Published : Feb 24, 2026, 06:43 AM ISTUpdated : Feb 24, 2026, 11:34 PM IST

India Latest News Live: AI Summit Protest - 'ಇದು ಸೂಕ್ಷ್ಮ ಪ್ರಕರಣ' ಎಂದ ಪೊಲೀಸರಿಗೆ ಶಾಕ್! ಆರೋಪಿಗಳಿಗೆ FIR ಪ್ರತಿ ಕೊಡಿ ಎಂದ ಕೋರ್ಟ್

ಸಾರಾಂಶ

ನವದೆಹಲಿ: ‘ಮೋದಿ ಜೀ, ನೀವು ನಾಚಿಕೆಗೇಡಿನ ಬಗ್ಗೆ ಮಾತನಾಡುತ್ತೀರಾ? ನಾಚಿಕೆಗೇಡಿನ ವಿಷಯ ಏನೆಂದು ನಾನು ನಿಮಗೆ ಹೇಳುತ್ತೇನೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಿರುಗೇಟು ನೀಡಿದ್ದಾರೆ. ಭಾನುವಾರ ಮಾತನಾಡಿದ್ದ ಮೋದಿ, ‘ಮಹಿಳೆಯರನ್ನು ಸಂಸತ್ತಿನಲ್ಲಿ ಮುಂದಿಟ್ಟುಕೊಂಡು ಕಾಂಗ್ರೆಸ್‌ ಹೋರಾಡಿದ್ದು ನಾಚಿಕೆಗೇಡು’ ಎಂದಿದ್ದರು.

ಇದಕ್ಕೆ ಟ್ವೀಟರಲ್ಲಿ ತಿರುಗೇಟು ನೀಡಿದ ರಾಗಾ, ‘ನಿಮ್ಮ (ಮೋದಿ) ಹೆಸರು, ನಿಮ್ಮ ಮಂತ್ರಿ ಮತ್ತು ನಿಮ್ಮ ಸ್ನೇಹಿತನ ಹೆಸರು ಎಪ್ಸ್ಟೀನ್ ಫೈಲ್‌ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಅಂತಹ ನೀಚ ಅಪರಾಧಿಗೆ ಸಂಬಂಧಿಸಿದೆ - ಇದು ನಾಚಿಕೆಗೇಡಿನ ಸಂಗತಿ. ನೀವು ಅಮೆರಿಕದೊಂದಿಗೆ ಮಾಡಿಕೊಂಡ ವ್ಯಾಪಾರ ಒಪ್ಪಂದ, ಅದರಲ್ಲಿ ನೀವು ದೇಶವನ್ನೇ ಮಾರಿದ್ದೀರಿ - ಇದು ನಾಚಿಕೆಗೇಡಿನ ಸಂಗತಿ. ನೀವು ನಮ್ಮ ದೇಶದ ಡೇಟಾವನ್ನು ಹಸ್ತಾಂತರಿಸಿದ್ದೀರಿ. ನೀವು ರೈತರನ್ನು ನಾಶಮಾಡಿದ್ದೀರಿ. ನೀವು ಜವಳಿ ಉದ್ಯಮವನ್ನು ಹಾಳುಮಾಡಿದ್ದೀರಿ - ಇದು ನಾಚಿಕೆಗೇಡಿನ ಸಂಗತಿ’ ಎಂದಿದ್ದಾರೆ.

11:34 PM (IST) Feb 24

AI Summit Protest - 'ಇದು ಸೂಕ್ಷ್ಮ ಪ್ರಕರಣ' ಎಂದ ಪೊಲೀಸರಿಗೆ ಶಾಕ್! ಆರೋಪಿಗಳಿಗೆ FIR ಪ್ರತಿ ಕೊಡಿ ಎಂದ ಕೋರ್ಟ್

AI Summit Protest ಎಐ ಶೃಂಗಸಭೆ ಪ್ರತಿಭಟನೆ ಪ್ರಕರಣದಲ್ಲಿ ಆರೋಪಿಗಳಿಗೆ ಎಫ್‌ಐಆರ್ ಪ್ರತಿ ನೀಡುವಂತೆ ದೆಹಲಿ ಪೊಲೀಸರಿಗೆ ಪಟಿಯಾಲ ಹೌಸ್ ಕೋರ್ಟ್ ಆದೇಶಿಸಿದೆ. ಇದೊಂದು 'ಸೂಕ್ಷ್ಮ ಪ್ರಕರಣ' ಎಂಬ ಪೊಲೀಸರ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.

Read Full Story

10:33 PM (IST) Feb 24

ಭಾರತದ ವ್ಯಾಟ್ಸಾಪ್ ಬಳಕೆದಾರರಿಗೆ ಸಿಮ್ ಬೈಡಿಂಗ್ ರೂಲ್ಸ್, ಏನಿದು ಹೊಸ ನಿಯಮ?

