LIVE NOW
Published : Aug 24, 2026, 05:29 AM ISTUpdated : Aug 24, 2026, 10:30 AM IST

India Latest News Live: ನೈಟ್‌ಕ್ಲಬ್‌ನಲ್ಲಿ ಗಲಾಟೆ - ಬೆನ್ ಸ್ಟೋಕ್ಸ್‌ ಜತೆಗಿದ್ದ ಇಂಗ್ಲೆಂಡ್ ಸ್ಟಾರ್ ಕ್ರಿಕೆಟಿಗ ಅರೆಸ್ಟ್! ಕೈಗೆ ಬೇಡಿಹಾಕಿ ಕರೆದೊಯ್ದ ಪೊಲೀಸರು

ಸಾರಾಂಶ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹಿಳೆಯರ ಬೆಂಬಲಕ್ಕೆ ನಿಲ್ಲುವ ತಮ್ಮ ಮಾತುಗಳನ್ನು ಕೃತಿಯಲ್ಲಿ ತೋರಬೇಕಾದರೆ, ಮಹಿಳಾ ಮೀಸಲು ಮಸೂದೆಗೆ ಬೆಂಬಲ ನೀಡಬೇಕು ಹಾಗೂ ತಮ್ಮ ಪಕ್ಷದ ಕಚೇರಿಯಲ್ಲಿ ದುರ್ಗಾದೇವಿಯ ಸ್ತುತಿಯನ್ನು ಒಳಗೊಂಡಿರುವ ‘ವಂದೇ ಮಾತರಂ’ ಗೀತೆಯ ಪೂರ್ಣ ಆವೃತ್ತಿಯನ್ನು ಹಾಡಿಸಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿ ಆಗ್ರಹಿಸಿದ್ದಾರೆ.

ಪುಣೆಯಲ್ಲಿ ಶನಿವಾರ ವಿದ್ಯಾರ್ಥಿನಿಯರೊಂದಿಗೆ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್, ಪುರುಷಪ್ರಧಾನ ವ್ಯವಸ್ಥೆಯನ್ನು ಟೀಕಿಸಿ, ಮಹಿಳೆಯರ ಪರ ಧ್ವನಿ ಎತ್ತಿದ್ದರು. ಅವರ ಈ ಹೇಳಿಕೆಗೆ ತಿರುಗೇಟು ನೀಡಿದ ಇರಾನಿ, ‘ಮಹಿಳೆಯರ ಕುರಿತು ಆಡಿದ ಮಾತುಗಳನ್ನು ರಾಹುಲ್‌ ಕ್ರಿಯೆಯಲ್ಲಿ ತೋರಬೇಕಾದರೆ, ಮಹಿಳೆಯರಿಗೆ ತಕ್ಷಣವೇ ಮೀಸಲಾತಿ ಜಾರಿಗೊಳಿಸುವುದನ್ನು ಬೆಂಬಲಿಸಬೇಕು ಮತ್ತು ಕಾಂಗ್ರೆಸ್ ಕಚೇರಿಯಲ್ಲಿ ಪೂರ್ಣ ವಂದೇ ಮಾತರಂ ಗಾಯನವನ್ನು ಆಯೋಜಿಸಬೇಕು’ ಎಂದರು.

10:30 AM (IST) Aug 24

ನೈಟ್‌ಕ್ಲಬ್‌ನಲ್ಲಿ ಗಲಾಟೆ - ಬೆನ್ ಸ್ಟೋಕ್ಸ್‌ ಜತೆಗಿದ್ದ ಇಂಗ್ಲೆಂಡ್ ಸ್ಟಾರ್ ಕ್ರಿಕೆಟಿಗ ಅರೆಸ್ಟ್! ಕೈಗೆ ಬೇಡಿಹಾಕಿ ಕರೆದೊಯ್ದ ಪೊಲೀಸರು

ಡರ್ಬಿಯ ನೈಟ್‌ಕ್ಲಬ್‌ನಲ್ಲಿ ನಡೆದ ಗಲಾಟೆಯೊಂದರಲ್ಲಿ ಇಂಗ್ಲೆಂಡ್ ವೇಗದ ಬೌಲರ್ ಬ್ರೈಡನ್ ಕಾರ್ಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಡೆದಾಗ ಬೆನ್ ಸ್ಟೋಕ್ಸ್ ಮತ್ತು ಮ್ಯಾಥ್ಯೂ ಪಾಟ್ಸ್ ಕೂಡ ಅವರ ಜೊತೆಗಿದ್ದರು. ನಂತರ ಕಾರ್ಸ್ ಅವರನ್ನು ಬಿಡುಗಡೆ ಮಾಡಲಾಗಿದ್ದರೂ, ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಈ ಘಟನೆಯ ಬಗ್ಗೆ ತನಿಖೆ ಆರಂಭಿಸಿದೆ.
Read Full Story

