪಾಕಿಸ್ತಾನ ಕ್ರಿಕೆಟ್ ಪಾಳಯದಲ್ಲಿ ಹೊಸದೊಂದು ತಲೆನೋವು ಶುರುವಾಗಿದೆ. ಪಾಕ್‌ ತಂಡದ ಪ್ರೀಮಿಯರ್ ವೇಗಿಗೆ ಗಾಯದ ಭೀತಿ ಶುರುವಾಗಿದೆ.

Read Full Story

12:10 PM (IST) Dec 28

ಕೌಟುಂಬಿಕ ಕಲಹ - ಭಾವನ ವಿರುದ್ಧ ಸುಳ್ಳು ರೇ*ಪ್ ಕೇಸ್ ದಾಖಲಿಸಿದ ಮಹಿಳೆಗೆ ಜೈಲು

ವೈದ್ಯ ಭಾವನ ಮೇಲೆ ಸುಳ್ಳು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ ಮಹಿಳೆಗೆ ನ್ಯಾಯಾಲಯವು ತಕ್ಕಶಿಕ್ಷೆ ನೀಡಿದೆ. ಆರೋಪಗಳು ಸುಳ್ಳೆಂದು ಸಾಬೀತಾದ ಹಿನ್ನೆಲೆಯಲ್ಲಿ, ಮಾನನಷ್ಟ ಮೊಕದ್ದಮೆಯಲ್ಲಿ ಆಕೆಗೆ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.

Read Full Story

11:17 AM (IST) Dec 28

ಮಗುವನ್ನು ಎಲ್ಲಾದರು ಬಿಟ್ಟು ಬಿಡು - ಮಗು ಬೇಕೋ ಅಥವಾ ನಾನೋ ಪತಿಯೇ ಆಯ್ಕೆ ನೀಡಿದಾಗ ಆಗಿದ್ದೇನು?

ಮದುವೆಯಾದ ನಂತರ ಮಗು ಜನಿಸಿದ ನಂತರ ಬಹುತೇಕ ಹೆಣ್ಣು ಮಕ್ಕಳ ಜೀವನ ಬದಲಾಗುತ್ತದೆ. ಹಾಗೆಯೇ ಇಲ್ಲೊಬ್ಬರು ತಾಯಿ ತನಗೆ ವಿಶೇಷಚೇತನ ಮಗು ಜನಿಸಿದ ನಂತರ ಕುಟುಂಬದಲ್ಲಿ ಎದುರಿಸಿದ ಸವಾಲುಗಳನ್ನು ಹಂಚಿಕೊಂಡಿದ್ದು, ಅವರ ಕತೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರಿಗೆ ಸ್ಪೂರ್ತಿಯಾಗಿದೆ.

Read Full Story

10:22 AM (IST) Dec 28

ಅಂಡರ್‌-19 ಏಕದಿನ ವಿಶ್ವಕಪ್‌ ಟೂರ್ನಿಗೆ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟ!

ಮುಂಬೈ: ಮುಂಬರುವ ಅಂಡರ್-19 ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ಯುವ ತಂಡವನ್ನು ಪ್ರಕಟಿಸಲಾಗಿದೆ. ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

Read Full Story

09:53 AM (IST) Dec 28

ಲಂಕಾ ಎದುರು ಸತತ ನಾಲ್ಕನೇ ಗೆಲುವಿನ ಮೇಲೆ ಕಣ್ಣಿಟ್ಟ ಹರ್ಮನ್‌ಪ್ರೀತ್ ಕೌರ್ ಪಡೆ!

ಶ್ರೀಲಂಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಈಗಾಗಲೇ 3-0 ಮುನ್ನಡೆ ಸಾಧಿಸಿರುವ ಭಾರತ ಮಹಿಳಾ ತಂಡ, ಕ್ಲೀನ್‌ ಸ್ವೀಪ್‌ ಮಾಡುವ ಗುರಿ ಹೊಂದಿದೆ. ಭಾನುವಾರ ನಡೆಯಲಿರುವ 4ನೇ ಪಂದ್ಯದಲ್ಲೂ ಗೆದ್ದು, ಟಿ20 ವಿಶ್ವಕಪ್‌ಗೆ ತಮ್ಮ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸಲು ಹರ್ಮನ್‌ಪ್ರೀತ್ ಪಡೆ ಸಜ್ಜಾಗಿದೆ.
Read Full Story

09:04 AM (IST) Dec 28

ಗೌತಮ್ ಗಂಭೀರ್‌ಗೆ ಸಂಕಷ್ಟ? ಭಾರತ ಟೆಸ್ಟ್‌ ತಂಡದ ಕೋಚ್‌ ಆಗಲು ಲಕ್ಷ್ಮಣ್‌ಗೆ ಬಿಸಿಸಿಐ ಆಫರ್‌!

ಟೆಸ್ಟ್ ಕ್ರಿಕೆಟ್‌ನಲ್ಲಿ ಗೌತಮ್ ಗಂಭೀರ್ ಅವರ ಕಳಪೆ ದಾಖಲೆಯಿಂದಾಗಿ ಬಿಸಿಸಿಐ ಹೊಸ ಕೋಚ್‌ಗಾಗಿ ಹುಡುಕಾಟ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ವಿವಿಎಸ್ ಲಕ್ಷ್ಮಣ್ ಅವರನ್ನು ಸಂಪರ್ಕಿಸಲಾಗಿದ್ದು, ಅವರು ಈ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ. 2026ರ ಆಗಸ್ಟ್‌ ವೇಳೆಗೆ ಹೊಸ ಕೋಚ್ ನೇಮಕವಾಗುವ ಸಾಧ್ಯತೆಯಿದೆ.
Read Full Story

08:50 AM (IST) Dec 28

ಎರಡೇ ದಿನದಲ್ಲಿ ಮುಗಿದ ಪಂದ್ಯ - ಕ್ರಿಕೆಟ್‌ ಆಸ್ಟ್ರೇಲಿಯಾಗೆ ಮತ್ತೊಮ್ಮೆ ಭಾರೀ ನಷ್ಟ!

ಆ್ಯಶಸ್ ಸರಣಿಯ 4ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಕಾಂಗರೂಗಳ ನಾಡಿನಲ್ಲಿ 15 ವರ್ಷಗಳ (5468 ದಿನ) ಬಳಿಕ ಟೆಸ್ಟ್ ಗೆಲುವು ದಾಖಲಿಸಿದ್ದು, ಸರಣಿ ವೈಟ್‌ವಾಶ್‌ನಿಂದ ಪಾರಾಗಿದೆ. ಕೇವಲ ಎರಡು ದಿನಗಳಲ್ಲಿ ಪಂದ್ಯ ಮುಕ್ತಾಯಗೊಂಡಿದೆ.
Read Full Story

More Trending News