ಭಾರತದ ವ್ಯಾಟ್ಸಾಪ್ ಬಳಕೆದಾರರಿಗೆ ಸಿಮ್ ಬೈಡಿಂಗ್ ರೂಲ್ಸ್, ಏನಿದು ಹೊಸ ನಿಯಮ? ಕೇಂದ್ರ ಸರ್ಕಾರದ ಡಿಜಿಟಲ್ ಸುರಕ್ಷತೆ ಹಾಗೂ ಸೈಬರ್ ವಂಚನೆ ತಡೆಗಟ್ಟಲು ಕಟ್ಟುನಿಟ್ಟಿನ ನಿಯಮ ತರುತ್ತಿದೆ.

Read Full Story

09:46 PM (IST) Feb 24

ಟಾಪ್‌ಲೆಸ್ ಕಾರ್ ವಾಶ್ ಅಂತ ಬೋರ್ಡ್ ಹಿಡಿದ ಯುವತಿ - ಓಕೆ ಎಂದು ಬೆಸ್ತು ಬಿದ್ದ ಕಾರು ಚಾಲಕರು - ಆಗಿದ್ದೇನು?

ಇಲ್ಲೊಂದು ಕಡೆ ಯುವತಿಯೊಬ್ಬಳು ಟಾಪ್‌ಲೆಸ್ ಆಗಿ ಕಾರು ವಾಶ್ ಮಾಡೋದಾಗಿ ಬೋರ್ಡ್ ಹಿಡಿದು ರಸ್ತೆ ಬದಿ ನಿಂತಿದ್ದಾಳೆ. ಇದಕ್ಕೆ ಕಾರು ಚಾಲಕರು ಒಪ್ಪಿದ್ದಾರೆ. ಆದರೆ ನಂತರ ಟಾಪ್‌ಲೆಸ್ ಆಗಿ ಬಂದವರನ್ನು ನೋಡಿ ಬೆಸ್ತು ಬೀಳುವ ಸರದಿ ಕಾರು ಚಾಲಕರದ್ದಾಗಿತ್ತು. ಹಾಗಿದ್ರೆ ಆಗಿದ್ದೇನು ಮುಂದೆ ಓದಿ...

Read Full Story

09:45 PM (IST) Feb 24

ಬಾಯ್‌ಫ್ರೆಂಡ್ ಎದುರೇ 8 ಕಾಮುಕರಿಂದ ಯುವತಿ ಮೇಲೆ ಅತ್ಯಾ**ರ, ಭೀಕರ ಘಟನೆ ಬೆಳಕಿಗೆ

ಬಾಯ್‌ಫ್ರೆಂಡ್ ಎದುರೇ 8 ಕಾಮುಕರಿಂದ ಯುವತಿ ಮೇಲೆ ಅತ್ಯಾ**ರ, ಕಾರಿನಲ್ಲಿ ಬಂದು ಅಡ್ಡಗಟ್ಟಿ ಚಾಕು ಹಿಡಿದು ಕೃತ್ಯ ಎಸಗಿದ್ದಾರೆ. ಬಳಿಕ ಯುವತಿಯಿಂದ 10 ಸಾವಿರ ರೂಪಾಯಿ ಕಿತ್ತುಕೊಂಡ ಘಟನೆ ಬೆಳಕಿಗೆ ಬಂದಿದೆ.

 

Read Full Story

09:44 PM (IST) Feb 24

ಜಯಲಲಿತಾ ಜನ್ಮದಿನದಂದೇ ಹೊಸ ಪಕ್ಷ ಘೋಷಿಸಿದ ಆಪ್ತೆ ಶಶಿಕಲಾ; ತಮಿಳುನಾಡು ರಾಜಕಾರಣದಲ್ಲಿ ಚಿನ್ನಮ್ಮ ಕೋಲಾಹಲ!

ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ವಿ.ಕೆ. ಶಶಿಕಲಾ, ಎಐಎಡಿಎಂಕೆ ಪಕ್ಷಕ್ಕೆ ಮರಳುವ ಪ್ರಯತ್ನ ವಿಫಲವಾದ ನಂತರ ತಮ್ಮದೇ ಆದ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ. ಜಯಲಲಿತಾ ಅವರ ಜನ್ಮದಿನದಂದೇ ಈ ಘೋಷಣೆ ಮಾಡಿದ್ದು, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಗುರಿ ಹೊಂದಿದ್ದಾರೆ.

Read Full Story

08:54 PM (IST) Feb 24

PM Modi Israel Visit - ಮತ್ತಷ್ಟು ಗಟ್ಟಿಯಾಗಲಿದೆ ಭಾರತ-ಇಸ್ರೇಲ್ ದೋಸ್ತಿ; ಮೋದಿ ಪ್ರವಾಸದ ಸಂಪೂರ್ಣ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 25-26ರಂದು ಇಸ್ರೇಲ್‌ಗೆ ಎರಡು ದಿನಗಳ ಅಧಿಕೃತ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಭಾರತ-ಇಸ್ರೇಲ್ ವ್ಯೂಹಾತ್ಮಕ ಪಾಲುದಾರಿಕೆ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ. 

