LIVE NOW
Published : Apr 21, 2026, 06:45 AM ISTUpdated : Apr 21, 2026, 10:15 AM IST

India Latest News Live: ಎರಡು ಶೇಡ್‌ನಲ್ಲಿ ಕಂಡ ತಿಲಕ್‌ ಆಟ ಸೇರಿತು ದಾಖಲೆ; ಕೊನೆಗೂ ಬೂಮ್ರಾಗೆ ಬಿಡ್ತು ಗ್ರಹಣ

ಸಾರಾಂಶ

ಕೋಲ್ಕತಾ: ಭಾನುವಾರ ಚುನಾವಣಾ ಪ್ರಚಾರಕ್ಕೆಂದು ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ವೇಳೆಪ್ರಧಾನಿ ನರೇಂದ್ರ ಮೋದಿ, ಕುರುಕಲು ತಿಂಡಿ ಅಂಗಡಿಯಲ್ಲಿ ಮಂಡಕ್ಕಿ ಖರೀದಿಸಿದ್ದು ಬರೀ ನಾಟಕ ಎಂದು ಸಿಎಂ ಮಮತಾ ಬ್ಯಾನರ್ಜಿ ವ್ಯಂಗ್ಯವಾಡಿದ್ದಾರೆ.

ನರೇಂದ್ರ ಮೋದಿ ಹೆಸರು ಹೇಳದೆಯೇ ಚುನಾವಣಾ ರ್‍ಯಾಲಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ದೀದಿ, ‘ಇದೆಲ್ಲ ನಾಟಕ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಇದ್ದಕ್ಕಿದ್ದಂತೆ ಅಂಗಡಿಗೆ ತೆರಳಿದಾಗ ಅಂಗಡಿಗೆ ಕ್ಯಾಮರಾಮ್ಯಾನ್‌ ಏಕೆ ಬಂದಿದ್ದ? ಇಡೀ ಘಟನೆಯನ್ನು ಹೇಗೆ ಚಿತ್ರೀಕರಿಸಲಾಯಿತು? ಅವರು ಜೇಬಿನಲ್ಲಿ 10 ರು. ನೋಟು ಇರಿಸಿಕೊಂಡಿದ್ದು ಕಂಡು ಬಂದಿದೆ. ಇದು ನಂಬುವುದಕ್ಕೆ ಸಾಧ್ಯವೇ?’ ಎಂದು ಪ್ರಶ್ನಿಸಿದರು.

ಮೋದಿ ಚುನಾವಣಾ ಪ್ರಚಾರಕ್ಕೆಂದು ಭಾನುವಾರ ಬಂಗಾಳಕ್ಕೆ ಬಂದಾಗ ಝಾರ್‌ಗ್ರಾಮದ ಕುರುಕಲು ತಿಂಡಿ ಅಂಗಡಿಗೆ ‘ಅನಿರೀಕ್ಷಿತವಾಗಿ’ ತೆರಳಿ, ಮಂಡಕ್ಕಿ ಖರಿದಿಸಿ ತಿಂದಿದ್ದಲ್ಲದೆ ಮಕ್ಕಳಿಗೆ ಹಂಚಿದ್ದರು.

10:15 AM (IST) Apr 21

ಎರಡು ಶೇಡ್‌ನಲ್ಲಿ ಕಂಡ ತಿಲಕ್‌ ಆಟ ಸೇರಿತು ದಾಖಲೆ; ಕೊನೆಗೂ ಬೂಮ್ರಾಗೆ ಬಿಡ್ತು ಗ್ರಹಣ

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ತಿಲಕ್ ವರ್ಮಾ ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿ, ಮುಂಬೈ ಇಂಡಿಯನ್ಸ್ ಪರ ಅತಿ ವೇಗದ ಶತಕದ ಸನತ್ ಜಯಸೂರ್ಯ ದಾಖಲೆಯನ್ನು ಸರಿಗಟ್ಟಿದರು. ಇದೇ ಪಂದ್ಯದಲ್ಲಿ, ಸತತ ವೈಫಲ್ಯದ ನಂತರ ಜಸ್ಪ್ರೀತ್ ಬುಮ್ರಾ ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದು ಯಶಸ್ಸು ಕಂಡರು.
Read Full Story

09:14 AM (IST) Apr 21

ಪಾಕಿಸ್ತಾನಕ್ಕೆ ಬೈ ಹೇಳಿ, ಭಾರತಕ್ಕೆ ಬಂದ ಶ್ರೀಲಂಕಾ ಆಟಗಾರನ ಮೇಲೆ ನಿಷೇಧ ಹಾಕಿದ ಪಿಸಿಬಿ

ಐಪಿಎಲ್‌ಗಾಗಿ ಪಾಕಿಸ್ತಾನ ಸೂಪರ್‌ ಲೀಗ್‌ ತೊರೆದ ಶ್ರೀಲಂಕಾದ ದಸುನ್‌ ಶಾನಕಗೆ ಪಿಸಿಬಿ 1 ವರ್ಷ ನಿಷೇಧ ಹೇರಿದೆ. ಮತ್ತೊಂದೆಡೆ, ಅಫ್ಘಾನಿಸ್ತಾನದ ಮಾಜಿ ವೇಗಿ ಶಪೂರ್‌ ಜದ್ರಾನ್‌ ಅಪರೂಪದ ಹಾಗೂ ಅಪಾಯಕಾರಿ ಕಾಯಿಲೆಯಿಂದ ಬಳಲುತ್ತಿದ್ದು, ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Read Full Story

08:08 AM (IST) Apr 21

ಇಂದು ಪ್ರಧಾನಿ ಮೋದಿ ಉದ್ಘಾಟಿಸಬೇಕಿದ್ದ ₹80000 ವೆಚ್ಚದ ಕೋಟಿ ತೈಲ ಘಟಕಕ್ಕೆ ನಿನ್ನೆ ಬೆಂಕಿ!

ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಬೇಕಿದ್ದ ರಾಜಸ್ಥಾನದ ಪಚ್ಪದ್ರಾದಲ್ಲಿನ ನೂತನ ತೈಲ ಶುದ್ಧೀಕರಣ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ಘಟನೆಯಿಂದಾಗಿ ₹80000 ಕೋಟಿ ವೆಚ್ಚದ, ದೇಶದ ಮೊದಲ ಗ್ರೀನ್‌ಫೀಲ್ಡ್‌ ರಿಫೈನರಿಯ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

Read Full Story

More Trending News