09:14 AM (IST) Aug 24

ಗುರುವಾಯೂರು ದೇಗುಲದಲ್ಲಿ ಐತಿಹಾಸಿಕ ದಾಖಲೆ - ಚಿಂಗಂ ಮಾಸದ ಶುಭ ಮುಹೂರ್ತ, 7 ಗಂಟೆಯಲ್ಲಿ  ಹಸೆಮಣೆ ಏರಿದ 416 ಜೋಡಿ!

ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ, ಮಲಯಾಳಂ ಪಂಚಾಂಗದ ಚಿಂಗಂ ಮಾಸದ ಶುಭ ದಿನದಂದು ಒಂದೇ ದಿನದಲ್ಲಿ 400ಕ್ಕೂ ಹೆಚ್ಚು ವಿವಾಹಗಳು ನಡೆದು ಹೊಸ ದಾಖಲೆ ಸೃಷ್ಟಿಯಾಗಿದೆ. ಈ ಐತಿಹಾಸಿಕ ಸಂದರ್ಭಕ್ಕಾಗಿ ದೇವಸ್ಥಾನದಲ್ಲಿ 6 ಮಂಟಪಗಳನ್ನು ನಿರ್ಮಿಸಿ, ಕಟ್ಟುನಿಟ್ಟಿನ ಜನಸಂದಣಿ ನಿರ್ವಹಣೆಯೊಂದಿಗೆ ವಿವಾಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
Read Full Story

06:57 AM (IST) Aug 24

ಸಿಂದೂರದಲ್ಲಿ ಧ್ವಂಸವಾಗಿದ್ದ ಜೈಷ್‌ ಹೆಡ್‌ ಆಫೀಸ್‌ ಪುನರ್‌ ನಿರ್ಮಾಣ; ಪಾಕ್‌ ಸರ್ಕಾರದಿಂದ ₹25 ಕೋಟಿ

'ಆಪರೇಷನ್ ಸಿಂದೂರ' ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯಿಂದ ಧ್ವಂಸಗೊಂಡಿದ್ದ ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಪ್ರಧಾನ ಕಚೇರಿಯನ್ನು ಪುನರ್‌ ನಿರ್ಮಿಸಲಾಗಿದೆ. ಈ ಮರುನಿರ್ಮಾಣಕ್ಕೆ ಪಾಕಿಸ್ತಾನ ಸರ್ಕಾರವೇ 25 ಕೋಟಿ ಪಾಕಿಸ್ತಾನಿ ರುಪಾಯಿ ನೀಡಿರುವುದು ವರದಿಯಾಗಿದೆ.
Read Full Story

06:46 AM (IST) Aug 24

Jobs - ಕೇಂದ್ರ ಸರ್ಕಾರದ 8 ಲಕ್ಷ ಹುದ್ದೆ ಖಾಲಿ! ಆರ್‌ಟಿಐ ಅರ್ಜಿಯಲ್ಲಿ ಮಾಹಿತಿ ಬಯಲು

ಆರ್‌ಟಿಐ ಅರ್ಜಿಯೊಂದರ ಪ್ರಕಾರ, ಕೇಂದ್ರ ಸರ್ಕಾರದಲ್ಲಿ 8.23 ಲಕ್ಷಕ್ಕೂ ಹೆಚ್ಚು ಮಂಜೂರಾದ ಹುದ್ದೆಗಳು ಖಾಲಿ ಇವೆ. ಸುಮಾರು 39 ಲಕ್ಷ ಹುದ್ದೆಗಳಲ್ಲಿ ಕೇವಲ 31 ಲಕ್ಷ ಮಾತ್ರ ಭರ್ತಿಯಾಗಿದ್ದು, ರೈಲ್ವೆ, ರಕ್ಷಣೆ ಮತ್ತು ಗೃಹ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಪ್ರತಿ 5 ಹುದ್ದೆಗಳಲ್ಲಿ 1 ಹುದ್ದೆ ಖಾಲಿ ಉಳಿದಿದೆ.
Read Full Story