Read Full Story

08:47 PM (IST) Feb 24

ಮತ್ತೆ ಇಂಡೋ-ಪಾಕ್ ಪಂದ್ಯ, ಐಸಿಸಿ ಟಿ20 ವಿಶ್ವಕಪ್ ಮಹಿಳಾ ಟೂರ್ನಿ ವೇಳಾಪಟ್ಟಿ ಪ್ರಕಟ

ಮತ್ತೆ ಇಂಡೋ-ಪಾಕ್ ಪಂದ್ಯ, ಐಸಿಸಿ ಟಿ20 ವಿಶ್ವಕಪ್ ಮಹಿಳಾ ಟೂರ್ನಿ ವೇಳಾಪಟ್ಟಿ ಪ್ರಕಟ, ಮತ್ತೊಂದು ಮೆಗಾ ಫೈಟ್‌ಗೆ ವೇದಿಕೆ ಸಜ್ಜಾಗಿದೆ. ಭಾರತ ಪಾಕಿಸ್ತಾನ ಪಂದ್ಯ ಯಾವತ್ತೂ? ಟೂರ್ನಿ ವೇಳಾಪಟ್ಟಿ ಇಲ್ಲಿದೆ.

Read Full Story

08:26 PM (IST) Feb 24

37ನೇ ವಯಸ್ಸಿಗೆ ಸಾವು ಕಂಡ ರಿಯಾಲಿಟಿ ಶೋ ಖ್ಯಾತಿಯ ಮಿಸ್ಟರ್ ಇಂಡಿಯಾ ವಿನ್ನರ್

37ನೇ ವಯಸ್ಸಿಗೆ ಸಾವು ಕಂಡ ರಿಯಾಲಿಟಿ ಶೋ ಖ್ಯಾತಿಯ ಮಿಸ್ಟರ್ ಇಂಡಿಯಾ ವಿನ್ನರ್, ಫಿಟ್ನೆಸ್ ವಿಚಾರದಲ್ಲಿ ಯಾವತ್ತೂ ರಾಜಿಯಾಗಿಲ್ಲ. 7 ಬಾರಿ ಮಿಸ್ಟರ್ ಇಂಡಿಯಾ ಪ್ರಶಸ್ತಿ ಗೆದ್ದ ಮಯಾಂಕ್ ಪವಾರ್ ದುರಂತ ಸಾವು ಕಂಡಿದ್ದಾರೆ

 

Read Full Story

07:08 PM (IST) Feb 24

ವಿಜಯ್​ ಎದುರೇ ರಶ್ಮಿಕಾ ಮಂದಣ್ಣಗೆ, ರಕ್ಷಿತ್​ ಶೆಟ್ಟಿ ಬಗ್ಗೆ ಕನ್ನಡದಲ್ಲಿ ಪ್ರಶ್ನೆ! ನಟಿ ಏನ್​ ಹೇಳಿದ್ರು? ವಿಡಿಯೋ ವೈರಲ್​

ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆ ಸುದ್ದಿ ನಡುವೆ, ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ, ರಕ್ಷಿತ್ ಶೆಟ್ಟಿ ಅವರೊಂದಿಗಿನ ಬ್ರೇಕಪ್ ಬಗ್ಗೆ ಕನ್ನಡದಲ್ಲಿ ಕೇಳಿದ ಪ್ರಶ್ನೆಗೆ ರಶ್ಮಿಕಾ ಉತ್ತರಿಸಲು ತಡವರಿಸುತ್ತಾರೆ, ಆಗ ವಿಜಯ್ ದೇವರಕೊಂಡ ಮಧ್ಯಪ್ರವೇಶಿಸಿ ಗರಂ ಆದರು.

Read Full Story

06:57 PM (IST) Feb 24

ಕೇವಲ 2 ವರ್ಷದ ಅನುಭವಕ್ಕೆ ತಿಂಗಳಿಗೆ 13 ಲಕ್ಷ ವೇತನದ ವರ್ಕ್ ಫ್ರಮ್ ಹೋಮ್ ಕೆಲಸ ಗಿಟ್ಟಿಸಿದ ಉದ್ಯೋಗಿ

ನೇಮಕಾತಿ ಸಂಸ್ಥೆಯಾದ ರೈಟ್‌ಫಿಟ್‌ನ ಸಂಸ್ಥಾಪಕ ಸುಮಿತ್ ಸಿಂಗ್, ಕೇವಲ 2 ವರ್ಷಗಳ ಅನುಭವವಿರುವ ಅಭ್ಯರ್ಥಿಯೊಬ್ಬರು ತಿಂಗಳಿಗೆ 13 ಲಕ್ಷ ರೂ. ಸಂಬಳದ ವರ್ಕ್ ಫ್ರಮ್ ಹೋಮ್ ಉದ್ಯೋಗವನ್ನು ಪಡೆದಿದ್ದಾರೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

06:34 PM (IST) Feb 24

ಅ-19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಟಾಟಾ

ಅ-19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಟಾಟಾ, ಈ ವಿಶೇಷ ಕಾರು ಉಡುಗೊರೆ ವಿಶ್ವಕಪ್ ಗೆಲುವಿನ ಪರ್ಫಾಮೆನ್ಸ್‌ಗೆ ಅಲ್ಲ. ಇದು ಕಳೆದ ವರ್ಷದ ಪ್ರದರ್ಶನಕ್ಕೆ ಈಗ ಸಿಕ್ಕ ಉಡುಗೊರೆಯಾಗಿದೆ.

 

Read Full Story

06:32 PM (IST) Feb 24

ಅಯ್ಯಪ್ಪ ಮಾಲೆ ಧರಿಸಿ ಎಣ್ಣೆ ಪಾರ್ಟಿಗೆ ಬಂದ ರಾಮ್‌ ಚರಣ್‌ ತೇಜ, ನೆಟ್ಟಿಗರ ಟ್ರೋಲ್‌!

Ram Charan Trolled for Attending Allu Sirish's Party in Ayyappa Deeksha ಅಲ್ಲು ಸಿರಿಶ್ ಅವರ ಕಾಕ್‌ಟೈಲ್ ಪಾರ್ಟಿಗೆ ರಾಮ್ ಚರಣ್ ಅಯ್ಯಪ್ಪ ಮಾಲೆ ಧರಿಸಿ ಬಂದಿದ್ದು ಟ್ರೋಲ್‌ಗೆ ಕಾರಣವಾಯಿತು. ಚರಣ್ ಅವರು ಮದ್ಯಪಾನಕ್ಕೂ ಮುನ್ನವೇ ಬಂದು ಶುಭ ಹಾರೈಸಿದ್ದರು ಎಂದು ಅಲ್ಲು ಸಿರಿಶ್‌ ಹೇಳಿದ್ದಾರೆ. 

Read Full Story

05:55 PM (IST) Feb 24

ಸಿಜೆ ರಾಯ್ ರೀತಿಯಲ್ಲಿ ಮತ್ತೊಬ್ಬ ಉದ್ಯಮಿ ಗುಂಡಿಕ್ಕಿ ಸಾವು, ಮಗಳ ಮದುವೆ 2 ದಿನ ಮೊದಲು ದುರಂತ

ಸಿಜೆ ರಾಯ್ ರೀತಿಯಲ್ಲಿ ಮತ್ತೊಬ್ಬ ಉದ್ಯಮಿ ಗುಂಡಿಕ್ಕಿ ಸಾವು, ಮಗಳ ಮದುವೆ 2 ದಿನ ಮೊದಲು ದುರಂತ, ಸುಂದರ ಸಂಸಾರದ ನಡುವೆ ಅಕ್ರಮವಾಗಿ ಶುರುವಾದ ಪ್ರೀತಿ ಕೊನೆಗೆ ಜೀವವನ್ನೇ ಬಲಿ ತೆಗೆದುಕೊಂಡಿದೆ. ಆಸ್ತಿ, ಹಣ ಎಲ್ಲಾ ನೀಡಿದರೂ ಸಾಲಲಿಲ್ಲ.

 

Read Full Story

05:52 PM (IST) Feb 24

ಮದುವೆಗೂ ಮುನ್ನ ಉದಯ್‌ಪುರದಲ್ಲಿ ವಾಲಿಬಾಲ್‌ ಆಡಿ ಸಂಭ್ರಮಿಸಿದ ವಿಜಯ್‌ ದೇವರಕೊಂಡ!

ಸೌತ್ ಸಿನಿ ಲೋಕದ ಜನಪ್ರಿಯ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹವು ಫೆಬ್ರವರಿ 26 ರಂದು ಉದಯಪುರದ ಐಷಾರಾಮಿ ಹೋಟೆಲ್‌ನಲ್ಲಿ ನಡೆಯಲಿದೆ. 'ವಿರೋಶ್' ಎಂದು ಖ್ಯಾತರಾದ ಈ ಜೋಡಿಯ ಮದುವೆಯು ಅತ್ಯಂತ ಖಾಸಗಿಯಾಗಿದ್ದು, ಕೇವಲ 100 ಆಪ್ತರು ಮಾತ್ರ ಭಾಗವಹಿಸುತ್ತಿದ್ದಾರೆ.
Read Full Story

05:21 PM (IST) Feb 24

Political Row - ಗೋವು, ಟೋಪಿ, ಲಸಿಕೆ, ಪಾಕಿಸ್ತಾನ ಪದಗಳನ್ನ ತೆಗೆದರೆ ಬಿಜೆಪಿ ಸಾಯುತ್ತದೆ.. ಎಂದ ಆ ನಾಯಕ ಯಾರು?

Political Row ಎಐಎಂಐಎಂ ನಾಯಕ ಅಖ್ತರುಲ್ ಇಮಾನ್, ಬಿಜೆಪಿಯ ರಾಜಕೀಯವು ಕೇವಲ ಭಾವನಾತ್ಮಕ ಪದಗಳ ಮೇಲೆ ನಿಂತಿದೆ ಎಂದು ಟೀಕಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೀಮಾಂಚಲ್ ಭೇಟಿಯನ್ನು ಪ್ರಶ್ನಿಸಿ, ಒಳನುಸುಳುವಿಕೆ ಆರೋಪದ ಬಗ್ಗೆ ಸರ್ಕಾರದ ಜವಾಬ್ದಾರಿಯನ್ನು ಕೇಳಿದ್ದಾರೆ.