06:11 AM (IST) Aug 24

ಜಿರಳೆ ಹೋರಾಟದಿಂದ ದನದ ಕೊಟ್ಟಿಗೆಯಲ್ಲಿ ನಡೆಯುತ್ತಿದ್ದ ಶಾಲೆಗೆ ಸಿಕ್ತು ಹೊಸ ಕಟ್ಟಡ

ರಾಜಸ್ಥಾನದ ರಾಂಪುರದಲ್ಲಿ ದನದ ಕೊಟ್ಟಿಗೆಯಲ್ಲಿ ನಡೆಯುತ್ತಿದ್ದ ಸರ್ಕಾರಿ ಶಾಲೆಯ ದುಸ್ಥಿತಿಯ ವಿರುದ್ಧ 'ಜಿರಳೆ ಜನತಾ ಪಕ್ಷ' ನಡೆಸಿದ ಹೋರಾಟ ಯಶಸ್ವಿಯಾಗಿದೆ. 'ಸ್ಕೂಲ್‌ ಠೀಕ್‌ ಕರೋ' ಅಭಿಯಾನದ ಭಾಗವಾಗಿ ನಡೆದ ಈ ಪ್ರತಿಭಟನೆಯ ನಂತರ, ರಾಜಸ್ಥಾನ ಸರ್ಕಾರವು ಅದೇ ಗ್ರಾಮದಲ್ಲಿ ಹೊಸ ಶಾಲಾ ಕಟ್ಟಡ ನಿರ್ಮಿಸುವುದಾಗಿ ಘೋಷಿಸಿದೆ.
Read Full Story

06:05 AM (IST) Aug 24

2027ರ ಸಪ್ತರಾಜ್ಯ ಸಮರ - ಬಿಜೆಪಿಯಿಂದ ರಹಸ್ಯ ರಣತಂತ್ರ! ಜೆನ್‌ ಝೀ ಸೆಳೆಯುವತ್ತ ಚರ್ಚೆ

2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ 7 ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಬಿಜೆಪಿ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ನಿತಿನ್‌ ನವೀನ್‌ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವುದು ಮತ್ತು ಯುವಕರನ್ನು ಸೆಳೆಯುವ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ.
Read Full Story

05:51 AM (IST) Aug 24

ಮಂಗಳೂರಿಗಾಗಿ ಕೇರಳಂ ಸಂಸದರಿಂದ ಓಣಂ ಉಪವಾಸ; ಮೈಸೂರು ವಿಭಾಗಕ್ಕೆ ಸೇರ್ಪಡೆಗೆ ಆಕ್ರೋಶ

ಮಂಗಳೂರು ರೈಲು ನಿಲ್ದಾಣವನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವುದನ್ನು ವಿರೋಧಿಸಿ ಕೇರಳದ ಸಂಸದರು ಪ್ರತಿಭಟನೆಗೆ ಮುಂದಾಗಿದ್ದಾರೆ. ಓಣಂ ಹಬ್ಬದ ದಿನದಂದೇ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ, ಈ ನಿರ್ಧಾರದಿಂದ ಪಾಲಕ್ಕಾಡ್ ವಿಭಾಗಕ್ಕೆ ಆಗುವ ಆದಾಯ ನಷ್ಟದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ.
Read Full Story

05:38 AM (IST) Aug 24

ದಿಲ್ಲಿಯಲ್ಲಿ ಕಾರು ಅಪಘಾತ - ಶಾಸಕ ಅಭಯ್ ಪಾಟೀಲ್ ಪ್ರಾಣಾಪಾಯದಿಂದ ಪಾರು

ಶನಿವಾರ ರಾತ್ರಿ 9:30ರ ವೇಳೆಗೆ ಲಕ್ಷ್ಮೀ ನಗರದಿಂದ ಐಟಿಒ ಕಡೆಗೆ ಪ್ರಯಾಣಿಸುತ್ತಿದ್ದ ಕಾರೊಂದು ಎದುರಿನಿಂದ ಬರುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿಯಾಗಿದೆ. ಇನ್ನೋವಾ ಕಾರಿನಲ್ಲಿ ಕರ್ನಾಟಕದ ಶಾಸಕ ಅಭಯ್ ಪಾಟೀಲ್ ಹಾಗೂ ಕಿರಾರಿ ಶಾಸಕ ಅನಿಲ್ ಝಾ ಪ್ರಯಾಣಿಸುತ್ತಿದ್ದರು.

Read Full Story

More Trending News