Read Full Story

05:15 PM (IST) Feb 24

ಶ್ವಾನ ಪ್ರಿಯರೇ ಎಚ್ಚರ - ನಾಯಿ ನೆಕ್ಕಿದ್ದರಿಂದ ಕೈಕಾಲು ಕಳೆದುಕೊಂಡ ಮಹಿಳೆ- 11.3 ದಶಲಕ್ಷ ಪ್ರಕರಣ ದಾಖಲು!

ಸಾಕು ನಾಯಿಗಳು ಪ್ರೀತಿಯಿಂದ ನೆಕ್ಕುವುದು ಸಾಮಾನ್ಯ, ಆದರೆ ಇದು ಅಪಾಯಕಾರಿಯಾಗಬಹುದು.  ಮಹಿಳೆಯೊಬ್ಬರು ನಾಯಿ ನೆಕ್ಕಿದ್ದರಿಂದ 'ಸೆಪ್ಸಿಸ್' ಎಂಬ ಗಂಭೀರ ಸೋಂಕಿಗೆ ತುತ್ತಾಗಿ ತಮ್ಮ ಕೈ-ಕಾಲುಗಳನ್ನು ಕಳೆದುಕೊಂಡಿದ್ದಾರೆ. ಭಾರತದಲ್ಲಿ 11.3 ದಶಲಕ್ಷ ಪ್ರಕರಣ ದಾಖಲಾಗಿವೆ.  ಏನಿದು ಸಮಸ್ಯೆ?

Read Full Story

04:55 PM (IST) Feb 24

ಭಾರತಕ್ಕೂ ಬರ್ತಿದೆ ಲಿಮಿಟೆಡ್ ಎಡಿಷನ್ ಡುಕಾಟಿ ಬೈಕ್; ಈ ರೇಟ್ರೋ ಸುಂದರಿಯ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಾ!

ಡುಕಾಟಿ ತನ್ನ 100ನೇ ವರ್ಷಾಚರಣೆಯ ಅಂಗವಾಗಿ, ಐತಿಹಾಸಿಕ 'ಫಾರ್ಮುಲಾ 73' ಬೈಕನ್ನು ಪರಿಚಯಿಸಿದೆ. 1970ರ ದಶಕದ ರೇಸಿಂಗ್ ಬೈಕ್‌ನಿಂದ ಸ್ಫೂರ್ತಿ ಪಡೆದ ಈ ಮಾದರಿಯು, ಕ್ಲಾಸಿಕ್ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನದ ಸಮ್ಮಿಲನವಾಗಿದೆ. 

Read Full Story

04:54 PM (IST) Feb 24

ಜೈಶ್ರೀರಾಮ್ ಘೋಷಣೆ ಮೂಲಕ ನಾಸಿಫ್ ಅಕ್ತರ್ ಶೋಗೆ ಅಡ್ಡಿ ಯತ್ನ, ಕಾಮಿಡಿಯನ್ ಉತ್ತರಕ್ಕೆ ಪ್ರೇಕ್ಷಕ ದಂಗು

ಜೈಶ್ರೀರಾಮ್ ಘೋಷಣೆ ಮೂಲಕ ನಾಸಿಫ್ ಅಕ್ತರ್ ಶೋಗೆ ಅಡ್ಡಿ ಯತ್ನ, ಸ್ಟಾಂಡ್ ಅಪ್ ಕಾಮಿಡಿ ಕಾರ್ಯಕ್ರಮದ ವೇಳೆ ಪ್ರೇಕ್ಷಕನೊಬ್ಬ ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಾಸೀಫ್ ಅಕ್ತರ್, ಮರು ಪ್ರಶ್ನೆಯೊಂದನ್ನು ಹಾಕಿದ್ದಾರೆ. ಈ ಪ್ರಶ್ನೆಗೆ ಪ್ರೇಕ್ಷಕ ದಂಗಾಗಿದ್ದಾನೆ.

 

Read Full Story

04:49 PM (IST) Feb 24

Terror Threat - ಭಾರತಕ್ಕೆ ಮತ್ತೆ 26/11 ಮಾದರಿ ದಾಳಿ, ಸಮುದ್ರದಲ್ಲಿ ಕಟ್ಟೆಚ್ಚರ - ಲಷ್ಕರ್ ಉಗ್ರನ ವಿಡಿಯೋ ಬೆದರಿಕೆ!

ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆ ಭಾರತಕ್ಕೆ ಮತ್ತೊಮ್ಮೆ 26/11 ಮಾದರಿಯ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ. ಸಂಘಟನೆಯ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ವಿಡಿಯೋ ಬಿಡುಗಡೆ ಮಾಡಿದ್ದು, ಸಮುದ್ರ ಮಾರ್ಗವಾಗಿ ದಾಳಿ ಮಾಡುವ ಎಚ್ಚರಿಕೆ ನೀಡಿದ್ದಾನೆ.
Read Full Story

04:23 PM (IST) Feb 24

POCSO Case - ಪೋಕ್ಸೋ ಕೇಸ್‌ನಲ್ಲಿ ಸಂಕಷ್ಟ, ನಿರೀಕ್ಷಣಾ ಜಾಮೀನಿಗೆ ಅಲಹಾಬಾದ್ ಹೈಕೋರ್ಟ್‌ಗೆ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಅರ್ಜಿ

ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ನಿರೀಕ್ಷಣಾ ಜಾಮೀನು ಕೋರಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ಪ್ರಯಾಗ್‌ರಾಜ್‌ ವಿಶೇಷ ನ್ಯಾಯಾಲಯ ಆದೇಶಿಸಿತ್ತು.

Read Full Story

04:15 PM (IST) Feb 24

ಹದಿಹರೆಯದವರಿಗೆ ಇನ್‌ಸ್ಟಾಗ್ರಾಂ ತೋರಿಸುತ್ತಿದೆ ಅಶ್ಲೀಲ ಫೋಟೋ, ಮೆಟಾ ಸ್ಫೋಟಕ ಸಮೀಕ್ಷಾ ವರದಿ

ಹದಿಹರೆಯದವರಿಗೆ ಇನ್‌ಸ್ಟಾಗ್ರಾಂ ತೋರಿಸುತ್ತಿದೆ ಅಶ್ಲೀಲ ಫೋಟೋ, ಮಟಾ ಸಮೀಕ್ಷಾ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಶೇ.19ರಷ್ಟು ಮಂದಿ ಈ ಕುರಿತು ರಿಪೋರ್ಟ್ ಮಾಡಿದ್ದಾರೆ.

 

Read Full Story

04:05 PM (IST) Feb 24

ಹೆಣ್ಣುಮಕ್ಕಳ ಆರೋಗ್ಯಕ್ಕೆ ಕೇಂದ್ರದ 'ರಕ್ಷಾ ಕವಚ' - ಶೀಘ್ರದಲ್ಲೇ ದೇಶಾದ್ಯಂತ ಉಚಿತ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಅಭಿಯಾನ!

ಕೇಂದ್ರ ಸರ್ಕಾರವು "ಸ್ವಸ್ಥ ನಾರಿ" ಅಭಿಯಾನದಡಿ 14 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳಿಗೆ ಉಚಿತವಾಗಿ ಗಾರ್ಡಾಸಿಲ್ HPV ಲಸಿಕೆ ನೀಡಲು ಮುಂದಾಗಿದೆ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಗುರಿ ಹೊಂದಿರುವ ಈ ಅಭಿಯಾನದಲ್ಲಿ, ಒಂದೇ ಡೋಸ್ ಲಸಿಕೆಯು ದೀರ್ಘಕಾಲದ ರಕ್ಷಣೆ ನೀಡುತ್ತದೆ ಎಂದು ತಜ್ಞರು ದೃಢಪಡಿಸಿದ್ದಾರೆ.
Read Full Story

03:36 PM (IST) Feb 24

ಕೇರಳ ರಾಜ್ಯದ ಹೆಸರು ಬದಲಾಯಿಸಲು ಕೇಂದ್ರ ಸರ್ಕಾರ ಒಪ್ಪಿಗೆ!

ಕೇರಳ ರಾಜ್ಯದ ಹೆಸರನ್ನು 'ಕೇರಳಂ' ಎಂದು ಬದಲಾಯಿಸುವ ದೀರ್ಘಕಾಲದ ಬೇಡಿಕೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮಲಯಾಳಂ ಭಾಷೆಯಲ್ಲಿ ರಾಜ್ಯವನ್ನು 'ಕೇರಳಂ' ಎಂದೇ ಕರೆಯಲಾಗುತ್ತಿದ್ದು, ಈ ಕುರಿತು ಕೇರಳ ವಿಧಾನಸಭೆಯು ಈ ಹಿಂದೆ ನಿರ್ಣಯ ಅಂಗೀಕರಿಸಿತ್ತು. 

Read Full Story

03:25 PM (IST) Feb 24

ಸೆX ರಾಕೆಟ್‌ಗೆ ಬಳಸಿ ನಂತ್ರ ಹುಡುಗಿಯರ ಮತಾಂತರ, ಕಿಂಗ್ ಪಿನ್ ಅಮ್ರೀನ್ ಅಫ್ರೀನ್ ಸಿಸ್ಟರ್ಸ್ ಅರೆಸ್ಟ್

ಸೆX ರಾಕೆಟ್‌ಗೆ ಬಳಸಿ ನಂತ್ರ ಹುಡುಗಿಯರ ಮತಾಂತರ, ಕಿಂಗ್ ಪಿನ್ ಅಮ್ರೀನ್ ಅಫ್ರೀನ್ ಸಿಸ್ಟರ್ಸ್ ಅರೆಸ್ಟ್, ಕೆಲಸ ಕೊಡಿಸುವುದಾಗಿ ಯುವತಿಯರನ್ನು ಆಯ್ಕೆ ಮಾಡಿಕೊಂಡು ಶ್ರೀಮಂತರ ಪಾರ್ಟಿಯಲ್ಲಿ ಯೂಸ್ ಆ್ಯಂಡ್ ಥ್ರೋ ವಸ್ತುವಾಗಿ ಬಳಕೆ ಮಾಡಲಾಗುತ್ತಿತ್ತು

 

Read Full Story

03:13 PM (IST) Feb 24

ಕೈಕೊಟ್ಟ ಇನ್ಫೋಸಿಸ್‌, ಟಿಸಿಎಸ್‌ - ಎರಡೇ ತಿಂಗಳಲ್ಲಿ 43 ಸಾವಿರ ಕೋಟಿ ನಷ್ಟ ಕಂಡ ಎಲ್‌ಐಸಿ!

LIC Loses ₹42,500 Crore in IT Stocks Amid AI Disruption Fears ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಭೀತಿಯಿಂದ ಐಟಿ ಷೇರುಗಳು ತೀವ್ರ ಕುಸಿತ ಕಂಡಿವೆ. ಇದರ ಪರಿಣಾಮವಾಗಿ, ಎಲ್‌ಐಸಿ ತನ್ನ ಐಟಿ ಹೂಡಿಕೆಗಳಲ್ಲಿ ಕಳೆದ ಎರಡು ತಿಂಗಳಲ್ಲಿ ಸುಮಾರು ₹42,500 ಕೋಟಿ ನಷ್ಟ ಅನುಭವಿಸಿದೆ.

Read Full Story

02:59 PM (IST) Feb 24

7 ಲಕ್ಷ ಸಾಲ ಮಾಡಿ ಏರ್ ಆಂಬುಲೆನ್ಸ್ ಬುಕ್ - ಒಬ್ಬನನ್ನು ಉಳಿಸಲು ಹೋಗಿ ಸತ್ತಿದ್ದು ಏಳು ಜನ

Jharkhand air ambulance crash story ಒಬ್ಬರನ್ನು ಉಳಿಸುವುದಕ್ಕೆ ಹೊರಟ ಪ್ರಯಾಣವೊಂದು 7 ಜನರ ಸಾವಿನೊಂದಿಗೆ ಅಂತ್ಯವಾಗಿದೆ. ಹೌದು ನಿನ್ನೆ ಸಂಜೆ ನಡೆದ ಜಾರ್ಖಂಡ್ ಏರ್ ಆಂಬುಲೆನ್ಸ್ ದುರಂತದ ಮನ ಮಿಡಿಯುವ ಕತೆ ಇದು. 

Read Full Story

02:24 PM (IST) Feb 24

ಶತಮಾನದ ಸುದೀರ್ಘ ಸೂರ್ಯ ಗ್ರಹಣ - ಹಗಲು ಸಂಪೂರ್ಣ ಕತ್ತಲು- ಯಾವಾಗ, ಎಲ್ಲಿ? ಏನಿದರ ಮಹತ್ವ?

 21ನೇ ಶತಮಾನದ ಸುದೀರ್ಘ ಸೂರ್ಯ ಗ್ರಹಣ ಸಂಭವಿಸಲಿದೆ. ಸುಮಾರು ಆರು ನಿಮಿಷಗಳ ಕಾಲ ಭೂಮಿಯ ಕೆಲವು ಭಾಗಗಳಲ್ಲಿ ಕತ್ತಲೆ ಆವರಿಸಲಿದ್ದು, ಇದು ಖಗೋಳ ಮತ್ತು ಧಾರ್ಮಿಕವಾಗಿ ಮಹತ್ವ ಪಡೆದಿದೆ. ಈ ಗ್ರಹಣವು ಎಲ್ಲೆಲ್ಲಿ ಗೋಚರಿಸುತ್ತವೆ?

Read Full Story

02:06 PM (IST) Feb 24

2ನೇ ಪತಿಯಿಂದ ಸಮಂತಾ ರುತ್​ ಪ್ರಭು ಡಿವೋರ್ಸ್​? ಕೆಂಡಾಮಂಡಲವಾದ ನಟಿ ಹೇಳಿದ್ದೇನು?

ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರ ನಟಿ ಸಮಂತಾ, ನಿರ್ಮಾಪಕ ರಾಜ್ ನಿಡಿಮೋರು ಅವರನ್ನು ವಿವಾಹವಾದರು. ತಮ್ಮ ಎರಡನೇ ವಿಚ್ಛೇದನದ ಬಗ್ಗೆ ಹಬ್ಬಿರುವ ಗಾಳಿಸುದ್ದಿಗಳಿಗೆ ಕಿಡಿಕಾರಿರುವ ಅವರು, ಪತಿ ರಾಜ್ ತಮ್ಮ ಜೀವನಕ್ಕೆ ಹೇಗೆ ಆಸರೆಯಾದರು ಎಂಬುದನ್ನು ವಿವರಿಸಿದ್ದಾರೆ.
Read Full Story

01:45 PM (IST) Feb 24

ಜಾರ್ಖಂಡ್ ದುರಂತದ ಬಳಿಕ ಅಂಡಮಾನ್ ಸಮುದ್ರದಲ್ಲಿ ಮತ್ತೊಂದು ಹೆಲಿಕಾಪ್ಟರ್ ಪತನ

ದೇಶದಲ್ಲಿ ಸರಣಿ ವಾಯುಯಾನ ದುರಂತಗಳು ಮುಂದುವರೆದಿದ್ದು, ಅಂಡಮಾನ್ ಸಮುದ್ರದಲ್ಲಿ ಪವನ್ ಹನ್ಸ್ ಹೆಲಿಕಾಪ್ಟರ್ ಪತನಗೊಂಡಿದೆ. ತಾಂತ್ರಿಕ ದೋಷದಿಂದಾಗಿ ಸಮುದ್ರದಲ್ಲಿ ಕ್ರಾಶ್-ಲ್ಯಾಂಡಿಂಗ್ ಆದ ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರು ಪೈಲಟ್‌ಗಳು ಸೇರಿದಂತೆ ಎಲ್ಲಾ ಏಳು ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. 

Read Full Story

12:59 PM (IST) Feb 24

ಈಕೆ ಅಮ್ಮನಲ್ಲ, ಹೆಣ್ಣಿನ ಕುಲಕ್ಕೆ ಅವಮಾನ.. ಬಾಯ್‌ಫ್ರೆಂಡ್‌ ಮೂಲಕ ಸ್ವಂತ ಮಗಳನ್ನೇ ರೇ*ಪ್‌ ಮಾಡಿಸಿದ ತಾಯಿ!

ಚೆನ್ನೈನಲ್ಲಿ, ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ 20 ವರ್ಷದ ಮಗಳಿಗೆ ತಾಯಿಯೇ ನಿದ್ರೆ ಮಾತ್ರೆ ನೀಡಿ, ತನ್ನ ಪ್ರಿಯಕರನಿಂದ ಅ*ತ್ಯಾಚಾ*ರ ಮಾಡಿಸಿದ್ದಾಳೆ. ಈ ಘೋರ ಕೃತ್ಯದಿಂದ ಗರ್ಭಿಣಿಯಾದ ಯುವತಿ, ಮನೆಯಿಂದ ತಪ್ಪಿಸಿಕೊಂಡು ಸಂಬಂಧಿಕರ ಸಹಾಯದಿಂದ ದೂರು ನೀಡಿದ್ದಾಳೆ.

Read Full Story

10:59 AM (IST) Feb 24

ಡ್ರಗ್ ಲಾರ್ಡ್‌ ಹತ್ಯೆಯ ಬಳಿಕ ಬೆಂಕಿಯುಂಡೆಯಾದ ಮೆಕ್ಸಿಕೋ - ಉದ್ಯೋಗಿಯ ರಕ್ಷಣೆಗೆ ಪ್ರತಿ ವಿಮಾನವನ್ನು ಬುಕ್ ಮಾಡಿದ ಅಮೆರಿಕ್ ಕಂಪನಿ

ಮೆಕ್ಸಿಕೋದಲ್ಲಿ ಡ್ರಗ್ ಮಾಫಿಯಾ ಹಿಂಸಾಚಾರದ ನಡುವೆ ಸಿಲುಕಿದ್ದ ತನ್ನ ಉದ್ಯೋಗಿಯನ್ನು ರಕ್ಷಿಸಲು, ಅಮೆರಿಕದ ಟೆಕ್ ಸಂಸ್ಥೆ ವರ್ಸೆಲ್ ಲಭ್ಯವಿದ್ದ ಎಲ್ಲಾ ವಿಮಾನಗಳನ್ನು ಬುಕ್ ಮಾಡಿದೆ. ಕಂಪನಿಯ ಈ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗ್ತಿದೆ.

Read Full Story

09:33 AM (IST) Feb 24

FIRE Movement - ಸವಾಲಿಗೇ ಸವಾಲೆಸೆಯೋ Gen Zಗಳು ಎದುರಿಸುತ್ತಿರುವ ಆರ್ಥಿಕ ಸವಾಲುಗಳು

ಆರ್ಥಿಕ ಸವಾಲುಗಳ ನಡುವೆಯೂ, ಜೆನ್‌ ಜೀಗಳು 'ಫೈರ್' (FIRE) ಚಳವಳಿಯ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ಬೇಗನೇ ಸಾಧಿಸಲು ಮುಂದಾಗಿದ್ದಾರೆ. ತಮ್ಮ ಆದಾಯದ ಬಹುಪಾಲು ಉಳಿತಾಯ ಮಾಡಿ, ಚಿಕ್ಕ ವಯಸ್ಸಿನಲ್ಲೇ ಹೂಡಿಕೆ ಮಾಡುವ ಮೂಲಕ, ಅವರು ಹಳೆಯ ತಲೆಮಾರಿನ ಟೀಕೆಗಳಿಗೆ ಸ್ಮಾರ್ಟ್ ಉತ್ತರ ನೀಡುತ್ತಿದ್ದಾರೆ.
Read Full Story

More Trending News